dog's ultimate sacrifice: ಸಾಕು ನಾಯಿಯೊಂದು ಹಾವಿನೊಂದಿಗೆ ಕಾದಾಡಿ ಹಾವನ್ನು ಸಾಯಿಸಿ ತಾನು ಪ್ರಾಣ ಬಿಟ್ಟಿದೆ. ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India News Live: ಹಾವಿನೊಂದಿಗೆ ಕಾದಾಡಿ ಪ್ರಾಣಬಿಟ್ಟ ಸಾಕುನಾಯಿ - ವೀಡಿಯೋ

ನವದೆಹಲಿ (ಅ.7): ಬಹುನಿರೀಕ್ಷಿತ ಬಿಹಾರ ವಿಧಾನಸಭೆ ಚುನಾವಣೆಗಳು ಘೋಷಣೆ ಆಗಿದ್ದು, ಚುನಾವಣಾ ಕದನದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನೇತೃತ್ವದ ಮಹಾಘಠಬಂಧನ್ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 7th October: ಹಾವಿನೊಂದಿಗೆ ಕಾದಾಡಿ ಪ್ರಾಣಬಿಟ್ಟ ಸಾಕುನಾಯಿ - ವೀಡಿಯೋ
India News Live 7th October: ಇಂಗ್ಲೆಂಡ್ನಲ್ಲೂ ಕಾಂತಾರಾ ಮೋಡಿ, ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡದ ಪೋಸ್ಟರ್
ಇಂಗ್ಲೆಂಡ್ನಲ್ಲೂ ಕಾಂತಾರಾ ಮೋಡಿ, ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡದ ಪೋಸ್ಟರ್ ಭಾರಿ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ ಜಾಗದಲ್ಲಿ ಮ್ಯಾಂಚೆಸ್ಟರ್ ಸಿಟಿ ಸ್ಟ್ರೈಕರ್ ಎರ್ಲಿಂಗ್ ಹಾಲಾಂಡ್ ಫೋಟೋ ಇರುವ ಕಾಂತಾರ ಸಿನಿಮಾ ಶೈಲಿಯ ಪೋಸ್ಟರ್ನ್ನು ಮ್ಯಾಂಚೆಸ್ಟರ್ ಸಿಟಿ ಪೋಸ್ಟ್ ಮಾಡಿದೆ.
India News Live 7th October: ಮಹಿಳೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ
Jaipur street harassment: ಅಂಗಡಿಯೊಂದರ ಮುಂದೆ ನಿಂತಿದ್ದ ಮಹಿಳೆಯನ್ನು ಮಧ್ಯವಯಸ್ಕ ವ್ಯಕ್ತಿಯೊಬ್ಬ ಅಸಭ್ಯವಾಗಿ ಮುಟ್ಟಿದ ಘಟನೆ ನಡೆದಿದ್ದು, ಇದರಿಂದ ಕುಪಿತಗೊಂಡ ಸಾರ್ವಜನಿಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
India News Live 7th October: ಗುಡ್ ನ್ಯೂಸ್ ಕೊಟ್ಟ ನಿತಿನ್ ಗಡ್ಕರಿ, 6 ತಿಂಗಳಲ್ಲಿ ಪೆಟ್ರೋಲ್ ವಾಹನ ದರದಲ್ಲಿ ಸಿಗಲಿದೆ ಎಲೆಕ್ಟ್ರಿಕ್ ವೆಹಿಕಲ್
ಗುಡ್ ನ್ಯೂಸ್ ಕೊಟ್ಟ ನಿತಿನ್ ಗಡ್ಕರಿ, 6 ತಿಂಗಳಲ್ಲಿ ಪೆಟ್ರೋಲ್ ವಾಹನ ದರದಲ್ಲಿ ಸಿಗಲಿದೆ ಎಲೆಕ್ಟ್ರಿಕ್ ವೆಹಿಕಲ್, ಈಗಾಗಲೇ ಜಿಎಸ್ಟಿ ಕಡಿತದಿಂದ ವಾಹನ ಬೆಲೆ ಬಾರಿ ಇಳಿಕೆಯಾಗಿದೆ. ಇದೀಗ ಎಲೆಕ್ಟ್ರಿಕ್ ವಾಹನ ಬೆಲೆ ಇನ್ನೋ ಪೆಟ್ರೋಲ್ ವಾಹನ ಬೆಲೆಯಲ್ಲೇ ಲಭ್ಯವಾಗುತ್ತಿದೆ.
