ನಾಸಿಕ್‌ನ ಡಾ. ಝಾಕಿರ್ ಹುಸೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ | 24 ರೋಗಿಗಳು ಸಾವು | ಸತ್ತವರ ಸಿಲಿಂಡರ್‌ಗಾಗಿ ಬದುಕಿದ್ದವರ ಪೈಪೋಟಿ

ನಾಸಿಕ್(ಏ.22): ಜನರು ತಮ್ಮ ಸ್ವಂತ ಕುಟುಂಬ ಸದಸ್ಯರನ್ನು ಉಳಿಸಲು ಪ್ರಯತ್ನಿಸುವ ಭರದಲ್ಲಿ ಸತ್ತ ರೋಗಿಗಳ ಹಾಸಿಗೆಯಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ಕಸಿದುಕೊಳ್ಳುವುದನ್ನು ನೋಡುವುದು, ಮತ್ತು ತನ್ನ ಅಜ್ಜಿಯ ಜೊತೆಗೂ ಇದೇ ನಡೆದಿದ್ದನ್ನು ನೋಡುವುದು ಅಮಾನವೀಯ ಕ್ಷಣವಾಗಿತ್ತು ಎಂದಿದ್ದಾರೆ 23 ವರ್ಷದ ವಿಕ್ಕಿ ಜಾಧವ್.

Add Asianetnews Kannada as a Preferred SourcegooglePreferred

ನಾಸಿಕ್‌ನ ಡಾ ಝಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಸೋರಿಕೆಯಾದ ಕಾರಣ ಆಮ್ಲಜನಕ ಪೂರೈಕೆಯಿಲ್ಲದೆ ಸಾವನ್ನಪ್ಪಿದ ಕನಿಷ್ಠ 24 ರೋಗಿಗಳಲ್ಲಿ ಅವರ ಅಜ್ಜಿ, 65 ವರ್ಷದ ಸುಗಂಧ ಥೋರತ್ ಸೇರಿದ್ದಾರೆ. ಆ ಘಟನೆ ನೋಡಿ ಪ್ರತ್ಯಕ್ಷ ನೋಡಿದ ವಿಕ್ಕಿ ಮಾತುಗಳಿವು

ಆಕ್ಸಿಜನ್ ಸೋರಿಕೆಯಿಂದ ವೆಂಟಿಲೇಟರ್‌ನಲ್ಲಿದ್ದ 22 ರೋಗಿಗಳು ಸಾವು; ಪ್ರಧಾನಿ ಮೋದಿ ಸಂತಾಪ!

“ಒಂದು ಗಂಟೆಯೊಳಗೆ ಜನರು ನಿಮ್ಮ ಕಣ್ಣುಗಳ ಮುಂದೆ ಸಾಯುವುದನ್ನು ನೋಡುವುದು ಆಘಾತಕಾರಿ. ಆದರೆ ಸತ್ತ ರೋಗಿಗಳ ಹಾಸಿಗೆಗಳಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ತೆಗೆದುಕೊಂಡು ಹೋಗಬೇಕೆಂದು ಜನರು ಕೂಗುತ್ತಿರುವುದನ್ನು ಮತ್ತು ತಮ್ಮ ಪ್ರೀತಿಪಾತ್ರರನ್ನು ಬದುಕಿಸಲು ಅವುಗಳನ್ನು ಬಳಸಲು ಪ್ರಯತ್ನಿಸುತ್ತಿರುವುದನ್ನು ನೋಡುವುದು ಕಷ್ಟವಾಗಿತ್ತು. ನಾನು ಅದನ್ನು ಮಾಡಲು ಪ್ರಯತ್ನಿಸಿದೆ ಆದರೆ ಅದು ಪ್ರಯೋಜನವಾಗಲಿಲ್ಲ ಜಾಧವ್ ಹೇಳಿದರು.

ಕೊರೋನಾ 2ನೇ ಅಲೆ: ಕೇಂದ್ರದ ಅಂಕಿ ಅಂಶದಲ್ಲಿ ಬ ಯಲಾಯ್ತು ಮಹತ್ವದ ವಿಚಾರ!

