ಗುಜರಾತ್ನ ಮೋರ್ಬಿಯಲ್ಲಿ, ಕೇವಲ ₹2,000 ಮನೆ ಬಾಡಿಗೆ ಪಾವತಿಸಲಾಗದ ಪತಿಯೊಬ್ಬನು, ತನ್ನ ಹೆಂಡತಿ ಮತ್ತು ಅಪ್ರಾಪ್ತ ಮಗಳನ್ನು ಮನೆ ಮಾಲೀಕನ ಲೈಂಗಿಕ ದೌರ್ಜನ್ಯಕ್ಕೆ ಒಪ್ಪಿಸಿದ್ದಾನೆ. ಈ ಘೋರ ಕೃತ್ಯವು ಬಾಲಕಿಯ ತಾತ ನೀಡಿದ ದೂರಿನಿಂದ ಬೆಳಕಿಗೆ ಬಂದಿದೆ.
- Home
- News
- India News
- India Latest News Live: ಕೇವಲ 2,000 ರೂ. ಬಾಡಿಗೆ ಬಾಕಿಗಾಗಿ ಹೆಂಡತಿ, ಅಪ್ರಾಪ್ತ ಮಗಳನ್ನು ಮಾಲೀಕನ ಮಂಚಕ್ಕೆ ಹತ್ತಿಸಿದ ಪಾಪಿ ಪತಿ!
India Latest News Live: ಕೇವಲ 2,000 ರೂ. ಬಾಡಿಗೆ ಬಾಕಿಗಾಗಿ ಹೆಂಡತಿ, ಅಪ್ರಾಪ್ತ ಮಗಳನ್ನು ಮಾಲೀಕನ ಮಂಚಕ್ಕೆ ಹತ್ತಿಸಿದ ಪಾಪಿ ಪತಿ!

ನವದೆಹಲಿ: ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ನಲ್ಲಿ ವಿವಾಹಿತ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾ*ಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕಥೆ ಕರುಳು ಹಿಂಡುವಂತಿದೆ. ಘಟನೆಯಲ್ಲಿ ಗಂಬೀರ ಗಾಯಗೊಂಡಿದ್ದರೂ ಮಹಿಳೆ ಮನೆಯಲ್ಲಿ ಮಕ್ಕಳಿಗೆ ಅಡುಗೆ ಮಾಡೋರು ಇಲ್ಲ ಎಂದು ಆಸ್ಪತ್ರೆ ಸೇರಲು ಹಿಂದೇಟು ಹಾಕಿದ್ದಾರೆ.
ಮಹಿಳೆ ದೂರಿನ ಬಳಿಕ ಪೊಲೀಸರು ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆಕೆಗೆ ಗಂಭೀರ ಗಾಯಗಳಾಗಿರುವುದು ಗೊತ್ತಾಗಿದ್ದು, ವೈದ್ಯರು ಆಸ್ಪತ್ರೆಗೆ ದಾಖಲಾಗಲು ಸಲಹೆ ನೀಡಿದ್ದಾರೆ. ಆದರೆ ಮಹಿಳೆ ಅದನ್ನು ನಿರಾಕರಿಸಿದ್ದು, ‘ನಾನು ಆಸ್ಪತ್ರೆ ಸೇರಿದ್ರೆ ಮನೆಯಲ್ಲಿ ಮಕ್ಕಳಿಗೆ ಅಡುಗೆ ಮಾಡೋದ್ಯಾರು?’ ಎಂದು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ಆಕೆ ಪತಿ ಕ್ಷಯರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.
India Latest News Live 16 May 2026ಕೇವಲ 2,000 ರೂ. ಬಾಡಿಗೆ ಬಾಕಿಗಾಗಿ ಹೆಂಡತಿ, ಅಪ್ರಾಪ್ತ ಮಗಳನ್ನು ಮಾಲೀಕನ ಮಂಚಕ್ಕೆ ಹತ್ತಿಸಿದ ಪಾಪಿ ಪತಿ!
