10:55 PM (IST) Aug 11

India News Live Updates: Jana Gana Mana - ನಮ್ಮ ರಾಷ್ಟ್ರಗೀತೆ ಬಗ್ಗೆ ನೀವು ತಿಳಿಯಲೇಬೇಕಾದ 10 ಸ್ವಾರಸ್ಯಕರ ಸಂಗತಿಗಳು

Ten Fascinating Facts About Indias National Anthem Jana Gana Mana ರವೀಂದ್ರನಾಥ ಟ್ಯಾಗೋರ್ ಅವರ ಮೂಲ ಬಂಗಾಳಿ ರಚನೆಯಿಂದ ಭಾರತದ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡ 'ಜನ ಗಣ ಮನ'ಕ್ಕೆ ಒಂದು ರೋಚಕ ಇತಿಹಾಸವಿದೆ. ಇದರ ಬಗ್ಗೆ ತಿಳಿದುಕೊಳ್ಳಲೇಬೇಕಾದ 10 ಸಂಗತಿಗಳು ಇಲ್ಲಿವೆ.

Read Full Story
10:39 PM (IST) Aug 11

India News Live Updates: Viral Video - ಟಿವಿ ಸ್ಕ್ರೀನ್‌ನಲ್ಲೇ ಗಾಡಿ ನಂಬರ್ ಸ್ಕ್ಯಾನ್ ಮಾಡಿ ಫೈನ್! ಪೊಲೀಸಪ್ಪನ ಅನಾಹುತ ಐಡಿಯಾ ನೋಡಿ!

ಸಿಸಿಟಿವಿ ಫುಟೇಜ್ ತೋರಿಸುತ್ತಿದ್ದ ಟಿವಿ ಸ್ಕ್ರೀನ್ ಮೇಲೆಯೇ ವಾಹನದ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ ಪೊಲೀಸ್ ಅಧಿಕಾರಿಯೊಬ್ಬರು ದಂಡ ವಿಧಿಸಿದ ಘಟನೆ ನಡೆದಿದ್ದು, ಈ ವಿಚಿತ್ರ ವಿಧಾನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಗುತ್ತಿದ್ದಾರೆ.

Read Full Story
10:24 PM (IST) Aug 11

India News Live Updates: Arunachal Pradesh - ಚೀನಾ ಅತಿಕ್ರಮಣದ ಸುದ್ದಿ ಸುಳ್ಳು, ಗಡಿಯಲ್ಲಿ ಸೇನೆ-ಐಟಿಬಿಪಿ ಹೈ ಅಲರ್ಟ್!

ಅರುಣಾಚಲ ಪ್ರದೇಶದಲ್ಲಿ ಚೀನಾ ನಿಧಾನವಾಗಿ ಅತಿಕ್ರಮಣ ಮಾಡುತ್ತಿದೆ ಎಂಬ ಸಾಮಾಜಿಕ ಮಾಧ್ಯಮಗಳ ವರದಿಗಳನ್ನು ಮೂಲಗಳು ತಳ್ಳಿಹಾಕಿವೆ. ಗಡಿಯಲ್ಲಿ ಭಾರತೀಯ ಸೇನೆ ಮತ್ತು ಐಟಿಬಿಪಿ ಸಂಪೂರ್ಣ ಹಿಡಿತ ಸಾಧಿಸಿದ್ದು, ಚೀನಾದ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿವೆ ಎಂದು ಸ್ಪಷ್ಟಪಡಿಸಿವೆ.

