10:09 PM (IST) Aug 04

India Latest News Live 4 August 2026BREAKING - ತಮಿಳಿನ ಗಜನಿ, ಕನ್ನಡದ ಗಜ, ಬಚ್ಛನ್‌ ಸಿನಿಮಾಗಳ ಫೇಮಸ್‌ ವಿಲನ್‌ ಪ್ರದೀಪ್ ರಾವತ್‌ ಇನ್ನಿಲ್ಲ

'ಲಗಾನ್', 'ಗಜನಿ' ಹಾಗೂ ಕನ್ನಡದ 'ಗಜ' ಚಿತ್ರಗಳ ಖ್ಯಾತ ಖಳನಟ ಪ್ರದೀಪ್ ರಾವತ್ (74) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು, ಅವರ ಅಗಲಿಕೆಗೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.
Read Full Story
09:50 PM (IST) Aug 04

India Latest News Live 4 August 2026ರಶ್ಮಿಕಾ ಮಂದಣ್ಣರಂತೆ ಗ್ಲಾಮರಸ್ ಆಗಿ ಕಾಣಬೇಕಾ? ಹಬ್ಬಕ್ಕೆ ಈ ದೇಸಿ ಔಟ್‌ಫಿಟ್‌ಗಳನ್ನು ಟ್ರೈ ಮಾಡಿ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಸ್ಟೈಲ್ ಇಷ್ಟಾನಾ? ಹಾಗಿದ್ರೆ, ಹಬ್ಬದ ಸೀಸನ್‌ಗೆ ಅವರ ಬೆಸ್ಟ್ ದೇಸಿ ಉಡುಪುಗಳ ಕಲೆಕ್ಷನ್ ಇಲ್ಲಿದೆ ನೋಡಿ. ಇನ್ನಷ್ಟು ತಿಳಿಯಲು ಮುಂದೆ ಓದಿ.

Read Full Story
08:14 PM (IST) Aug 04

India Latest News Live 4 August 2026Unbelievable Record - ಊಹಿಸಲಾಗದ ಹೊಸ ದಾಖಲೆ ಬರೆದ 'ರಾಮಾಯಣ'.. ಯಶ್ ಚಿತ್ರದ ಈ ಸಾಧನೆ ಎಂಥದ್ದು ಗೊತ್ತಾ?

‘ರಾಮಾಯಣ-1 ಚಿತ್ರವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ಅದ್ದೂರಿಯಾಗಿ ತೆರೆಕಾಣಲಿದೆ. ಕೇವಲ ಭಾರತೀಯರಷ್ಟೇ ಅಲ್ಲದೆ, ಇಡೀ ವಿಶ್ವದ ಸಿನಿಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿರುವ 'ರಾಮಾಯಣ' ಚಿತ್ರವು ಅಂತರರಾಷ್ಟ್ರೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತವಾಗಿದೆ.

Read Full Story
07:01 PM (IST) Aug 04

India Latest News Live 4 August 2026‘ದೇಸಿ ಗರ್ಲ್’ನಿಂದ ‘ದೇಸಿ ಮಮ್ಮಾ’ವರೆಗೆ - ಮಗಳ ಜೊತೆ ಪ್ರಿಯಾಂಕಾ ಚೋಪ್ರಾ ಡಬಲ್ ಅವತಾರ ವೈರಲ್!

ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತಮ್ಮದೇ ಛಾಪು ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಬಾರಿ ಯಾವುದೇ ಸಿನಿಮಾ ಅಪ್‌ಡೇಟ್‌ಗಿಂತ..

