LIVE NOW
India News Live Updates: ಲಂಕಾದಲ್ಲಿ 18 ವರ್ಷ ಸೋಲದ ಭಾರತಕ್ಕೆ ಈ ಬಾರಿ ಅಗ್ನಿಪರೀಕ್ಷೆ!

ಸಾರಾಂಶ
ನವದೆಹಲಿ: ಜು.20ರಂದು ನಡೆದ ವಿದ್ಯಾರ್ಥಿಗಳ ಮೇಲಿನ ಹಿಂಸೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ವಿಪಕ್ಷಗಳು ಪಟ್ಟು ಹಿಡಿದಿರುವ ನಡುವೆಯೇ, ಈ ವಿಚಾರವಾಗಿ ಲೋಕಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಹಾಗೂ ಶಾ ಅವರು ಉತ್ತರ ನೀಡಲಿದ್ದಾರೆ ಎಂದು ಸರ್ಕಾರ ಘೋಷಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಿರಣ್ ರಿಜಿಜು, ‘ವಿದ್ಯಾರ್ಥಿ ಆಂದೋಲನ ಹಾಗೂ ಪೊಲೀಸರ ಕ್ರಮದ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಿದೆ. ಅಮಿತ್ ಶಾ ಅವರು ಸರ್ಕಾರದ ಪರವಾಗಿ ಉತ್ತರ ನೀಡಲಿದ್ದಾರೆ. ಆದರೆ, ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುವುದಿಲ್ಲ ಹಾಗೂ ಗದ್ದಲ ನಡೆಸಿ ಸದನದಿಂದ ಹೊರನಡೆಯುವುದಿಲ್ಲ ಎಂಬ ಭರವಸೆ ನೀಡಬೇಕು’ ಎಂದರು
08:45 AM (IST) Aug 11
India News Live Updates: ಲಂಕಾದಲ್ಲಿ 18 ವರ್ಷ ಸೋಲದ ಭಾರತಕ್ಕೆ ಈ ಬಾರಿ ಅಗ್ನಿಪರೀಕ್ಷೆ!
9 ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡಲಿರುವ ಭಾರತ, ಅಲ್ಲಿ ಉತ್ತಮ ದಾಖಲೆ ಹೊಂದಿದೆ. ಆದರೆ, ಇತ್ತೀಚೆಗೆ ಗೌತಮ್ ಗಂಭೀರ್ ಕೋಚಿಂಗ್ ಅವಧಿಯಲ್ಲಿ ಎದುರಾದ ಐತಿಹಾಸಿಕ ಸರಣಿ ಸೋಲುಗಳಿಂದಾಗಿ, ಈ ಪ್ರವಾಸವು ತಂಡಕ್ಕೆ ಕಠಿಣ ಅಗ್ನಿಪರೀಕ್ಷೆಯಾಗಿದೆ.
Read Full Story 08:45 AM (IST) Aug 11
India News Live Updates: ಮತ್ತೆ ಸಂಪತ್ತು ಹೆಚ್ಚಿಸಿಕೊಂಡ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್, ಒಂದು ದಿನದ ಸಂಪಾದನೆ ₹8,347 ಕೋಟಿ!
ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್, ಜುಲೈ 2025 ರಿಂದ ಜುಲೈ 2026ರ ನಡುವೆ ಪ್ರತಿದಿನ ಸರಾಸರಿ 8,347 ಕೋಟಿ ರು. ಗಳಿಸುವ ಮೂಲಕ 30.5 ಲಕ್ಷ ಕೋಟಿ ರು. ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ, ಡೆಲ್ ಸಿಇಒ ಮೈಕಲ್ ಡೆಲ್ ಮತ್ತು ಡೀಪ್ ಸೀಕ್ ಸಂಸ್ಥಾಪಕ ಲಿಯಾಂಗ್ ವೆನ್ಫೆಂಗ್ ಅವರ ಸಂಪತ್ತಿನಲ್ಲೂ ಭಾರೀ ಏರಿಕೆ ಕಂಡುಬಂದಿದೆ ಎಂದು ಬೆಸ್ಟ್ಬ್ರೋಕರ್ಸ್ ಸಂಸ್ಥೆ ವರದಿ ಮಾಡಿದೆ.
Read Full Story 08:11 AM (IST) Aug 11
India News Live Updates: ವಿದ್ಯಾರ್ಥಿಗಳ ಮೇಲೆ ಹಿಂಸೆ ಬಳಿಕ ಮೋದಿ ಇಮೇಜ್ ನಾಶ, ಮರುನಿರ್ಮಾಣ ಮಾಡಲು ಸಾಧ್ಯವಿಲ್ಲ - ರಾಹುಲ್
ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಹಿಂಸಾಚಾರದಿಂದ ಪ್ರಧಾನಿ ಮೋದಿಯವರ ಇಮೇಜ್ ಸಂಪೂರ್ಣ ನಾಶವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಕುರಿತು ಸದನದಲ್ಲಿ ಉತ್ತರಿಸಲು ಗೃಹ ಸಚಿವ ಅಮಿತ್ ಶಾ ಸಿದ್ಧರಿದ್ದಾರೆ ಎಂದು ಸರ್ಕಾರ ತಿಳಿಸಿದ್ದು, ವಿಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಟ್ರಿಬ್ಯೂನಲ್ ಸುಧಾರಣೆಗಳ ವಿಧೇಯಕವನ್ನು ಅಂಗೀಕರಿಸಲಾಯಿತು.
Read Full Story