ಎನ್‌ಸಿಪಿ ನಾಯಕ ಶರದ್ ಪವಾರ್, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸೇರಿದಂತೆ 19 ಮಂದಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ, ಹಲವು ಸದಸ್ಯರು ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಶಪಥ ಸ್ವೀಕರಿಸಿದ್ದು ಗಮನಾರ್ಹ.

ಪವಾರ್‌, ಅಠಾವಳೆ ಸೇರಿ 19 ಮಂದಿ ರಾಜ್ಯಸಭಾ ಸಂಸದರಾಗಿ ಶಪಥ

ನವದೆಹಲಿ: ಎನ್‌ಸಿಪಿ ನಾಯಕ ಶರದ್ ಪವಾರ್‌, ಕೇಂದ್ರ ಸಚಿವ ರಾಮದಾಸ್‌ ಅಠಾವಳೆ, ಸದನಕ್ಕೆ ಆಯ್ಕೆಯಾದ ಮೊದಲ ತೃತೀಯ ಲಿಂಗಿ ಮನೇಕಾ ಗುರುಸ್ವಾಮಿ ಸೇರಿದಂತೆ 19 ಮಂದಿ ಸೋಮವಾರ ರಾಜ್ಯಸಬಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಉಪ ರಾಷ್ಟ್ರಪತಿಯೂ ಆದ ರಾಜ್ಯಸಭೆ ಸಭಾಪತಿ ಸಿ.ಪಿ. ರಾಧಾಕೃಷ್ಣನ್‌ ಸಮ್ಮುಖದಲ್ಲಿ ನಾಯಕರು ಶಪಥ ಸ್ವೀಕರಿಸಿದರು. ಈ ವೇಳೆ ಉಪ ಸಭಾಪತಿ ಹರಿವಂಶ್‌, ಕೇಂದ್ರ ಸಚಿವ ಕಿರಣ್‌ ರಿಜಿಜು, ವಿವಿಧ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.

ಮಹಾರಾಷ್ಟ್ರದ ಐವರು, ತಮಿಳುನಾಡಿನಿಂದ ಆರು, ಪಶ್ಚಿಮ ಬಂಗಾಳದಿಂದ ಐವರು ಮತ್ತು ಒಡಿಶಾದಿಂದ ಮೂವರು ಶಪಥ ಸ್ವೀಕರಿಸಿದರು. ಬಹುತೇಕರು ತಮ್ಮ ಪ್ರಾದೇಶಿಕ ಭಾಷೆಯಲ್ಲಿಯೇ ಶಪಥ ಮಾಡಿದ್ದು ಗಮನಾರ್ಹವಾಗಿತ್ತು.

View post on Instagram