Read Full Story
06:58 PM (IST) Aug 04

India Latest News Live 4 August 2026ರೈಲು ಪ್ರಯಾಣಿಕರ ಗಮನಕ್ಕೆ - ತತ್ಕಾಲ್​ ಟಿಕೆಟ್​ ನಿಯಮ ಬದಲು; ಕೂಡಲೇ ಜಾರಿ- ಏನಿದು ಹೊಸ ರೂಲ್ಸ್​

ಆಗಸ್ಟ್ 1, 2026 ರಿಂದ, ಭಾರತೀಯ ರೈಲ್ವೆಯು ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕೌಂಟರ್‌ಗಳಲ್ಲಿ ಟೋಕನ್ ವ್ಯವಸ್ಥೆ ಮತ್ತು ಆನ್‌ಲೈನ್ ಬುಕಿಂಗ್‌ಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವುದು ಪ್ರಮುಖ ಬದಲಾವಣೆಗಳಾಗಿವೆ. ಈ ಬದಲಾವಣೆಗಳು ಪ್ರಯಾಣಿಕರ ಅನುಭವದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಈ ಲೇಖನವು ವಿವರಿಸುತ್ತದೆ.
Read Full Story
06:11 PM (IST) Aug 04

India Latest News Live 4 August 2026ಹೊಸ ಕಾರು, ಬೈಕ್‌ಗಳ ಇನ್ಶೂರೆನ್ಸ್ ಅವಧಿ ಒಂದು ವರ್ಷ ಹೆಚ್ಚಿಸಿದ ಸುಪ್ರೀಂ ಕೋರ್ಟ್‌!

ರಸ್ತೆ ಅಪಘಾತ ಸಂತ್ರಸ್ತರಿಗೆ ಪರಿಹಾರ ಖಚಿತಪಡಿಸಲು, ಸುಪ್ರೀಂ ಕೋರ್ಟ್ ಹೊಸ ಕಾರುಗಳಿಗೆ 4 ವರ್ಷ ಮತ್ತು ದ್ವಿಚಕ್ರ ವಾಹನಗಳಿಗೆ 6 ವರ್ಷಗಳ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯಗೊಳಿಸಿದೆ. ದೇಶದಲ್ಲಿ ಶೇ. 56ರಷ್ಟು ವಾಹನಗಳು ವಿಮೆ ಇಲ್ಲದೆ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ ಆದೇಶವನ್ನು ನೀಡಲಾಗಿದೆ.

Read Full Story
06:02 PM (IST) Aug 04

India Latest News Live 4 August 202610 Rupee Note - ₹10 ನೋಟಿನ ಮೇಲೆ ಆನೆ, ಜಿಂಕೆ, ಖಡ್ಗಮೃಗ ಯಾಕಿವೆ? ಇದರ ಹಿಂದಿನ ಕಾರಣ ಇಲ್ಲಿದೆ ನೋಡಿ!

ನಾವು ಪ್ರತಿದಿನ ಬಳಸುವ ₹10 ನೋಟಿನ ಹಿಂಭಾಗದಲ್ಲಿರುವ ಚಿತ್ರಗಳನ್ನು ಎಂದಾದರೂ ಗಮನಿಸಿದ್ದೀರಾ? ಆನೆ, ಜಿಂಕೆ ಮತ್ತು ಖಡ್ಗಮೃಗದ ಚಿತ್ರಗಳು ಅಲ್ಲಿ ಯಾಕಿವೆ? ಇದರ ಹಿಂದಿನ ಕಾರಣವೇನು? ಈ ಪ್ರಾಣಿಗಳ ಚಿತ್ರಗಳನ್ನೇ ಏಕೆ ಬಳಸಲಾಗಿದೆ?

Read Full Story
05:56 PM (IST) Aug 04

India Latest News Live 4 August 2026‘ನನ್ನ ಫೋಟೋ ಬಳಸಿ ಏನು ಮಾಡ್ತಿದ್ದೀರಿ?’ - ಡೀಪ್‌ಫೇಕ್ ವಿರುದ್ಧ ನಟಿ ಮೃಣಾಲ್ ಠಾಕೂರ್ ಕಿಡಿ

ನಟಿ ಮೃಣಾಲ್ ಠಾಕೂರ್ ತಮ್ಮ ಫೋಟೋ, ವಿಡಿಯೋ ಬಳಸಿ ಡೀಪ್‌ಫೇಕ್ ಕಂಟೆಂಟ್ ಸೃಷ್ಟಿಸುವವರ ವಿರುದ್ಧ ಗರಂ ಆಗಿದ್ದಾರೆ. ಇಂತಹ ಕೃತ್ಯಗಳನ್ನು ತಕ್ಷಣ ನಿಲ್ಲಿಸುವಂತೆ ಲೀಗಲ್ ನೋಟಿಸ್ ನೀಡಿದ್ದು, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Read Full Story
05:33 PM (IST) Aug 04

