ನರಹರಿ ಝಿರ್ವಾಲ್ ಮತ್ತು ಇತರರು, ಧಂಗರ್ ಸಮುದಾಯವನ್ನು ಆದಿವಾಸಿಗಳ ಕೋಟಾದಲ್ಲಿ ಸೇರಿಸುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.

ಮುಂಬೈ (ಅ.4): ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಬಣದ ಶಾಸಕ ಮತ್ತು ಉಪ ಸ್ಪೀಕರ್ ನರಹರಿ ಜೀರ್ವಾಲ್ ಶುಕ್ರವಾರ ಮಹಾರಾಷ್ಟ್ರದ ಮಂತ್ರಾಲಯದ ಮೂರನೇ ಮಹಡಿಯಿಂದ ಜಿಗಿದಿದ್ದಾರೆ. ನರಹರಿ ಜೀರ್ವಾಲ್‌ ಅವರೊಂದಿಗೆ ಇಬ್ಬರು ಬುಡಕಟ್ಟು ಶಾಸಕರು ಕೂಡ ಮೂರನೇ ಮಹಡಿಯಿಂದ ಜಿಗಿದಿದ್ದಾರೆ. ಅವರೆಲ್ಲರೂ ಮಂತ್ರಾಲಯದಲ್ಲಿ ಹಾಕಲಾಗಿದ್ದ ಸೇಫ್ಟಿ ನೆಟ್‌ನಲ್ಲಿ ಸಿಕ್ಕಿಹಾಕಿಕೊಂಡರು. ಘಟನೆಯಲ್ಲಿ ಯಾವುದೇ ಪ್ರತಿಭಟನಾಕಾರರು ಗಂಭೀರವಾಗಿ ಗಾಯಗೊಂಡಿಲ್ಲ. ಜಿರ್ವಾಲ್ ಮತ್ತು ಇತರರು ಧಂಗರ್ ಸಮುದಾಯವನ್ನು ಆದಿವಾಸಿಗಳ ಕೋಟಾದಲ್ಲಿ ಸೇರಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು.ಇಂದು ನಡೆದ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಶಾಸಕರನ್ನು ಭೇಟಿಯಾಗಲಿದ್ದಾರೆ.

ಎಸ್ಟಿ ವರ್ಗದ ಅಡಿಯಲ್ಲಿ ಕೋಟಾದ ತಮ್ಮ ಬೇಡಿಕೆಯನ್ನು ಪೂರೈಸದ ಕಾರಣಕ್ಕಾಗಿ ಸೆಪ್ಟೆಂಬರ್ 27 ರಂದು, ಧಂಗರ್ ಸಮುದಾಯವು ಶಿಂಧೆ ನೇತೃತ್ವದ ಶಿವಸೇನೆಯನ್ನು ಬೆಂಬಲಿಸುವುದಿಲ್ಲ ಎಂದು ಘೋಷಿಸಿತ್ತು. ಪಶ್ಚಿಮ ಮಹಾರಾಷ್ಟ್ರ ಮತ್ತು ಮರಾಠವಾಡ ಪ್ರದೇಶದ ಕುರುಬ ಸಮುದಾಯದ ಧಂಗಾರ್‌ಗಳು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಗನಸಖಿಯಂತೆ ಇನ್ಮುಂದೆ ಬಸ್ಸಲ್ಲೂ ಬರ್ತಿದ್ದಾಳೆ ‘ಶಿವನೇರಿ ಸುಂದರಿ': ಪ್ರಯಾಣಿಕರಿಗೆ ಬಸ್‌ ಸಖಿ ಭಾಗ್ಯ!

ಕೇಂದ್ರದ ಡೇಟಾಬೇಸ್‌ನಲ್ಲಿ 'ಧಂಗರ್' ಎಂಬ ಉಲ್ಲೇಖವಿಲ್ಲದೇ ಬದಲಾಗಿ 'ಧಂಗಡ್' ಅನ್ನು ಎಸ್‌ಟಿಗಳ ಭಾಗವಾಗಿ ಗುರುತಿಸಿರುವುದರಿಂದ ಕೋಟಾದಿಂದ ವಂಚಿತವಾಗಿದೆ ಎಂದು ಸಮುದಾಯವು ಹೇಳುತ್ತದೆ. ಧಂಗಾರ್‌ಗಳು ಪ್ರಸ್ತುತ ಅಲೆಮಾರಿ ಬುಡಕಟ್ಟುಗಳ ಪಟ್ಟಿಯಲ್ಲಿದ್ದಾರೆ. ಥಾಣೆ ಜಿಲ್ಲೆಯಲ್ಲಿ ಸರಿಸುಮಾರು 300,000 ಧಂಗರ್ ಮತದಾರರಿದ್ದಾರೆ.

ವಾರಾಣಸಿ ದೇಗುಲಗಳಿಂದ ಸಾಯಿ ಬಾಬಾ ಮೂರ್ತಿ ಸ್ಥಳಾಂತರ : ಮಹಾ ಬಿಜೆಪಿ, ಕಾಂಗ್ರೆಸ್‌ ಸಿಡಿಮಿಡಿ

Scroll to load tweet…