ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರ ಬಾಂಗ್ಲಾದೇಶ, ಪಾಕಿಸ್ತಾನದ ಕೆಲ ಉಗ್ರ ಸಂಘಟನೆಗಳನ್ನು ಕೆರಳಿಸಿದೆ. ಈ ಗೆಲುವಿನ ಬೆನ್ನಲ್ಲೇ ದೆಹಲಿ ಬಿಜೆಪಿ ಪ್ರಧಾನ ಕಚೇರಿ ಮೇಲೆ ಉಗ್ರರ ದಾಳಿ ಸಾಧ್ಯತೆಯನ್ನು ಗುಪ್ತಚರ ಇಲಾಖೆ ನೀಡಿದೆ.
- Home
- News
- India News
- India Latest News Live: ಬಂಗಾಳದಲ್ಲಿ ಸರ್ಕಾರ ರಚನೆ ಬೆನ್ನಲ್ಲೇ ದೆಹಲಿ ಬಿಜೆಪಿ ಕಚೇರಿ ಮೇಲೆ ಉಗ್ರ ದಾಳಿ ಎಚ್ಚರಿಕೆ, ಭದ್ರತೆ ಹೆಚ್ಚಳ
India Latest News Live: ಬಂಗಾಳದಲ್ಲಿ ಸರ್ಕಾರ ರಚನೆ ಬೆನ್ನಲ್ಲೇ ದೆಹಲಿ ಬಿಜೆಪಿ ಕಚೇರಿ ಮೇಲೆ ಉಗ್ರ ದಾಳಿ ಎಚ್ಚರಿಕೆ, ಭದ್ರತೆ ಹೆಚ್ಚಳ

ಕೋಲ್ಕತಾ: ‘ಚುನಾವಣೆ ವೇಳೆ ಪಕ್ಷವು ಕೊಟ್ಟಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ’ ಎಂದು ಪ.ಬಂಗಾಳದ ನಿಯೋಜಿತ ಸಿಎಂ ಸುವೇಂದು ಅಧಿಕಾರಿ ಭರವಸೆ ನೀಡಿದ್ದಾರೆ.
ಸಿಎಂ ಹುದ್ದೆಗೆ ತಮ್ಮ ಆಯ್ಕೆಯ ಬಳಿಕ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ರಾಜ್ಯದಲ್ಲೀಗ ಭಯವು ಹೋಗಿ ಭರವಸೆ ಬಂದಿದೆ. ಬಂಗಾಳದ ಜನ ನಮಗೆ ಐತಿಹಾಸಿಕ ಜನಾದೇಶ ನೀಡಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.
‘ನಮ್ಮ ಪ್ರಣಾಳಿಕೆಯಲ್ಲಿದ್ದ ಎಲ್ಲಾ ಭರವಸೆಗಳನ್ನು ಪೂರ್ಣಗೊಳಿಸುತ್ತೇವೆ. ಬಂಗಾಳ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಕೆಲಸ ಮಾಡುವುದು ಅತ್ಯಗತ್ಯ’ ಎನ್ನುವ ಮೂಲಕ ಡಬಲ್ ಎಂಜಿನ್ ಸರ್ಕಾರ ಉತ್ತಮ ಆಡಳಿತ ಕೊಡಲಿದೆ ಎಂಬ ವಾಗ್ದಾನವನ್ನೂ ಅಧಿಕಾರಿ ಮಾಡಿದರು.
India Latest News Live 9 May 2026ಬಂಗಾಳದಲ್ಲಿ ಸರ್ಕಾರ ರಚನೆ ಬೆನ್ನಲ್ಲೇ ದೆಹಲಿ ಬಿಜೆಪಿ ಕಚೇರಿ ಮೇಲೆ ಉಗ್ರ ದಾಳಿ ಎಚ್ಚರಿಕೆ, ಭದ್ರತೆ ಹೆಚ್ಚಳ
India Latest News Live 9 May 2026ನಟ ಶಾಹಿದ್ ಕಪೂರ್ಗೆ ದಾರಿ ಬಿಟ್ಟ ವಯಸ್ಸಾದ ವ್ಯಕ್ತಿ - ವೈರಲ್ ಆಯ್ತು ಹೃದಯ ಗೆದ್ದ ವಿಡಿಯೋ!