India News Live 7th October: ಜಾವಾ ಯೆಝಡಿ ಬೈಕ್ ಈಗ ಅಮೇಜಾನ್ನಲ್ಲಿ ಲಭ್ಯ; ನೋ ಕಾಸ್ಟ್ ಇಎಂಐ, ಕ್ಯಾಶ್ಬ್ಯಾಕ್ ಆಫರ್
ಜಾವಾ ಯೆಝಡಿ ಬೈಕ್ ಈಗ ಅಮೇಜಾನ್ನಲ್ಲಿ ಲಭ್ಯ; ನೋ ಕಾಸ್ಟ್ ಇಎಂಐ, ಕ್ಯಾಶ್ಬ್ಯಾಕ್ ಆಫರ್ ನೀಡಲಾಗಿದೆ. ಅತೀ ಸರಳ ಹಾಗೂ ಸುಲಭವಾಗಿ ಅಮೇಜಾನ್ ಮೂಲಕ ಬೈಕ್ ಖರೀದಿ ಹೇಗೆ, ಯಾವೆಲ್ಲಾ ಆಫರ್ ಲಭ್ಯವಿದೆ.
India News Live 7th October: 'ನ್ಯಾಯ ಬೇಕೆಂದ್ರೆ ವಿಷ್ಣುವನ್ನೇ ಕೇಳಿ' ಎಂದ CJI ಗವಾಯಿ, ದರ್ಗಾ ಬಗ್ಗೆ ಹೇಳಿದ್ದೇನು? ವಿವಾದದ ಕೇಂದ್ರಬಿಂದು ಏನು?
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಘಟನೆ ನ್ಯಾಯಾಂಗ ವ್ಯವಸ್ಥೆಯನ್ನೇ ಅಲುಗಾಡಿಸಿದೆ. ವಿಷ್ಣು ವಿಗ್ರಹ ಮರುಸ್ಥಾಪನೆ ಅರ್ಜಿಯ ಕುರಿತ ಸಿಜೆಐ ಹೇಳಿಕೆ ಮತ್ತು ದರ್ಗಾ ಪ್ರಕರಣಗಳಲ್ಲಿನ ತೀರ್ಪುಗಳ ನಡುವಿನ ವ್ಯತ್ಯಾಸವು ಈ ವಿವಾದಕ್ಕೆ ಕಾರಣವಾಗಿದೆ.
India News Live 7th October: ವರ್ಗಾವಣೆಗೊಂಡ ಡಿಸಿಗೆ ಭಾವಪೂರ್ಣ ವಿದಾಯ - ಪಲ್ಲಕ್ಕಿಯಲ್ಲಿ ಹೊತ್ತೊಯ್ದು ಬೀಳ್ಕೊಟ್ಟ ಸಿಬ್ಬಂದಿ
ವರ್ಗಾವಣೆಗೊಂಡ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಜಿಲ್ಲಾಧಿಕಾರಿ ಸಂಸ್ಕೃತಿ ಜೈನ್ ಅವರಿಗೆ ಅಲ್ಲಿನ ಜನ ಬಹಳ ಭಾವಪೂರ್ಣವಾದ ಹಾಗೂ ವಿಭಿನ್ನವಾದ ವಿದಾಯ ಕೂಟವನ್ನು ಏರ್ಪಡಿಸಿ ಅವರನ್ನು ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India News Live 7th October: ನಿಮ್ಮ ಮುಖವೇ ಈಗ ಪಿನ್, ನಾಳೆಯಿಂದ ದೇಶಾದ್ಯಂತ ಬಯೋಮೆಟ್ರಿಕ್ UPI ಪೇಮೆಂಟ್ ಜಾರಿ!