India Latest News Live 16 May 2026ಬೆಳ್ಳಿ ಆಮದಿಗೆ ಕೇಂದ್ರದ ಬ್ರೇಕ್ - 99.9% ಶುದ್ಧತೆಯ ಬೆಳ್ಳಿ ಬಾರ್ ಆಮದಿಗೆ ಇನ್ಮುಂದೆ ಪರ್ಮಿಟ್ ಕಡ್ಡಾಯ
ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ನಿರ್ದಿಷ್ಟ ವರ್ಗದ ಬೆಳ್ಳಿ ಬಾರ್ಗಳ ಆಮದಿನ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಇದರೊಂದಿಗೆ, 'ಅಡ್ವಾನ್ಸ್ ಅಥರೈಸೇಷನ್' ಯೋಜನೆಯಡಿ ಚಿನ್ನದ ಆಮದಿಗೆ 100 ಕೆಜಿ ಮಿತಿ ನಿಗದಿಪಡಿಸಿದೆ.
India Latest News Live 16 May 2026ಕಚೇರಿಗಾಗಿ ಎಐಎಡಿಎಂಕೆ ಬಣ ಬಡಿದಾಟ, ಬೀದಿಗಿಳಿದ ಕಾರ್ಯಕರ್ತರು, ಆಫೀಸ್ಗಾಗಿ ಬೀಗವನ್ನೇ ಮುರಿದ ಬಣಗಳು!
ಎಐಎಡಿಎಂಕೆ ಪಕ್ಷದಲ್ಲಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಮತ್ತು ಸಿವಿ ಷಣ್ಮುಗಂ ಬಣಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ವಿಲ್ಲುಪುರಂ, ಕಡಲೂರು ಮುಂತಾದೆಡೆ ಪಕ್ಷದ ಕಚೇರಿಗಳ ನಿಯಂತ್ರಣಕ್ಕಾಗಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ. ಈ ಒಳಜಗಳವು ವಿಧಾನಸಭಾ ಚುನಾವಣೆಯ ನಂತರ ತೀವ್ರಗೊಂಡಿದೆ.
India Latest News Live 16 May 2026Jayam Ravi Controversy - 'ಕ್ಯಾಮೆರಾ ಜೂಮ್ ಮಾಡಿ' ಅಂತ ಹೇಳಿ 'ಜಯಂ' ರವಿ ತೋರಿಸಿದ್ದೇನು? ಕೆನಿಶಾ ಕಥೆ ಏನಾಯ್ತಂತೆ?
ಒಟ್ಟಿನಲ್ಲಿ, 'ಜಯಂ' ರವಿ ಅವರ ಜೀವನ ಈಗ ದೊಡ್ಡ ಸಂಕಷ್ಟದ ಸುಳಿಯಲ್ಲಿದೆ. ಸಮಾಜದ ಮುಂದೆ ಸದಾ ನಗುತ್ತಾ ಕಾಣಿಸಿಕೊಳ್ಳುವ ನಟನ ಹಿಂದಿರುವ ಈ ಕರಾಳ ನೋವು ಕಂಡು ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಮುಂದೆ ಇದು ಎಲ್ಲಿಗೆ ನಿಲ್ಲುತ್ತೋ ಅಥವಾ ಎಲ್ಲಿಗೆ ಹೋಗುತ್ತೋ? ಕಾಲವೇ ಹೇಳ್ಬೇಕು..
India Latest News Live 16 May 2026'ಕಾನೂನು ಎಲ್ಲರಿಗೂ ಒಂದೇ..' ಪೊಕ್ಸೋ ಕೇಸ್ನಲ್ಲಿ ಸಿಲುಕಿದ್ದ ಮಗನನ್ನು ಪೊಲೀಸರಿಗೆ ಒಪ್ಪಿಸಿದ ಕೇಂದ್ರ ಸಚಿವ!
ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ್, ಅಪ್ರಾಪ್ತೆಯ ಮೇಲಿನ ಪೋಕ್ಸೋ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಲುಕ್-ಔಟ್ ಸರ್ಕ್ಯುಲರ್ ಜಾರಿ ಮತ್ತು ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ನಿರಾಕರಣೆಯ ನಂತರ ಈ ಬೆಳವಣಿಗೆ ನಡೆದಿದೆ.
