ವಿಚಿತ್ರ ವರದಕ್ಷಿಣೆ ಕೇಳಿದ ವರ ಮಹಾಶಯ 21 ಆಮೆ, ಲ್ಯಾಬ್ರಡಾರ್ ನಾಯಿ ಬೇಕೆಂದ ಯುವಕ

ಮುಂಬೈ(ಜು.22): ಭಾರತದಲ್ಲಿ ವಿವಾಹ ಎಂದಮೇಲೆ ವರದಕ್ಷಿಣೆ ಎಂಬ ವಿಚಾರ ಹೊಸದಲ್ಲ. ಎಷ್ಟೇ ಕಾನೂನು ಬಂದರೂ, ಎಷ್ಟೇ ವಿದ್ಯಾವಂತರಾದರೂ ಇಂದಿಗೂ ನಮ್ಮಲ್ಲಿ ವರದಕ್ಷಿಣೆ ಪದ್ಧತಿ ಇದೆ ಎಂಬುದು ವಾಸ್ತವ.

Add Asianetnews Kannada as a Preferred SourcegooglePreferred

ಜಮೀನು, ವಾಹನ, ಚಿನ್ನ, ನಗದು ಹೀಗೆ ಬಗೆ ಬಗೆಯ ರೂಪದಲ್ಲಿ ವರದಕ್ಷಿಣೆ ಪಡೆಯುತ್ತಾರೆ. ಇಂದಿನ ವಿವಾಹಗಳಲ್ಲಿ ಉಡುಗೊರೆ ಹೆಸರಲ್ಲಿಯೂ ಲಕ್ಷ ಲಕ್ಷ ವ್ಯಯಿಸಲಾಗುತ್ತದೆ.

ವರದಕ್ಷಿಣೆ ಪಿಡುಗು ತೊಲಗಿಸಲು ಕೇರಳ ರಾಜ್ಯಪಾಲರ ಉಪವಾಸ ಸತ್ಯಾಗ್ರಹ; ಸರ್ಕಾರಕ್ಕೆ ಮುಜುಗರ!

ಮಹಾರಾಷ್ಟ್ರದಲ್ಲಿ ಒಬ್ಬ ವ್ಯಕ್ತಿ ಮತ್ತು ಅವರ ಕುಟುಂಬದ ವಿರುದ್ಧ 21 ಆಮೆ, ಕಪ್ಪು ಲ್ಯಾಬ್ರಡಾರ್ ಮತ್ತು ವರದಕ್ಷಿಣೆ ಎಂದು ₹ 10 ಲಕ್ಷ ಕೋರಿದ್ದಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ.

ವಧುವಿನ ಕುಟುಂಬವು ಬೇಡಿಕೆಗಳನ್ನು ಪೂರೈಸಲು ಅಸಹಾಯಕತೆಯನ್ನು ವ್ಯಕ್ತಪಡಿಸಿದ ನಂತರ ಆರೋಪಿಗಳು ಮದುವೆಯನ್ನು ರದ್ದುಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳಿಗೆ ಅಪ್ಪನ ಭರ್ಜರಿ ಉಡುಗೊರೆ: 1,000 ಕೆಜಿ ಮೀನು, 10 ಕುರಿ, 250 ಕೆಜಿ ಸಿಹಿ!

ಫೆಬ್ರವರಿಯಲ್ಲಿ ನಿಶ್ಚಿತಾರ್ಥದ ಮೊದಲು ವಧುವಿನ ಕುಟುಂಬವು ₹ 2 ಲಕ್ಷ ನಗದು, 10 ಗ್ರಾಂ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಇಷ್ಟಕ್ಕೇ ತೃಪ್ತಿಗೊಳ್ಳದ ವರಮ ಕುಟುಂಬ ಇನ್ನಷ್ಟು ಡಿಮ್ಯಾಂಡ್ ಮುಂದಿಟ್ಟಿದೆ.

ಅಂತೂ ಕೈಮೀರಿ ಬೇಡಿಕೆ ಬಂದಾಗ ವಧುವಿನ ಮನೆಯವರು ಅದನ್ನು ಒದಗಿಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮದುವೆ ಮುರಿದುಬಿದ್ದಿದೆ.