India Latest News Live 4 August 2026ಸ್ಟಾಲಿನ್​ ಬಾಯಲ್ಲಿ ಬಂದದ್ದು ಕಾವೇರಿ, ನಟಿ ತ್ರಿಶಾ ಎಲ್ಲಿ ಬಂದ್ರು? ತಮಿಳುನಾಡಲ್ಲಿ ಸಂಚಲನ ಸೃಷ್ಟಿಸಿದ ಅರೆಸ್ಟ್​ ವಿವಾದ

ಕಾವೇರಿ ಪ್ರತಿಭಟನೆಯಲ್ಲಿ ಉದಯನಿಧಿ ಸ್ಟಾಲಿನ್ ನೀಡಿದರೆನ್ನಲಾದ ಪರೋಕ್ಷ ಹೇಳಿಕೆ ನಟಿ ತ್ರಿಶಾ ಅವರ ಹೆಸರಿನೊಂದಿಗೆ ತಳುಕುಹಾಕಿಕೊಂಡು ವಿವಾದಕ್ಕೆ ಕಾರಣವಾಗಿದೆ. ತ್ರಿಶಾ ಹೆಸರನ್ನೇ ಉಲ್ಲೇಖಿಸದಿದ್ದರೂ ಸ್ಟಾಲಿನ್ ಅವರನ್ನು ಬಂಧಿಸಲಾಗಿದೆ ಎಂದು ಡಿಎಂಕೆ ಆರೋಪಿಸಿದ್ದು, ಅವರ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.
Read Full Story
05:10 PM (IST) Aug 04

India Latest News Live 4 August 2026ಟಾಟಾ ಸಮೂಹದ ಈ ಕಂಪನಿಯಲ್ಲಿ ಟಾಟಾಗಿಂತ ತಮಿಳುನಾಡು ಸರ್ಕಾರದ್ದೇ ಇದೆ ಹೆಚ್ಚಿನ ಪಾಲು, ಸಿಕ್ತು 371 ಕೋಟಿ ಡಿವಿಡೆಂಡ್‌!

ಟೈಟಾನ್ ಕಂಪನಿಯಲ್ಲಿ ಟಾಟಾ ಸಮೂಹಕ್ಕಿಂತಲೂ ತಮಿಳುನಾಡು ಸರ್ಕಾರದ 'ಟಿಡ್ಕೋ' ಸಂಸ್ಥೆಯು ಹೆಚ್ಚಿನ ಶೇರುಗಳನ್ನು ಹೊಂದಿದೆ. 1984ರಲ್ಲಿ ಜಂಟಿ ಉದ್ಯಮವಾಗಿ ಪ್ರಾರಂಭವಾದ ಈ ಕಂಪನಿಯಲ್ಲಿ, ಟಿಡ್ಕೋ ಇಂದು ಶೇ. 27.88ರಷ್ಟು ಪಾಲುದಾರಿಕೆ ಹೊಂದಿದೆ.

Read Full Story
05:08 PM (IST) Aug 04

India Latest News Live 4 August 2026ಅದು ಈಗ ಬಿಗ್ ಬಾಸ್‌ನಲ್ಲಿ ಆಗಲಿದೆ... ತಥಾಸ್ತು - ಕುದುರೆ ಮೇಲೆ ಬಂದಿದ್ಯಾಕೆ ಸಲ್ಮಾನ್ ಖಾನ್!

ಹಿಂದಿ ಬಿಗ್ ಬಾಸ್ ಸೀಸನ್ 20ರ ಮೊದಲ ಟೀಸರ್ ಹೊರಬಂದಿದೆ. ಸಲ್ಮಾನ್ ಖಾನ್ ಮತ್ತೊಮ್ಮೆ ಹೋಸ್ಟ್ ಆಗಿ ಕಂಬ್ಯಾಕ್ ಮಾಡಿದ್ದಾರೆ. ಈ ಶೋ ಸೆಪ್ಟೆಂಬರ್ 6 ರಿಂದ ಜಿಯೋಹಾಟ್‌ಸ್ಟಾರ್ ಮತ್ತು ಕಲರ್ಸ್‌ನಲ್ಲಿ ಪ್ರಸಾರವಾಗಲಿದೆ.

