ಮಠದಲ್ಲೇ ನರೇಂದ್ರ ಗಿರಿ ಆತ್ಮಹತ್ಯೆ ಕೇಸು: ಮೂವರ ಬಂಧನ
* ಅಖಿಲ ಭಾರತ ಅಖಾಡ ಪರಿಷತ್ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ಆತ್ಮಹತ್ಯೆ
* ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು 18 ಜನರ ವಿಶೇಷ ತನಿಖಾ ತಂಡ
* ಪ್ರಕರಣದ ಪ್ರಮುಖ ಆರೋಪಿಯಾದ ನರೇಂದ್ರರ ಶಿಷ್ಯ ಆನಂದ ಗಿರಿ, ಸಂದೀಪ್ ತಿವಾರಿ ಅರೆಸ್ಟ್
ಪ್ರಯಾಗ್ರಾಜ್(ಸೆ.22): ಅಖಿಲ ಭಾರತ ಅಖಾಡ ಪರಿಷತ್ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು 18 ಜನರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಈ ನಡುವೆ, ಪ್ರಕರಣದ ಪ್ರಮುಖ ಆರೋಪಿಯಾದ ನರೇಂದ್ರರ ಶಿಷ್ಯ ಆನಂದ ಗಿರಿ, ಸಂದೀಪ್ ತಿವಾರಿ ಹಾಗೂ ಇನ್ನೊಬ್ಬನನ್ನು ಬಂಧಿಸಲಾಗಿದೆ. ಈ ಮೂವರ ಹೆಸರೂ ನರೇಂದ್ರ ಬರೆದಿದ್ದ ಡೆತ್ನೋಟ್ನಲ್ಲಿತ್ತು.
‘ನಾನು ಮಹಿಳೆಯೊಂದಿಗಿರುವ ಪೋಟೋವನ್ನು ಆನಂದ ಗಿರಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈವರೆಗೆ ನಾನು ಗೌರವದಿಂದ ಬದುಕಿದ್ದೆ, ಹಾಗಾಗಿ ಅಪವಾದ ಹೊತ್ತುಕೊಂಡು ಬದುಕಲು ಇಷ್ಟವಾಗಲಿಲ್ಲ. ಹಾಗಾಗಿ ಈ ನಿರ್ಧಾರ ಮಾಡಿದ್ದೇನೆ’ ಎಂದು ಡೆತ್ನೋಟಲ್ಲಿ ನರೇಂದ್ರ ಬರೆದಿದ್ದಾರೆ.
ಅಖಾಡ ಪರಿಷತ್ನ ಮುಖ್ಯಸ್ಥರಾಗಿದ್ದ ನರೇಂದ್ರ ಗಿರಿ ಅವರು ಸೋಮವಾರ ಸಾಯಂಕಾಲ ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.