ಏರ್ಪೋರ್ಟ್ನಲ್ಲಿ ನಟ ಶಾಹಿದ್ ಕಪೂರ್ ಜೊತೆ ವಯಸ್ಸಾದ ವ್ಯಕ್ತಿಯೊಬ್ಬರು ನಡೆದುಕೊಂಡ ರೀತಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿಯ ಕಾಳಜಿ ಮತ್ತು ಅದಕ್ಕೆ ಶಾಹಿದ್ ತೋರಿದ ವಿನಯವನ್ನು ಜನ ಮೆಚ್ಚಿಕೊಂಡಿದ್ದಾರೆ.
India Latest News Live 9 May 2026ಮಕ್ಕಳೇ ಡಿಸೈನರ್ಸ್! ಕಾಲಿನ ಮೇಲೆ ಆ ಹೊಸ ಟ್ಯಾಟೂ ಹಾಕಿಸಿಕೊಂಡ ಗ್ಲೋಬಲ್ ಪಾಪ್ ತಾರೆ ರಿಹಾನಾ!
ಗ್ಲೋಬಲ್ ಪಾಪ್ ಐಕಾನ್ ರಿಹಾನಾ ತಮ್ಮ ಕಾಲಿನ ಮೇಲೆ ಒಂದು ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದರ ವಿಶೇಷತೆ ಏನೆಂದರೆ, ಈ ಟ್ಯಾಟೂವನ್ನು ಡಿಸೈನ್ ಮಾಡಿದ್ದು ರಾಪರ್ A$AP Rocky ಜೊತೆಗಿನ ಅವರ ಮೂವರು ಮಕ್ಕಳು!
India Latest News Live 9 May 2026Video - ರೈಲ್ವೆ ನಿಲ್ದಾಣದಲ್ಲಿ ಬಣ್ಣದಲ್ಲಿ ಅದ್ದಿದ ಸೌತೆಕಾಯಿ ಮಾರಾಟ - ವಿಚಾರಣೆ ವೇಳೆ ಮಹಿಳೆಯರ ಶಾಕಿಂಗ್ ಹೇಳಿಕೆ
India Latest News Live 9 May 2026ಹಾಲಿವುಡ್ನಲ್ಲಿ ಬಾಲಿವುಡ್ ನಟಿ ಹವಾ - ಅಲೌಕಿಕ ಯುದ್ಧದ ಕಥೆಯಲ್ಲಿ ದಿಶಾ ಪಟಾನಿ ಹೊಸ ಅವತಾರ!
ಬಾಲಿವುಡ್ ನಟಿ ದಿಶಾ ಪಟಾನಿ ನಟನೆಯ 'ದಿ ಪೋರ್ಟಲ್ ಆಫ್ ಫೋರ್ಸ್' ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಇದರಲ್ಲಿ ಅವರು ಎರಡು ಬಣಗಳ ನಡುವೆ ಸಿಲುಕುವ 'ಜೆಸ್ಸಿಕಾ' ಎಂಬ ವಿಶೇಷ ಶಕ್ತಿಯುಳ್ಳ ಪಾತ್ರ ಮಾಡಿದ್ದಾರೆ.
India Latest News Live 9 May 2026ದಳಪತಿ ವಿಜಯ್ 'SSLC ಮಾಕ್ಸ್ಕಾರ್ಡ್' ವೈರಲ್ ಆಗಿರೋ ಬೆನ್ನಲ್ಲೇ ಓಡಾಡ್ತಿರೋ ಕಾಮೆಂಟ್ ಏನ್ ಗೊತ್ತಾ?
