ಪುಲ್ವಾಮಾ ದಾಳಿ ಸಂಚುಕೋರ ಸಮೀರ್ ದಾರ್ ಸತ್ತಿಲ್ಲ!
* 40 ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮ ದಾಳಿ
* ಪುಲ್ವಾಮ ದಾಳಿ ಸಂಚುಕೋರ ಸಮೀರ್ ದಾರ್ ಸತ್ತಿಲ್ಲ
* ಭದ್ರತಾ ಪಡೆಗಳ ಮೂಲಗಳ ಹೇಳಿಕೆ
* ಜು.31ರಂದು ಸತ್ತಿದ್ದಾನೆ ಎನ್ನಲಾಗಿತ್ತು
ನವದೆಹಲಿ(ಆ.26): 40 ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮ ದಾಳಿಯ ಸಂಚುಕೋರರಾದ ಲಂಬೂ ಹಾಗೂ ಸಮೀರ್ ದಾರ್ ಜುಲೈ 31ರಂದು ಯೋಧರ ಗುಂಡಿಗೆ ಬಲಿಯಾದರು ಎಂದು ಭಾವಿಸಲಾಗಿತ್ತು. ಆದರೆ ದಾಳಿಯ ಪ್ರಮುಖ ರುವಾರಿ ಸಮೀರ್ ದಾರ್ ಬದುಕಿರುವುದಾಗಿ ಭದ್ರತಾ ಪಡೆ ಮೂಲಗಳು ಹೇಳಿದೆ.
ಜುಲೈ 31ರಂದು ಯೋಧರ ಗುಂಡಿಗೆ ಬಲಿಯಾದ ಇಬ್ಬರನ್ನು ಜೈಶ್-ಎ-ಮೊಹಮದ್ ಭಯೋತ್ಪಾದನಾ ಗುಂಪಿಗೆ ಸೇರಿದ ಮಹಮದ್ ಇಸ್ಮಾಲ್ ಅಲ್ವಿ ಅಲಿಯಾಸ್ ಲಂಬೂ ಹಾಗೂ ಸಮೀರ್ ದಾರ್ ಎಂದು ಗುರುತಿಸಲಾಗಿತ್ತು. ಆದರೆ ಲಂಬೂವಿನ ಜೊತೆ ಸಾವೀಗೀಡಾದದ್ದು ಬೇರೆ ವ್ಯಕ್ತಿ ಎಂಬುದು ಈಗ ಗೊತ್ತಾಗಿದೆ.
\ದಾಳಿಯ ರುವಾರಿ ಸಮೀರ್ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಜೈಶ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದರಿಂದ ಸಮೀರ್ ದಾರ್ ಅತಿ ಅಪಾಯಕಾರಿ ವ್ಯಕ್ತಿ ಎಂದು ಸೈನ್ಯದ ಅಧಿಕಾರಿಗಳು ಹೇಳಿದ್ದಾರೆ.