Asianet Suvarna News Asianet Suvarna News

ಭಾರತದ ಈ ಘೋಷಣೆ ಬೆನ್ನಲ್ಲೇ ಮೆತ್ತಗಾದ ಚೀನಾ

ಬ್ರಹ್ಮಪುತ್ರ ನದಿಗೆ ಅಣೆಕಟ್ಟು ಕಟ್ಟುವ ವಿಚಾರವಾಗಿ  ಭಾರತ ಹಾಗೂ ಬಾಂಗ್ಲಾದೇಶದೊಂದಿಗೆ ಮಾತುಕತೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಈ ಯೋಜನೆ ಪ್ರಾರಂಭಿಸುವುದಾಗಿ ಚೀನಾ ಹೇಳಿದೆ. 

India Also Announced Dam To brahmaputra river snr
Author
Bengaluru, First Published Dec 4, 2020, 9:39 AM IST

ಬೀಜಿಂಗ್‌ (ಡಿ.04): ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವ ತನ್ನ ಘೋಷಣೆಗೆ ಪ್ರತಿಯಾಗಿ ಭಾರತವೂ ಡ್ಯಾಂ ಕಟ್ಟುವ ಘೋಷಣೆ ಮಾಡಿದ ಬಳಿಕ ಚೀನಾ ತಣ್ಣಗಾಗಿದೆ. ಭಾರತ ಹಾಗೂ ಬಾಂಗ್ಲಾದೇಶದೊಂದಿಗೆ ಮಾತುಕತೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಈ ಯೋಜನೆ ಪ್ರಾರಂಭಿಸುವುದಾಗಿ ಚೀನಾ ಹೇಳಿದೆ. 

ಕಳೆದ ಹಲವಾರು ವರ್ಷಗಳಿಂದ ಮೂರೂ ದೇಶಗಳು ನದಿಯಲ್ಲಿನ ಪ್ರವಾಹ ಹಾಗೂ ಇನ್ನಿತರ ಅಪಾಯಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತಿವೆ. ಭವಿಷ್ಯದಲ್ಲಿ ಭಾರತ, ಬಾಂಗ್ಲಾ ಸಹಿತ ಇನ್ನಿತರ ದೇಶಗಳ ಜತೆ ಉತ್ತಮ ಮಾತುಕತೆಗಳು ಮುಂದುವರಿಯಲಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಹುವಾ ಚುನಿಯಾಂಗ್‌ ಹೇಳಿದ್ದಾರೆ.

2 ವರ್ಷ ಬಳಿಕ ಭಾರತದ ಅಕ್ಕಿ ಖರೀದಿಸಿದ ಚೀನಾ! ...

ಇದೇ ವೇಳೆ ಬ್ರಹ್ಮಪುತ್ರ ನದಿ ಬಗ್ಗೆ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ವಿಚಾರದಲ್ಲಿ ನಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಚೀನಾದೊಂದಿಗೆ ತೊಡಗಿಕೊಳ್ಳಲು ನಾವು ಉದ್ದೇಶಿಸಿದ್ದೇವೆ ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ.

Follow Us:
Download App:
  • android
  • ios