Read Full Story
10:05 PM (IST) Aug 11

India News Live Updates: Shirdi Trust - ಸಾಯಿಬಾಬಾ ಕುರಿತು ಯುಟ್ಯೂಬ್‌ನಲ್ಲಿ ಅವಹೇಳನಕಾರಿ ವಿಡಿಯೋ ಕೇಸ್; 7 ದಿನದಲ್ಲಿ ನಿರ್ಧಾರ, GACಗೆ ಹೈಕೋರ್ಟ್ ಖಡಕ್ ಸೂಚನೆ

ಶಿರಡಿ ಸಾಯಿಬಾಬಾ ಕುರಿತು ಯೂಟ್ಯೂಬ್‌ನಲ್ಲಿ ಅವಹೇಳನಕಾರಿ ವಿಡಿಯೋಗಳಿವೆ ಎಂದು ಆರೋಪಿಸಿ, ಅವುಗಳನ್ನು ತೆಗೆದುಹಾಕುವಂತೆ ಶಿರಡಿ ಸಾಯಿಬಾಬಾ ಟ್ರಸ್ಟ್ ಸಲ್ಲಿಸಿದ್ದ ಮೇಲ್ಮನವಿಯನ್ನು 7 ದಿನಗಳೊಳಗೆ ಇತ್ಯರ್ಥಪಡಿಸುವಂತೆ ದೆಹಲಿ ಹೈಕೋರ್ಟ್, ಕುಂದುಕೊರತೆ ಮೇಲ್ಮನವಿ ಸಮಿತಿಗೆ (GAC) ನಿರ್ದೇಶನ ನೀಡಿದೆ.
Read Full Story
09:47 PM (IST) Aug 11

India News Live Updates: Pan Masala - ಪಾನ್ ಮಸಾಲಾ ಪ್ಯಾಕೆಟ್‌ಗಳಿಗೆ ಪ್ಲಾಸ್ಟಿಕ್ ಬ್ಯಾನ್! FSSAI ನಿಂದ ಕಠಿಣ ನಿಯಮ ಜಾರಿ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪಾನ್ ಮಸಾಲಾ ಪ್ಯಾಕೇಜಿಂಗ್‌ಗೆ ಸಂಬಂಧ ಹೊಸ ನಿಯಮ ಜಾರಿಗೆ ತಂದಿದೆ. ಇನ್ಮುಂದೆ ಪಾನ್ ಮಸಾಲಾ ಪ್ಯಾಕೆಟ್‌ಗಳಿಗೆ ಪ್ಲಾಸ್ಟಿಕ್ ಲ್ಯಾಮಿನೇಟೆಡ್ ಹೊದಿಕೆ ಬಳಸುವಂತಿಲ್ಲ. ಕಾಗದ, ರಟ್ಟು, ಸೆಲ್ಯುಲೋಸ್ನಂಥ ವಸ್ತು ಮಾತ್ರ ಬಳಸಲು ಅನುಮತಿಸಿದೆ.

Read Full Story
08:47 PM (IST) Aug 11

India News Live Updates: ಲವ್ ಮ್ಯಾರೇಜ್ ಆದ ಮೇಲೆ.. ಪ್ರೇಮ ವಿವಾಹದಲ್ಲಿ ಕಾಡುವ ಕಹಿ ಸತ್ಯಗಳು ಇವು..

ಪ್ರೀತಿಸಿದವರನ್ನೇ ಮದುವೆಯಾಗುವುದು ಜೀವನದ ದೊಡ್ಡ ಖುಷಿ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಮದುವೆಗೆ ಮುನ್ನ ಸಿನಿಮೀಯವಾಗಿ ಸುಂದರವಾಗಿ ಕಾಣುವ ಈ ಜೀವನ, ಮದುವೆಯ ನಂತರ ಹೂವಿನ ಹಾಸಿಗೆಯಾಗಿರುವುದಿಲ್ಲ. ಏನೆಲ್ಲ ಸಮಸ್ಯೆ ಎದುರಿಸುತ್ತಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story
07:24 PM (IST) Aug 11

India News Live Updates: ಚುನಾವಣೆ ಗೆಲುವು ಬೆನ್ನಲ್ಲೇ ಪ್ರಶಾಂತ್ ಕಿಶೋರ್ ಅತೀ ದೊಡ್ಡ ಘೋಷಣೆ.. ಯುವಕರಿಗೆ ಗುಡ್‌ನ್ಯೂಸ್..!

ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್, ಬಿಹಾರದ 10 ಸಾವಿರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ಮಹತ್ವದ ಭರವಸೆ ನೀಡಿದ್ದಾರೆ. ಇದರೊಂದಿಗೆ, ಒಂದು ವರ್ಷದೊಳಗೆ ಸರ್ಕಾರಿ ಶಾಲೆಗಳನ್ನು ಸುಧಾರಿಸುವುದಾಗಿ ಮತ್ತು ವಿಫಲವಾದರೆ ಖಾಸಗಿ ಶಾಲಾ ವೆಚ್ಚವನ್ನು ತಮ್ಮ ಕಚೇರಿಯೇ ಭರಿಸುವುದಾಗಿ ಘೋಷಿಸಿದ್ದಾರೆ.
Read Full Story
07:01 PM (IST) Aug 11

India News Live Updates: ಭಾರೀ ಸಂಕಷ್ಟಕ್ಕೆ ಸಿಲುಕಿದ ಚಿಯಾನ್ ವಿಕ್ರಮ್‌; ಇನ್‌ಸ್ಟಾಗ್ರಾಮ್‌ ರೀಲ್ ತಂದ ಆಪತ್ತು ಎಂಥದ್ದು ಗೊತ್ತಾ?!

ವಿಕ್ರಮ್ ಅವರು ಸದ್ಯಕ್ಕೆ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೃತ್ತಿಜೀವನದಲ್ಲಿ 'ವೀರ ಧೀರ ಸೂರನ್' ಮತ್ತು ಇನ್ನೂ ಅನೇಕ ದೊಡ್ಡ ಸಿನಿಮಾಗಳ ಘೋಷಣೆ ಮಾಡಿರುವ ಅವರು, ಈ ವಿವಾದದಿಂದ ಹೇಗೆ ಹೊರಬರುತ್ತಾರೆ ಎಂಬುದು ಅವರ ಅಭಿಮಾನಿಗಳ ಕುತೂಹಲವಾಗಿದೆ.

Read Full Story
06:36 PM (IST) Aug 11

India News Live Updates: ದಕ್ಷಿಣ ಆಫ್ರಿಕಾ ತಂಡಕ್ಕೆ ಹೊಸ ನಾಯಕ.. ಮಾರ್ಕ್ರಮ್, ಬವುಮಾಗೆ ಗೇಟ್‌ಪಾಸ್..!

ನಮೀಬಿಯಾ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮಂಗಳವಾರ (ಆಗಸ್ಟ್ 11) ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಲು ಹೊಸ ನಾಯಕನ ಆಯ್ಕೆ ಮಾಡಲಾಗಿದ್ದು 31 ವರ್ಷದ ಅನುಭವಿ ಸ್ಪಿನ್ನರ್ ಬ್ಯೋರ್ನ್ ಫೋರ್ಚುಯಿನ್ (Bjorn Fortuin) ಅವರಿಗೆ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

Read Full Story
05:46 PM (IST) Aug 11

India News Live Updates: ಮಾನಸಿಕ ಅಸ್ವಸ್ಥನ ಬದುಕನ್ನೇ ಬದಲಿಸಿತು ಆ ಒಂದು ಪೆನ್​ - ದಶಕದ ಬಳಿಕ ಮನೆ ಸೇರಿದ ಮೈನವಿರೇಳೋ ಸ್ಟೋರಿ

10 ವರ್ಷಗಳಿಂದ ಕಾಣೆಯಾಗಿದ್ದ ಮಾನಸಿಕ ಅಸ್ವಸ್ಥ ವೃದ್ಧರೊಬ್ಬರು ಉತ್ತರಾಖಂಡದ ಅಲ್ಮೋರಾದಲ್ಲಿ ಅಲೆದಾಡುತ್ತಿದ್ದರು. ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಒಬ್ಬರ ಜಾಣ್ಮೆಯಿಂದ, ಡೈರಿಯಲ್ಲಿ ಬರೆದ 'ರಾಜೇಪುರ' ಎಂಬ ಒಂದೇ ಪದದ ಸುಳಿವಿನಿಂದಾಗಿ, ಅವರು ಉತ್ತರ ಪ್ರದೇಶದಲ್ಲಿದ್ದ ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾದರು.
Read Full Story
05:45 PM (IST) Aug 11

India News Live Updates: ಬಸ್ ಕಂಡಕ್ಟರ್​ ಜೊತೆ ಮಧ್ಯರಾತ್ರಿ ಓಡಿಹೋಗಿದ್ದೇಕೆ ಫೇಮಸ್ ಕಂಟೆಂಟ್ ಕ್ರಿಯೇಟರ್ ಪತ್ನಿ?!

