Asianet Suvarna News Asianet Suvarna News

ಪ್ರವಾಹ, ಭೂಕುಸಿತಕ್ಕೆ ಪ್ರಸಕ್ತ ಋುತುವಿನಲ್ಲಿ 900ಕ್ಕೂ ಹೆಚ್ಚು ಸಾವು

ಪ್ರವಾಹ, ಭೂಕುಸಿತಕ್ಕೆ ಪ್ರಸಕ್ತ ಋುತುವಿನಲ್ಲಿ 900ಕ್ಕೂ ಹೆಚ್ಚು ಸಾವು| ಕರ್ನಾಟಕದಲ್ಲಿ 74 ಮಂದಿ ಸಾವು

Landslips floods took more than 900 lives in 16 states of india this season
Author
Bangalore, First Published Aug 10, 2020, 11:07 AM IST

ನವದೆಹಲಿ(ಆ.10): ಪ್ರವಾಹ ಹಾಗೂ ಭೂ ಕುಸಿತದಿಂದ ದೇಶದೆಲ್ಲೆಡೆ ಭಾರೀ ಅನಾಹುತಗಳು ಸಂಭವಿಸಿದ್ದು, ಪ್ರಸಕ್ತ ಮುಂಗಾರು ಋುತುವಿನಲ್ಲಿ ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ 900ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ. ಕರ್ನಾಟಕದಲ್ಲಿ ಈವರೆಗೆ ಮಳೆ ಸಂಬಂಧಿ ಅನಾಹುತದಲ್ಲಿ 74 ಮಂದಿ ಸಾವಿಗೀಡಾಗಿದ್ದಾರೆ.

'ಆಸ್ಪತ್ರೆಯಲ್ಲಿದ್ದೇನೆ, ಬರಲಾಗ್ತಿಲ್ಲ ನೆರೆ ಬಗ್ಗೆ ಎಚ್ಚರಿಕೆ ವಹಿಸಿ'

ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು 239 ಮಂದಿ, ಅಸ್ಸಾಂನಲ್ಲಿ 136, ಗುಜರಾತ್‌ನಲ್ಲಿ 87 ಮತ್ತು ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ತಲಾ 74 ಮಂದಿ ಸಾವಿಗೀಡಾಗಿದ್ದಾರೆ. ಶುಕ್ರವಾರ ಕೇರಳದಲ್ಲಿ ಭೂಕುಸಿತದಿಂದ 23 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 33ಕ್ಕೆ ಏರಿಕೆ ಆಗಿದೆ. ಬಿಹಾರದಲ್ಲಿ ಪ್ರವಾಹಕ್ಕೆ 69 ಲಕ್ಷ ಮಂದಿ ಸಂತ್ರಸ್ತರಾಗಿದ್ದರೆ, ಅಸ್ಸಾಂನಲ್ಲಿ 57 ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ.

ಬ್ರಹ್ಮಗಿರಿ ಬೆಟ್ಟಕುಸಿತ: ರಕ್ಷಣಾ ಕಾರ್ಯಕ್ಕೆ ಭಾರತೀಯ ಸೇನೆ!

ಕಳೆದ 10 ದಿನಗಳ ಅವಧಿಯಲ್ಲಿ ರಾಜ್ಯಗಳಲ್ಲಿ ಮಳೆ ಹಾಗೂ ಪ್ರವಾಹದಿಂದ 200ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 900 ದಾಟಿದೆ. ಅಲ್ಲದೇ ಕೆಲವು ರಾಜ್ಯಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಸಾವಿನ ಕುರಿತಾದ ವರದಿಗಳು ಲಭ್ಯವಾಗದ ಕಾರಣ ಸಾವು ನೋವಿನ ಸಂಖ್ಯೆ ಇನ್ನಷ್ಟುಹೆಚ್ಚುವ ಅಪಾಯ ಎದುರಾಗಿದೆ ಎಂದು ವರದಿಗಳು ತಿಳಿಸಿವೆ.

Follow Us:
Download App:
  • android
  • ios