06:44 PM (IST) May 07

ಸಾಂಪ್ರದಾಯಿಕ ಉಡುಗೆಯಲ್ಲಿ ಬಂದು ಮತ ಚಲಾಯಿಸಿದ ಮಹಿಳೆಯರು

ಬಳ್ಳಾರಿ: ಸಾಂಪ್ರದಾಯಿಕ ಲಂಬಾಣಿ ನೇತ್ಯ ಮಾಡುತ್ತಾ ಬಂದು ಮತ ಚಲಾಯಿಸಿದ ಮಹಿಳೆಯರು. ಬಳ್ಳಾರಿ ತಾಲೂಕಿನ ಹೊನ್ನಳ್ಳಿ ತಾಂಡಾದಲ್ಲಿ ಹಬ್ಬಕ್ಕೆ ಬರುವ ರೀತಿ ಮತ ಚಲಾಯಿಸಲು ಬಂದ ಮಹಿಳೆಯರು. ಲಂಬಾಣಿ ಸಾಂಸ್ಕೃತಿಕ ಉಡುಗೆ ತೊಟ್ಟು ನೃತ್ಯ ಮಾಡುತ್ತಾ ಮತಗಟ್ಟೆಗೆ ಆಗಮನ. ಮತಗಟ್ಟೆ ಮುಂದೆ ಕೆಲ ಕಾಲ ಲಂಬಾಣಿ ಹಾಡಿಗೆ ಹೆಜ್ಜೆ ಹಾಕಿದ ಮಹಿಳೆಯರು. ಚುನಾವಣೆ ಮಹತ್ವ ಸಾರಲು ಹೊನ್ನಳ್ಳಿ ತಾಂಡಾದ ಲಂಬಾಣಿ ಮಹಿಳೆಯರಿಂದ .

05:56 PM (IST) May 07

ಸುರಪುರ ವಿಧಾಸನಭಾ ಉಪ ಚುನಾವಣೆ: ಕಲ್ಲು ತೂರಾಟ

ಯಾದಗಿರಿ: ಸುರಪುರ ಉಪಚುನಾವಣೆಗೆ ಮತದಾನ ಹಿನ್ನೆಲೆ ಬಿಜೆಪಿ(BJP)-ಕಾಂಗ್ರೆಸ್(Congress) ಕಾರ್ಯಕರ್ತರ ಮಧ್ಯೆ ಪರಸ್ಪರ ಕಲ್ಲು ತೂರಾಟ ನಡೆಸಲಾಗಿದೆ. ಕಲ್ಲು ತೂರಾಟದ(Pelted stones) ವೇಳೆ ಓರ್ವನ ತಲೆಗೆ ಗಂಭೀರ ಗಾಯವಾಗಿದೆ. ಯಾದಗಿರಿ( Yadgir) ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

05:03 PM (IST) May 07

ನಾನು ಬದುಕಿದ್ದೇನೆಂದು ತೋರಿಸಲು ಮತದಾನ

ವಿಜಯಪುರ: ಮತದಾನ ಮಾಡಲು ಬಂದಾಗ ಕಣ್ಣಿರಿಟ್ಟ ವೃದ್ಧ. ವಿಜಯಪುರದ ಗೋಳಗುಮ್ಮಟ ಏರಿಯಾದ ಬೂತ್ ನಂಬರ್ 168 ರಲ್ಲಿ ಘಟನೆ. ಮತ ಹಾಕಲು ಬಂದು ಕಣ್ಣೀರಿಟ್ಟ 83 ವರ್ಷದ ವೃದ್ಧ ಯಲ್ಲಪ್ಪ. ಮಕ್ಕಳು, ಸಂಬಂಧಿಕರು ಯಾರು ಸಹ ನೋಡಿಕೊಳ್ಳಲು ಇಲ್ಲ ಎಂದು ಕಣ್ಣೀರು. ನಾನು ಬದುಕಿದ್ದೇನೆ ಎಂದು ತೋರಿಸೋಕೆ ಮತ ಹಾಕಲು ಬಂದಿದ್ದೇನೆ ಎಂದು ವೃದ್ಧನ ಕಣ್ಣೀರು. ಗೋಳಗುಮ್ಮಟ ಏರಿಯಾ ನಿವಾಸಿ ಯಲ್ಲಪ್ಪ.

