ಕೊರೋನಾ ಗೆದ್ದ ಕೇರಳದಲ್ಲಿ ಮತ್ತೊಂದು ಸುರಕ್ಷತಾ ಕ್ರಮ!| ಕ್ವಾರಂಟೈನ್ ಅನುಸರಿಸುತತ್ತಿದ್ದ ಕೇರಳದಿಂದ ಮತ್ತೊಂದು ಪ್ರಯೋಗ

ತಿರುವನಂತಪುರ(ಏ.15): ಕೋವಿಡ್‌-19 ತಡೆಗಾಗಿ ಇದುವರೆಗೂ ಕ್ವಾರಂಟೈನ್‌ ಮಾರ್ಗ ಅನುಸರಿಸಿದ್ದ ಕೇರಳ ಸರ್ಕಾರ ಇದೀಗ ಹಿಮ್ಮುಖ ಕ್ವಾರಂಟೈನ್‌ ಯೋಜನೆ ಜಾರಿಗೆ ಮುಂದಾಗಿದೆ.

ಕೊರೋನಾಕ್ಕೆ ತುತ್ತಾಗುವ ಸಾಧ್ಯೆ ಹೆಚ್ಚಿರುವ ಗುರುತಿಸಿ ಇತರರಿಂದ ಪ್ರತ್ಯೇಕಿಸುವ ಪ್ರಕ್ರಿಯೆಯೇ ಹಿಮ್ಮುಖ ಕ್ವಾರಂಟೈನ್‌. ಇದರನ್ವಯ 65 ವರ್ಷಕ್ಕಿಂತ ಹಿರಿಯ ನಾಗರಿಕರು ಹಾಗೂ ಕಡಿಮೆ ರೋಗ ನಿರೋಧಕ ಸಾಮರ್ಥ್ಯ ಹೊಂದಿರುವವರು, ಕ್ಯಾನ್ಸರ್‌ ಸೇರಿದಂತೆ ಗಂಭೀರ ಕಾಯಿಲೆಗಳಿಂದ ಬಳುಲುತ್ತಿರುವವರನ್ನು ಇತರರಿಂದ ಪ್ರತ್ಯೇಕಗೊಳಿಸಲಾಗುತ್ತದೆ.

Fact Check ಪಿನರಾಯಿ ಫೋಟೋ ಇರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಿತಾ ಲಂಕಾ?

ಈ ಮೂಲಕ ಕೊರೋನಾ ಒಬ್ಬರಿಂದ ಮತ್ತೊಬ್ಬರಿಗೆ ಬಹು ವೇಗವಾಗಿ ಹಬ್ಬುವುದನ್ನು ತಡೆಹಿಡಿಯಬಹುದಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred