ಬರಾಕ್‌ ಒಬಾಮ ಹೇಳಿಕೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿರುವ ಪತ್ರಕರ್ತರೊಬ್ಬರು, ‘ಈಗ ಅಸ್ಸಾಂ ಪೊಲೀಸರು ಅಮೆರಿಕಕ್ಕೆ ಹೋಗಿ ಬರಾಕ್‌ ಒಬಾಮ ಅವರನ್ನು ಬಂಧಿಸುತ್ತಾರಾ?​’ ಎಂದು ಪ್ರಶ್ನಿಸಿದ್ದಾರೆ.

ಗುವಾಹಟಿ (ಜೂನ್ 24, 2023): ‘ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿಕೆ ನೀಡಿರುವ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಬಂಧಿಸುತ್ತೀರಾ?’ ಎಂಬ ಪ್ರಶ್ನೆಗೆ ಉತ್ತರಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ‘ಮೊದಲು ಭಾರತದಲ್ಲಿರುವ ಒಬಾಮಗಳನ್ನು ನೋಡಿ​ಕೊ​ಳ್ಳು​ತ್ತೇ​ವೆ’ ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಬರಾಕ್‌ ಒಬಾಮ ಹೇಳಿಕೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿರುವ ಪತ್ರಕರ್ತರೊಬ್ಬರು, ‘ಈಗ ಅಸ್ಸಾಂ ಪೊಲೀಸರು ಅಮೆರಿಕಕ್ಕೆ ಹೋಗಿ ಬರಾಕ್‌ ಒಬಾಮ ಅವರನ್ನು ಬಂಧಿಸುತ್ತಾರಾ?​’ ಎಂದು ಪ್ರಶ್ನಿಸಿದ್ದಾರೆ. ಏಕೆಂದರೆ ಇಂಥ ಹೇಳಿ​ಕೆ​ಗ​ಳನ್ನು ನೀಡಿದ್ದ ಅನೇ​ಕರ ಮೇಲೆ ಈ ಹಿಂದೆ ಹಿಮಂತ ಬಿಸ್ವ ಶರ್ಮಾ ಕ್ರಮಕ್ಕೆ ಆದೇ​ಶಿ​ಸಿ​ದ್ದರು. ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಹಿಮಂತ ಬಿಸ್ವ ಶರ್ಮಾ, ‘ಭಾರತದಲ್ಲೇ ಸಾಕಷ್ಟು ಹುಸೇನ್‌ ಒಬಾಮಗಳಿದ್ದಾರೆ. ಮೊದಲಿಗೆ ಅವರಿಗೆ ನಾವು ಆದ್ಯತೆ ನೀಡುತ್ತೇವೆ. ಬಳಿಕ ವಾಷಿಂಗ್ಟನ್‌ ಬಗ್ಗೆ ನಿರ್ಧರಿಸಲಾಗುತ್ತದೆ. ನಮ್ಮ ಆದ್ಯತೆಗಳಿಗೆ ತಕ್ಕಂತೆ ನಮ್ಮ ಪೊಲೀಸರು ಕೆಲಸ ಮಾಡಲಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನು ಓದಿ: ಇನ್ನೂ 300 ಮದ್ರಸಾ ಬಂದ್‌ ಆಗುತ್ತೆ: ಅಸಾದುದ್ದೀನ್‌ ಓವೈಸಿಗೆ ಅಸ್ಸಾಂ ಸಿಎಂ ಚಾಲೆಂಜ್‌

ಜೂನ್ 22 ರಂದು ಸಿಎನ್‌ಎನ್‌ಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ನೀಡಿದ ಸಂದರ್ಶನದ ಕುರಿತು ಪತ್ರಕರ್ತೆ ರೋಹಿಣಿ ಸಿಂಗ್ ಅವರ ಟೀಕೆಗೆ ಪ್ರತಿಕ್ರಿಯೆಯಾಗಿ ಹಿಮಂತ ಬಿಸ್ವಾ ಶರ್ಮಾ ಈ ಉತ್ತರ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು, ಯುಎಸ್ ಅಧ್ಯಕ್ಷ ಜೋ ಬೈಡೆನ್‌ ಭೇಟಿ ಮಾಡಿದರೆ, ಬಹುಸಂಖ್ಯಾತ ಹಿಂದೂ ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಉಲ್ಲೇಖಿಸುವುದು ಮೌಲ್ಯಯುತವಾಗಿದೆ ಎಂದು ಹೇಳಿದ್ದರು.

ಪ್ರಧಾನಿ ಮೋದಿಯವರ ಮೊದಲ ಯುಎಸ್ ರಾಜ್ಯ ಭೇಟಿಯ ಹಿನ್ನೆಲೆಯ ವಿರುದ್ಧ ಮತ್ತು ಭಾರತದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡುವ ಅಗತ್ಯತೆಯ ಸುತ್ತಲೂ ಹೆಚ್ಚುತ್ತಿರುವ ಕೂಗುಗಳ ಹಿನ್ನೆಲೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಈ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಬಾಲ್ಯವಿವಾಹಕ್ಕೆ ಬ್ರೇಕ್‌ ಬೆನ್ನಲ್ಲೇ ಬಹುಪತ್ನಿತ್ವ ಬ್ಯಾನ್‌ ಮಾಡಲು ಮುಂದಾದ ಅಸ್ಸಾಂ ಸಿಎಂ