2014 ರಿಂದ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಲೋಕಸಭಾ ಚುನಾವಣೆ ನಡೆದರೆ ದೇಶವನ್ನು ಮುನ್ನಡೆಸುವ ಅತ್ಯಂತ ಜನಪ್ರಿಯ ಅಭ್ಯರ್ಥಿಯಾಗಿ ಉಳಿಯುತ್ತಾರೆ.
MOTN Survey - ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯೇ ಬೆಸ್ಟ್, ಸನಿಹದಲ್ಲೂ ಇಲ್ಲ ರಾಹುಲ್!

ಪೆಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಪಾಕಿಸ್ತಾನ ನಡುವಿನ ಸಂಬಂಧ ಹಳಸಿದೆ. ಎಲ್ಲಾ ವ್ಯಾಪಾರ ವಹಿವಾಟುಗಳು ಬಂದ್ ಆಗಿದೆ. ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಲಾಗಿದೆ. ಇತ್ತ ಸಿಂಧೂ ನದಿ ಒಪ್ಪಂದವನ್ನೂ ರದ್ದುಗೊಳಿಸಲಾಗಿದೆ. ಇದರ ನಡುವೆ ಭಾರತ ಮಾನವೀಯತೆ ಮರೆದಿದೆ. ಭಾರಿ ಮಳೆ ಕಾರಣ ಭೀಕರ ಪ್ರವಾಹ ಸಂಭವಿಸಲಿದೆ ಎಂದು ಪಾಕಿಸ್ತಾನಕ್ಕೆ ಭಾರತಕ್ಕೆ ಎಚ್ಚರಿಸಿದೆ. ಈ ಮೂಲಕ ನದಿ ಪಾತ್ರದ ಜನರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಭಾರತ ಸೂಚಿಸಿತ್ತು. ಮಂಗಳವಾರ ಹಾಗೂ ಬುಧವಾರ ಎರಡು ದಿನ ಸತತ ಅಲರ್ಟ್ ನೀಡಿ ಪಾಕಿಸ್ತಾನದ 1.5 ಲಕ್ಷ ಮಂದಿಯ ಜೀವ ಕಾಪಾಡಿದೆ. ದೇಶದ ಪ್ರಮುಖ ಬೆಳವಣಿಗೆಗಳ ಕ್ಷಣ ಕ್ಷಣದ ಲೈವ್ ಅಪ್ಡೇಟ್ ಇಲ್ಲಿದೆ.
India latest news LiveMOTN Survey - ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯೇ ಬೆಸ್ಟ್, ಸನಿಹದಲ್ಲೂ ಇಲ್ಲ ರಾಹುಲ್!
India latest news Liveನಾಗರಹಾವು ಕಡಿತಕ್ಕೆ ಮೂಢನಂಬಿಕೆ ಚಿಕಿತ್ಸೆ - ವಿಡಿಯೋ ವೈರಲ್
ನಾಗರಹಾವು ಕಡಿತಕ್ಕೊಳಗಾದ ಮಹಿಳೆಗೆ ಆಸ್ಪತ್ರೆಗೆ ಕರೆದೊಯ್ಯುವ ಬದಲು ಗ್ರಾಮಸ್ಥರು ಬ್ಲಾಕ್ ಮ್ಯಾಜಿಕ್ ಮಾಡಿದ ವಿಡಿಯೋ ವೈರಲ್ ಆಗಿದೆ. ಹಾವು ಪುನಃ ವಿಷ ಹೀರಿಕೊಳ್ಳುವಂತೆ ಮಹಿಳೆಯ ಮೇಲೆ ಹಾಕುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಮೂಢನಂಬಿಕೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
India latest news LiveMOTN Survey - ವಿಪಕ್ಷ ನಾಯಕ ಸ್ಥಾನಕ್ಕೆ ರಾಹುಲ್ ಗಾಂಧಿ ಅತ್ಯಂತ ಸೂಕ್ತ ಎಂದ ಜನ!
ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಜನರ ಆಯ್ಕೆಗಳಲ್ಲಿ ಇದ್ದರು, ಆದರೆ ವಿರೋಧ ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿ ಈ ಎಲ್ಲರಿಗಿಂತ ಬೆಸ್ಟ್ ಎಂದಿದ್ದಾರೆ.
India latest news LiveMood of the Nation - ಮೋದಿ ಜನಪ್ರಿಯತೆಯಲ್ಲಿ ಕುಸಿತ ನಿಜ ಎಂದ ಸರ್ವೆ!
ಆಗಸ್ಟ್ 2025 ರ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯ ಪ್ರಕಾರ, ಕಳೆದ ಆರು ತಿಂಗಳಲ್ಲಿ ಅವರ ಸರ್ಕಾರದ ಕಾರ್ಯಕ್ಷಮತೆ ಶೇಕಡಾ 10 ರಷ್ಟು ಕುಸಿತ ಕಂಡಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆ ಅತ್ಯಂತ ಜನಪ್ರಿಯ ನಾಯಕನಾಗಿ ಉಳಿದಿದೆ.