India Latest News Live 16 May 2026ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಬಿಗ್ ಅಪ್ಡೇಟ್ - 9ನೇ ತರಗತಿಯಿಂದ 3 ಭಾಷೆಗಳ ಕಲಿಕೆ ಕಡ್ಡಾಯ!
ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) 2026 ರಿಂದ 9ನೇ ತರಗತಿಗೆ ಮೂರು ಭಾಷೆಗಳ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಈ ನಿಯಮದಂತೆ, ವಿದ್ಯಾರ್ಥಿಗಳು ಕಲಿಯುವ ಮೂರು ಭಾಷೆಗಳಲ್ಲಿ ಎರಡು ಭಾರತೀಯ ಭಾಷೆಗಳಾಗಿರಬೇಕು ಎಂದಿದೆ.
India Latest News Live 16 May 2026ಆ್ಯಕ್ಷನ್ ಕಟ್ ಹೇಳಲು ಸಜ್ಜಾದ ಸ್ಟಾರ್ ನಟ ರಾಮ್ ಪೋತಿನೇನಿ - ಡಾರ್ಕ್ ಪೋಸ್ಟರ್ ವೈರಲ್!
ನಟ ರಾಮ್ ಪೋತಿನೇನಿ ಇದೀಗ ನಿರ್ದೇಶಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಅವರು ನಾಯಕರಾಗಿ ನಟಿಸಲಿರುವ ತಮ್ಮ 23ನೇ ಚಿತ್ರಕ್ಕೆ ತಾವೇ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ 'ರಾಪೋ23' ಎಂದು ಹೆಸರಿಡಲಾಗಿದೆ.
India Latest News Live 16 May 2026ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಪವಾಡ, 5 ದಿನದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ, ವೈದ್ಯ ಲೋಕಕ್ಕಿದು ಅಚ್ಚರಿ!
ಉತ್ತರ ಪ್ರದೇಶದ ಸಂಭಲ್ನಲ್ಲಿ, ಮಹಿಳೆಯೊಬ್ಬರು ಐದು ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. ಮೊದಲ ಮಗು ಜನಿಸಿದ ಐದು ದಿನಗಳ ನಂತರ ಮತ್ತೆ ಮೂರು ಮಕ್ಕಳು ಜನಿಸಿದ್ದು, ಈ ವೈದ್ಯಕೀಯ ವಿಸ್ಮಯವು ವೈದ್ಯರನ್ನು ಅಚ್ಚರಿಗೊಳಿಸಿದೆ.
India Latest News Live 16 May 2026ಕ್ಯಾಮರಾಮ್ಯಾನ್ ಜೊತೆ ಆಗಸ್ಟ್ನಲ್ಲಿ ಮದುವೆನಾ? ಗಾಸಿಪ್ಗೆ ಕೊನೆಗೂ ಬ್ರೇಕ್ ಹಾಕಿದ ನಟಿ ಅಹಾನಾ!
ನಟ ಕೃಷ್ಣಕುಮಾರ್ ಅವರು ತಮ್ಮ ಮಗಳು ಅಹಾನಾ ಪ್ರೀತಿಯ ಬಗ್ಗೆ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದರು. ಇದರಿಂದಾಗಿ ಆಗಸ್ಟ್ನಲ್ಲೇ ಮದುವೆ ಎಂಬ ಗಾಸಿಪ್ ಹಬ್ಬಿತ್ತು. ಆದರೆ, ಅಪ್ಪ ಹೇಳಿದ್ದು ಭವಿಷ್ಯದ ಬಗ್ಗೆ, ಸದ್ಯಕ್ಕೆ ಮದುವೆ ಇಲ್ಲ ಎಂದು ಅಹಾನಾ ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ.
India Latest News Live 16 May 2026'ಇಡ್ಲಿ ನಟಿ' ನನ್ನ ಸಂಸಾರ ಹಾಳು ಮಾಡಿದ್ಲು - ನಟ ರವಿ ಮೋಹನ್ ಸ್ಫೋಟಕ ಆರೋಪ ಮಾಡಿದ್ದು ಯಾರ ಮೇಲೆ?
ಪತ್ನಿ ಆರತಿ ಜೊತೆಗಿನ ವೈವಾಹಿಕ ಸಮಸ್ಯೆಯಿಂದಾಗಿ ನಟ ರವಿ ಮೋಹನ್ ಅವರು ಸದ್ಯಕ್ಕೆ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, 'ಇಡ್ಲಿ ನಟಿ' ಎಂದು ಉಲ್ಲೇಖಿಸಿ, ಓರ್ವ ನಟಿ ತನ್ನ ಕುಟುಂಬವನ್ನು ಒಡೆಯಲು ಪ್ರಯತ್ನಿಸಿದಳು ಎಂದು ಭಾವನಾತ್ಮಕವಾಗಿ ಆರೋಪಿಸಿದ್ದಾರೆ.
India Latest News Live 16 May 2026ಕೊಡಗಿನ ತಮ್ಮ ಕಾಫಿ ಎಸ್ಟೇಟ್ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ!
ಉದ್ಯಮಿ ಆನಂದ್ ಮಹೀಂದ್ರಾ ಅವರು ಕೊಡಗಿನಲ್ಲಿರುವ ತಮ್ಮ ಕೌಟುಂಬಿಕ ಕಾಫಿ ಎಸ್ಟೇಟ್ಗೆ ಆನೆಗಳ ಹಿಂಡು ಲಗ್ಗೆ ಇಟ್ಟಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ದಶಕಗಳಿಂದ ನಡೆದುಕೊಂಡು ಬಂದಿದ್ದು, ಕಾಡಿನ ಅತಿಕ್ರಮಣದ ಪರಿಣಾಮವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
India Latest News Live 16 May 2026ಅಮೆರಿಕದ ಕಚೇರಿಯಲ್ಲಿ ಬೆಂಗಳೂರು ಮಹಿಳೆಗೆ ಕಾದಿತ್ತು ಅಚ್ಚರಿ!ಭಾರತ ಕೆಲಸದ ಸಂಸ್ಕೃತಿ ಪ್ರಶ್ನಿಸಿದ ವಿಡಿಯೋ ಸಖತ್ ವೈರಲ್
ಬೆಂಗಳೂರಿನ ವೃತ್ತಿಪರ ಮಹಿಳೆಯೊಬ್ಬರು ಅಮೆರಿಕ ಮತ್ತು ಭಾರತದ ಕೆಲಸದ ಸಂಸ್ಕೃತಿಯ ವ್ಯತ್ಯಾಸವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವ ಪದ್ಧತಿ ಮತ್ತು ಭಾರತದಲ್ಲಿನ ದೀರ್ಘಾವಧಿಯ ಕೆಲಸದ ನಡುವಿನ ಅಂತರವನ್ನು ಅವರು ಎತ್ತಿ ತೋರಿಸಿದೆ.
India Latest News Live 16 May 2026Sai Pallavi Tragedy - ರಾಮಾಯಣದ ಸೀತೆಗೆ ಭಾರೀ ಸಮಸ್ಯೆ.. ನಟಿ ಸಾಯಿ ಪಲ್ಲವಿಗೆ ಅದೊಂದು ಬಾಗಿಲು ಬಂದ್ ಆಗೋಯ್ತು!
ದಕ್ಷಿಣ ಭಾರತದ ‘ನ್ಯಾಚುರಲ್ ಬ್ಯೂಟಿ’ ಸಾಯಿ ಪಲ್ಲವಿ ಬಗ್ಗೆ ಈಗ ಕೇಳಿ ಬರುತ್ತಿರುವ ಹೊಸ ಸುದ್ದಿಯೊಂದು ಅವರ ಅಭಿಮಾನಿಗಳಿಗೆ ತುಸು ನಿರಾಸೆ ಮೂಡಿಸಿದೆ. ಚಿತ್ರತಂಡ ಸಾಯಿ ಪಲ್ಲವಿ ಅವರ ವಿಷಯದಲ್ಲಿ ಒಂದು ಕಠಿಣ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾತುಗಳು ಬಿ-ಟೌನ್ ಗಲ್ಲಿಗಳಲ್ಲಿ ಹರಿದಾಡುತ್ತಿವೆ. ಏನದು..?