04:55 PM (IST) May 07

ಮತ ಚಲಾಯಿಸಿದ ಅನಂತ ಕುಮಾರ್ ಹೆಗಡೆ

ಕಾರವಾರ, ಉತ್ತರಕನ್ನಡ: ಮತದಾನ ಮಾಡಲು ಆಗಮಿಸಿದ ಸಂಸದ ಅನಂತ ಕುಮಾರ್ ಹೆಗಡೆ. ಶಿರಸಿ ಕೆಎಚ್‌ಬಿ ಕಾಲೋನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತದಾನ ಕೇಂದ್ರಕ್ಕೆ ಆಗಮನ. ಪತ್ನಿ ಶ್ರೀರೂಪ ಜತೆ ಮತದಾನ ಕೇಂದ್ರಕ್ಕೆ ಆಗಮಿಸಿದ ಸಂಸದರು. ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದ ಸಂಸದ ಅನಂತ ಕುಮಾರ್ ಹೆಗಡೆ. ಪ್ರಾರಂಭದಲ್ಲಿ ಸಂಸದರ ಆಪ್ತ ಸಹಾಯಕ ಸಂಸದರ ಬದಲು ಸರತಿ ಸಾಲಿನಲ್ಲಿ ನಿಂತಿದ್ದರು. ಬಳಿಕ ಪತ್ನಿ ಜತೆ ಸರತಿ ಸಾಲಿನಲ್ಲಿ ತೆರಳಿ ಮತ ಚಲಾಯಿಸಿದ ಸಂಸದ ಅನಂತ ಕುಮಾರ್ ಹೆಗಡೆ.

03:55 PM (IST) May 07

ದೇಶದಲ್ಲಿ ಶೇ.50.71, ರಾಜ್ಯದಲ್ಲಿ ಶೇ.54.20 ಮತದಾನ

3 ಗಂಟೆವರೆಗಿನ ಮತದಾನ ಪ್ರಮಾಣ

ಅಸ್ಸಾಂ 63.08%
ಬಿಹಾರ 46.69%
ಛತ್ತೀಸ್‌ಗಢ 58.19%
ದಾದ್ರಾ 52.43%
ಗೋವಾ 61.39%
ಗುಜರಾತ್ 47.03%
ಕರ್ನಾಟಕ 54.20%
ಮಧ್ಯ ಪ್ರದೇಶ 54.09%
ಮಹಾರಾಷ್ಟ್ರ 42.63%
ಉತ್ತರ ಪ್ರದೇಶ 46.78%
ಪಶ್ಚಿಮ ಬಂಗಾಳ 63.11%

03:34 PM (IST) May 07

ಶಿವಮೊಗ್ಗ: ಆ್ಯಂಬುಲೆನ್ಸ್‌ನಲ್ಲಿ ಹೋಗಿ ಮತ ಚಲಾಯಿಸಿದ ರಕ್ತದಾನಿ ಯಜ್ಞನಾರಾಯಣ್

ಶಿವಮೊಗ್ಗ: ಪಾರ್ಕಿನ್ಸನ್ ರೋಗದಿಂದ ಬಳಲುತ್ತಿರುವ 84 ವರ್ಷದ ರಕ್ತ ದಾನಿ, ಸಾಮಾಜಿಕ ಕಾರ್ಯಕರ್ತ ಯಜ್ಞನಾರಾಯಣ್ ಅವರು ಆ್ಯಂಬುಲೆನ್ಸ್‌ನಲ್ಲಿ ಹೋಗಿ ತಮ್ಮ ಹಕ್ಕು ಚಲಾಯಿಸಿ, ಮತದಾನದಿಂದ ದೂರ ಉಳಿಯೋ ಯುವಕರಿಗೆ ಮಾದರಿಯಾಗಿದ್ದಾರೆ. ಪುತ್ರ ವಿನಯ್ ಶಿವಮೊಗ್ಗ ಅವರು ತಮ್ಮ ತಂದೆಗೆ ಹಕ್ಕು ಚಲಾಯಿಸಲು ಸಹಕರಿಸಿದರು. 