ಜೀವನದಲ್ಲಿ ನಾವು ಕಾಣುವ ಎಲ್ಲವೂ ಸತ್ಯವಲ್ಲ ಎಂಬುವುದಕ್ಕೆ ಈ ಘಟನೆ ಒಂದು ದೊಡ್ಡ ಪಾಠ. ಪ್ರೀತಿ, ವಿಶ್ವಾಸ ಮತ್ತು ಸಂವಹನ ಇಲ್ಲದ ಸಂಸಾರ ಎಷ್ಟು ಶ್ರೀಮಂತವಾಗಿದ್ದರೂ, ಎಷ್ಟು ವೈರಲ್ ಆಗಿದ್ದರೂ ಅದು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದಕ್ಕೆ ಈ ಕಂಟೆಂಟ್ ಕ್ರಿಯೇಟರ್ ಜೋಡಿಯ ಕಥೆಯೇ ಸಾಕ್ಷಿ ಆಯ್ತಾ? ಕಾರಣ ಏನು ನೋಡಿ..

Read Full Story
04:49 PM (IST) Aug 11

India News Live Updates: ಬ್ಲಿಂಕಿಟ್ ಕಂಪನಿಗೆ FDA ಬಿಗ್ ಶಾಕ್.. ಕಾಕ್ರೋಚ್ ಕಾಟಕ್ಕೆ ಲೈಸೆನ್ಸ್ ರದ್ದು ಮಾಡಿ ಆದೇಶ..!

ಖ್ಯಾತ ಕ್ವಿಕ್ ಕಾಮರ್ಸ್ ಕಂಪನಿ 'ಬ್ಲಿಂಕಿಟ್' (Blinkit) ಮೇಲೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ದಾಳಿ ನಡೆಸಿದ್ದು ಗಂಭೀರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಮಳಿಗೆಯ ಪರವಾನಗಿಯನ್ನು (License) ಅಮಾನತುಗೊಳಿಸಿದೆ. ಅಷ್ಟಕ್ಕೂ ಆಗಿದ್ದೇನು? ಈ ಸ್ಟೋರಿ ಓದಿ..

Read Full Story
04:34 PM (IST) Aug 11

India News Live Updates: Redmi 17 - ₹18,000ಕ್ಕೆ 7,500mAh ಬ್ಯಾಟರಿ! ರೆಡ್ಮಿ 17 ಸೀರೀಸ್ ಫೋನ್‌ಗಳ ಫೀಚರ್ಸ್ ಇಲ್ಲಿದೆ

ರೆಡ್ಮಿ ಕಂಪನಿಯು ತನ್ನ ಹೊಸ ರೆಡ್ಮಿ 17 5G ಮತ್ತು 4G ಸ್ಮಾರ್ಟ್‌ಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಎರಡೂ ಫೋನ್‌ಗಳ ಪ್ರಮುಖ ಆಕರ್ಷಣೆ 7,500mAh ಸಾಮರ್ಥ್ಯದ ದೈತ್ಯ ಬ್ಯಾಟರಿಯಾಗಿದ್ದು, 120Hz ಡಿಸ್‌ಪ್ಲೇ ಮತ್ತು 50MP ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿವೆ.
Read Full Story
04:08 PM (IST) Aug 11

