Asianet Suvarna News Asianet Suvarna News

From the India Gate: ಅಧಿಕಾರಿ ಸಸ್ಪೆಂಡ್‌, ಮೇಲಿನವರು ಸೇಫ್‌: ತೃತೀಯ ರಂಗ ಬಲಗೊಳಿಸಲು ಮತ್ತೆ ‘ದೀದಿ’ ಯತ್ನ..!

ಒಂದಿಲ್ಲೊಂದು ರಾಜಕೀಯ ಹಾಗೂ ಅಧಿಕಾರಶಾಹಿಗಳ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ. ಗುಸುಗುಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

from the india gate gossip rajasthan pcs officer arrested kerala corruption up cell rules mamata banerjee third front ash
Author
First Published Mar 19, 2023, 11:10 AM IST

ಅಧಿಕಾರಿ ಸಸ್ಪೆಂಡ್‌, ಮೇಲಿನವರು ಸೇಫ್‌..!

ರಾಜಸ್ಥಾನದ ಇತಿಹಾಸದಲ್ಲೇ ಇತ್ತೀಚೆಗೆ ಅತಿ ದೊಡ್ಡ ಲಂಚ ಪ್ರಕರಣ ವರದಿಯಾಗಿದ್ದು, ಈ ಸಂಬಂಧ  11,500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಹರಿದ್ವಾರದ ವೈದ್ಯಕೀಯ ವಿತರಕರಿಗೆ ಸಹಾಯ ಮಾಡಲು 2 ಕೋಟಿ ರೂಪಾಯಿ ಲಂಚದ ಬೇಡಿಕೆಯ ಆರೋಪದ ಮೇಲೆ ಅಮಾನತುಗೊಂಡ ಆರ್‌ಪಿಎಸ್‌ ಅಧಿಕಾರಿಯ ಹೆಸರು ಸಹ ಈ ಚಾರ್ಜ್‌ಶೀಟ್‌ನಲ್ಲಿದೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಂತರ ಅಧಿಕಾರಿ ದಿವ್ಯಾ ಮಿತ್ತಲ್ ಅವರನ್ನು ಬಂಧಿಸಲಾಗಿತ್ತು. ‘ಊಪರ್‌ವಾಲೆ’ ಗಾಗಿ (ಮೇಲಿನ ಅಧಿಕಾರಿಗಳಿಗೆ) ತಾನು ಇದೆಲ್ಲವನ್ನೂ ಮಾಡಿದ್ದೇನೆ ಎಂದು ಅವರು ಮಾಧ್ಯಮಗಳಿಗೆ ಆರೋಪಿಸಿದ್ದರು. 

ಆದರೆ, ದಿವ್ಯಾ ಮಿತ್ತಲ್ ಅವರು ಮಾಧ್ಯಮದವರಿಗೆ ನೀಡಿದ ಹೇಳಿಕೆ ಸಾರ್ವಜನಿಕರ ಕಣ್ಣಿಗೆ ಬೀಳಲೇ ಇಲ್ಲ ನೋಡಿ.  ಚಾರ್ಜ್ ಶೀಟ್‌ನಲ್ಲಿ ದಿವ್ಯಾ ಹೇಳಿದ್ದ ಇಬ್ಬರು ಮೇಲಿನವರಿಗೆ ಏನಾಯಿತು ಎಂಬುದು ಕುತೂಹಲದ ಪ್ರಶ್ನೆಯಾಗಿಯೇ ಉಳಿದಿದೆ. 

ಇದನ್ನು ಓದಿ: From the India Gate: ಬಿಎಸ್‌ವೈ ಚೀಟಿ ಅಭ್ಯಾಸದ ಬಗ್ಗೆ ನಿಮಗೆಷ್ಟು ಗೊತ್ತು..? ಯುಪಿ ಸಿಎಂ ಎದುರು ರಾಜಿಯಾದ ಅಖಿಲೇಶ್‌..!

