Asianet Suvarna News Asianet Suvarna News

ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ತಿರುವು!

ಹಿರೇನ್‌ ಸಾವು: ಕೊಲೆ ಕೇಸು ದಾಖಲು| ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ತಿರುವು| ಸ್ಫೋಟಕ ಇಟ್ಟಿದ್ದ ಕಾರು ಮಾಲೀಕನ ಪತ್ನಿ ದೂರಿನ ಹಿನ್ನೆಲೆ ಕೇಸು

Mansukh Hiren death Maharashtra ATS registers murder case against unidentified persons pod
Author
Bangalore, First Published Mar 8, 2021, 7:48 AM IST

 

ಮುಂಬೈ(ಮಾ.08): ಮುಕೇಶ್‌ ಅಂಬಾನಿ ನಿವಾ​ಸದ ಮುಂದೆ ಜಿಲೆ​ಟಿನ್‌ ಕಡ್ಡಿ​ ಪತ್ತೆಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸ್ಫೋಟಕ ಪತ್ತೆಯಾದ ಕಾರಿನ ಮಾಲೀಕ ಮನ್‌ಸುಖ್‌ ಹಿರೇನ್‌ ನಿಗೂಢ ಸಾವಿನ ಪ್ರಕರಣ ಸಂಬಂಧ ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡಿದ್ದಾರೆ.

ಹಿರೇನ್‌ ಅವರ ಸಾವನ್ನು ಮೊದ​ಲಿಗೆ ಅಸ​ಹಜ ಸಾವು ಎಂದು ಪರಿ​ಗ​ಣಿಸಿ ತನಿಖೆ ಕೈಗೊ​ಳ್ಳ​ಲಾ​ಗಿತ್ತು. ಆದರೆ ಇದೀಗ ಹಿರೇನ್‌ ಅವರ ಪತ್ನಿ, ತನ್ನ ಪತಿ​ಯನ್ನು ಕೊಲೆಗೈ​ಯ್ಯ​ಲಾ​ಗಿದೆ ಎಂದು ದೂರು ನೀಡಿ​ದ್ದಾರೆ. ಹೀಗಾಗಿ ಅಪ​ರಿ​ಚಿ​ತರ ವಿರುದ್ಧ ಸಾಕ್ಷ್ಯ ನಾಶದ ಯತ್ನ, ಹತ್ಯೆ, ಕ್ರಿಮಿ​ನಲ್‌ ಪಿತೂರಿ ಕೇಸ್‌​ಗ​ಳನ್ನು ದಾಖ​ಲಿ​ಸಿ​ಕೊ​ಳ್ಳ​ಲಾ​ಗಿದೆ. ಅಲ್ಲದೆ ಈ ಪ್ರಕ​ರ​ಣ​ವನ್ನು ಇದೀಗ ಮುಂಬೈ ಪೊಲೀ​ಸರಿಂದ ಎಟಿ​ಎಸ್‌(ಭಯೋ​ತ್ಪಾ​ದನಾ ನಿಗ್ರಹ ದಳ)ಗೆ ವರ್ಗಾ​ವ​ಣೆ​ಯಾ​ಗಿದೆ.

ಮತ್ತೊಂದೆಡೆ ಹಿರೇನ್‌ ಅವರ ಮುಖದ ಎಡ​ಭಾಗ, ಮೂಗು, ಬಲ​ಗ​ಣ್ಣಿನ ಭಾಗ​ದಲ್ಲಿ ಗಾಯದ ಗುರು​ತು​ಗ​ಳಾ​ಗಿ​ರು​ವುದು ಮರ​ಣೋ​ತ್ತರ ಪರೀ​ಕ್ಷೆ​ಯಲ್ಲಿ ಪತ್ತೆಯಾಗಿದೆ. ಹೀಗಾಗಿ ಹಿರೇನ್‌ ಅವ​ರದ್ದು ಅಸ​ಹಜ ಸಾವು ಅಲ್ಲ. ಬದ​ಲಿಗೆ ಇದೊಂದು ಕೊಲೆ ಇರ​ಬ​ಹುದು ಎಂಬ ಶಂಕೆ ವ್ಯಕ್ತ​ವಾ​ಗಿ​ದೆ.

Follow Us:
Download App:
  • android
  • ios