India Latest News Live 16 May 2026ಇದೇನ್ರೀ ಪ್ರಶ್ನೆ? ಪತ್ರಕರ್ತನ ಆ ಅಸಹ್ಯಕರ ಪ್ರಶ್ನೆಗೆ ಗರಂ ಆದ ನಟಿ ಮಾಳವಿಕಾ - ವಿಡಿಯೋ ವೈರಲ್
ಒಂದು ಕಾರ್ಯಕ್ರಮದಲ್ಲಿ ತಮಿಳು ಪತ್ರಕರ್ತರೊಬ್ಬರು ಕೇಳಿದ ಅಸಹ್ಯಕರ ಪ್ರಶ್ನೆಯಿಂದ ನಟಿ ಮಾಳವಿಕಾ ಮೋಹನನ್ ಗರಂ ಆಗಿದ್ದಾರೆ. ಇದು ತುಂಬಾನೇ ಅಸಹ್ಯವಾದ ಪ್ರಶ್ನೆ, ಮಾಧ್ಯಮದವರು ಸ್ವಲ್ಪವಾದರೂ ಘನತೆ ಕಾಪಾಡಿಕೊಳ್ಳಬೇಕು ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
India Latest News Live 16 May 2026Thala Ajith- CM Vijay Fight - ಸಿಎಂ ವಿಜಯ್ ಜೊತೆ ಫೈಟಿಂಗ್ ಮಾಡೋಕೆ ರೆಡಿಯಾದ್ರಾ ಬದ್ಧ ವೈರಿ ತಲಾ ಅಜಿತ್?
ನಟ ಅಜಿತ್ ಸಿನಿಮಾ ಹೀರೋ ಮಾತ್ರವೇ ಅಲ್ಲ, ತಮಿಳರ ಪಾಲಿಗೆ ಅವರು ರಿಯಲ್ ಲೈಫ್ ಹೀರೊ ಕೂಡ. ಯಾಕಂದ್ರೆ ಸಿಂಪ್ಲಿಸಿಟಿಗೆ ಅಜಿತ್ ಬ್ರ್ಯಾಂಡ್ ಅಂಬಾಸೀಡರ್. ಕಾರ್ ರೇಸಿಂಗ್, ಬೈಕ್ ಸವಾರಿ ಎಂದರೆ ಅಜಿತ್ಗೆ ಪ್ರಾಣ.. ಸಿಕ್ಕ ಸುದ್ದಿಯ ಪ್ರಕಾರ, ವಿಜಯ್ ವಿರುದ್ಧ ಯುದ್ಧ ಮಾಡ್ತಾರೆ ನಟ ತಲಾ ಅಜಿತ್..
India Latest News Live 16 May 2026ತಮಿಳುನಾಡು ಸರ್ಕಾರದ ನೂತನ ಸಚಿವರ ಖಾತೆ ಹಂಚಿಕೆ ಮಾಡಿದ ಸಿಎಂ ವಿಜಯ್, ಬಲಿಷ್ಠ ಖಾತೆ ತನ್ನಲ್ಲೇ ಇರಿಸಿಕೊಂಡ ದಳಪತಿ!
India Latest News Live 16 May 2026ಫ್ಲಾಪ್ ನಟನ ಮೇಲೆ ಕ್ರಶ್ ಎಂದ ನಟಿ ಅನನ್ಯ - ಆ ಯಂಗ್ ಹೀರೋ ಯಾರು? ಏನಿದು ಸೀಕ್ರೆಟ್!