ಬಂಧನಕ್ಕೊಳಗಾದ ತಕ್ಷಣ ದಿವ್ಯಾ ಅವರನ್ನು ಅಮಾನತು ಮಾಡಲಾಗಿತ್ತು. ಅಲ್ಲದೆ, 
ಆಕೆಯ ಮಾಲೀಕತ್ವದ ರೆಸಾರ್ಟ್ ಅನ್ನು ಕೆಡವಲಾಯಿತು. ಆದರೆ ಆಕೆ ಸಾಕಷ್ಟು ಸುಳಿವು ನೀಡಿದ ಇಬ್ಬರು ಹಿರಿಯ ಅಧಿಕಾರಿಗಳನ್ನು ಮುಟ್ಟಲು ಯಾರೂ ಧೈರ್ಯ ಮಾಡಲಿಲ್ಲ ಎಂದು ತಿಳಿದುಬಂದಿದೆ. ಇತರ ಅನೇಕ ಆರೋಪಗಳಂತೆ, ಈ ``ಮೇಲಿನವರು’’ ಕೂಡ ಖಾಕಿ ಪರದೆಯ ಹಿಂದೆ ಶಾಶ್ವತವಾಗಿ ಉಳಿಯುತ್ತಾರೆ.

ಸೆಲ್ ನಿಯಮ
ಮಾಫಿಯಾ ಪ್ರಪಂಚವು ಹೊಸ ವ್ಯಾಖ್ಯಾನವನ್ನು ಹೊಂದಿದೆ - ಫಾರ್‌ ದಿ ಸೆಲ್ (ಸೇವಕರು), ಸೆಲ್‌ನಿಂದ (ಜೈಲು) ಮತ್ತು ಸೆಲ್ ಮೂಲಕ (ಫೋನ್). ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ನಡೆದ ರಾಜು ಪಾಲ್ ಹತ್ಯೆಯ ದುಷ್ಕರ್ಮಿಗಳು ಪೊಲೀಸರ ಮುಂದೆ ಶರಣಾಗುವಾಗ ಭೂಗತ ಜಗತ್ತಿನ ಗಲ್ಲಿಗಳ ಮೇಲಿನ ಈ ಗೀಚುಬರಹ ಮತ್ತೊಮ್ಮೆ ಬರೆಯಲ್ಪಡುತ್ತದೆ.

ಇದನ್ನೂ ಓದಿ: From the India Gate: ಕಾಂಗ್ರೆಸ್‌ ಒಗ್ಗಟ್ಟಿನ ಮಂತ್ರದ ವಾಸ್ತವ ಹೀಗಿದೆ; ‘ಭಜರಂಗಿ’ಗೆ ನೋಟಿಸ್‌ ಕಳಿಸಿದ ಸರ್ಕಾರ..!

ಹತ್ಯೆಯ ಹಿಂದಿರುವ ಡಾನ್‌ನ ಇಬ್ಬರು ಪುತ್ರರನ್ನು ಬೇಟೆಯಾಡಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೇ ಸಾಕಷ್ಟು ಕಸರತ್ತು ನಡೆಸಿದ್ದರೂ ಈ ಪ್ರಕರಣದಲ್ಲಿ ಯಾವುದೇ ಬಲವಾದ ಪೊಲೀಸ್ ಕ್ರಮ ನಡೆಯುವುದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ.

ರಾಜು ಪಾಲ್ ಹತ್ಯೆಯ ನಂತರ, ಇಬ್ಬರು ಆರೋಪಿಗಳನ್ನು ಎನ್‌ಕೌಂಟರ್‌ ಮಾಡಲಾಗಿದೆ. ಆದರೆ ಕಿರಿಯ ಬಾಸ್‌ಗಳು ಶೀಘ್ರದಲ್ಲೇ ಶರಣಾಗುತ್ತಾರೆ ಮತ್ತು ಅವರನ್ನು ಜೈಲಿನಲ್ಲಿ ಇರಿಸಲಾಗುತ್ತದೆ. ಅಲ್ಲಿಂದಲೇ ಅವರು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸುತ್ತಾರೆ. ಬಹುಶಃ ಇದು ವಂಶವಾಹಿಗಳ ಮೂಲಕ ಸಾಗುತ್ತದೆ ಅನ್ಸುತ್ತೆ. ಏಕೆಂದರೆ ಅವರ ತಂದೆ ಜೈಲಿನಲ್ಲಿದ್ದಾಗಲೂ ಅವರ ಸಾಮ್ರಾಜ್ಯವನ್ನು ಜೈಲಿನಲ್ಲಿ ನಡೆಸುವಲ್ಲೇ ಕುಖ್ಯಾತರಾಗಿದ್ದರು.

