Asianet Suvarna News Asianet Suvarna News

ಈ ನೆಲ ಹಿಂದೂಗಳಿಗೆ ಸೇರಿದ್ದು, ಸನಾತನ ಧರ್ಮ ಮಾತ್ರವೇ ಇಲ್ಲಿ ಉಳಿಯೋದು!

ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ ಕಾರಣಕ್ಕೆ ಬಿಜೆಪಿಯಿಂದ ಅಮಾನತುಗೊಂಡಿರುವ ಮಾಜಿ ವಕ್ತಾರೆ ನೂಪುರ್ ಶರ್ಮ ಅವರನ್ನು ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅಥವಾ ಸಾಧ್ವಿ ಪ್ರಜ್ಞಾ ಬೆಂಬಲಿಸಿದ್ದಾರೆ. 

India belongs to Hindus and Sanatan Dharma will stay here says BJP leader Sadhvi Pragya and backs Nupur Sharma san
Author
Bengaluru, First Published Jun 10, 2022, 9:16 PM IST

ಭೋಪಾಲ್ (ಜೂನ್ 10): ಪ್ರವಾದಿ ಮೊಹಮದ್ ಪೈಗಂಬರ್ (Prophet Controversy) ಕುರಿತಾಗಿ ಮಾತನಾಡಿದ್ದ ಕಾರಣಕ್ಕಾಗಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ (Nupur Sharma) ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಇದರ ನಡುವೆ ಭೋಪಾಲ್ ನ (Bhopal) ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ (Pragya Thakur) ಅಥವಾ ಸಾಧ್ವಿ ಪ್ರಜ್ಞಾ (Sadhvi Pragya), ನೂಪುರ್ ಶರ್ಮ ಪರವಾಗಿ ಮಾತನಾಡಿದ್ದಾರೆ.

ಶುಕ್ರವಾರ ದೇಶವ್ಯಾಪಿ ಮುಸ್ಲೀಮರ ಪ್ರತಿಭಟನೆ ನಡೆದಿರುವ ಕುರಿತಂತೆ ಮಾತನಾಡಿದ ಸಾಧ್ವಿ ಪ್ರಜ್ಞಾ, "ನಮ್ಮ ಧರ್ಮವನ್ನು ನಂಬದೇ ಇರುವ ವ್ಯಕ್ತಿಗಳು ಇಂಥ ಕೆಲಸ ಮಾಡುತ್ತಲೇ ಇರುತ್ತಾರೆ. ಇವರಿಗೆಲ್ಲ ಕಮ್ಯುನಿಷ್ಟ್ ಇತಿಹಾಸವಿದೆ. ಕಮಲೇಶ್ ತಿವಾರಿ ಏನೂ ಒಂದು ಮಾತನಾಡಿದ್ದ. ಆತನನ್ನು ಇವರೆಲ್ಲ ಸೇರಿ ಕೊಂದರು. ಈಗ ನೂಪುರ್ ಶರ್ಮ ಏನೋ ಹೇಳಿದ್ದಾಳೆ. ಆಕೆಗೆ ಜೀವ ಬೆದರಿಕೆ ನೀಡುತ್ತಿದ್ದಾರೆ. ಎಲ್ಲರೂ ಒಂದಂಥೂ ಅರ್ಥ ಮಾಡಿಕೊಳ್ಳಬೇಕು. ಭಾರತ ಸೇರಿರುವುದು ಹಿಂದೂಗಳಿಗೆ, ಈ ನೆಲದ ಮೇಲೆ ಸನಾತನ ಧರ್ಮ ಮಾತ್ರವೇ ಉಳಿಯುವುದು'" ಎಂದು ಹೇಳಿದ್ದಾರೆ.

ನಮ್ಮ ದೇವ-ದೇವತೆಯನ್ನು ಇವರೆಲ್ಲ ಸೇರಿ ಚಿತ್ರ ಮಾಡುತ್ತಾರೆ. ಅದನ್ನು ನಿರ್ದೇಶನ, ನಿರ್ಮಾಣ ಎಲ್ಲವನ್ನೂ ಮಾಡುತ್ತಾರೆ. ಚಿತ್ರದಲ್ಲಿ ನಮ್ಮ ದೇವತೆಗಳ ಬಗ್ಗೆ ಏನೆಲ್ಲಾ ಚಿತ್ರಿಸುತ್ತಾರೆ. ದೇವತೆಗಳ ನಿಂದನೆ ಕೂಡ ಮಾಡುತ್ತಾರೆ. ಇದು ಈಗಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗ ತಮ್ಮ ಮಾನಸಿಕತೆಯನ್ನು ಮತ್ತೊಮ್ಮೆ ಪ್ರದರ್ಶನ ಮಾಡುತ್ತಿದ್ದಾರೆ ಅಷ್ಟೇ. ಅವರಿಗೆಲ್ಲರಿಗೂ ನಾನು ಹೇಳುವುದು ಇಷ್ಟೇ. ಇದು ಭಾರತ, ಹಿಂದೂಗಳಿಗೆ ಸೇರಿರುವ ಭೂಮಿ. ಇಲ್ಲಿ ಸನಾತನ ಧರ್ಮ ಬದುಕಿತ್ತು. ಮುಂದೆಯೂ ಕೂಡ ಇದು ಬದುಕಿ ಇರಲಿದೆ. ಇದನ್ನು ಬದುಕಿ ಇರುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಈ ಜವಾಬ್ದಾರಿಯನ್ನು ನಾವು ವಹಿಸಿಯೇ ಸಿದ್ಧ ಎಂದು ಹೇಳಿದ್ದಾರೆ.


