ಭಾರತ ವಿರುದ್ಧ ಪಂದ್ಯ ಸೋತರೂ ಪಾಕ್ ನಾಯಕ ಸಲ್ಮಾನ್ಗೆ ನೆಮ್ಮದಿಯ ನಿದ್ದೆ, ಕಾರಣ ಏನು? ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ 61 ರನ್ ಹೀನಾಯ ಸೋಲಿನ ಬಳಿಕವೂ ಪಾಕ್ ನಾಯಕನಲ್ಲಿ ಸೋಲಿಗಿಂತ ಸಂಭ್ರಮೇ ಕಾಣುತ್ತಿದೆ
- Home
- News
- India News
- India Latest News Live: ಭಾರತ ವಿರುದ್ಧ ಪಂದ್ಯ ಸೋತರೂ ಪಾಕ್ ನಾಯಕ ಸಲ್ಮಾನ್ಗೆ ನೆಮ್ಮದಿಯ ನಿದ್ದೆ, ಕಾರಣ ಏನು?
India Latest News Live: ಭಾರತ ವಿರುದ್ಧ ಪಂದ್ಯ ಸೋತರೂ ಪಾಕ್ ನಾಯಕ ಸಲ್ಮಾನ್ಗೆ ನೆಮ್ಮದಿಯ ನಿದ್ದೆ, ಕಾರಣ ಏನು?

ನಾಗ್ಪುರ: ‘ಛತ್ರಪತಿ ಶಿವಾಜಿ ಮಹಾರಾಜರ ದಾರಿಯಲ್ಲೇ ಟಿಪ್ಪು ಸುಲ್ತಾನರೂ ನಡೆದಿದ್ದಾರೆ. ಟಿಪ್ಪುವನ್ನು ಶಿವಾಜಿ ಮಹಾರಾಜರಿಗೆ ಸಮಾನವಾಗಿ ಕಾಣಬೇಕು’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಾಲ್ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ಸಿಎಂ ದೇವೇಂದ್ರ ಫಡ್ನವೀಸ್ ಕಿಡಿಕಾರಿದ್ದಾರೆ.
‘ಟಿಪ್ಪು ಸುಲ್ತಾನ್ ಒಬ್ಬ ಯೋಧ. ಆತ ಬ್ರಿಟಿಷರ ವಿರುದ್ಧ ಹೋರಾಡಿದ ಧೈರ್ಯವನ್ನು ತೋರಿಸಿದವನು. ಮಣ್ಣಿನ ಮಗ. ಅವನೆಂದೂ ವಿಷಕಾರಿ, ವಿನಾಶಕಾರಿ ವಿಚಾರಗಳನ್ನು ಸ್ವೀಕರಿಸಲಿಲ್ಲ. ಶೌರ್ಯದ ಸಂಕೇತವಾಗಿ, ಟಿಪ್ಪು ಸುಲ್ತಾನನನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಸಮಾನವಾಗಿ ನೋಡಬೇಕು’ ಎಂದು ಸಪ್ಕಾಲ್ ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘ಶಿವಾಜಿ ಮಹಾರಾಜರು ಸ್ವರಾಜ್ಯವನ್ನು ಸ್ಥಾಪಿಸಿ ಜನರನ್ನು ಮೊಘಲ್ ಆಳ್ವಿಕೆಯಿಂದ ಮುಕ್ತಗೊಳಿಸಿದರು. ಮತ್ತೊಂದೆಡೆ, ಟಿಪ್ಪು ಸಾವಿರಾರು ಹಿಂದೂಗಳನ್ನು ಕೊಂದ. ನಾವು ಈ ಹೋಲಿಕೆಯನ್ನು ಸಹಿಸುವುದಿಲ್ಲ’ ಎಂದು ಕಿಡಿ ಕಾರಿದ್ದಾರೆ.
India Latest News Live 15 February 2026ಭಾರತ ವಿರುದ್ಧ ಪಂದ್ಯ ಸೋತರೂ ಪಾಕ್ ನಾಯಕ ಸಲ್ಮಾನ್ಗೆ ನೆಮ್ಮದಿಯ ನಿದ್ದೆ, ಕಾರಣ ಏನು?