ಇದನ್ನೂ ಓದಿ: From the India Gate: ಹರಿಯೋ ನೀರಿಗೆ 'ಗೋವಾ' ದೊಣ್ಣೆ ನಾಯಕನ ಅಪ್ಪಣೆ: ರಾಜ್ಯದಲ್ಲಿ ಸಮರ್ಥ ಭಾಷಾಂತರಕಾರರ ಕೊರತೆ..!
 
ಭ್ರಷ್ಟಾಚಾರದ ದುರ್ವಾಸನೆ..!
ಇಂಡಿಯಾ ಗೇಟ್ ಕಳೆದ ವಾರ ಕೇರಳದ ವಾಣಿಜ್ಯ ರಾಜಧಾನಿಯಾದ ಕೊಚ್ಚಿಯಲ್ಲಿ ಹೊಗೆಗೆ ಕಾರಣವಾದ ಸ್ವಜನಪಕ್ಷಪಾತ, ಭ್ರಷ್ಟಾಚಾರದ ಕೊಳಕು ಜಾಡನ್ನು ವಿವರಿಸಿತ್ತು. ವಿಷಕಾರಿ ಹೊಗೆಯು ನಿಧಾನವಾಗಿ ಕ್ಲಿಯರ್‌ ಆಗಿದ್ದು, ಬ್ರಹ್ಮಪುರಂ ತ್ಯಾಜ್ಯ ಸುರಿಯುವ ಜಾಗದ ಹಿಂದಿನ ಘೋರ ವಂಚನೆಯ ಕಥೆಗಳು ಸ್ಪಷ್ಟವಾಗುತ್ತಿವೆ. ಹಣಕ್ಕಾಗಿ ಕಸದ ತೊಟ್ಟಿಗಳಲ್ಲಿ ಕೈ ಮುಳುಗಿಸಿದವರಲ್ಲಿ ಅಧಿಕಾರಶಾಹಿಗಳು ಮತ್ತು ರಾಜಕಾರಣಿಗಳು ಸೇರಿದ್ದಾರೆ.

ಕುತೂಹಲಕಾರಿ ಪ್ರಶ್ನೆಯೆಂದರೆ, ಬ್ರಹ್ಮಪುರಂ ಅನ್ನು ನಡೆಸಲು ಝೋಂಟಾ ಕಂಪನಿ ಗುತ್ತಿಗೆ ಪಡೆದಿದ್ದರೂ, ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ (ಕೆಎಸ್‌ಐಡಿಸಿ) ಪಾತ್ರದ ಬಗ್ಗೆ ಅನುಮಾನ ಮೂಡಿದೆ.  ಏಕೆಂದರೆ, ಕೊಚ್ಚಿನ್ ಕಾರ್ಪೊರೇಷನ್ ಕಂಪನಿಗೆ ಮುಂಗಡವಾಗಿ ಬಹುಕೋಟಿ ಮೊತ್ತ ಸೇರಿದಂತೆ ಎಲ್ಲಾ ಪಾವತಿಗಳನ್ನು ಮಾಡುತ್ತಿದ್ದರೂ ಝೋಂಟಾಗೆ ಗುತ್ತಿಗೆ ನೀಡಿದ್ದು ಕೆಎಸ್‌ಐಡಿಸಿ.

ಇದನ್ನೂ ಓದಿ: From the India Gate: ಸಿದ್ದರಾಮಯ್ಯ ಪುತ್ರ ವ್ಯಾಮೋಹ; ಬಂಗಾಳದಲ್ಲಿ ಬಡ ಪಕ್ಷ, ಸಿರಿವಂತ ನಾಯಕರು..!