ಸಿನಿಮಾ ಪರದೆಯ ಮೇಲೆ ನೂರಾರು ವಿಲನ್ಗಳನ್ನು ಏಕಾಂಗಿಯಾಗಿ ಚಚ್ಚಿ ಹಾಕುವ, ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಹಣದ ಲೇಕ್ಕಾಚಾರ ಮಾಡುವ 'ದಳಪತಿ' ವಿಜಯ್ ಅವರ ಹಳೆಯ ರಿಪೋರ್ಟ್ ಕಾರ್ಡ್ ಈಗ ಇಡೀ ಸೌತ್ ಇಂಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
India Latest News Live 9 May 2026ಬಿಸಿಸಿಐ ACU ದಾಳಿಯಲ್ಲಿ ಸಿಕ್ಕಿಬಿದ್ದ ಐಪಿಎಲ್ ಸ್ಟಾರ್ ಪ್ಲೇಯರ್, ಹೊಟೆಲ್ ರೂಂನ ತಡರಾತ್ರಿ ಸೀಕ್ರೆಟ್
ಆಟಾಗಾರರು ಅಪರಿಚಿತರು, ಸೋಶಿಯಲ್ ಮೀಡಿಯಾದಲ್ಲಿ ಪರಿಚಯಸ್ಥರು ಐಪಿಎಲ್ ಸ್ಟಾರ್ ಆಟಗಾರರನ್ನು ಹೊಟೆಲ್ ರೂಂಗಳಲ್ಲಿ ಭೇಟಿಯಾಗುತ್ತಿದ್ದಾರೆ. ಭ್ರಷ್ಟಾಚಾರ ವಿರೋಧಿ ದಳ ಅಧಿಕಾರಿಗಳ ಈ ಕುರಿತ ತಂಡದ ಮ್ಯಾನೇಜರ್ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ.
India Latest News Live 9 May 2026ಯಾವ ಫೋಟೋ ನೋಡಿದ್ರೂ ಕುಂಬಳಕಾಯಿ ತರ ಕಾಣ್ತಿದ್ದೆ, ಆಂಟಿ ಅಂದಾಗ ಬೇಜಾರಾಯ್ತು - ನಟಿ ಜ್ಯೋತಿ ಕೃಷ್ಣ ನೋವಿನ ಮಾತು
ನಟಿ ಜ್ಯೋತಿ ಕೃಷ್ಣ ತಮ್ಮ ತೂಕ ಹೆಚ್ಚಳದ ಬಗ್ಗೆ ಮಾತನಾಡಿದ್ದಾರೆ. ಪ್ರಯಾಣ ಮತ್ತು ಮಾನಸಿಕ ಒತ್ತಡದಿಂದಾಗಿ 81 ಕೆ.ಜಿ ತೂಕ ಹೆಚ್ಚಾಗಿತ್ತು, ಇದರಿಂದ ಆತ್ಮವಿಶ್ವಾಸ ಕಡಿಮೆಯಾಗಿತ್ತು ಎಂದು ಜ್ಯೋತಿ ಕೃಷ್ಣ ಹೇಳಿದ್ದಾರೆ.
India Latest News Live 9 May 2026ರಶ್ಮಿಕಾ ಜೊತೆ ಬಾಲ್ಕನಿಗೆ ಬಂದು ವಿಜಯ್ ಮಾಡಿದ 'ಈ ಕೆಲಸ' ವೈರಲ್; ಇಷ್ಟು ವರ್ಷದಲ್ಲಿ ಇದೇ ಮೊದಲಂತೆ!
ವಿಜಯ್ ನಿವಾಸದ ಮುಂದೆ ಶನಿವಾರ ಬೆಳ್ಳಂಬೆಳಗ್ಗೆಯೇ ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಕಿಕ್ಕಿರಿದು ಸೇರಿದ್ದ ಫ್ಯಾನ್ಸ್ ಕಂಡು ವಿಜಯ್, ಪ್ರೀತಿಯ ಪತ್ನಿ ರಶ್ಮಿಕಾ ಮಂದಣ್ಣ ಅವರ ಕೈ ಹಿಡಿದು ಬಾಲ್ಕನಿಗೆ ಆಗಮಿಸಿದರು. ದಂಪತಿಗಳಿಬ್ಬರೂ ಮುಗುಳ್ನಗುತ್ತಾ ಕೈ ಬೀಸುತ್ತಿದ್ದ ದೃಶ್ಯ ವೈರಲ್ ಆಗಿದೆ.