India latest news Liveಮೋದಿ ಜೊತೆ Mood of the Nation, ಇಂದೇ ಲೋಕಸಭಾ ಚುನಾವಣೆ ನಡೆದರೆ ಎನ್ಡಿಎಗೆ 300 ಪ್ಲಸ್ ಸ್ಥಾನ
ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಇಂದೇ ಲೋಕಸಭಾ ಚುನಾವಣೆ ನಡೆದರೆ ಎನ್ಡಿಎ ಪ್ರಬಲ ಪ್ರದರ್ಶನ ನೀಡುವ ಮತ್ತು 324 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.
India latest news Live'ಈಗ ಶೇ.15ರಷ್ಟು ಹಿಂದೂಗಳು ಮಾತ್ರೇ ಇಲ್ಲಿ ಉಳಿದಿದ್ದಾರೆ..' ಸಂಭಲ್ ಹಿಂಸಾಚಾರ ವರದಿ ಬಹಿರಂಗ!
ಸ್ವಾತಂತ್ರ್ಯದ ಸಮಯದಲ್ಲಿ, ಸಂಭಲ್ ನಗರ ಪಾಲಿಕೆ ಪ್ರದೇಶದಲ್ಲಿ ಜನಸಂಖ್ಯೆಯ 55% ಮುಸ್ಲಿಮರು ಮತ್ತು 45% ಹಿಂದೂಗಳಾಗಿದ್ದರು ಎಂದು ವರದಿ ತಿಳಿಸಿದೆ.
India latest news Liveಐದು ತಂತ್ರಜ್ಞಾನವನ್ನು ಭಾರತೀಯ ಕಂಪನಿಗಳಿಗೆ ಹಸ್ತಾಂತರ ಮಾಡಿದ ಇಸ್ರೋ!
ಇಸ್ರೋ ಅಭಿವೃದ್ಧಿಪಡಿಸಿದ ಐದು ಪ್ರಮುಖ ತಂತ್ರಜ್ಞಾನಗಳನ್ನು ಭಾರತೀಯ ಕಂಪನಿಗಳಿಗೆ ವರ್ಗಾಯಿಸಲಾಗಿದೆ. ಈ ವರ್ಗಾವಣೆಯು ಆಮದುಗಳನ್ನು ಕಡಿಮೆ ಮಾಡುವ ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
India latest news Live'ಹಮ್ ದೋ, ಹಮಾರೇ 3..' ಪ್ರತಿ ಭಾರತೀಯರು ಮೂವರು ಮಕ್ಕಳು ಹೊಂದುವಂತೆ ಕರೆ ನೀಡಿದ ಆರೆಸ್ಸೆಸ್ ಮುಖ್ಯಸ್ಥ!
ಮೂರು ಮಕ್ಕಳನ್ನು ಹೊಂದುವುದು ಸೂಕ್ತ ಎಂದು ವೈದ್ಯರು ನನಗೆ ಹೇಳಿದ್ದಾರೆ, ಏಕೆಂದರೆ ಇದು ಮನೆಯೊಳಗೆ ತಮ್ಮಲ್ಲಿ ಅಹಂಕಾರವನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಕಲಿಯಲು ಅವರಿಗೆ ಸಹಾಯ ಮಾಡುತ್ತದೆ" ಎಂದು ಆರ್ಎಸ್ಎಸ್ ಮುಖ್ಯಸ್ಥರು ಹೇಳಿದ್ದಾರೆ.
India latest news Liveಚೆನ್ನೈನಲ್ಲಿರುವ ನನ್ನ ಮನೆಯಿಂದ ನನ್ನನ್ನೇ ಹೊರಹಾಕಿದ - ಭಾವಿ ಪತಿ ವಿರುದ್ಧ ಗಾಯಕಿ ಸುಚಿತ್ರಾ ಗಂಭೀರ ಆರೋಪ
ಹಲವು ವಿವಾದಿತ ಹೇಳಿಕೆಗಳಿಂದಲೇ ಸುದ್ದಿ ಮಾಡುತ್ತಿರುವ ತಮಿಳು ಸಿನಿಮಾರಂಗದ ಗಾಯಕಿ ಹಾಗೂ ನಟಿ ಸುಚಿತ್ರಾ ಈಗ ತನ್ನ ಭಾವಿ ಪತಿ ವಿರುದ್ಧ ಭಾರಿ ಆರೋಪ ಮಾಡಿದ್ದಾರೆ. ಆತ ನನ್ನನ್ನು ರೆಸ್ಲರ್ ಶೋಗಳಲ್ಲಿ ಸ್ಪರ್ಧಾಳುಗಳು ಪರಸ್ಪರ ಹೊಡೆಯುವಂತೆ ಥಳಿಸುತ್ತಿದ್ದ ಎಂದು ದೂರಿದ್ದಾರೆ.
