Asianet Suvarna News Asianet Suvarna News

25000 To Child Labour Informer: ಬಾಲ ಕಾರ್ಮಿಕರ ಮಾಹಿತಿ ಕೊಟ್ಟವರಿಗೆ ಭಾರಿ ಗಿಫ್ಟ್‌

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ವಿನೂತನ ಯೋಜನೆ
ಬಾಲ ಕಾರ್ಮಿಕರ ಮಾಹಿತಿ ನೀಡಿದವರಿಗೆ 25000 ಗಿಫ್ಟ್‌
ಕೇರಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಿರ್ಧಾರ

Kerala Govt announces Rs 25,000 incentive for child labour Alerts akb
Author
Bangalore, First Published Dec 15, 2021, 10:49 AM IST

ತಿರುವನಂತಪುರಂ: ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವ ಉದ್ದೇಶದಿಂದ ಕೇರಳ ಸರ್ಕಾರ (Kerala Govt) ವಿನೂತನ ಯೋಜನೆಯೊಂದನ್ನು ಜಾರಿ ಮಾಡಿದೆ. ಮಕ್ಕಳನ್ನು ಕೂಲಿ/ಕಾರ್ಮಿಕರನ್ನಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡುವವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು  25,000 ರೂ.ಗಳ ಪ್ರೋತ್ಸಾಹ ಧನವನ್ನು ಘೋಷಿಸಿದೆ.

ಈ ಕುರಿತು ಮಾಹಿತಿ ನೀಡಿದ ಕೇರಳ ರಾಜ್ಯ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್‌(Veena George) ದೇಶದಲ್ಲಿ ಈಗಾಗಲೇ ಬಾಲ ಕಾರ್ಮಿಕ ಪದ್ಧತಿ ನಿಷೇಧವಾಗಿದೆ. ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಕ್ರಿಮಿನಲ್‌ ಅಪರಾಧ. ಆದಾಗ್ಯೂ ಅಲ್ಲಿಲ್ಲಿ ಇದು ಜಾರಿಯಲ್ಲಿದೆ. ಇಂಥ ಪದ್ಧತಿಯನ್ನು ತಡೆಗಟ್ಟುವ ಉದ್ದೇಶದಿಂದ ಬಾಲ ಕಾರ್ಮಿಕರ ಮಾಹಿತಿ ನೀಡಿದವರಿಗೆ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿ ಮಾಡಲಾಗಿದೆ. ಜನರ ನೆರವಿನಿಂದ ಮಾತ್ರ ಬಾಲಕಾರ್ಮಿಕ (Child labor) ಪದ್ಧತಿಯನ್ನು ತೊಡೆದು ಹಾಕಬಹುದು ಎಂದು ಹೇಳಿದ್ದಾರೆ.

ಯಾದಗಿರಿ: ಹತ್ತಿ ಹೊಲಗಳಿಗೆ ಅಧಿಕಾರಿಗಳ ದಾಳಿ, 15 ಬಾಲ ಕಾರ್ಮಿಕರು ಪತ್ತೆ

ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಕೂಲಿ ಕೆಲಸಕ್ಕೆ ಮಕ್ಕಳನ್ನು ಬಳಸುವ ಬಗ್ಗೆ ಮಾಹಿತಿ ನೀಡಿದರೆ ಯಾವುದೇ ವ್ಯಕ್ತಿಗೆ ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಲಾಗುತ್ತಿದೆ. ಇದು ಮುಖ್ಯವಾಗಿ ಮಕ್ಕಳ ರಕ್ಷಣೆಯಲ್ಲಿ ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ರವಾನಿಸಿದ ಮಾಹಿತಿ ದೃಢಪಟ್ಟರೆ ಮತ್ತು ನಿಜವೆಂದು ಕಂಡುಬಂದಲ್ಲಿ ಮೊತ್ತವನ್ನು ವಿತರಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ, ಜಿಲ್ಲಾ ಡಬ್ಲ್ಯುಸಿಡಿ ಅಧಿಕಾರಿ (WCD officer) ಅಥವಾ ಮಕ್ಕಳ ರಕ್ಷಣಾ ಅಧಿಕಾರಿಗೆ ಮಾಹಿತಿಯನ್ನು ರವಾನಿಸಬಹುದು.

ಮಕ್ಕಳು ಉದ್ಯೋಗದಲ್ಲಿದ್ದಾರೆ ಎಂಬುದಕ್ಕೆ ಪುರಾವೆ ಇದೆ ಎಂದು ಮಾಹಿತಿದಾರರು ಖಚಿತಪಡಿಸಿಕೊಳ್ಳಬೇಕು ಮತ್ತು ಫೋಟೋ ಪುರಾವೆಯೊಂದಿಗೆ ವ್ಯಕ್ತಿಯ (ಉದ್ಯೋಗದಾತನ) ಮತ್ತು ಅವರ ವಿಳಾಸದ ವಿವರಗಳನ್ನು ಸಲ್ಲಿಸಬೇಕು. ವರದಿಯನ್ನು ಸ್ವೀಕರಿಸಿದ ನಂತರ, ಪೊಲೀಸ್ ಮತ್ತು ಡಬ್ಲ್ಯುಸಿಡಿ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳ ತಂಡವು ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಒಂದೇ ಪ್ರಕರಣದ ಬಗ್ಗೆ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಮಾಹಿತಿ ನೀಡಿದರೆ ಮೊದಲು ವರದಿ ಮಾಡಿದ ವ್ಯಕ್ತಿಗೆ ಮೊತ್ತವನ್ನು ನೀಡಲಾಗುತ್ತದೆ.