India Latest News Live 9 May 2026ನಾಳೆ 3 - 45ಕ್ಕೆ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ, ರಾಜ್ಯಪಾಲರ ಒಪ್ಪಿಗೆ
ಎಲ್ಲಾ ಕಸರತ್ತು ಬಳಿಕ ನಟ ವಿಜಯ್ ಟಿವಿಕೆ ಪಕ್ಷ 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡುತ್ತಿದೆ. ನಾಳೆ 3.45ಕ್ಕೆ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
India Latest News Live 9 May 2026ಹೋಟೆಲ್, ಟಿಕೆಟ್ಗೂ ಚೌಕಾಸಿ ಮಾಡ್ತಾರೆ, ಅಲ್ಲಿ ಗೌರವ ಸಿಗಲ್ಲ - ಬಾಲಿವುಡ್ ಅನುಭವ ಬಿಚ್ಚಿಟ್ಟ ನಟಿ ಸಿಮ್ರಾನ್!
ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ನಟಿ ಸಿಮ್ರಾನ್, ಪ್ರೇಕ್ಷಕರ ಹಾಟ್ ಫೇವರಿಟ್. ಬಾಲಿವುಡ್ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ, ಸಿಮ್ರಾನ್ ಹೆಚ್ಚು ಸಕ್ರಿಯರಾಗಿದ್ದು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ.
India Latest News Live 9 May 2026ರೈಲಿನಲ್ಲಿ ಅಜ್ಜನ ಪಕ್ಕ ಮಲಗಿದ್ದ 6 ವರ್ಷ ಬಾಲಕಿ ಮೇಲೆ ಲೈ0ಗಿಕ ದೌರ್ಜನ್ಯ, ಆರೋಪಿ ಅರೆಸ್ಟ್
ಸೀಟು ಸಿಗದೆ ಅಜ್ಜನ ಪಕ್ಕ ರೈಲು ಕೋಚ್ನ ನೆಲದಲ್ಲಿ ಮಲಗಿದ್ದ 6 ವರ್ಷದ ಬಾಲಕಿ ಮೇಲೆ ಲೈ0ಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಘಟನೆ ಸಂಬಂಧ 40ರ ಹರೆಯದ ಆರೋಪಿಯನ್ನು ಬಂಧಿಸಲಾಗಿದೆ.
India Latest News Live 9 May 2026Drishyam 3 - 'ಪ್ರತಿ ಹುಟ್ಟುಹಬ್ಬಕ್ಕೂ ಸಿನಿಮಾ ರಿಲೀಸ್ ಮಾಡೋಕಾಗಲ್ಲ, ಇದು ಸ್ಪೆಷಲ್' - ಮೋಹನ್ಲಾಲ್
ಚಿತ್ರರಂಗದಲ್ಲಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿರುವ ಸಿನಿಮಾ ಅಂದ್ರೆ ಅದು ಮೋಹನ್ಲಾಲ್-ಜೀತು ಜೋಸೆಫ್ ಜೋಡಿಯ 'ದೃಶ್ಯಂ 3'. ಈ ಸಿನಿಮಾ ಮೇ 21 ರಂದು ಮೋಹನ್ಲಾಲ್ ಅವರ ಹುಟ್ಟುಹಬ್ಬದ ದಿನದಂದೇ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ.
India Latest News Live 9 May 2026ಧುರಂಧರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ - ಮೂರನೇ ಭಾಗದ ಬಗ್ಗೆ ಸುಳಿವು ಕೊಟ್ಟ ಸಹ ನಿರ್ಮಾಪಕಿ!
ರಣವೀರ್ ಸಿಂಗ್ ನಟನೆಯ ಧುರಂಧರ್-1 ಚಿತ್ರ ಹಿಟ್ ಆಗಿದೆ. ಧುರಂಧರ್-2 ಚಿತ್ರವೂ ಸೂಪರ್ ಡ್ಯೂಪರ್ ಹಿಟ್ ಆಗಿದೆ. ಇದೀಗ ಮುಂದಿನ ಭಾಗದ ಬಗ್ಗೆ ಸಹ ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಸುಳಿವು ಕೊಟ್ಟಿದ್ದಾರೆ.
India Latest News Live 9 May 2026ಅಲ್ಲು ಕುಟುಂಬದಿಂದ ಪುಷ್ಪ 2 ಸಂತ್ರಸ್ತನ ಭೇಟಿ, ಕಾಲ್ತುಳಿತದಲ್ಲಿ ಗಾಯಗೊಂಡ ಶ್ರೀತೇಜ್ ಹೆಸರಲ್ಲಿ 2 ಕೋಟಿ ಠೇವಣಿ!
