ಸರ್ಕಾರ ರಚಿಸಲು ಬೇಕಾದ ಬಹುಮತವಿಲ್ಲದೆ ನಟ ವಿಜಯ್ ಅವರ ಟಿವಿಕೆ ಪಕ್ಷ ಹೆಣಗಾಡುತ್ತಿರುವಾಗ, ಎಎಂಎಂಕೆ ಶಾಸಕರ ಬೆಂಬಲ ಪತ್ರ ನಕಲಿ ಎಂದು ಟಿಟಿವಿ ದಿನಕರನ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಎಎಂಎಂಕೆ ಶಾಸಕರು ಪ್ರಜ್ಞಾಪೂರ್ವಕವಾಗಿಯೇ ಪತ್ರಕ್ಕೆ ಸಹಿ ಮಾಡಿದ್ದಾರೆ ಎಂದು ಟಿವಿಕೆ ವಿಡಿಯೋ ಬಿಡುಗಡೆ ಮಾಡಿದೆ.
- Home
- News
- India News
- India Latest News Live: ಬಹುಮತ ಸಾಬೀತಿಗೆ ಹೆಣಗಾಡ್ತಿರೋ ವಿಜಯ್ಗೆ ಮತ್ತೊಂದು ಆಘಾತ; ರಾತ್ರಿಯೇ ಲೋಕಭವನಕ್ಕೆ ದೌಡಾಯಿಸಿದ TTV ದಿನಕರನ್
India Latest News Live: ಬಹುಮತ ಸಾಬೀತಿಗೆ ಹೆಣಗಾಡ್ತಿರೋ ವಿಜಯ್ಗೆ ಮತ್ತೊಂದು ಆಘಾತ; ರಾತ್ರಿಯೇ ಲೋಕಭವನಕ್ಕೆ ದೌಡಾಯಿಸಿದ TTV ದಿನಕರನ್

ಕೋಲ್ಕತಾ: ‘ಚುನಾವಣೆ ವೇಳೆ ಪಕ್ಷವು ಕೊಟ್ಟಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ’ ಎಂದು ಪ.ಬಂಗಾಳದ ನಿಯೋಜಿತ ಸಿಎಂ ಸುವೇಂದು ಅಧಿಕಾರಿ ಭರವಸೆ ನೀಡಿದ್ದಾರೆ.

ಸಿಎಂ ಹುದ್ದೆಗೆ ತಮ್ಮ ಆಯ್ಕೆಯ ಬಳಿಕ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ರಾಜ್ಯದಲ್ಲೀಗ ಭಯವು ಹೋಗಿ ಭರವಸೆ ಬಂದಿದೆ. ಬಂಗಾಳದ ಜನ ನಮಗೆ ಐತಿಹಾಸಿಕ ಜನಾದೇಶ ನೀಡಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.
‘ನಮ್ಮ ಪ್ರಣಾಳಿಕೆಯಲ್ಲಿದ್ದ ಎಲ್ಲಾ ಭರವಸೆಗಳನ್ನು ಪೂರ್ಣಗೊಳಿಸುತ್ತೇವೆ. ಬಂಗಾಳ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಕೆಲಸ ಮಾಡುವುದು ಅತ್ಯಗತ್ಯ’ ಎನ್ನುವ ಮೂಲಕ ಡಬಲ್ ಎಂಜಿನ್ ಸರ್ಕಾರ ಉತ್ತಮ ಆಡಳಿತ ಕೊಡಲಿದೆ ಎಂಬ ವಾಗ್ದಾನವನ್ನೂ ಅಧಿಕಾರಿ ಮಾಡಿದರು.
India Latest News Live 9 May 2026ಬಹುಮತ ಸಾಬೀತಿಗೆ ಹೆಣಗಾಡ್ತಿರೋ ವಿಜಯ್ಗೆ ಮತ್ತೊಂದು ಆಘಾತ; ರಾತ್ರಿಯೇ ಲೋಕಭವನಕ್ಕೆ ದೌಡಾಯಿಸಿದ TTV ದಿನಕರನ್
India Latest News Live 9 May 2026ಹೋರ್ಮುಜಲ್ಲಿ ಮತ್ತೆ ಇರಾನ್, ಅಮೆರಿಕ ಪರಸ್ಪರ ಗುಂಡೇಟು; ಇರಾನಿಂದ ಕ್ಷಿಪಣಿ ದಾಳಿ - UAE ಆರೋಪ
ಕದನ ವಿರಾಮದ ನಡುವೆಯೂ, ಅಮೆರಿಕ ಮತ್ತು ಇರಾನ್ ಹೋರ್ಮುಜ್ ಜಲಸಂಧಿಯಲ್ಲಿ ಪರಸ್ಪರ ದಾಳಿ ನಡೆಸಿವೆ. ಎರಡೂ ದೇಶಗಳು ದಾಳಿಯ ಬಗ್ಗೆ ಪರಸ್ಪರ ಆರೋಪ ಮಾಡುತ್ತಿದ್ದು, ಯುಎಇ ಕೂಡ ಇರಾನ್ನಿಂದ ದಾಳಿಯಾಗಿದೆ ಎಂದು ವರದಿ ಮಾಡಿದೆ.