ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ಅಕ್ಟೋಬರ್ 17 ರಂದು ಎರಡೂ ರನ್‌ವೇಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಘೋಷಿಸಿದ್ದಾರೆ. 

ಮುಂಬೈ (ಸೆ.23): ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Chhatrapati Shivaji Maharaj International Airport - CSMIA) ಅಧಿಕಾರಿಗಳು ಅಕ್ಟೋಬರ್ 17 ರಂದು ಎರಡೂ ರನ್‌ವೇಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಘೋಷಿಸಿದ್ದಾರೆ. 

Add Asianetnews Kannada as a Preferred SourcegooglePreferred

ಅಧಿಕೃತ ಹೇಳಿಕೆಯ ಪ್ರಕಾರ ಅಕ್ಟೋಬರ್ 17 ರಂದು ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ 6 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ. ಇದು ವಾರ್ಷಿಕ ಮಾನ್ಸೂನ್ ಆಕಸ್ಮಿಕ ಯೋಜನೆಯ ಭಾಗವಾಗಿದೆ.

ಕೆಲಸ ಹುಡುಕಿಕೊಂಡು ಭಾರತದಿಂದ ವಲಸೆ ಹೋದ ಈ ವ್ಯಕ್ತಿ ಇಂದು ಕೆನಡಾದ ಅತ್ಯಂತ ಶ್ರೀಮಂತ

ವಿಮಾನ ನಿಲ್ದಾಣವು ಈ ವರ್ಷದ ಆರಂಭದಲ್ಲಿ ಅಂದರೆ ಮೇ 2 ರಂದು ಎರಡೂ ರನ್‌ವೇಗಳಲ್ಲಿ ತನ್ನ ಪೂರ್ವ ಮಾನ್ಸೂನ್ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಡೆಸಿತ್ತು. 

ಮಾನ್ಸೂನ್ ನಂತರದ ತಡೆಗಟ್ಟುವ ನಿರ್ವಹಣೆಯನ್ನು ಕೈಗೊಳ್ಳಲು ಆರು ತಿಂಗಳ ಮುಂಚಿತವಾಗಿ ಮುಚ್ಚುವಿಕೆಯ ಕುರಿತು ಏರ್‌ಮೆನ್‌ಗಳಿಗೆ (NOTAM) ಮುಂಗಡ ಸೂಚನೆಯನ್ನು ನೀಡಲಾಗಿದೆ.

ತಾತ್ಕಾಲಿಕ ಮುಚ್ಚುವಿಕೆಯ ಸಮಯದಲ್ಲಿ, ವಿಮಾನ ನಿಲ್ದಾಣದ ಮೂಲಸೌಕರ್ಯವನ್ನು ಉನ್ನತ ಗುಣಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ದುರಸ್ತಿ ಮತ್ತು ನಿರ್ವಹಣೆಯನ್ನು ತೆಗೆದುಕೊಳ್ಳಲಾಗುತ್ತದೆ.

ಹೈದ್ರಾಬಾದ್‌ ನಿಂದ ಬೆಂಗಳೂರಿಗೆ ವಂದೇ ಭಾರತ್‌, ರೈಲು ವೇಳಾಪಟ್ಟಿ ಮಾಹಿತಿ ಇಲ್ಲಿದೆ

Scroll to load tweet…