Read Full Story
04:48 PM (IST) Aug 04

India Latest News Live 4 August 2026iPhone ಕಳ್ಳಿ! ನೋಡಿ ನೋಡಿ ಹೆಂಗೆ ಐಫೋನ್-13 ಕದಿಯುತ್ತಾಳೆ ಅಂತಾ -VIDEO

ಕೊಯಮತ್ತೂರಿನ ಮೊಬೈಲ್ ಅಂಗಡಿಯೊಂದರಲ್ಲಿ, ಗ್ರಾಹಕಿಯಂತೆ ನಟಿಸಿದ ಯುವತಿಯೊಬ್ಬಳು ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಐಫೋನ್ 13 ಅನ್ನು ಕದ್ದಿದ್ದಾಳೆ. ಈಕೆಯ ಚಾಲಾಕಿ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.
Read Full Story
04:38 PM (IST) Aug 04

India Latest News Live 4 August 2026ನಕ್ಷತ್ರವನ್ನು ಭಕ್ಷಿಸಿ ಅರ್ಧದಷ್ಟನ್ನು ಕಕ್ಕುವ ಕಪ್ಪು ಕುಳಿಗಳು! ವಿಜ್ಞಾನಿಗಳು ಕಂಡ ಖಗೋಳದ ವಿಸ್ಮಯಕಾರಿ ಸತ್ಯ!

ಖಗೋಳಶಾಸ್ತ್ರಜ್ಞರು 'ಸ್ವಿಫ್ಟ್ J1727.8-1613' ಎಂಬ ಕಪ್ಪು ಕುಳಿಯು ನಕ್ಷತ್ರವನ್ನು ಭಕ್ಷಿಸುವ ಪ್ರಕ್ರಿಯೆಯನ್ನು ಅಧ್ಯಯನ ಮಾಡಿದ್ದಾರೆ. ಈ ಅವಲೋಕನದ ಪ್ರಕಾರ, ಕಪ್ಪು ಕುಳಿಗಳು ತಮ್ಮತ್ತ ಸೆಳೆಯುವ ವಸ್ತುವಿನ ಬಹುಭಾಗವನ್ನು ಬಾಹ್ಯಾಕಾಶಕ್ಕೆ ವಾಪಸ್ ಎಸೆಯುತ್ತವೆ ಎಂಬುದು ತಿಳಿದುಬಂದಿದೆ. ಈ ಸಂಶೋಧನೆಯು ಕಪ್ಪು ಕುಳಿಗಳು ಅಂದುಕೊಂಡಷ್ಟು ಸಮರ್ಥ 'ಭಕ್ಷಕ'ಗಳಲ್ಲ ಎಂಬುದನ್ನು ಸಾಬೀತುಪಡಿಸಿದೆ.
Read Full Story
04:14 PM (IST) Aug 04

India Latest News Live 4 August 2026ಬಾಹ್ಯಾಕಾಶದಿಂದ ಭೂಮಿಯ ‘ಪ್ರೇಮ ಸಂದೇಶ’, ಹೃದಯಾಕಾರದ ಸರೋವರದ ಅಪರೂಪದ ಚಿತ್ರ ಕ್ಲಿಕ್ಕಿಸಿದ ಗಗನಯಾತ್ರಿ!

ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿ ಸೋಫಿ ಅಡೆನೋಟ್, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆಹಿಡಿದ ಹೃದಯಾಕಾರದ ಸರೋವರದ ಫೋಟೋವನ್ನು ಹಂಚಿಕೊಂಡಿದ್ದಾರೆ. ವೈಜ್ಞಾನಿಕವಾಗಿ ಇದು 'ಪ್ಯಾರಿಡೋಲಿಯಾ' ಎಂಬ ಭ್ರಮೆಯಾದರೂ, ಭೂಮಿಯು ನಮಗೆ ಪ್ರೀತಿಯ ಸಂದೇಶ ಕಳುಹಿಸುತ್ತಿದೆ ಎಂದು ಅವರು ಭಾವನಾತ್ಮಕವಾಗಿ ಬರೆದಿದ್ದು, ಈ ಚಿತ್ರವು ಭೂಮಿಯ ಸೌಂದರ್ಯವನ್ನು ರಕ್ಷಿಸುವ ಅಗತ್ಯವನ್ನು ನೆನಪಿಸುತ್ತದೆ.
Read Full Story
04:07 PM (IST) Aug 04