Biometric UPI Payments Face/Fingerprint Roll Out Across India from Oct 8 ಅಕ್ಟೋಬರ್ 8 ರಿಂದ, ಬಳಕೆದಾರರು ಫೇಶಿಯಲ್ ರೆಕಗ್ನಿಷನ್ ಮತ್ತು ಫಿಂಗರ್ಪ್ರಿಂಟ್ ಬಳಸಿ ಯುಪಿಐ ಪಾವತಿಗಳನ್ನು ಅನುಮೋದಿಸಬಹುದು.
India News Live 7th October: ಸರ್ಕಾರದ ಮುಖ್ಯಸ್ಥನಾಗಿ 25ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ಮೋದಿ, 'ಅಮ್ಮ ಹೇಳಿದ ಎರಡು ಮಾತು' ನೆನಪಿಸಿಕೊಂಡ ನರೇಂದ್ರ!
PM Modi Enters 25th Year as Head of Government ಪ್ರಧಾನಿ ಮೋದಿ ಸರ್ಕಾರದ ಮುಖ್ಯಸ್ಥರಾಗಿ 25ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಎದುರಿಸಿದ ಸವಾಲುಗಳು, ಭಾರತದ ಅಭಿವೃದ್ಧಿಯ ಪಯಣವನ್ನು ಸ್ಮರಿಸಿಕೊಂಡಿದ್ದಾರೆ.
India News Live 7th October: ₹ 11 ಲಕ್ಷ ಕಾರು ವರ್ಷಗಳ ಬಳಿಕ ₹1.2 ಲಕ್ಷಕ್ಕೆ ಮಾರಾಟ, ಆದರೂ ಬೆಂಗ್ಳೂರು ಸಿಎಗೆ ₹2 ಲಕ್ಷ ಲಾಭ
₹ 11 ಲಕ್ಷ ಕಾರು ವರ್ಷಗಳ ಬಳಿಕ ₹1.2 ಲಕ್ಷಕ್ಕೆ ಮಾರಾಟ, ಆದರೂ ಬೆಂಗ್ಳೂರು ಸಿಎಗೆ ₹2 ಲಕ್ಷ ಲಾಭ ಮಾಡಿದ್ದಾರೆ. ಇದು ಹೇಗೆ ಅನ್ನೋ ಚರ್ಚೆಗೆ ಖುದ್ದು ಚಾರ್ಟೆಡ್ ಅಕೌಂಟ್ ಉತ್ತರ ನೀಡಿದ್ದಾರೆ. ಹೀಗಾಗಿ ಕಾರಿನ ಮೇಲೆ ಹೂಡಿಕೆ ಉತ್ತಮಲ್ಲ ಅನ್ನೋ ವಾದಕ್ಕೆ ಇದು ವಿರುದ್ಧವಾಗಿದೆ.
India News Live 7th October: 'ಸನಾತನ ಧರ್ಮ ಬಿಟ್ಟು ಬೌದ್ಧ ಧರ್ಮ ಸೇರಿದ್ದಾರೆ, ಅವರು ಹೇಗೆ ದಲಿತರಾಗಲು ಸಾಧ್ಯ?' ಪ್ರಶ್ನೆ ಮಾಡಿದ ರಾಕೇಶ್ ಕಿಶೋರ್
Advocate Rakesh Kishore Questions CJI Gavais Dalit Identity Post Buddhism Conversion ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ದಲಿತರೆಂಬ ಕಾರಣಕ್ಕೆ ಶೂ ಎಸೆದಿಲ್ಲ, ಬದಲಿಗೆ ಖಜುರಾಹೊ ವಿಗ್ರಹದ ತೀರ್ಪಿನಿಂದಾಗಿ ಎಂದು ವಕೀಲ ರಾಕೇಶ್ ಕಿಶೋರ್ ಹೇಳಿದ್ದಾರೆ.
India News Live 7th October: 'ಸಾಂವಿಧಾನಿಕ ಹುದ್ದೆಯ ಘನತೆ ಸಿಜೆಐ ಕಾಪಾಡಬೇಕು..' ಎಂದ ವಕೀಲ ರಾಕೇಶ್ ಕಿಶೋರ್!
