ಅಮರನಾಥ ಯಾತ್ರೆಗೆ ದಿನಗಣನೆ ಆರಂಭ| ಅಮರನಾಥ ಯಾತ್ರಿಕರ ಮೇಲೆ ದಾಳಿಗೆ ಉಗ್ರರ ಯೋಜನೆ: ಸೇನಾಧಿಕಾರಿ| ಯಾತ್ರೆ ಆರಂಭಕ್ಕೂ ಮುನ್ನವೇ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ

ಶ್ರೀನಗರ(ಜು.19): ಈ ವರ್ಷದ ವಾರ್ಷಿಕ ಅಮರನಾಥ ಯಾತ್ರೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ವಾರ್ಷಿಕ ಈ ಪವಿತ್ರ ಯಾತ್ರಿಕರ ಮೇಲೆ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಯೋಜಿಸಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೀಗಾಗಿ, ಜು.21ರಂದು ಆರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆ ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾತ್ರೆ ಆರಂಭಕ್ಕೂ ಮುನ್ನವೇ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಹೀಗಾಗಿ, ಉಗ್ರರ ಟಾರ್ಗೆಟ್‌ ಅಮರನಾಥ ಯಾತ್ರೆಯೇ ಆಗಿರಬಹುದು ಎನ್ನಲಾಗಿದೆ.

ಅಮರನಾಥ ಯಾತ್ರೆ ದಿನಾಂಕ ಪ್ರಕಟ: ಈ ಬಾರಿ ಕೊರೋನಾದಿಂದ ಭಕ್ತರಿಗೆ ಕೊಂಚ ನಿರಾಸೆ!

2017ರಲ್ಲಿ ಅಮರನಾಥ ಯಾತ್ರೆ ಮೇಲೆ ದಾಳಿ ನಡೆಸಿದ್ದ ಉಗ್ರರು 8 ಮಂದಿಯನ್ನು ಬಲಿಪಡೆದಿದ್ದರು. ಈ ದಾಳಿ ವೇಳೆ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಾಗ್ಯೂ, 50ಕ್ಕೂ ಹೆಚ್ಚು ಪ್ರಯಾಣಿಕರ ಹೊತ್ತಿದ್ದ ಬಸ್ಸನ್ನು ಚಾಲಕ ಸಲೀಂ ಮಿರ್ಜಾ ಎಂಬುವರು ಬಸ್ಸನ್ನು ನಿಲ್ಲಿಸದೆ 1 ಕಿ.ಮೀ ದೂರದವರೆಗೆ ಚಾಲನೆ ಮಾಡಿದ್ದರು. ಈ ಮೂಲಕ 50 ಯಾತ್ರಿಕರ ಜೀವಗಳು ಚಾಲಕನ ಸಮಯ ಪ್ರಜ್ಞೆಯಿಂದ ಬಚಾವಾಗಿತ್ತು.