India Latest News Live 4 August 2026ಬಾಲಿಯಲ್ಲಿ ಭೇಟಿ, ಜರ್ಮನಿಯಲ್ಲಿ ಪ್ರೀತಿ! ಇಂಡಿಯನ್ ಯೂಟ್ಯೂಬರ್ ಲವ್ ಸ್ಟೋರಿ ವೈರಲ್

ಭಾರತದ ಯೂಟ್ಯೂಬರ್ ಅಭಿನವ್ ರೆಡ್ಡಿ ಮತ್ತು ಜರ್ಮನಿಯ ಪ್ರವಾಸಿಗ ಯುವತಿ ಸಫೀರಾ ಇಂಡೋನೇಷ್ಯಾದ ಬಾಲಿಯಲ್ಲಿ ಅಚಾನಕ್ಕಾಗಿ ಭೇಟಿಯಾಗುತ್ತಾರೆ. ಇವರ ಸ್ನೇಹ ಪ್ರೀತಿಗೆ ತಿರುಗಿ, ಇಬ್ಬರೂ ಒಟ್ಟಿಗೆ ಪ್ರಯಾಣಿಸುತ್ತಾ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜರ್ಮನಿಯ ಹಳ್ಳಿಯಲ್ಲಿನ ಅಭಿನವ್ ಅವರ ಅನುಭವ ಮತ್ತು ಇವರ ಪ್ರೇಮಕಥೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Read Full Story
03:37 PM (IST) Aug 04

India Latest News Live 4 August 2026LIC ಪಾಲು ಮಾರಾಟ ಮಾಡಿ 31 ಸಾವಿರ ಕೋಟಿ ಆದಾಯಕ್ಕೆ ಮುಂದಾದ ಕೇಂದ್ರ ಸರ್ಕಾರ, ಭಾರೀ ಪ್ರಮಾಣದಲ್ಲಿ ಕುಸಿದ ಷೇರು ಬೆಲೆ!

ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಶೇ. 6.5ರಷ್ಟು ಪಾಲನ್ನು ಆಫರ್ ಫಾರ್ ಸೇಲ್ (OFS) ಮೂಲಕ ಮಾರಾಟ ಮಾಡಲು ನಿರ್ಧರಿಸಿದೆ. ಈ ನಿರ್ಧಾರದಿಂದ ಎಲ್‌ಐಸಿ ಶೇರು ಮೌಲ್ಯದಲ್ಲಿ ಕುಸಿತ ಉಂಟಾಗಿದೆ.

Read Full Story
03:27 PM (IST) Aug 04

India Latest News Live 4 August 2026ಭಾರತೀಯ ರಿಯಲ್ ಎಸ್ಟೇಟ್‌ನಿಂದ NRIಗಳು ಹಿಂದಕ್ಕೆ - ಆಸ್ತಿ ಮಾರಾಟದಲ್ಲಿ ಮಹಾರಾಷ್ಟ್ರ ಪ್ರಥಮ, ಕರ್ನಾಟಕ 5ನೇ ಸ್ಥಾನ!

ಅನಿವಾಸಿ ಭಾರತೀಯರು (NRI) ಭಾರತದಲ್ಲಿನ ತಮ್ಮ ರಿಯಲ್ ಎಸ್ಟೇಟ್ ಆಸ್ತಿಗಳನ್ನು, ವಿಶೇಷವಾಗಿ ಮಹಾರಾಷ್ಟ್ರದಲ್ಲಿ, ಮಾರಾಟ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. 'ರೆಮಿಟರ್ ವಾರ್ಷಿಕ ಎನ್‌ಆರ್‌ಐ ವೆಲ್ತ್ ರಿಪೋರ್ಟ್ 2026' ಪ್ರಕಾರ, ಇದು ಆತಂಕದ ಮಾರಾಟವಲ್ಲ, ಬದಲಾಗಿ ವಿದೇಶಗಳಲ್ಲಿನ ತಮ್ಮ ಆರ್ಥಿಕ ಗುರಿಗಳನ್ನು ಪೂರೈಸಲು ಕೈಗೊಂಡ ಯೋಜಿತ ಸಂಪತ್ತು ಹಂಚಿಕೆಯಾಗಿದೆ.