India Latest News Live 9 May 2026ನಟ ವಿಜಯ್ ಭೇಟಿಗೆ ರಾಜ್ಯಪಾಲರ ಅವಕಾಶ, ನಾಳೆ ಸಿಎಂ ಆಗಿ ಪ್ರಮಾಣಚವನ ಸಾಧ್ಯತೆ
ತಮಿಳುನಾಡು ರಾಜ್ಯಪಾಲರು ತಮ್ಮ ಕೇರಳ ಪ್ರವಾಸ ರದ್ದು ಮಾಡಿ ನಟ ವಿಜಯ್ ಜೊಸೆಫ್ ಭೇಟಿಗೆ ಸಮಯ ನೀಡಿದ್ದಾರೆ. ನಾಳೆ ನಟ ವಿಜಯ್ ಜೊಸೆಫ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
India Latest News Live 9 May 2026ಸರ್ಕಾರ ರಚನೆ, ಪ್ರಮಾಣವಚನ ನಡುವೆ ರಾಜಕೀಯ ಬಿರುಗಾಳಿ, ಸಚಿವ ಸಂಜೀವ್ ಅರೋರಾ ಅರೆಸ್ಟ್
ಸರ್ಕಾರ ರಚನೆ ಕಸರತ್ತು, ಪ್ರಮಾಣವಚನ ಸಂಭ್ರಮಗಳ ನಡುವೆ ರಾಜಕೀಯ ಬಿರುಗಾಳಿ ಎದ್ದಿದೆ. ಬರೋಬ್ಬರಿ 100 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಪ್ ಸಚಿವ ಅರೆಸ್ಟ್ ಆಗಿದ್ದಾರೆ.
India Latest News Live 9 May 2026ರಾಜಕೀಯದ ಹುಚ್ಚು ಹಿಡಿಸಿದ್ದ ಅಪ್ಪನ ವಿರುದ್ಧವೇ ತಿರುಗಿ ನಿಂತ ವಿಜಯ್, ತಂದೆ ಪಕ್ಷ ವಿರೋಧಿಸಿ, ಟಿವಿಕೆ ಕಟ್ಟಿದ ಕಥೆ!
India Latest News Live 9 May 2026ನಟ ವಿಜಯ್ ಸರ್ಕಾರ ರಚನೆ ಖಚಿತ ಬೆನ್ನಲ್ಲೇ ಎಐಎಡಿಎಂಕೆ 30 ಬಂಡಾಯ ಶಾಸಕರ ಮಹತ್ವದ ಸಭೆ
ವಿಸಿಕೆ ಬೆಂಬಲ ಘೋಷಿಸಿದ ಬೆನ್ನಲ್ಲೇ ನಟ ವಿಜಯ್ ಅವರ ಟಿವಿಕೆ ಸರ್ಕಾರ ರಚನೆ ಹಾದಿ ಸುಗಮಗೊಂಡಿದೆ. ಆದರೆ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಇದೀಗ ಎಐಎಡಿಎಂಕೆಯ 30 ಬಂಡಾಯ ನಾಯಕರು ಇಪಿಎಸ್ ಮನೆಗೆ ದೌಡಾಯಿಸಿದ್ದಾರೆ.
India Latest News Live 9 May 2026ಸರ್ಕಾರ ರಚಿಸಲು ಎಲ್ಲರ ಬೆಂಬಲ ಪಡೆದ ದಳಪತಿ ವಿಜಯ್, ಆದ್ರೆ ಪ್ರತಿಜ್ಞಾವಿಧಿ ಬೋಧಿಸೋಕೆ ರಾಜ್ಯಪಾಲರೇ ಇರಲ್ಲ!
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್, ವಿಸಿಕೆ ಹಾಗೂ ಐಯುಎಂಎಲ್ ಬೆಂಬಲ ನೀಡಿವೆ, ಇದರಿಂದ ಶಾಸಕರ ಬಲ 120ಕ್ಕೆ ಏರಿದೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಂಜೆ 6 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.