03:30 PM (IST) May 07

ಬಿಜೆಪಿ ಪರ‌ ಮತ ಚಲಾಯಿಸುವಂತೆ ಮತಗಟ್ಟೆ ಒಳಗಿನ ಅಧಿಕಾರಿ ಒತ್ತಾಯ ಆರೋಪ

ಚಿಕ್ಕೋಡಿ: ಬಿಜೆಪಿ ಪರ‌ ಮತ ಚಲಾಯಿಸುವಂತೆ ಮತಗಟ್ಟೆ ಒಳಗಿನ ಅಧಿಕಾರಿ ಒತ್ತಾಯ ಆರೋಪ. ಕಾಂಗ್ರೆಸ್ ಕಾರ್ಯಕರ್ತರಿಂದ ಮತಗಟ್ಟೆ ಎದುರು ಪ್ರತಿಭಟನೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಕೋಟೆಬಾಗ ಶಾಲೆಯ ಬೂತ್ ನಂಬರ್ 162 ರಲ್ಲಿ ಘಟನೆ. ಚುನಾವಣಾ ಸಿಬ್ಬಂದಿಯಿಂದ ಬಿಜೆಪಿ ಪರ ಮತ ಚಲಾವಣೆಗೆ ಒತ್ತಾಯ. ಮಹಿಳೆಯರಿಗೆ ಬಿಜೆಪಿ ಪರ ಮತಚಲಾಯಿಸುವಂತೆ ಒತ್ತಾಯ. ವಿಷಯ ತಿಳಿದು ಮತಗಟ್ಟೆಗೆ ಆಗಮಿಸಿದ ಕೈ ಕಾರ್ಯಕರ್ತರು. ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಪೊಲೀಸರ ನಡುವೆ ವಾಗ್ವಾದ.

02:43 PM (IST) May 07

Lok Sabha Elections 2024: ಮಧ್ಯಾಹ್ನ 1 ಕ್ಕೆ ರಾಜ್ಯದಲ್ಲಿ ಶೇ.42, ದೇಶದಲ್ಲಿ ಶೇ.40 ವೋಟಿಂಗ್

