ಕಮಲ ಪಕ್ಷದಿಂದ ಎಲೆಕ್ಷನ್ ಸ್ಪರ್ಧಿಸಲ್ಲ: ಕೇರಳದ ಬಿಜೆಪಿ ಅಚ್ಚರಿ ಅಭ್ಯರ್ಥಿ ಘೋಷಣೆ!
ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಿಂದುಳಿದ ‘ಪಣಿಯಾ’ ಬುಡಕಟ್ಟು ಸಮುದಾಯದ ಮೊದಲ ಎಂಬಿಎ ಪದವೀಧದರ| ಕಮಲ ಪಕ್ಷದಿಂದ ಎಲೆಕ್ಷನ್ ಸ್ಪರ್ಧಿಸಲ್ಲ: ಕೇರಳದ ಬಿಜೆಪಿ ಅಚ್ಚರಿ ಅಭ್ಯರ್ಥಿ ಘೋಷಣೆ!
ಕಲ್ಲಿಕೋಟೆ(ಮಾ.17): ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಿಂದುಳಿದ ‘ಪಣಿಯಾ’ ಬುಡಕಟ್ಟು ಸಮುದಾಯದ ಮೊದಲ ಎಂಬಿಎ ಪದವೀಧರನಾದ ಸಿ. ಮಣಿಕಂಠನ್ ಅಲಿಯಾಸ್ ಮಣಿಕುಟ್ಟನ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಆದರೆ ಇದರ ಬೆನ್ನಲ್ಲೇ, ತಾವು ಬಿಜೆಪಿ ಕಾರ್ಯಕರ್ತನೂ ಅಲ್ಲ. ಬಿಜೆಪಿಯ ಬೆಂಬಲಿಗನೂ ಅಲ್ಲ. ಹೀಗಾಗಿ ಬಿಜೆಪಿಯ ಟಿಕೆಟ್ನಿಂದ ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ.
ಒಂದು ದೇಶ, ಒಂದು ಎಲೆಕ್ಷನ್ಗೆ ಮತ್ತಷ್ಟು ಬಲ!
ಕೇರಳದಲ್ಲಿ ಇದು ಬಿಜೆಪಿಗೆ ದೊಡ್ಡ ಮುಜುಗರವಾಗಿ ಪರಿಣಮಿಸಿದೆ. ಈ ಬಗ್ಗೆ ಮಾತನಾಡಿದ ಮಣಿಕುಟ್ಟನ್ ಅವರು, ‘ವಯನಾಡು ವ್ಯಾಪ್ತಿಗೆ ಬರುವ ಮನಂಥವಾಡಿ ವಿಧಾನಸಭೆ ಚುನಾವಣಾ ಕಣಕ್ಕೆ ಕೇಂದ್ರ ಬಿಜೆಪಿ ನಾಯಕತ್ವ ನನ್ನ ಹೆಸರನ್ನು ಪ್ರಕಟಿಸಿರುವುದು ಟೀವಿಗಳಿಂದ ಗೊತ್ತಾಯಿತು. ಈ ವಿಚಾರದಿಂದ ನನಗೆ ಆಶ್ಚರ್ಯವಾಗಿದೆ. ಈ ಬಗ್ಗೆ ಚರ್ಚಿಸಲು ಬಿಜೆಪಿ ನಾಯಕರು ನನಗೆ ಕರೆ ಮಾಡಿದಾಗಲೂ, ನಾನು ಪಕ್ಷ ರಾಜಕೀಯ ಮತ್ತು ಚುನಾವಣೆ ರಾಜಕೀಯಕ್ಕೆ ಬರಲ್ಲ ಎಂಬ ನಿರ್ಧಾರವನ್ನೇ ತಿಳಿಸಿದ್ದೇನೆ’ ಎಂದಿದ್ದಾರೆ.
ಯಾವಾಗ ಚುನಾವಣೆ:
ಕೇರಳ (140 ಕ್ಷೇತ್ರ)| ಮಲ್ಲಪುರಂ ಉಪ-ಚುನಾವಣೆ| ಒಂದು-ಹಂತ|
ಚುನಾವಣೆ ದಿನಾಂಕ: ಏಪ್ರಿಲ್ 6
ಮತ ಎಣಿಕೆ ದಿನಾಂಕ: ಮೇ 2