Asianet Suvarna News Asianet Suvarna News

ಮೋದಿ, ಅಮಿತ್‌ ಎಲ್ಲಾ ಎಲೆಕ್ಷನ್‌ ಗೆಲ್ಲಿಸಲಾಗದು,ನೀವೂ ಸಜ್ಜಾಗಿ: RSS

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾಗ್ಯೂ, ಪಕ್ಷ ಅಧಿಕಾರ ಹಿಡಿಯುವಲ್ಲಿ ವೈಫಲ್ಯ ಅನುಭವಿಸಿರುವುದಕ್ಕೆ ಬಿಜೆಪಿ ಪ್ರಚಾರದಲ್ಲಾದ ಅಚಾತುರ್ಯಗಳೇ ಕಾರಣ ಎಂದು ಆರ್‌ಎಸ್‌ಎಸ್‌ ಪ್ರತಿಪಾದಿಸಿದೆ. 

Narendra Modi Amit shah cannot always help Says RSS
Author
Bengaluru, First Published Feb 21, 2020, 11:36 AM IST

ನವದೆಹಲಿ (ಫೆ. 21): ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾಗ್ಯೂ, ಪಕ್ಷ ಅಧಿಕಾರ ಹಿಡಿಯುವಲ್ಲಿ ವೈಫಲ್ಯ ಅನುಭವಿಸಿರುವುದಕ್ಕೆ ಬಿಜೆಪಿ ಪ್ರಚಾರದಲ್ಲಾದ ಅಚಾತುರ್ಯಗಳೇ ಕಾರಣ ಎಂದು ಆರ್‌ಎಸ್‌ಎಸ್‌ ಪ್ರತಿಪಾದಿಸಿದೆ.

ಈ ಸಂಬಂಧ ಆರ್‌ಎಸ್‌ಎಸ್‌ ಮುಖವಾಣಿಯಲ್ಲಿ ಸುದೀರ್ಘ ಸಂಪಾದಕೀಯದಲ್ಲಿ ಸಚಿವ ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಂಥ ದಿಗ್ಗಜರೇ ಎಲ್ಲಾ ಚುನಾವಣೆಗಳನ್ನು ಗೆಲ್ಲಿಸಲಾಗದು. ಹೀಗಾಗಿ, ದೆಹಲಿಯಲ್ಲಿ ಪಕ್ಷದ ಮರು ಸಂಘಟನೆಗೆ ಒತ್ತು ನೀಡುವಂತೆ ಬಿಜೆಪಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಲಾಗಿದೆ. ಇತ್ತೀಚೆಗಷ್ಟೇ ನಡೆದ ದಿಲ್ಲಿ ಚುನಾವಣೆಯಲ್ಲಿ ಆಪ್‌ 62 ಸ್ಥಾನ, ಬಿಜೆಪಿ 8 ಸ್ಥಾನ ಹಾಗೂ ಕಾಂಗ್ರೆಸ್‌ ಶೂನ್ಯ ಸಂಪಾದನೆ ಮಾಡಿತ್ತು.

Follow Us:
Download App:
  • android
  • ios