Advocate Rakesh Kishore Slams CJI Gavai on Constitutional Dignity ದೇಶದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸಿದ ಹಿರಿಯ ವಕೀಲ ರಾಕೇಶ್ ಕಿಶೋರ್, ಸಿಜೆಐ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಕಾಪಾಡಬೇಕು ಎಂದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
India News Live 7th October: ನನ್ನ ಗರ್ಲ್ಫ್ರೆಂಡ್ ಆಗು - ಬೀದಿಯಲ್ಲಿ ನಡೆದು ಹೋಗ್ತಿದ್ದ ಮಹಿಳೆಯ ತಬ್ಬಿಕೊಂಡು ಎಳೆದಾಡಿದ ಯುವಕ
Woman Dragged by Man in Street: ಬೀದಿಯಲ್ಲಿ ಓಡಾಡ್ತಿದ್ದ ಮಹಿಳೆಯೊಬ್ಬಳನ್ನು ಯುವಕನೋರ್ವ ನೀನು ನನ್ನ ಗರ್ಲ್ಫ್ರೆಂಡ್ ಆಗು ಅಂತ ತಬ್ಬಿಕೊಂಡು ಎಳೆದಾಡಿದಂತಹ ಆಘಾತಕಾರಿ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India News Live 7th October: ಚಿನ್ನದ ಪ್ರಚಾರಕ್ಕೆ ಭಾರತದ ವಿರೋಧಿ ಪಾಕ್ ಮಾಡೆಲ್ ರಾಯಭಾರಿ? ಏನಿದು ವಿವಾದ? ಕೋರ್ಟ್ ಎಚ್ಚರಿಕೆ ಏನು?
ಭಾರತ ವಿರೋಧಿ ಹೇಳಿಕೆ ನೀಡಿದ್ದ ಪಾಕಿಸ್ತಾನಿ ಮಾಡೆಲ್ ಅಲಿಶ್ಬಾ ಖಾಲಿದ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಿದ್ದಕ್ಕಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತೀವ್ರ ವಿವಾದಕ್ಕೆ ಸಿಲುಕಿದೆ. ಕಂಪನಿಯು ಬಾಂಬೆ ಹೈಕೋರ್ಟ್ ಮೊರೆ ಹೋಗಿ ತಾತ್ಕಾಲಿಕ ತಡೆಯಾಜ್ಞೆ ಪಡೆದಿದೆ.
India News Live 7th October: ವ್ಯಾಟ್ಸಾಪ್ನಲ್ಲಿ ಬಂದ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡಿ 97,000 ರೂ ಕಳ್ಕೊಂಡ ಯುವಕ
ವ್ಯಾಟ್ಸಾಪ್ನಲ್ಲಿ ಬಂದ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡಿ 97,000 ರೂ ಕಳ್ಕೊಂಡ ಯುವಕ, ನಿಮಗೂ ಇದೇ ರೀತಿ ವ್ಯಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಪತ್ರಿಕೆ ಬಂದಿದೆಯಾ? ಎಚ್ಚರ, ಸೈಬರ್ ಫ್ರಾಡ್ಸ್ ಇದೀಗ ಹೊಸ ಮಾದರಿ ಮೂಲಕ ನಿಮ್ಮ ಖಾತೆ ಖಾಲಿ ಮಾಡಲಿದೆ.
India News Live 7th October: ರೇಬಿಸ್ ಬಗ್ಗೆ ಬೀದಿ ನಾಟಕ ಮಾಡ್ತಿದ್ದ ಕಲಾವಿದನಿಗೆ ಕಚ್ಚಿದ ಬೀದಿನಾಯಿ
Stray Dog Bites Artist:ರೇಬಿಸ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಆಯೋಜಿಸಿದ್ದ ಬೀದಿ ನಾಟಕದಲ್ಲೇ ಕಲಾವಿದರೊಬ್ಬರಿಗೆ ಬೀದಿ ನಾಯಿ ಕಡಿದಂತಹ ವಿಪರ್ಯಾಸದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India News Live 7th October: ಪಶ್ಚಾತ್ತಾಪ ಖಂಡಿತಾ ಇಲ್ಲ, ಶೂ ಎಸೆದು ಸರಿಯಾದ ಕೆಲಸ ಮಾಡಿದ್ದೇನೆ ಎಂದ ಹಿರಿಯ ವಕೀಲ ರಾಕೇಶ್ ಕಿಶೋರ್!