ಬೆಳಗ್ಗೆ 1 ಗಂಟೆಯ ತನಕ

ಅಸ್ಸಾಂ- ಶೇ 45.88

ಬಿಹಾರ- ಶೇ 36

ಛತ್ತೀಸ್‌ಗಢ- ಶೇ 46

ಗೋವಾ - ಶೇ 49

ದಾದ್ರಾ ನಗರಹಾವೇಲಿ -ಶೇ -39

ಗುಜರಾತ್- ಶೇ 37

ಕರ್ನಾಟಕ - ಶೇ 41

ಮಧ್ಯಪ್ರದೇಶ - ಶೇ 44

ಯು ಪಿ - ಶೇ 38

ಮಹಾರಾಷ್ಟ್ರ - ಶೇ 31

ಪಶ್ಚಿಮ ಬಂಗಾಳ- ಶೇ 49

01:11 PM (IST) May 07

ರಾಯಚೂರು: ಬಿಸಿಲೇರುತ್ತಿದ್ದಂತೆ ಮಂದಗತಿಯಾದ ಮತದಾನ

ರಾಯಚೂರು: ಚುನಾವಣಾ ಕಾವು, ಬಿಸಿಲಿನ ಝಳಕ್ಕೆ ತತ್ತರಿಸಿದ ಮತದಾರ ಪ್ರಭುಗಳು. ಬೆಳಗ್ಗೆಯಿಂದ ಉತ್ಸಾಹದಿಂದ ಮತದಾನ ಮಾಡಿದ ಮತದಾರರು. ಸೂರ್ಯನ ಪ್ರತಾಪ ನೆತ್ತಿಗೇರುತ್ತಿದ್ದಂತೆ ನಿಧಾನ ಗತಿಯಲ್ಲಿ ಸಾಗಿದ ಮತದಾನ. ಬಿಸಿಲಿನ ತೀವ್ರತೆಗೆ ಬಸವಳಿಯುತ್ತಿರುವ ವಯೋ ವೃದ್ಧರು ಮತ್ತು ಮಹಿಳೆಯರು. ರಾಯಚೂರಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆ. ಬಿಸಿಲಿಗೆ ಹೆದರಿ ಮನೆಯಿಂದ ಮತಗಟ್ಟೆಗೆ ಬರಲು ಮತದಾರರು ಹಿಂದೇಟು. ಬಹುತೇಕ ಮತಹಟ್ಟೆಗಳು ಮತದಾರರು ಇಲ್ಲದೆ ಖಾಲಿ ಖಾಲಿ. ರಾಯಚೂರು ನಗರದ ಮತಗಟ್ಟೆ 79ರಲ್ಲಿ 1183 ಮತದಾರರು ಇದ್ದಾರೆ. 1183ರಲ್ಲಿ ಈವರೆಗೆ ಕೇವಲ 383 ಮತದಾನ ಮಾತ್ರ ಮಾಡಿದ ಮತದಾರರು.

01:08 PM (IST) May 07

ಜನಾರ್ದನ ರೆಡ್ಡಿ ತನ್ನನ್ನು ತಾನೇ ಮಹಾನ್‌ ನಾಯಕ ಅಂತ ಅಂದುಕೊಂಡಿದ್ದಾನೆ: ಶಿವರಾಜ್ ತಂಗಡಗಿ ಗರಂ

ಜೂನ್ 4 ರ ನಂತರ ಯಾರು ಯಾರ ಕಪಾಳಕ್ಕೆ ಹೊಡೆಯುತ್ತಾರೆ ಅನ್ನೋದು ಗೊತ್ತಾಗುತ್ತದೆ. ಜನಾರ್ದನ ರೆಡ್ಡಿ ಆಟ ಕೊಪ್ಪಳದಲ್ಲಿ ನಡೆಯಲ್ಲ. ಜನಾರ್ದನ ರೆಡ್ಡಿಗೆ ಪುಲ್ವಾಮ ದಾಳಿ, ಸರ್ಜಿಕಲ್‌ ಸ್ಟ್ರೈಕ್ ಬಳಿ ಗಂಧಗಾಳಿ ಗೊತ್ತಿಲ್ಲದೇ ಮಾತನಾಡುತ್ತಿದ್ದಾರೆ. ತಾಕತ್ ಇದ್ರೆ ಎರಡು ಕೋಟಿ ಉದ್ಯೋಗ ನೀಡೋ ಹೇಳಿಕೆ ಬಗ್ಗೆ ಉತ್ತರ ನೀಡಲಿ ಎಂದು ಜನಾರ್ದನ ರೆಡ್ಡಿ ಸವಾಲ್‌ ಹಾಕಿದ ಸಚಿವ ಶಿವರಾಜ್ ತಂಗಡಗಿ

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

12:42 PM (IST) May 07

Kalaburagi Lok Sabha Elections Live Updates: ಖರ್ಗೆ ಅಳಿಯನಿಗೆ ಅಗ್ನಿ ಪರೀಕ್ಷೆ!