India News Live Updates: ದಕ್ಷಿಣದ 5 ರಾಜ್ಯಗಳಲ್ಲೇ ದೇಶದ ಶೇ. 80ರಷ್ಟು ಗೋಲ್ಡ್ ಲೋನ್ - ತಮಿಳುನಾಡು ಟಾಪ್‌, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ದೇಶದ ಸಾರ್ವಜನಿಕ ಬ್ಯಾಂಕ್‌ಗಳ ಒಟ್ಟು ಚಿನ್ನದ ಸಾಲದಲ್ಲಿ ಶೇಕಡಾ 80ಕ್ಕೂ ಹೆಚ್ಚು ಪಾಲು ದಕ್ಷಿಣ ಭಾರತದ ರಾಜ್ಯಗಳದ್ದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಗೆ ತಿಳಿಸಿದೆ. ತಮಿಳುನಾಡು ಅಗ್ರಸ್ಥಾನದಲ್ಲಿದ್ದು, ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

Read Full Story
04:05 PM (IST) Aug 11

India News Live Updates: ಭಾವಿ ವೈದ್ಯೆಗೆ ಚೀಟಿಂಗ್.. IPL ಸ್ಟಾರ್, ಡೆಲ್ಲಿ ಕ್ಯಾಪಿಟಲ್ಸ್‌ನ ಹೀರೋ ಅರೆಸ್ಟ್‌..!

ಐಪಿಎಲ್ ಸ್ಟಾರ್ ಬ್ಯಾಟರ್ ಅಭಿಷೇಕ್ ಪೊರೇಲ್‌ನ ಬಂಧನ ಆಗಿದೆ. ವೈದ್ಯಕೀಯ ವಿದ್ಯಾರ್ಥಿನಿಗೆ ಮದುವೆ ಆಗೋದಾಗಿ ನಂಬಿಸಿ ಮೋಸ ಮಾಡಿದ ಆರೋಪ ಇವರ ಮೇಲಿದೆ. ಏನಿದು ಪ್ರಕರಣ ಅನ್ನೋದು ಈ ಸ್ಟೋರಿಯಲ್ಲಿದೆ.

Read Full Story
02:49 PM (IST) Aug 11

India News Live Updates: ಗಣೇಶ ಹಬ್ಬಕ್ಕೆ ಮಂಗಳೂರು ಸೇರಿ ವಿವಿದೆಡೆ ಕೊಂಕಣ ರೈಲ್ವೇಯಿಂದ 254 ವಿಶೇಷ ರೈಲು ಘೋಷಣೆ

ಗಣೇಶ ಹಬ್ಬಕ್ಕೆ ಕೊಂಕಣ ರೈಲ್ವೇ 254 ವಿಶೇಷ ರೈಲು ಘೋಷಣೆ ಮಾಡಿದೆ. ಸ್ಪೆಷಲ್ ರೈಲು ವೇಳಾಪಟ್ಟಿ,ಬುಕಿಂಗ್ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ರೈಲ್ವೇ ಇಲಾಖೆ ನೀಡಿದೆ. ಪ್ರಯಾಣ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲು ಘೋಷಿಸಲಾಗಿದೆ.

Read Full Story
02:39 PM (IST) Aug 11

India News Live Updates: ಲಂಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ ಜುರೆಲ್ ಬದಲಿಗೆ ಈತನಿಗೆ ಅವಕಾಶ ಕೊಡಿ - ಮೊಹಮ್ಮದ್ ಕೈಫ್ ಕಿವಿಮಾತು

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ಗೆ ಧ್ರುವ್ ಜುರೆಲ್ ಬದಲು ಸರ್ಫರಾಜ್ ಖಾನ್‌ರನ್ನು ಆಡಿಸಬೇಕೆಂದು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ. ಗಾಲೆ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಿರುವುದರಿಂದ, ಸ್ಪಿನ್ ಬೌಲಿಂಗ್‌ ಅನ್ನು ಉತ್ತಮವಾಗಿ ಎದುರಿಸುವ ಸರ್ಫರಾಜ್ ತಂಡಕ್ಕೆ ಹೆಚ್ಚು ಉಪಯುಕ್ತ ಎಂದು ಕೈಫ್ ಹೇಳಿದ್ದಾರೆ. ಜುರೆಲ್ ಅವರ ಕಳಪೆ ಫಾರ್ಮ್ ಕೂಡ ಈ ಚರ್ಚೆಗೆ ಕಾರಣವಾಗಿದೆ.
Read Full Story
01:34 PM (IST) Aug 11

India News Live Updates: ಇತಿಹಾಸ ಸೃಷ್ಟಿಸಿದ ODI ಕ್ರಿಕೆಟ್! 5000 ಪಂದ್ಯ ಮುಕ್ತಾಯದ ಬೆನ್ನಲ್ಲೇ ಹೊರಬಿತ್ತು ಟಾಪ್ 10 ಬಲಿಷ್ಠ ತಂಡಗಳ ಮಾಹಿತಿ, ಭಾರತಕ್ಕೆ ಎಷ್ಟನೇ ಸ್ಥಾನ?

