Asianet Suvarna News Asianet Suvarna News

ಹಬ್ಬ ಆಚರಣೆಗೆ ಮನೆಗೆ ಬಂದಿದ್ದ ಯೋಧ ನಾಪತ್ತೆ; ಉಗ್ರಗಾಮಿಗಳಿಂದ ಕಿಡ್ನಾಪ್?

ಈದ್ ಹಬ್ಬ ಆಚರಣೆಗೆ ಮನೆಗೆ ಬಂದಿದ್ದ ಯೋಧ ನಾಪತ್ತೆ/ ಹುಡುಕಾಟದಲ್ಲಿ ನಿರತವಾಗಿರುವ ಸೇನೆ ಮತ್ತು ಪೊಲೀಸ್/ ಉಗ್ರರೇ ಯೋಧನನ್ನು ಕಿಡ್ನಾಪ್ ಮಾಡಿರುವ ಶಂಕೆ/ ಜಮ್ಮು ಕಾಶ್ಮೀರದ ಮನೆಗೆ ಬಂದಿದ್ದ ಸೈನಿಕ

Jammu and Kashmir Missing Jawan in Kulgam District May be Kidnapped by Terrorists Says Army
Author
Bengaluru, First Published Aug 3, 2020, 11:09 PM IST

ಶ್ರೀನಗರ  (ಆ.  03) ಕುಟುಂಬದೊಂದಿಗೆ ಈದ್ ಆಚರಣೆ ಮಾಡಲು ತೆರಳಿದ್ದ ಭಾರತೀಯ ಯೋಧ ಕಣ್ಮರೆಯಾಗಿದ್ದಾರೆ. ಜಮ್ಮುಕಾಶ್ಮೀರದ ಕುಲಗಾಂವ್​ ಪ್ರದೇಶದಿಂದ ಭಾನುವಾರ ನಾಪತ್ತೆಯಾಗಿದ್ದಾರೆ.  ಉಗ್ರರೇ  ಯೋಧನ ಅಪಹರಣ ಮಾಡಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ.

ನಾಪತ್ತೆಯಾಗಿರುವ ಯೋಧನಿಗಾಗಿ ಸೇನೆ ಹುಡುಕಾಟ ಶುರುಮಾಡಿದೆ.  162 ಬೆಟಾಲಿನ್​ನ ರೈಫಲ್​ಮೆನ್​ ಶಕೀರ್​ ಮಂಜೂರ್​ ಭಾನುವಾರ ಸಂಜೆ 5ಗಂಟೆಯಿಂದಲೂ ನಾಪತ್ತೆಯಾಗಿದ್ದಾರೆ. ಕುಲಗಾಂವ್​ ಬಳಿ ಅವರ ಕಾರು ಸುಟ್ಟ ಸ್ಥಿತಿಯಲ್ಲಿ ಸಿಕ್ಕಿದೆ. 

ರಫೇಲ್ ಯುದ್ಧ ವಿಮಾನದ ವಿಶೇಷಗಳು ಏನು?

ಶಕೀರ್​  ಈದ್​ ಹಬ್ಬ ಆಚರಿಸಲೆಂದು ಶೋಪಿಯಾನ ಜಿಲ್ಲೆಯಲ್ಲಿರುವ ಮನೆಗೆ ಬಂದಿದ್ದರು. ಹಬ್ಬದ ನಿಮಿತ್ತ ನಿನ್ನೆ ಸಂಜೆ ಅವರು ಕುಟುಂಬದೊಂದಿಗೆ ಹೊರಗೆ ಹೊರಟವರು ನಂತರ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ

ಭದ್ರತಾ ಸಿಬ್ಬಂದಿ ಶೋಪಿಯಾನ್​, ಕುಲಗಾಂವ್​, ಅನಂತ್​ನಾಗ್​ ಜಿಲ್ಲೆಗಳಲ್ಲಿ ಕಳೆದು ಹೋದ ಯೋಧನಿಗಾಗಿ ಹುಡುಕಾಟ ನಡೆಸಿವೆ. ಪೊಲೀಸರು ಡ್ರೋನ್​, ಸ್ನಿಫರ್​ ಶ್ವಾನಗಳನ್ನು ಬಳಸಿ ಹುಡುಕುತ್ತಿದ್ದಾರೆ. ಯೋಧ ಸುರಕ್ಷಿತವಾಗಿ ಮನೆಗೆ ಬಂದು ಮತ್ತೆ ದೇಶ ಸೇವೆಯಲ್ಲಿ ತೊಡಗಿಕೊಳ್ಳಲಿ ಎಂಬುದೇ ಎಲ್ಲರ ಹಾರೈಕೆ.

Follow Us:
Download App:
  • android
  • ios