India Latest News Live 15 February 2026ಆಡಲ್ಲ ಆಡಲ್ಲ ಅಂದ ಪಾಕ್ ಕೊನೆಗೆ ಆಡಿದ್ರೂ ಕನಿಷ್ಠ ಹೋರಾಟ ನೀಡ್ಲಿಲಿಲ್ಲ, ಭಾರತಕ್ಕೆ 61 ರನ್ ಗೆಲುವು
ಆಡಲ್ಲ ಆಡಲ್ಲ ಅಂದ ಪಾಕ್ ಕೊನೆಗೆ ಆಡಿದ್ರೂ ಕನಿಷ್ಠ ಹೋರಾಟ ನೀಡ್ಲಿಲಿಲ್ಲ, ಭಾರತದ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಯಿತು. ಉಸ್ಮಾನ್ ಖಾನ್ ಹೋರಾಟ ಹೊರತುಪಡಿಸಿದರೆ ಇನ್ಯಾರು ಕ್ರೀಸ್ಗೆ ಬಂದಿದ್ದೇ ಗೊತ್ತಾಗಲಿಲ್ಲ.
India Latest News Live 15 February 2026ಪಾಕಿಸ್ತಾನದ 4 ವಿಕೆಟ್ ಪತನದ ಬಳಿಕ ವಿನ್ನಿಂಗ್ ಪರ್ಸೆಂಟೇಜ್ ಎಷ್ಟಿದೆ? ಯಾರಿಗಿದೆ ಚಾನ್ಸ್?
ಪಾಕಿಸ್ತಾನದ 4 ವಿಕೆಟ್ ಪತನದ ಬಳಿಕ ವಿನ್ನಿಂಗ್ ಪರ್ಸೆಂಟೇಜ್ ಎಷ್ಟಿದೆ? ಯಾರಿಗಿದೆ ಚಾನ್ಸ್? ಭಾರತ ನೀಡಿದ 176 ರನ್ ಟಾರ್ಗೆಟ್ ಚೇಸಿಂಗ್ ನಡುವೆ ಗೆಲುವಿನ ಸಾಧ್ಯೆತೆಗಳು ಕ್ಷಣಕ್ಷಣಕ್ಕೆ ಬದಲಾಗುತ್ತಿದೆ. ಸದ್ಯ ಯಾರಿಗೆ ಎಷ್ಟು ವಿನ್ನಿಂಗ್ ಪರ್ಸೆಂಟೇಜ್ ಇದೆ.
India Latest News Live 15 February 2026ಸಾವಲ್ಲೂ ಸಾರ್ಥಕತೆ - 10 ತಿಂಗಳ ಕಂದನಿಂದ 4 ಜನರಿಗೆ ಜೀವದಾನ
ಕೇವಲ 10 ತಿಂಗಳ ಮಗುವೊಂದು ಅಂಗಾಗ ದಾನ ಮಾಡುವ ಮೂಲಕ 4 ಜನರಿಗೆ ಜೀವ ದಾನ ಮಾಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದೆ. ಹೌದು ಕೇರಳದ ಅಲಿನ್ ಶೆರಿನ್ ಅಬ್ರಹಾಂ ಎಂಬ 10 ತಿಂಗಳ ಮಗು ಈಗ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
India Latest News Live 15 February 2026ಟಿ20 ವಿಶ್ವಕಪ್ನಲ್ಲಿ ಪಾಕ್ ಬೌಲರ್ಗಳನ್ನು ಚೆಂಡಾಡಿದ ಇಶಾನ್ ಕಿಶನ್! ಬದ್ದ ಎದುರಾಳಿಗೆ ಕಠಿಣ ಗುರಿ ನೀಡಿದ ಭಾರತ
India Latest News Live 15 February 2026ಪಾಕ್ ನಾಯಕನಿಗೆ ಶೇಕ್ ಹ್ಯಾಂಡ್ ಕೊಡದ ಸೂರ್ಯಕುಮಾರ್ ಯಾದವ್! ಕಾರಣವೇನು ಗೊತ್ತಾ?
ಟಿ20 ವಿಶ್ವಕಪ್ 2026ರ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಶೇಕ್ ಹ್ಯಾಂಡ್ ನೀಡಲು ನಿರಾಕರಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಹೀಗೆ ಮಾಡಿದ್ದೇಕೆ ಎನ್ನುವುದನ್ನು ನೋಡೋಣ ಬನ್ನಿ.