ಹೊಟ್ಟೆ ತುಂಬಿಕೊಳ್ಳಲು ಬಡವರ ಬಡಿದಾಟ: ಇವರ ಅಸಹಾಯಕತೆಯೇ ಇವನ ಬಂಡವಾಳ

ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿರುವ ಹಲವು ವರದಿಗಳು ಬರುತ್ತಿವೆ. ಕೋವಿಡ್ (Covid-19) ಅವಧಿಯಲ್ಲಿ ಬಾಲಕಾರ್ಮಿಕರ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳ ರಾಜ್ಯದಲ್ಲಿ ಅಂತಹ ಯಾವುದೇ ಬೆಳವಣಿಗೆಯನ್ನು ನಾವು ನೋಡಿಲ್ಲವಾದರೂ, ಅಂತಹ ಪ್ರೋತ್ಸಾಹವು ತಕ್ಷಣದ ಎಚ್ಚರಿಕೆಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಮಕ್ಕಳ ಕಲ್ಯಾಣ ಕಾರ್ಯಕರ್ತರೊಬ್ಬರು ಹೇಳಿದರು.

ಕೇರಳ ರಾಜ್ಯದಲ್ಲಿ ವರದಿಯಾಗಿರುವ ಹೆಚ್ಚಿನ ಬಾಲ ಕಾರ್ಮಿಕ ಪ್ರಕರಣಗಳಲ್ಲಿಸಂತ್ರಸ್ತರಾಗಿರುವ ಮಕ್ಕಳು ಇತರ ರಾಜ್ಯಕ್ಕೆ ಸೇರಿದವರು. ಮಕ್ಕಳ ಕಲ್ಯಾಣ ಕಾರ್ಯಕರ್ತರು 16 ರಿಂದ 18 ವರ್ಷ ವಯಸ್ಸಿನ ಯುವ ವಯಸ್ಕರನ್ನು ಕಂಡಾಗ, ಅವರು ಎಲ್ಲಾ ಐಡಿ-ಪ್ರೂಫ್‌ಗಳನ್ನು ಹೊಂದಿರುವುದರಿಂದ ಬಾಲ ಕಾರ್ಮಿಕರನ್ನು ಗುರುತಿಸಲು ಕಷ್ಟವಾಗುತ್ತಿದೆ. ಆ ಗುರುತು ಪತ್ರಗಳು ನಕಲಿಯೂ ಆಗಿರಬಹುದು. ಅವರು ಕುಟುಂಬಗಳ ಭಾಗವಾಗಿದ್ದರೆ ಮತ್ತು ನಿರಂತರ ವೀಕ್ಷಣೆಯಿಂದ ಮಾತ್ರ ಮಗು ನಿಜವಾಗಿಯೂ ಆ ಕುಟುಂಬದ ಸದಸ್ಯ ಹೌದೇ ಅಲ್ಲವೇ ಎಂಬುದನ್ನು  ಗುರುತಿಸಬಹುದು. ಅಲ್ಲದೇ ಬಾಲ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿಡಲಾಗುತ್ತದೆ ಮತ್ತು ಮಾಹಿತಿಯನ್ನು ಪರಿಶೀಲಿಸಿದ ನಂತರ ಅವರ ಬ್ಯಾಂಕ್ ಖಾತೆಗೆ ಮೊತ್ತವನ್ನು ವರ್ಗಾಯಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಇತ್ತೀಚೆಗೆ ಕೊರೊನಾ ನಂತರ ನಮ್ಮ ರಾಜ್ಯದಲ್ಲಿಯೂ ಬಾಲ ಕಾರ್ಮಿಕ ಪದ್ಧತಿ ಗಮನಾರ್ಹವಾಗಿ ಏರಿಕೆಯಾಗಿರುವ ವಿಚಾರ ತಿಳಿದು ಬಂದಿದೆ. ಕೆಲ ದಿನಗಳ ಹಿಂದಷ್ಟೇ ಯಾದಗಿರಿ (Yadagiri) ಯಲ್ಲಿ ಮಕ್ಕಳನ್ನು ಶಾಲೆ ಬಿಡಿಸಿ ಆಟೋಗಳಲ್ಲಿ ಕೂಲಿಗೆ ಕರೆದುಕೊಂಡು ಹೋಗುತ್ತಿದ್ದ ಪ್ರಕರಣ ಬಯಲಾಗಿತ್ತು. ಇದನ್ನರಿತ ಬಾಲ ಕಾರ್ಮಿಕ ಇಲಾಖೆ ಅಧಿಕಾರಿಗಳು ವಿವಿಧ ಕಡೆ ದಾಳಿ ನಡೆಸಿ ಮಕ್ಕಳನ್ನು ಶಾಲೆ ಬಿಡಿಸಿ ಕೂಲಿಗೆ ಕಳುಹಿಸದಂತೆ ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios