Asianet Suvarna News Asianet Suvarna News

ತೇಜಸ್ವಿ ಸೂರ್ಯ ಜರ್ಮನಿ ಭಾಷಣಕ್ಕೆ ತೀವ್ರ ವಿರೋಧ, ಪಟ್ಟಿಯಿಂದ ಕೈಬಿಡಲು ಆಗ್ರಹ!

ತೇಜಸ್ವಿ ಸೂರ್ಯ ಜರ್ಮನಿ ಕಾರ‍್ಯಕ್ರಮಕ್ಕೆ ತೀವ್ರ ವಿರೋಧ| ಭಾಷಣಕಾರರ ಪಟ್ಟಿಯಿಂದ ಕೈಬಿಡಲು ಆಗ್ರಹ

Indians in Europe Call for Tejasvi Surya Removal From Consulate Event pod
Author
Bangalore, First Published Oct 6, 2020, 7:41 AM IST

ಹ್ಯಾಂಬರ್ಗ್‌ (ಆ.06​): ಇಲ್ಲಿನ ಭಾರ​ತೀಯ ದೂತಾ​ವಾಸ ಹಮ್ಮಿ​ಕೊಂಡಿ​ರುವ ಸ್ಟಾರ್ಟಪ್‌ ಸಮ್ಮೇ​ಳ​ನಕ್ಕೆ ಬೆಂಗ​ಳೂರು ದಕ್ಷಿ​ಣದ ಸಂಸ​ದರೂ ಆಗಿ​ರುವ ಯುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವ​ರನ್ನು ಆಹ್ವಾ​ನಿ​ಸಿ​ರು​ವುದು ವಿವಾ​ದ​ಕ್ಕೀ​ಡಾ​ಗಿದೆ. ಸೂರ್ಯ ಅವ​ರನ್ನು ಭಾಷ​ಣ​ಕಾ​ರ​ರ ಪಟ್ಟಿ​ಯಿಂದ ಕೈಬಿ​ಡ​ಬೇಕು ಎಂದು ಯುರೋ​ಪ್‌ನ ಕೆಲವು ಭಾರ​ತೀಯ ಸಂಘ​ಟ​ನೆ​ಗಳು ಒತ್ತಾ​ಯಿ​ಸಿ​ವೆ.

‘ತೇ​ಜಸ್ವಿ ಅವರು ವಿಭ​ಜಕ ಅಜೆಂಡಾ ಹೊಂದಿ​ದ್ದಾರೆ. ಹಿಂದು​ಯೇ​ತ​ರರ ವಿರುದ್ಧದ ನಿಲುವು ಅವ​ರದ್ದು. ಇದು ಯುರೋ​ಪ್‌ನ ಸಮಾ​ನತೆ, ವೈವಿ​ಧ್ಯತೆ ಹಾಗೂ ಸಹ​ಬಾ​ಳ್ವೆಯ ಮೌಲ್ಯ​ಗ​ಳಿಗೆ ವಿರು​ದ್ಧ​ವಾ​ದುದು. ಯುರೋಪ್‌ ಸಹಿ ಹಾಕಿ​ರುವ ಅಂತಾ​ರಾ​ಷ್ಟ್ರೀಯ ಒಪ್ಪಂದ​ಗ​ಳಿಗೂ ವಿರು​ದ್ಧ​ವಾ​ದುದು. ಹೀಗಾಗಿ ಅವ​ರನ್ನು ಆಹ್ವಾ​ನಿ​ತರ ಪಟ್ಟಿ​ಯಿಂದ ತೆಗೆದು ಹಾಕ​ಬೇ​ಕು’ ಎಂದು ಒತ್ತಾ​ಯಿ​ಸಿ​ವೆ. ಗಮನಾರ್ಹ ಎಂದರೆ, ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದಲ್ಲೂ ಇದೇ ರೀತಿ ವಿರೋಧ ವ್ಯಕ್ತವಾಗಿತ್ತು.

ಇಂಡಿ​ಯಾ ಸಾಲಿ​ಡ್ಯಾ​ರಿಟಿ ಜರ್ಮನಿ, ಹ್ಯುಮ್ಯಾ​ನಿಸಂ ಪ್ರಾಜೆಕ್ಟ್, ಸಾಲಿ​ಡ್ಯಾ​ರಿಟಿ ಬೆಲ್ಜಿ​ಯಂ, ಇಂಡಿ​ಯನ್ಸ್‌ ಅಗೇನ್ಸ್ಟ್‌ ಸಿಎಎ-ಎನ್‌​ಆ​ರ್‌​ಸಿ-ಎನ್‌​ಪಿ​ಆರ್‌, ಭಾರತ ಡೆಮಾ​ಕ್ರಸಿ ವಾಚ್‌, ಇಂಡಿಯಾ ಅಲ​ಯನ್ಸ್‌ ಪ್ಯಾರಿಸ್‌, ಫೌಂಡೇ​ಶನ್‌ ದ ಲಂಡನ್‌ ಸ್ಟೋರಿ- ಇವು ತೇಜಸ್ವಿ ವಿರುದ್ಧ ದೂರಿ​ರುವ ಭಾರ​ತೀಯ ಐರೋ​ಪ್ಯ ಸಂಘ​ಟ​ನೆ​ಗ​ಳು.

ತೇಜಸ್ವಿ ಸಿಎಎ ವಿರೋಧಿ ಹೊರಾ​ಟದ ವಿರುದ್ಧ ಮಾಡಿ​ರುವ ಕೆಲವು ಟ್ವೀಟ್‌ಗಳು ಹಾಗೂ ಭಾಷ​ಣ​ಗ​ಳನ್ನು ಈ ಸಂಘ​ಟ​ನೆ​ಗಳು ತಮ್ಮ ದೂರಿ​ನಲ್ಲಿ ಉದಾ​ಹ​ರಿ​ಸಿವೆ. ‘ಮೋದಿ ವಿರುದ್ಧ ಮಾತಾ​ಡಿ​ದ​ವರು ದೇಶ​ವಿರೋ​ಧಿ​ಗ​ಳು ಎಂದು ತೇಜಸ್ವಿ ಹೇಳಿ​ದ್ದಾರೆ. ಅಲ್ಲದೆ, ಬೆಂಗ​ಳೂ​ರಿನ ಟೌನ್‌​ಹಾಲ್‌ ಹೊರಗೆ ಭಾಷಣ ಮಾಡು​ವಾಗ, ‘ಸಿ​ಎಎ ವಿರುದ್ಧ ಪ್ರತಿ​ಭ​ಟಿ​ಸು​ತ್ತಿ​ರು​ವ​ವರು ಅನ​ಕ್ಷ​ರ​ಸ್ಥರು, ಅವಿ​ದ್ಯಾ​ವಂತರು ಹಾಗೂ ಪಂಕ್ಚ​ರ್‌​ವಾ​ಲಾ​ಗಳು’ ಎಂದಿ​ದ್ದಾ​ರೆ. ಇಂಥ​ವ​ರಿಗೆ ಯುರೋಪ್‌ ಪ್ರವೇಶ ಬೇಡ’ ಎಂದು ಸಂಘ​ಟ​ನೆಗಳು ದೂರಿ​ವೆ.

ತಮ್ಮ ಈ ಕೂಗಿಗೆ ಯುರೋ​ಪ್‌ನ ಭಾರ​ತೀಯ ಸಮು​ದಾಯ ದನಿ​ಗೂ​ಡಿ​ಸ​ಬೇಕು. ತೇಜಸ್ವಿ ಬದಲು ಜಾತ್ಯ​ತೀತ ನಿಲು​ವುಳ್ಳ ಹಾಗೂ ಅನು​ಭ​ವ ಉಳ್ಳ​ವ​ರನ್ನು ಆಹ್ವಾ​ನಿ​ಸ​ಬೇ​ಕು ಎಂದೂ ಅವು ಕೋರಿ​ವೆ.

Follow Us:
Download App:
  • android
  • ios