India Latest News Live 15 February 2026ಸಾಲಬಾಧೆ - ಅತ್ಯುತ್ತಮ ಕೃಷಿ ಪ್ರಶಸ್ತಿ ಗಳಿಸಿದ ರೈತ ಸಾವಿಗೆ ಶರಣು
ಕೇರಳದ ಅತ್ಯುತ್ತಮ ಕೃಷಿಕ ಪ್ರಶಸ್ತಿ ವಿಜೇತ ಕಣ್ಣೂರಿನ ರೈತ ಅಲಿಯಾಸ್ ಅಂಬತ್, ತೀವ್ರ ಸಾಲಬಾಧೆಯಿಂದಾಗಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಸುಮಾರು 35 ಲಕ್ಷದಿಂದ 50 ಲಕ್ಷದಷ್ಟು ಸಾಲದ ಸುಳಿಯಲ್ಲಿ ಸಿಲುಕಿದ್ದ ಅವರು,ಈ ದುರಂತ ನಿರ್ಧಾರ ಕೈಗೊಂಡಿದ್ದಾರೆ.
India Latest News Live 15 February 2026ಟಾಲಿವುಡ್ನ ಟಾಪ್ 5 ನಟರ ದುಬಾರಿ ಮನೆಗಳಿವು; ಯಾರದ್ದು ಹೆಚ್ಚು ಕಾಸ್ಟ್ಲಿ ಗೊತ್ತಾ?
India Latest News Live 15 February 2026ಇಂಡೋ-ಪಾಕ್ ಮ್ಯಾಚ್ - ಮತ್ತೆ ಶೂನ್ಯ ಸುತ್ತಿ ಕೆಟ್ಟ ದಾಖಲೆ ಬರೆದ ಅಭಿಷೇಕ್ ಶರ್ಮಾ!
ಕೊಲಂಬೋ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ. ಇದರ ಬೆನ್ನಲ್ಲೇ ಅಭಿಷೇಕ್ ಶರ್ಮಾ ಕೆಟ್ಟ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.
India Latest News Live 15 February 2026ಎಂಜಿನಿಯರಿಂಗ್ ಹುದ್ದೆ ತೊರೆದ 24ರ ಚೆಲುವೆ ಈಗ 45 ಕೋಟಿಗಳ ಒಡತಿ! ರೀಲ್ಸ್ ರಾಣಿಯ ರೋಚಕ ಪಯಣ
ಅಪೂರ್ವ ಮುಖಿಜಾ ಎಂಬ ಓದಿನಲ್ಲಿ ಟಾಪ್ ಇದ್ದ ಎಂಜಿನಿಯರ್, ತನ್ನ ಶೈಕ್ಷಣಿಕ ಸಾಧನೆಗೆ ಮಾನ್ಯತೆ ಸಿಗದಿದ್ದಾಗ ಸೋಷಿಯಲ್ ಮೀಡಿಯಾ ಜಗತ್ತಿಗೆ ಕಾಲಿಟ್ಟರು. ಅರೆ-ಬರೆ ಉಡುಪಿನಲ್ಲಿ ರೀಲ್ಸ್ ಮಾಡಿ, ಟ್ರೋಲ್ಗಳ ಮೂಲಕವೇ ಪ್ರಸಿದ್ಧರಾಗಿ, ಇಂದು 45 ಕೋಟಿಗೂ ಹೆಚ್ಚು ಸಂಪಾದಿಸಿ ಕೋಟ್ಯಧಿಪತಿಯಾಗಿದ್ದಾರೆ.
India Latest News Live 15 February 2026ಕನ್ನಡ ಸೇರಿ ಬಾಲಿವುಡ್ನಲ್ಲಿ ಮಿಂಚುತ್ತಿರುವ ನಟಿಗೆ ಜೈಲಿನಿಂದಲೇ 30 ಕೋಟಿ ರೂ ಹೆಲಿಕಾಪ್ಟರ್ ಗಿಫ್ಟ್
ಕನ್ನಡ ಸೇರಿ ಬಾಲಿವುಡ್ನಲ್ಲಿ ಮಿಂಚುತ್ತಿರುವ ನಟಿಗೆ ಜೈಲಿನಿಂದಲೇ 30 ಕೋಟಿ ರೂ ಹೆಲಿಕಾಪ್ಟರ್ ಗಿಫ್ಟ್ ನೀಡಲಾಗಿದೆ. ಅರೆಸ್ಟ್ ಆಗಿ ಜೈಲು ಸೇರಿರುವ ಬಾಯ್ಫ್ರೆಂಡ್ ಪ್ರೇಮಿಗಳ ದಿನಾಚರಣೆಗೆ ಈ ಗಿಫ್ಟ್ ನೀಡಿದ್ದಾನೆ.