India latest news Liveಚೀನಾದ ಅವಲಂಬನೆ ಕಡಿಮೆ ಮಾಡಲು, ಭಾರತದಲ್ಲೇ TBM ಅಭಿವೃದ್ಧಿಗೆ ಮುಂದಾದ ಬೆಂಗಳೂರಿನ ಬೆಮೆಲ್!
ಸುರಂಗ ಕೊರೆಯುವ ಯಂತ್ರಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲು ವಿನ್ಯಾಸ ಸಲಹಾ ಸಂಸ್ಥೆಗಾಗಿ ಸರ್ಕಾರಿ ಸ್ವಾಮ್ಯದ ಬಿಇಎಂಎಲ್ ಇತ್ತೀಚೆಗೆ ಇಒಐ ಆಹ್ವಾನಿಸಿದೆ.
India latest news Liveಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡ್ತಾ ನೀಟ್ ಪರೀಕ್ಷೆ ಪಾಸ್ ಮಾಡಿದ ಒಡಿಶಾದ ಶುಭಂ
India latest news Liveಹೈಕ್ಲಾಸ್ ಜನರ ಮುಖವಾಡ ತೆರೆದಿಟ್ಟ ಹೌಸ್ ಕೀಪರ್ - ಐಐಟಿ ಬಾಂಬೆ ಪ್ರೊಫೆಸರ್ ಪೋಸ್ಟ್ ಭಾರಿ ವೈರಲ್
ಐಐಟಿ ಬಾಂಬೆಯಲ್ಲಿ ಹೌಸ್ ಕೀಪಿಂಗ್ ಮಾಡುವ ವ್ಯಕ್ತಿಯೊಬ್ಬರು ತಮ್ಮ ಸಮಸ್ಯೆಗಳನ್ನು ಐಐಟಿ ಬಾಂಬೆಯ ತಂತ್ರಜ್ಞರೊಬ್ಬರ ಜೊತೆ ಹಂಚಿಕೊಂಡಿದ್ದಾರೆ.ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ.
India latest news Liveಗಣೇಶನ 'ಏಕದಂತಾಯ' ಹಾಡು ಹಾಡುತ್ತಾ ನಾನೊಬ್ಬ ಸನಾತನಿ ಎಂದ ಸ್ಪ್ಯಾನಿಶ್ ತರುಣ
ಪೋಲ್ಯಾಂಡ್ನ ಓರ್ವಯುವಕ ಗಣೇಶ ಚತುರ್ಥಿಗೆ 'ಏಕದಂತಾಯ ವಕ್ರತುಂಡಾಯ' ಹಾಡನ್ನು ಹಾಡುವ ಮೂಲಕ ಶುಭಾಶಯ ತಿಳಿಸಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈತ ಜನ್ಮತಃ ಕ್ರೈಸ್ತನಾಗಿದ್ದರೂ ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟಿರುವುದಾಗಿ ತಿಳಿಸಿದ್ದಾನೆ.
India latest news Liveಅಮೆರಿಕ ಸುಂಕ ಬೆದರಿಕೆ ನಡುವೆ ಭಾರತಕ್ಕೆ ಭರ್ಜರಿ ಸುದ್ದಿ! 2038 ರ ವೇಳೆಗೆ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ, EY ವರದಿ ಬಹಿರಂಗ
India latest news Liveಹಾಸ್ಟೆಲ್ನಲ್ಲಿ ದೂರು ಹೇಳಿದ್ದಕ್ಕೆ ಐರನ್ ಬಾಕ್ಸ್ ಬಿಸಿ ಮಾಡಿ ಬಾಲಕನ ಹೊಟ್ಟೆಗಿಟ್ಟ ಸಹಪಾಠಿಗಳು
ಆಂಧ್ರಪ್ರದೇಶದ ಖಾಸಗಿ ಶಾಲೆಯ ಹಾಸ್ಟೆಲ್ನಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ಇಸ್ತ್ರಿ ಪೆಟ್ಟಿಗೆಯಿಂದ ಮತ್ತೊಬ್ಬ ಬಾಲಕನಿಗೆ ಸುಟ್ಟಿದ್ದಾರೆ. ತಾಯಿ ಹಾಸ್ಟೆಲ್ಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
India latest news Liveಉಕ್ಕಿ ಹರಿದ ತವಿ ನದಿ, ಪಾಕಿಸ್ತಾನದಲ್ಲಿ ಪ್ರವಾಹ
ತವಿ ನದಿ ಉಕ್ಕಿ ಹರಿದಿದೆ. ಮೇಘ ಸ್ಫೋಟದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಜಮ್ಮು ಮೂಲಕ ಹರಿಯುವ ತವಿ ನದಿ ಪಾಕಿಸ್ತಾನದ ಚೆನಾಬ್ನಿಂದ ಹಾದು ಹೋಗಲಿದೆ. ನದಿಯ ಅಪಾಯವನ್ನು ಭಾರತ ಸತತವಾಗಿ ಪಾಕಿಸ್ತಾನಕ್ಕೆ ಅಲರ್ಟ್ ನೀಡಿ ಮಾನವೀಯತೆ ಮೆರೆದಿದೆ.