ಥೋರತ್ ನಿರ್ಣಾಯಕ ಹಂತದಲ್ಲಿದ್ದಾಗ, ಜಾಧವ್ ಅವರನ್ನು ಭೇಟಿಯಾಗಲು ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಗೆ ಕಾಲಿಟ್ಟರು. ಆದರೆ ಅವರು ಆಮ್ಲಜನಕವನ್ನು ಪಡೆಯುತ್ತಿಲ್ಲ ಎಂದು ವಿಕ್ಕಿಗೆ ತಿಳಿಯಿತು. ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು ವಿಕ್ಕಿ.

ಸಿಸ್ಟಮ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ನಾನು ಅವರಿಗೆ ಹೇಳಿದಾಗ ಅವರು ಸಿಸ್ಟಮ್ ಅನ್ನು ಪರೀಕ್ಷಿಸಲು ಹೋದರು ಮತ್ತು ನಂತರ ಆಕ್ಸಿಜನ್ ಸೋರಿಕೆಯನ್ನು ಪತ್ತೆ ಮಾಡಿದರು. ಅದು ಸಂಭವಿಸಿದ ತಕ್ಷಣ ಮೂರನೇ ಮಹಡಿಯಲ್ಲಿ ಜನ ಭೀತಿಗೊಳಗಾದರು. ಅಲ್ಲಿ ಕ್ರಿಟಿಕಲ್ ರೋಗಿಗಳಿಗೆ ಸಹಾಯ ಮಾಡಲು ಜಂಬೋ ಸಿಲಿಂಡರ್‌ಗಳನ್ನು ಸಿಬ್ಬಂದಿಯೊಂದಿಗೆ ಇರಿಸಲಾಗಿತ್ತು, ಎಂದು ಜಾಧವ್ ಹೇಳಿದ್ದಾರೆ.

ಜಂಬೊ ಸಿಲಿಂಡರ್‌ಗಳು ಟ್ಯಾಂಕ್‌ನಿಂದ ಸೋರಿಕೆಯಾದ ಹೆಚ್ಚಿನ ಪ್ರಮಾಣದ ಗಾಳಿಯ ಹರಿವಿಗೆ ಪರ್ಯಾಯವಾಗಿರಲಿಲ್ಲ ಮತ್ತು ಉಸಿರಾಟದ ಬೆಂಬಲದ ಅನುಪಸ್ಥಿತಿಯಲ್ಲಿ ಅನೇಕ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳು ಬದುಕುಳಿಯಲು ಸಾಧ್ಯವಾಗಲಿಲ್ಲ.

ವೈದ್ಯರು ಮತ್ತು ದಾದಿಯರು ರೋಗಿಗಳನ್ನು ಬದುಕಿಸಲು ಪ್ರಯತ್ನಿಸಿದ್ದರಿಂದ ಇದು ಗೊಂದಲಮಯವಾಗಿತ್ತು. ಏನೋ ತಪ್ಪಾಗಿದೆ ಎಂದು ಕೇಳಿದ ನಂತರ ಸಂಬಂಧಿಕರು ವಾರ್ಡ್‌ಗೆ ಧಾವಿಸಿದರು. ಆಮ್ಲಜನಕ ಮುಗಿದಿದೆ ಎಂದು ನಮಗೆ ತಿಳಿದಾಗ, ನಾನು ಸೇರಿದಂತೆ ಸಂಬಂಧಿಕರು, ಮೃತಪಟ್ಟ ರೋಗಿಗಳ ಹಾಸಿಗೆಯ ಪಕ್ಕದಿಂದ ಸಿಲಿಂಡರ್ ಪಡೆಯಲು ಕೂಗಿದರು ಎಂದು ಜಾಧವ್ ಹೇಳಿದರು. ಅನೇಕರು ತಮ್ಮ ಕುಟುಂಬ ಸದಸ್ಯರನ್ನು ರಿಕ್ಷಾ ಮತ್ತು ಖಾಸಗಿ ವಾಹನಗಳಲ್ಲಿ ಪಕ್ಕದ ಆಸ್ಪತ್ರೆಗಳಿಗೆ ಕರೆದೊಯ್ಯಲು ಪ್ರಯತ್ನಿಸಿದರು ಎಂದಿದ್ದಾರೆ.