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5000 ಏಕದಿನ ಪಂದ್ಯಗಳು ಪೂರ್ಣಗೊಂಡಿವೆ. ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಭಾರತದ ಹೆಸರಿನಲ್ಲಿದ್ದರೆ, ಅತಿ ಹೆಚ್ಚು ಗೆಲುವುಗಳನ್ನು ದಾಖಲಿಸಿದ ಕೀರ್ತಿ ಆಸ್ಟ್ರೇಲಿಯಾ ತಂಡಕ್ಕೆ ಸಲ್ಲುತ್ತದೆ. ಈ ಲೇಖನವು ಏಕದಿನ ಕ್ರಿಕೆಟ್‌ನ ಪ್ರಮುಖ ದಾಖಲೆಗಳು ಮತ್ತು ತಂಡಗಳ ಪ್ರದರ್ಶನದ ಸಂಪೂರ್ಣ ವಿವರಗಳನ್ನು ನೀಡುತ್ತದೆ.
Read Full Story
01:30 PM (IST) Aug 11

India News Live Updates: ಮದುವೆಯ ಸವಿ ನೆನಪಿಗೆ ಇಡೀ ಗ್ರಾಮಸ್ಥರಿಗೆ 34 ಕೋಟಿಯ ವಿಮೆ - ಗಮನ ಸೆಳೆದ ಅಪರೂಪದ ಜೋಡಿ

ಮಹಾರಾಷ್ಟ್ರದ ಬಹದ್ದರ್‌ಪುರದಲ್ಲಿ, ವರ ಸಿದ್ಧೇಶ್ವರ ಪೇಠ್ಕರ್ ಅವರು ತಮ್ಮ ವಿವಾಹದ ಸಂದರ್ಭದಲ್ಲಿ ಇಡೀ ಗ್ರಾಮದ 3,465 ನಿವಾಸಿಗಳಿಗೆ ಅಪಘಾತ ವಿಮಾ ರಕ್ಷಣೆಯನ್ನು ಉಡುಗೊರೆಯಾಗಿ ನೀಡಿದರು. ಈ ಚಿಂತನಶೀಲ ಕಾರ್ಯವು ಸಾಂಪ್ರದಾಯಿಕ ಉಡುಗೊರೆಗಳ ಬದಲಿಗೆ, ಗ್ರಾಮಸ್ಥರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದೆ.
Read Full Story
12:12 PM (IST) Aug 11

India News Live Updates: ರಾಹುಲ್​ ಗಾಂಧಿ ಬೋಟ್​ ವಿಹಾರ- ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ - ಈ ಮಹಿಳೆ, ಮಗು ಯಾರು ಗೊತ್ತಾ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ರಾಹುಲ್ ಗಾಂಧಿಯವರ ಬೋಟ್ ವಿಹಾರದ ಫೋಟೋ ಭಾರೀ ಚರ್ಚೆಗೆ ಕಾರಣವಾಗಿದೆ. ಫೋಟೋದಲ್ಲಿರುವ ಮಹಿಳೆ ಮತ್ತು ಮಗು ಯಾರೆಂಬ ಪ್ರಶ್ನೆಗೆ ಸ್ಪಷ್ಟನೆಗಳು ಬಂದಿದ್ದರೂ, ಈ ಕುರಿತಾದ ಚರ್ಚೆಗಳು ಮತ್ತು ರಾಜಕೀಯ ಕೆಸರೆರಚಾಟ ಮುಂದುವರೆದಿದೆ.
Read Full Story