ನೋಡಲ್ ಏಜೆನ್ಸಿಯಾದ ಕೆಎಸ್‌ಐಡಿಸಿಯಿಂದ ಝೋಂಟಾ ಇನ್‌ಫ್ರಾಟೆಕ್‌ಗೆ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಮತ್ತೊಂದು ಯೋಜನೆ ನೀಡಿರುವುದು ಬಹಿರಂಗವಾಗಿದೆ. ಕೆಎಸ್‌ಐಡಿಸಿ ಬ್ರಹ್ಮಪುರಂನಲ್ಲಿ 20 ಎಕರೆ ಭೂಮಿಯನ್ನು ಗುತ್ತಿಗೆಗೆ ನೀಡಿತ್ತು ಮತ್ತು ಹೆಚ್ಚಿನ ನಿಧಿಸಂಗ್ರಹಕ್ಕಾಗಿ ಅದನ್ನು ಅಡ ಇಡಲು ಸಂಪೂರ್ಣ ಕಾನೂನು ಹಕ್ಕುಗಳೊಂದಿಗೆ ಝೋಂಟಾಗೆ ಹಸ್ತಾಂತರಿಸಿತು. ಇನ್ನು, ಈ ಸಂಬಂಧ ರಾಜ್ಯ ಸರ್ಕಾರದ ಆದೇಶದ ತನಿಖೆ ಪ್ರಗತಿಯಲ್ಲಿದ್ದು, ಈ ಎಲ್ಲಾ ವ್ಯವಹಾರಗಳಿಂದ ಕೇರಳವು ಹೆಚ್ಚು ದುರ್ವಾಸನೆಗಾಗಿ ಕಾಯುತ್ತಿದೆ.
 
ಮಮತಾ ತೃತೀಯ ರಂಗ..!
ಪ್ರತಿ ಚುನಾವಣಾ ಸಮಯದ ಹತ್ತಿರದಲ್ಲಿಯೂ ತೃತೀಯ ರಂಗವನ್ನು ಒಟ್ಟಿಗೆ ಸೇರಿಸುವ ಪ್ರಯತ್ನಗಳು ದೇಶದಲ್ಲಿ ಕಂಡುಬರುತ್ತವೆ. ಇದೇ ರೀತಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೊಂದಿಗೆ ನಡೆಸಿದ ಇತ್ತೀಚಿನ ಸಭೆಯು ಮತ್ತೊಮ್ಮೆ ಈ ಊಹಾಪೋಹಕ್ಕೆ ಪುಷ್ಟಿ ನೀಡಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತನ್ನ ಸಮಾನ ಅಂತರ ನೀತಿಯನ್ನು ಕಾಪಾಡಿಕೊಳ್ಳಲು ಪಕ್ಷವು ಬಯಸುತ್ತಿರುವ ಕಾರಣ ಸಭೆಯಲ್ಲಿ ತೃತೀಯ ರಂಗದ ಸಾಧ್ಯತೆಯನ್ನು ಚರ್ಚಿಸಲಾಗಿದೆ ಎಂಬುದನ್ನು ಟಿಎಂಸಿ ಇನ್ನೂ ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: From the India Gate: ಸಮಾಜವಾದಿ ಪಕ್ಷಕ್ಕೆ ಮತ್ತಷ್ಟು ಬಲ; ಭಾರತ್‌ ಜೋಡೋ ಯಾತ್ರೆ ಯಶಸ್ಸಿನ ಗುಟ್ಟು..!

2021 ಮತ್ತು 2022 ರ ಚುನಾವಣೆಗಳಲ್ಲಿ ಮಾಡಿದಂತೆ ಟಿಎಂಸಿ ಮತ್ತು ಎಸ್‌ಪಿ ಮತ್ತೊಮ್ಮೆ ಕೈಜೋಡಿಸಬಹುದೇ ಎಂದು ರಾಜಕೀಯ ವೀಕ್ಷಕರು ಕುತೂಹಲದಿಂದ ನೋಡುತ್ತಿದ್ದಾರೆ.
ಇನ್ನು, ಮಾರ್ಚ್ 23 ರಂದು ಮಮತಾ ಬ್ಯಾನರ್ಜಿ ಅವರ ಒಡಿಶಾ ಭೇಟಿ ಮತ್ತು ಮುಖ್ಯಮಂತ್ರಿ ಹಾಗೂ ಬಿಜು ಜನತಾ ದಳದ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡುವ ಪ್ರಸ್ತಾಪದ ಮೇಲೆ ಎಲ್ಲಾ ಕಣ್ಣುಗಳಿವೆ. ಈ ಸಭೆಯಲ್ಲಿ ತೃತೀಯ ರಂಗವನ್ನು ಮತ್ತಷ್ಟು ಬಲಗೊಳಿಸುವ ಪ್ರಯತ್ನ ನಡೆಯಬಹುದು.

Follow Us:
Download App:
  • android
  • ios