- Home
- News
- India News
- India Latest News Live: ಮುಂಗಾರು ಮಳೆ ಪವಾಡ - 1997ರ ರೀತಿ ವಿದ್ಯಮಾನದ ಸುಳಿವು, ವಿಶ್ವ ಹವಾಮಾನ ಸಂಸ್ಥೆ ವರದಿ
LIVE NOW
India Latest News Live: ಮುಂಗಾರು ಮಳೆ ಪವಾಡ - 1997ರ ರೀತಿ ವಿದ್ಯಮಾನದ ಸುಳಿವು, ವಿಶ್ವ ಹವಾಮಾನ ಸಂಸ್ಥೆ ವರದಿ

ಸಾರಾಂಶ
ಚೆನ್ನೈ: ಕರ್ನಾಟಕದ ಕಬಿನಿ ಜಲಾಶಯದಿಂದ ತಮಿಳುನಾಡಿಗೆ 12000 ಕ್ಯುಸೆಕ್ನಷ್ಟು ನೀರು ಹರಿದುಬರುತ್ತಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸರ್ಕಾರ, ನಮಗೆ ಅಷ್ಟು ಸಾಲದು ಎಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನೂನು ಖಾತೆ ಸಚಿವ ನಿರ್ಮಲ್ ಕುಮಾರ್, ‘ನಮಗೆ 12000 ಕ್ಯುಸೆಕ್ ನೀರು ಸಾಲದು. ನಮಗೆ ನಮ್ಮ ಪಾಲಿನ 17 ಟಿಎಂಸಿ ನೀರು ಕರ್ನಾಟಕದಿಂದ ಬೇಕು’ ಎಂದು ಹೇಳಿದ್ದಾರೆ. ಸಿಡಬ್ಲ್ಯುಆರ್ಸಿ, 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್ ನೀರು ಹರಿಸಲು ಸೂಚಿಸಿತ್ತು. ಇದೀಗ ಕಬಿನಿ ಜಲಾಶಯ ತುಂಬಿರುವ ಕಾರಣ ಹೆಚ್ಚುವರಿ ನೀರು ಕಾವೇರಿ ನದಿಗೆ ಸೇರಿಕೊಂಡು ಬಿಳಿಗೊಂಡ್ಲುವಿನ ಮೂಲಕ ತಮಿಳುನಾಡಿಗೆ ಹರಿದುಹೋಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
08:42 AM (IST) Aug 03
India Latest News Live 3 August 2026ಮುಂಗಾರು ಮಳೆ ಪವಾಡ - 1997ರ ರೀತಿ ವಿದ್ಯಮಾನದ ಸುಳಿವು, ವಿಶ್ವ ಹವಾಮಾನ ಸಂಸ್ಥೆ ವರದಿ
ಎಲ್ನಿನೋ ಪರಿಣಾಮದಿಂದ ದೇಶದಲ್ಲಿ ಮಳೆ ಕೊರತೆ ಉಂಟಾಗಿದೆ. ಆದರೆ, ವಿಶ್ವ ಹವಾಮಾನ ಸಂಸ್ಥೆಯ ವರದಿ ಪ್ರಕಾರ, 'ಪಾಸಿಟಿವ್ ಇಂಡಿಯನ್ ಓಷನ್ ಡೈಪೋಲ್' (ಐಒಡಿ) ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಇದು 1997ರಂತೆ ಮುಂಗಾರಿನ ದ್ವಿತೀಯಾರ್ಧದಲ್ಲಿ ಉತ್ತಮ ಮಳೆಗೆ ಕಾರಣವಾಗಬಹುದು.
Read Full Story