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರಕೋಟೆಯಾಗಿದ್ದ ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಖರ್ಗೆ ಅಳಿಯ ಡಾ. ರಾಧಾಕೃಷ್ಣ ದೊಡ್ಡಮನಿ ಹಾಗೂ ಬಿಜೆಪಿಯಿಂದ ಹಾಲಿ ಸಂಸದ ಉಮೇಶ್ ಜಾಧವ್ ಕಣಕ್ಕಿಳಿದಿದ್ದಾರೆ.

ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

12:22 PM (IST) May 07

LIVE: Belagavi Elections 2024: ಶೆಟ್ಟರ್ Vs ಹೆಬ್ಬಾಳ್ಕರ್ ; ಬೆಳಗ್ಗೆ 11 ಗಂಟೆ ವೇಳೆಗೆ ಶೇ.23.91 ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರವು ಪ್ರಭಾವಿ ನಾಯಕರ ಪ್ರತಿಷ್ಠೆಯ ಕಣವಾಗಿದೆ. ರಾಜಕೀಯ ಅನುಭವಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಹೊಸಬ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧೆಯೊಡ್ಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೋಕಸಭಾ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಜೊತೆ ಬಂದು ಮತ ಚಲಾಯಿಸಿದ್ದಾರೆ. ತುಳಸಿ ಮಾಲೆ ಹಾಕಿ, ಕೇಸರಿ ಸೀರೆಯಲ್ಲಿ ಲಕ್ಷ್ಮಿ ಬಂದಿದ್ದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. 

ಬೆಳಗಾವಿ ಲೈವ್ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

11:51 AM (IST) May 07

ಚುನಾವಣೆ ಸಿಬ್ಬಿಂದಿಗೆ ಆನಾರೋಗ್ಯ, ತಕ್ಷಣವೇ ಸೂಕ್ತ ಚಿಕಿತ್ಸೆ

ಬಳ್ಳಾರಿ: ಕೊಳಗಲ್ ಗ್ರಾಮದ ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಣ ಸಿಬ್ಬಂದಿ ರಕ್ತದೊತ್ತಡ ಕಡಿಮೆಯಾಗಿ ಪ್ರಜ್ಞಾಹಿನರಾಗಿದ್ದ ಲಕ್ಷ್ಮಿ ದೇವಿ ಇವರಿಗೆ ಆಂಬ್ಯುಲೇನ್ಸ್‌ ಮೂಲಕ, ವಿಮ್ಸ್‌ಗೆ ಸಿಬ್ಬಂದಿ ಸಹಿತ ರೇಪರ್‌ ಮಾಡಿ ಚಿಕಿತ್ಸೆ ನೀಡಲಾಗಿದೆ. ಡಾ ಅಬ್ದುಲ್ಲಾ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಖುದ್ದು ಮೇಲ್ವಿಚಾರಣೆ ಕೈಗೊಂಡಿದ್ದು, ಸಿದ್ದಮ್ಮನಹಳ್ಳಿ ವೈದ್ಯಾಧಿಕಾರಿ ಡಾ ದಿವ್ಯ ನಿಗಾವಹಿಸಿದ್ದು ಸದರಿಯವರು ಗುಣಮುಖರಾಗಿದ್ದಾರೆ.

ಬಳ್ಳಾರಿ: ಕುಡುತಿನಿ ಮತದಾನ ಕೇಂದ್ರದ ಸಿಬ್ಬಂದಿಯವರಿಗೆ ರಕ್ತದೊತ್ತಡದ ಸಮಸ್ಯೆ ಕಂಡು ಬಂದ ಹಿನ್ನೆಲೆ ಆಂಬ್ಯುಲೆನ್ಸ್ ‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದ್ದು ಗುಣಮುಖರಾಗುದ್ದಾರೆ.