ಟಾಲಿವುಡ್ನ ಯುವ ನಟಿ ಅನನ್ಯ ನಾಗಳ್ಳ ಅವರು ತಮ್ಮ ಮೊದಲ ಕ್ರಶ್ ಯಾರೆಂದು ಬಹಿರಂಗಪಡಿಸಿದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು ಸಿನಿಮಾಗಳೆಂದರೆ ಇಷ್ಟವಂತೆ, ಆದರೆ ತಮ್ಮ ಕ್ರಶ್ ಮಾತ್ರ ಒಬ್ಬ ಫ್ಲಾಪ್ ಹೀರೋ ಮೇಲಂತೆ. ಹಾಗಾದ್ರೆ ಆ ನಟ ಯಾರು?
India Latest News Live 16 May 2026'3ನೇ ಮಗು ಮಾಡ್ಕೊಂಡ್ರೆ 30 ಸಾವಿರ, 4ನೇ ಮಗುವಿಗೆ 40 ಸಾವಿರ..' ಆರ್ಥಿಕ ಪ್ರೋತ್ಸಾಹ ಧನ ಘೋಷಿಸಿದ ಸಿಎಂ ಚಂದ್ರಬಾಬು ನಾಯ್ಡು!
ಆಂಧ್ರಪ್ರದೇಶದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸಲು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ, ಮೂರನೇ ಮಗುವಿಗೆ ₹30,000 ಮತ್ತು ನಾಲ್ಕನೇ ಮಗುವಿಗೆ ₹40,000 ಆರ್ಥಿಕ ಪ್ರೋತ್ಸಾಹ ಧನ ನೀಡಲಾಗುವುದು ಎಂದಿದ್ದಾರೆ.
India Latest News Live 16 May 2026100 ವರ್ಷಗಳ ಬಳಿಕ ಭಾರತಕ್ಕೆ ಮರಳಿದ 1000 ವರ್ಷ ಹಳೆಯ ಚೋಳರ ಕಾಲದ ‘ಆನೈಮಂಗಲಂ ತಾಮ್ರಶಾಸನಗಳು’!
ಚೋಳರ ಕಾಲದ 'ಆನೈಮಂಗಲಂ ತಾಮ್ರಶಾಸನಗಳು' ಒಂದು ಶತಮಾನದ ನಂತರ ನೆದರ್ಲ್ಯಾಂಡ್ಸ್ನಿಂದ ಭಾರತಕ್ಕೆ ಅಧಿಕೃತವಾಗಿ ಮರಳಿವೆ. ರಾಜರಾಜ ಚೋಳ I ರ ಕಾಲದ ಈ ಶಾಸನಗಳು, ನಾಗಪಟ್ಟಣಂನ ಬೌದ್ಧ ವಿಹಾರಕ್ಕೆ ನೀಡಿದ ದಾನವನ್ನು ದಾಖಲಿಸಿದೆ.
India Latest News Live 16 May 2026ಮಗಳ ಡೇಟಿಂಗ್ ಬಗ್ಗೆ ಹೇಳಿಕೆ ನೀಡಿ ಟ್ರೋಲ್ ಆಗ್ತಿರೋ ಟಾಕ್ಸಿಕ್ ಬ್ಯೂಟಿ - ಏನೆಲ್ಲಾ ಹೇಳಿದ್ರು ನೋಡಿ!
ನನ್ನ ಮಗಳಿಗೆ ಮುಕ್ತ ಸ್ವಾತಂತ್ರ್ಯ ಕೊಡುತ್ತೇನೆ. ಅವಳು ಎಷ್ಟು ಜನರ ಜೊತೆಗೆ ಬೇಕಿದ್ದರೂ ಡೇಟಿಂಗ್ ಮಾಡಲಿ. ಡೇಟಿಂಗ್ ಮಾಡುವಾಗ ಮುಂದೇನಾಗುತ್ತೋ ಎಂಬ ಆತಂಕ ಅವಳಿಗೆ ಇರಬಾರದು ಎಂದರು ನಟಿ ಕಿಯಾರಾ ಅಡ್ವಾಣಿ.