Read Full Story
03:25 PM (IST) Aug 04

India Latest News Live 4 August 2026Udaynidhi stalin - ನಟಿ ತ್ರೀಷಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ, ಉದಯನಿಧಿ ಬಂಧನ ಕುರಿತಂತೆ ಮದ್ರಾಸ್ ಹೈಕೋರ್ಟ್ ಮಹತ್ವ ತೀರ್ಪು

ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಹಿನ್ನೆಲೆ ಬಂಧನಕ್ಕೊಳಗಾಗಿರುವ ತಮಿಳುನಾಡು ಮಾಜಿ ಉಪಮುಖ್ಯಮಂತ್ರಿ, ಮಾಜಿ ಸಚಿವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಕುರಿತಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Read Full Story
03:23 PM (IST) Aug 04

India Latest News Live 4 August 2026ದಶಗಳಿಂದ ಮುಳುಗಿದ್ದ ರಂಗನಾಥ ದೇವಸ್ಥಾನ ಬರಗಾಲದಿಂದ ಪ್ರತ್ಯಕ್ಷ, ಈಗಲೂ ಕೇಳಿಸುತ್ತಿದೆ ಗಂಟೆ ನಾದ

ದಶಕಗಳಿಂದ ಮುಳುಗಿದ್ದ ಪವಿತ್ರ ಬಾತು ಕಿ ಲಡಿ ದೇವಸ್ಥಾನ, ದೇಶದ ಬರಗಾಲ,ಮಳೆ ಕೊರತೆಯಿಂದ ಪ್ರತ್ಯಕ್ಷಗೊಂಡಿದೆ. ವಿಶೇಷ ಅಂದರೆ ಇಲ್ಲಿ ಪೂಜೆ ನಡೆಯದೇ ದಶಕಗಳೇ ಕಳೆದರೂ ಈಗಲೂ ಗಂಟೆ ಶಬ್ದ ಕೇಳಿಸುತ್ತಿದೆ.

Read Full Story
03:12 PM (IST) Aug 04

India Latest News Live 4 August 2026ತಮಿಳುನಾಡಿನಲ್ಲಿ ಮರುಕಳಿಸಿದ ಇತಿಹಾಸ! ಅಂದು ಕರುಣಾನಿಧಿ-ಜಯಲಲಿತಾ, ಇಂದು ವಿಜಯ್ vs ಉದಯನಿಧಿ!

ತಮಿಳುನಾಡು ರಾಜಕೀಯದಲ್ಲಿ ಕರುಣಾನಿಧಿ ಮತ್ತು ಜಯಲಲಿತಾ ನಡುವಿನ ಸೇಡಿನ ಇತಿಹಾಸ ಮತ್ತೆ ಮರುಕಳಿಸುತ್ತಿದೆ. ನಟ ವಿಜಯ್ ಮುಖ್ಯಮಂತ್ರಿಯಾದ ನಂತರ ಉದಯನಿಧಿ ಸ್ಟಾಲಿನ್ ಮತ್ತು ಅವರ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ. ಇತ್ತೀಚಿನ ಉದಯನಿಧಿ ಬಂಧನ ಮತ್ತು ತ್ರಿಶಾ ಕಮೆಂಟ್ ವಿವಾದವು ದ್ರಾವಿಡ ನೆಲದಲ್ಲಿ ಹೊಸ ರಾಜಕೀಯ ಸಮರಕ್ಕೆ ಸಾಕ್ಷಿಯಾಗಿದೆ. ಪೂರ್ಣ ವಿವರಗಳಿಗಾಗಿ ಈ ಲೇಖನ ಓದಿ.

Read Full Story