11:47 AM (IST) May 07

India General Elections 2024: ಬೆಳಗ್ಗೆ 11ಕ್ಕೆ ರಾಜ್ಯದಲ್ಲಿ ಶೇ.24.48, ದೇಶದಲ್ಲಿ ಶೇ.25.41

ಬೆಳಗ್ಗೆ 11 ಗಂಟೆಯ ತನಕ

ಅಸ್ಸಾಂ- ಶೇ 27.34
ಬಿಹಾರ- ಶೇ 24.41
ಛತ್ತೀಸ್ಗಢ- ಶೇ 29.9
ಗೋವಾ ಶೇ 30.94
ದಾದ್ರಾ ನಗರಹಾವೇಲಿ -ಶೇ 24.69
ಗುಜರಾತ್- ಶೇ 24.35
ಕರ್ನಾಟಕ - ಶೇ 24.48

ಮಧ್ಯಪ್ರದೇಶ - ಶೇ 30.21

ಯು ಪಿ - ಶೇ 26.12

ಮಹಾರಾಷ್ಟ್ರ - ಶೇ 18.18

ಪಶ್ಚಿಮ ಬಂಗಾಳ- ಶೇ 32.81

11:14 AM (IST) May 07

ನಿಮ್ಮ ಒಂದು ಮತ ಭಾರತವನ್ನು 5ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಿದೆ: ಮೋದಿ

ಮಧ್ಯಪ್ರದೇಶ ದಲ್ಲಿ ಪ್ರಧಾನಿ ಮೋದಿ ಮಾತು. ನಿಮ್ಮ ಒಂದು ಮತ ಭಾರತವನ್ನು 5 ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಿದೆ. ಭಾರತ ಜಾಗತಿಕ ಮಟ್ಟದಲ್ಲಿ ಪ್ರಭಾವ ಹೆಚ್ಚಿಸಿ ಕೊಂಡಿದೆ. 70 ವರ್ಷಗಳ ಬಳಿಕ 370 ನೇ ವಿಧಿಯನ್ನು ರದ್ದುಪಡಿಸಲಾಗಿದೆ. ಆದಿವಾಸಿ ಮಗಳನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿಜೆಪಿ. ಮಹಿಳೆಯರಿಗೆ ಮೀಸಲಾತಿ ನೀಡಿದೆ. ನಿಮ್ಮ ಒಂದು ಮತ 500 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು. ಭವ್ಯ ರಾಮನನ್ನಾಗಿ ಮಾಡಿತು ಲಲ್ಲಾ ದೇವಸ್ಥಾನ.

Scroll to load tweet…
10:53 AM (IST) May 07

Lok Sabha Elections 2024: ಲೋಕಸಭಾ ಚುನಾವಣೆ ಅಭ್ಯರ್ಥಿಗಳಿಂದ ಮತದಾನ

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 17 ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಮತದಾರರ ಒಲವು ಯಾರ ಕಡೆಗಿದೆ ಎಂಬುದನ್ನು ಜೂನ್ 4ರ ತನಕ ಕಾದು ನೋಡಬೇಕಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಹಕ್ಕು ಚಲಾಯಿಸಿದ ಕ್ಷಣವಿದು