ಇದಕ್ಕೂ ಮುನ್ನ ಟ್ವಿಟರ್ ನಲ್ಲೂ  ನೂಪುರ್ ಶರ್ಮ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ‘ಸತ್ಯ ಹೇಳುವುದು ಬಂಡಾಯವಾದರೆ, ಆ ರೀತಿಯಲ್ಲಿ ನಾನೂ ಕೂಡ ಬಂಡಾಯಗಾರ್ತಿ’ ಎಂದು ಸ್ವತಃ ವಿವಾದಕ್ಕೆ ಹೊಸಬರೇನೂ ಅಲ್ಲದ ಸಾಧ್ವಿ ಪ್ರಜ್ಞಾ ತಿಳಿಸಿದ್ದಾರೆ.

 

ನೂಪುರ್ ಶರ್ಮ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ, ಕರ್ನಾಟಕದಲ್ಲೂ ಹಿಂಸಾಚಾರ

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗಳಿಗಾಗಿ ಪಕ್ಷದಿಂದ ಅಮಾನತುಗೊಂಡ ನಂತರವೂ ನಿಸ್ಸಂದಿಗ್ಧವಾಗಿ ಬೆಂಬಲಿಸಿದರು. ಅಲ್ಪಸಂಖ್ಯಾತ ಸಮುದಾಯದ ಭಾಗವು,  ಸತ್ಯವನ್ನು ಹೇಳಿದಾಗ ಯಾವಾಗಲೂ ತೋಳುಗಳನ್ನು ಏರಿಸಿ ನಿಲ್ಲುತ್ತದೆ, ಆದರೆ ಹಿಂದೂಗಳು ತಮ್ಮ ಧರ್ಮದ ಮೇಲಿನ ಪ್ರತಿ ದಾಳಿಯನ್ನು ಸಹಿಸಿಕೊಳ್ಳಬೇಕು ಎಂದು ಸಾಧ್ವಿ ಪ್ರಜ್ಞಾ ಹೇಳಿದರು.

ನೂಪುರ್ ಶರ್ಮಾ ಪ್ರತಿಕೃತಿ ನಡುರಸ್ತೆಯಲ್ಲೇ ನೇತು ಹಾಕಿದ ಕಿಡಿಗೇಡಿಗಳು: ಹಿಂದೂಪರ ಸಂಘಟನೆಗಳ ಆಕ್ರೋಶ

ಸಾಧ್ವಿ ಪ್ರಜ್ಞಾ ಅವರು ಏನೇ ಮಾಡಿದರೂ ಸತ್ಯವನ್ನೇ ಹೇಳಿದ್ದೇನೆ ಎಂದು ಪ್ರತಿಪಾದಿಸಿದರು ಮತ್ತು ಕಳೆದ ತಿಂಗಳು ನ್ಯಾಯಾಲಯದ ಆದೇಶದ ಸಮೀಕ್ಷೆ ಮತ್ತು ವೀಡಿಯೋಗ್ರಫಿ ಸಮಯದಲ್ಲಿ ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ಶಿವಲಿಂಗ ಕಂಡುಬಂದಿದೆ ಎಂಬ ಹೇಳಿಕೆಯನ್ನು ಪುನರುಚ್ಚರಿಸಿದರು. ಶಿವಲಿಂಗವನ್ನು ಕಾರಂಜಿ ಎಂದು ಕರೆಯುವುದು ನಮ್ಮ ಮೂಲ ಹಿಂದೂ ನಂಬಿಕೆಗಳ ಮೇಲೆ, ನಮ್ಮ ದೇವತೆಗಳ ಮೇಲೆ, ಸನಾತನ ಧರ್ಮದ ಮೇಲಿನ ದಾಳಿಯಾಗಿದೆ. ಆದ್ದರಿಂದ ನಾವು ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ. ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಮತ್ತು ದೆಹಲಿ ಘಟಕದ ಮಾಧ್ಯಮ ಉಸ್ತುವಾರಿ ನವೀನ್ ಜಿಂದಾಲ್ ಅವರು ಪ್ರವಾದಿ ಮೊಹಮ್ಮದ್ ಕುರಿತು ಮಾಡಿದ ಟೀಕೆಗಳು ಅಂತರರಾಷ್ಟ್ರೀಯ ಖಂಡನೆಗೆ ಕಾರಣವಾಯಿತು, ಕೆಲವು ಇಸ್ಲಾಮಿಕ್ ದೇಶಗಳು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಲ್ಲದೆ ಮತ್ತು ಭಾರತೀಯ ಸರಕುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿವೆ.

Follow Us:
Download App:
  • android
  • ios