India Latest News Live 15 February 2026Fatty Liver - ಫ್ಯಾಟಿ ಲಿವರ್ ಕಾಯಿಲೆಯ 7 ಲಕ್ಷಣಗಳಿವು! ನಿಮಗೆ ಹೀಗೆ ಅನಿಸ್ತಿದ್ರೆ ಅದನ್ನು ನಿರ್ಲಕ್ಷಿಸಬೇಡಿ
India Latest News Live 15 February 2026ಭಾರತ ಎದುರು ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ; ಸ್ಥಾನ ಉಳಿಸಿಕೊಂಡ ರಿಂಕು, ಆದ್ರೂ ಭಾರತ ತಂಡದಲ್ಲಿ ಎರಡು ಮೇಜರ್ ಚೇಂಜ್
ಟಿ20 ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಮಹತ್ವದ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾ ಮತ್ತು ಕುಲ್ದೀಪ್ ಯಾದವ್ ಅವರನ್ನು ಸೇರಿಸಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
India Latest News Live 15 February 2026ದೆಹಲಿಯಿಂದ ಬಂದ ಮಹಿಳೆಗೆ ವಿಮಾನ ನಿಲ್ದಾಣದಲ್ಲೇ ಕಚ್ಚಿದ ನಾಯಿ
ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಯೊಂದು ಮಹಿಳಾ ಪ್ರಯಾಣಿಕರೊಬ್ಬರಿಗೆ ಕಚ್ಚಿದ ಘಟನೆ ನಡೆದಿದೆ. ಗಾಯಾಳು ಮಹಿಳೆಗೆ ಚಿಕಿತ್ಸೆ ನೀಡಲಾಗಿದ್ದು, ವಿಮಾನ ನಿಲ್ದಾಣದಂತಹ ಹೆಚ್ಚಿನ ಭದ್ರತಾ ವಲಯದಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಈ ಘಟನೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
India Latest News Live 15 February 2026ಇಂಡೋ ಪಾಕ್ ಪಂದ್ಯದಿಂದ ಜಾಹೀರಾತು ಬೆಲೆಯಲ್ಲಿ ದಾಖಲೆ, 10 ಸೆಕೆಂಡ್ ಆ್ಯಡ್ ರೇಟ್ ಎಷ್ಟು?
ಇಂಡೋ ಪಾಕ್ ಪಂದ್ಯದಿಂದ ಜಾಹೀರಾತು ಬೆಲೆಯಲ್ಲಿ ದಾಖಲೆ, ಪಂದ್ಯ ಪ್ರಸಾರದ ವೇಳೆ ಬರುವ 10 ಸೆಕೆಂಡ್ ಜಾಹೀರಾತಿನ ಬೆಲೆ ಕೇಳಿದರೆ ಅಚ್ಚರಿಯಾಗುವುದು ಖಚಿತ, ಶೇಕಡಾ 90ರಷ್ಟು ಜಿಗಿತ ಕಂಡಿದೆ.
India Latest News Live 15 February 2026ಅಭಿಷೇಕ್ ಶರ್ಮಾ ಇನ್, ಸಂಜು ಔಟ್, ಪಾಕ್ ವಿರುದ್ಧ ಟೀಂ ಇಂಡಿಯಾದಲ್ಲಿ ಮಹತ್ತರ ಬದಲಾವಣೆ ಸೂಚನೆ
ಅಭಿಷೇಕ್ ಶರ್ಮಾ ಇನ್, ಸಂಜು ಔಟ್, ಪಾಕ್ ವಿರುದ್ಧ ಟೀಂ ಇಂಡಿಯಾದಲ್ಲಿ ಮಹತ್ತರ ಬದಲಾವಣೆ ಸೂಚನೆ, ಕುಲ್ದೀಪ್ ಯಾದವ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಪಾಕ್ ವಿರುದ್ಧ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11
India Latest News Live 15 February 2026ಸೊಂಟ ಹಿಡಿದು ಕಿಸ್ಸಿಂಗ್ ನಟನೆ ಭಾಗ, ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಸ್ಫೋಟಕ ಮಾತು
ಸೊಂಟ ಹಿಡಿದು ಕಿಸ್ಸಿಂಗ್ ನಟನೆ ಭಾಗ, ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಸ್ಫೋಟಕ ಮಾತು, ರೊಮ್ಯಾನ್ಸ್, ಇಂಟೀಮೇಟ್ ಸೀನ್ ಮಾಡಲು ನಾನು ರೆಡಿ, ಆದರೆ ಒಂದು ಕಂಡೀಷನ್ ಹಾಕಿದ್ದಾರೆ.
India Latest News Live 15 February 2026ಬೀದಿಯಲ್ಲಿ ಕಸ ಎಸೆಯುವವರಿಗೆ 'ಹಾಲ್ ಆಫ್ ಶೇಮ್' - ವೀಡಿಯೋ ಮಾಡಿ ಎಲ್ಇಡಿ ಸ್ಕ್ರೀನ್ ಮೇಲೆ ಪ್ರಸಾರ
ವೀಕೆಂಡ್ ವಿತ್ ರಮೇಶ್ನಲ್ಲಿ ನೀವು ಕಾರ್ಯಕ್ರಮಕ್ಕೆ ಬಂದ ಅತಿಥಿಗಳ ಫೋಟೋಗಳನ್ನು ಕಾರ್ಯಕ್ರಮದ ಕೊನೆಯಲ್ಲಿ ವಾಲ್ ಆಫ್ ಫೇಮ್ಗೆ ಸೇರಿಸುವುದನ್ನು ನೋಡಿರಬಹುದು. ಅದೇ ಬೀದಿ ಬದಿ ಕಸ ಎಸೆಯುವವರಿಗೆ ಬುದ್ಧಿ ಕಲಿಸಲು ಅಸ್ಸಾಂನ ತಿನ್ಸುಖಿಯಾ ನಗರ 'ವಾಲ್ ಆಫ್ ಶೇಮ್' ಎಂಬ ವಿನೂತನ ಅಭಿಯಾನ ಆರಂಭಿಸಿದೆ.
India Latest News Live 15 February 202621 ಸೆಕೆಂಡ್ ವಿಡಿಯೋ ಕೋಲಾಹಲ, ಕ್ರೈಸ್ತ ಸನ್ಯಾಸಿನಿಗೆ ಕಾಮ ಪ್ರಚೋದಿಸಿದ ವಿದ್ಯಾರ್ಥಿಗಳ ಗುಂಪು
21 ಸೆಕೆಂಡ್ ವಿಡಿಯೋ ಕೋಲಾಹಲ, ಕ್ರೈಸ್ತ ಸನ್ಯಾಸಿನಿಗೆ ಕಾಮ ಪ್ರಚೋದಿಸಿದ ವಿದ್ಯಾರ್ಥಿಗಳ ಗುಂಪು, ಯುವ ಸಮೂಹದ ಅಸಭ್ಯವಾಗಿ ಕಾಮಪ್ರಚೋದಕತೆ ಮಾಡುತ್ತಿರುವ ದೃಶ್ಯ ಭಾರಿ ವಿರೋಧಕ್ಕೆ ಕಾರಣವಾಗಿದೆ. ಏನಿದು 21 ಸೆಕೆಂಡ್ ವಿಡಿಯೋ?
India Latest News Live 15 February 2026ಮಗಳ ಮದುವೆಗೆಂದು ಬ್ಯಾಂಕ್ ಲಾಕರ್ನಲ್ಲಿ ಚಿನ್ನ ಇಟ್ಟಿದ್ದ ದಂಪತಿಗೆ ಆಘಾತ - 65 ಲಕ್ಷ ಮೌಲ್ಯದ ಚಿನ್ನ ನಾಪತ್ತೆ
ಗುಜರಾತ್ನ ವಡೋದರಾದಲ್ಲಿ, ಮಗಳ ಮದುವೆಗೆಂದು ಎನ್ಆರ್ಐ ಕುಟುಂಬವೊಂದು ಬ್ಯಾಂಕ್ ಲಾಕರ್ನಲ್ಲಿಟ್ಟಿದ್ದ 65 ಲಕ್ಷ ಮೌಲ್ಯದ ಚಿನ್ನ ನಾಪತ್ತೆಯಾಗಿದೆ. ಮದುವೆಗೆ ಕೆಲವೇ ದಿನಗಳಿರುವಾಗ ಈ ಘಟನೆ ಬೆಳಕಿಗೆ ಬಂದಿದೆ.