ಫೋಟೋಸ್‌ಗೆ ಇಲ್ಲಿ ಕ್ಲಿಕ್ ಮಾಡಿ

10:48 AM (IST) May 07

ಸಖಿ ಬೂತ್‌ನಲ್ಲಿ ಪಿಂಕ್ ಜೂಸ್ ನೋಡಿ ಮತದಾರರಿಗೆ ಸ್ವಾಗತಿ

ಸಖಿ ಮತಗಟ್ಟೆಗಳಲ್ಲಿ ಮತದಾರರಿಗೆ ಪಿಂಕ್ ಕಲರ್ ಶರಬತ್ತು ನೀಡಿ ಸ್ವಾಗತ. ಮತಚಲಾಯಿಸಿ ಖುಷಿ ಪಟ್ಟ ಮತದಾರರು. ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತೆರೆಯಲಾದ ಪಿಂಕ್ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬಂದ ಮತದಾರರಿಗೆ ಪಿಂಕ್ ಕಲರ್ ಶರಬತ್ತು ನೀಡುವ ಮೂಲಕ ಚಾಲನೆ ನೀಡಲಾಗಿದೆ. ಪಿಂಕ್ ಮತಗಟ್ಟೆಗೆ ಶಾಮಿಯಾನ, ಸ್ವಾಗತ ಫಲಕ, ಸೆಲ್ಫಿ ಸ್ಟ್ಯಾಂಡ್, ಫಿಕ್ ಕಲರ್ ಶರಬತ್ತು, ಮಹಿಳಾ ಸಿಬ್ಬಂದಿಯೇ ಇರುವುದು ವಿಶೇಷವಾಗಿತ್ತು. ಸಖಿ ಮತಗಟ್ಟೆಯಲ್ಲಿ ಮತದಾರರು ಮತ ಚಲಾಯಿಸಿ ಖುಷಿಪಟ್ಟರು. ಸೆಲ್ಫಿ ಸ್ಟ್ಯಾಂಡ್ ಬಳಿ ಫೋಟೋ ಕ್ಲಿಕ್ಕಿಸಿಕೊಂಡರು.

10:45 AM (IST) May 07

ಪತ್ನಿ ಗೆಲುವಿಗಾಗಿ ನಟ ಶಿವರಾಜ್ ಕುಮಾರ್ ಉತ್ತರ ಕನ್ನಡದಲ್ಲಿ ಟೆಂಪಲ್ ರನ್

ಕಾರವಾರ, ಉತ್ತರಕನ್ನಡ: ಪತ್ನಿಯ ಗೆಲುವಿಗಾಗಿ ನಟ ಶಿವರಾಜ್ ಕುಮಾರ್ ಟೆಂಪಲ್ ರನ್. ಶಿರಸಿ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆದ ನಟ ಶಿವರಾಜ್ ಕುಮಾರ್ ದಂಪತಿ. ಪತ್ನಿಯ ಜೊತೆ ಬಂದು ಶ್ರೀ ಮಾರಿಕಾಂಬೆಗೆ ಉಡಿ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದ ಶಿವರಾಜ್ ಕುಮಾರ್. ಶಿವಮೊಗ್ಗ ಲೋಕ ಅಖಾಡದಲ್ಲಿ ಕಣಕ್ಕಿಳಿದಿರುವ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್. ಕಳೆದ ಒಂದೂವರೆ ತಿಂಗಳಿನಿಂದ ಪತ್ನಿಯ ಜೊತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಶಿವರಾಜ್ ಕುಮಾರ್. ಇಂದು ಮತದಾನ ಹಿನ್ನೆಲೆ ಶಿರಸಿ ಶ್ರೀ ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ.


10:37 AM (IST) May 07

4 ಸಾವಿರ ಪೊಲೀಸರ ಭದ್ರತೆ ನಡುವೆ ನಡೆಯುತ್ತಿರುವ ಚುನಾವಣೆ

ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಹಿನ್ನೆೆಲೆಯಲ್ಲಿ ಎಲ್ಲೆಡೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸುಮಾರು 4 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. 

10:26 AM (IST) May 07

ಕರ್ನಾಟಕದ 14 ಕ್ಷೇತ್ರಗಳಿಗೆ ಬಿರುಸಿನ ಮತದಾನ, ವೃದ್ಧೆಯರಿಂದಲೂ ಮತ ಹಕ್ಕು ಚಲಾವಣೆ

ರಾಜ್ಯದ ವಿವಿಧೆಡೆ 2ನೇ ಹಂತದ ಮತದಾನ ಬಿರುಸಿನಿಂದ ಸಾಗಿದ್ದು, ಯಾದಗಿರಿ ಜಿಲ್ಲೆಯ ಕೆಲವು ಮತಗಟ್ಟೆಗಳ ಫೋಟೋಸ್ ಇಲ್ಲಿವೆ.