Advocate Rakesh Kishore Has No Regret ಮಧ್ಯಪ್ರದೇಶದ ಖಜುರಾಹೊ ದೇವಾಲಯಗಳಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಸಲ್ಲಿಸಲಾದ ಅರ್ಜಿಯ ಕುರಿತು ಸೆಪ್ಟೆಂಬರ್ 16 ರಂದು ನ್ಯಾಯಾಲಯವು ನೀಡಿದ ಆದೇಶದ ಆಧಾರದ ಮೇಲೆ ತಮ್ಮ ಪ್ರತಿಕ್ರಿಯೆ ಎಂದು ಕಿಶೋರ್ ಹೇಳಿದ್ದಾರೆ.
India News Live 7th October: ಮುಕೇಶ್ ಅಂಬಾನಿ ಪ್ರತಿ ದಿನ ಪರ್ಸ್ನಲ್ಲಿ ಎಷ್ಟು ಹಣ ಇಟ್ಟುಕೊಂಡಿರುತ್ತಾರೆ? ಸೀಕ್ರೆಟ್ ಬಹಿರಂಗ
ಮುಕೇಶ್ ಅಂಬಾನಿ ಪ್ರತಿ ದಿನ ಪರ್ಸ್ನಲ್ಲಿ ಎಷ್ಟು ಹಣ ಇಟ್ಟುಕೊಂಡಿರುತ್ತಾರೆ? ಸೀಕ್ರೆಟ್ ಬಹಿರಂಗವಾಗಿದೆ.ಜನಸಾಮಾನ್ಯರು ಯುಪಿಐ ಕ್ರಾಂತಿ ಬಳಿಕವೂ ಕನಿಷ್ಠ 100 ರೂಪಾಯಿ ಆದರೂ ಇಟ್ಟುಕೊಳ್ಳುತ್ತಾರೆ,, ದೇಶದ ಶ್ರೀಮಂತ ಮುಕೇಶ್ ಅಂಬಾನಿ ಪರ್ಸ್ನಲ್ಲಿ ಎಷ್ಟಿರುತ್ತೆ ಹಣ?
India News Live 7th October: ಯಾರೂ ಮುಟ್ಟಲಾಗದ ಮಟ್ಟಕ್ಕೆ ಚಿನ್ನದ ಬೆಲೆ - ಗೋಲ್ಡ್ಮನ್ ಸ್ಯಾಚ್ಸ್ನಿಂದ ಸ್ಫೋಟಕ ಭವಿಷ್ಯ!
Goldman Sachs Forecasts Gold Price to Hit $4,900 by December 2026: 2025 ರಲ್ಲಿ ಕೇಂದ್ರ ಬ್ಯಾಂಕ್ ಖರೀದಿ ಸರಾಸರಿ 80 ಮೆಟ್ರಿಕ್ ಟನ್ ಮತ್ತು 2026 ರಲ್ಲಿ 70 ಟನ್ ಆಗುವ ನಿರೀಕ್ಷೆಯಿದೆ ಎಂದು ಗೋಲ್ಡ್ಮನ್ ನಿರೀಕ್ಷೆ ಮಾಡಿದೆ.
India News Live 7th October: ಸುಪ್ರೀಂ ಕೋರ್ಟ್ನಲ್ಲೇ ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಹಿನ್ನೆಲೆಯೇನು?
Advocate Rakesh Kishore Tried to Throw Shoe at CJI Gavai in Supreme Court ಸುಪ್ರೀಂ ಕೋರ್ಟ್ನಲ್ಲಿ ಹಿರಿಯ ವಕೀಲ ರಾಕೇಶ್ ಕಿಶೋರ್, ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದಾರೆ.