ಹೈ ಟೆನ್ಶನ್ ದೆಹಲಿ ವಿಧಾನಸಭೆ ಚುನಾವಣೆ| ಮತಗಟ್ಟೆ ಬಳಿ ಕಾಂಗ್ರೆಸ್-ಆಪ್ ಕಾರ್ಯಕರ್ತರ ಮಾರಾಮಾರಿ| ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ವಿರುದ್ಧ ಘೋಷಣೆ ಕೂಗಿದ ಆಪ್ ಕಾರ್ಯಕರ್ತ| ಹರ್ಮೇಶ್ ಕೆನ್ನೆಗೆ ಬಾರಿಸಲು ಯತ್ನಿಸಿದ ಅಲ್ಕಾ ಲಾಂಬಾ|

ನವದೆಹಲಿ(ಫೆ.08): ಚುನಾವಣಾ ದಿನದವರೆಗೂ ಬಹುತೇಕ ಶಾಂತವಾಗಿಯೇ ಇದ್ದ ರಾಷ್ಟ್ರ ರಾಜಧಾನಿ ನವದೆಹಲಿ, ಮತದಾನದ ದಿನ ರಾಜಕೀಯ ರಣಾಂಗಣವಾಗಿ ಮಾರ್ಪಟ್ಟಿದೆ. ಮತಗಟ್ಟೆ ಸಮೀಪ ಆಪ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾರಾಮಾರಿ ನಡೆಸಿದ್ದಾರೆ.

ಮಜ್ನು ಕಾ ಟೀಲಾ ಮತಗಟ್ಟೆ ಸಮೀಪ ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಾಂಬಾ ಬಂದಾಗ ಆಪ್ ಕಾರ್ಯಕರ್ತನೋರ್ವ ಆಕೆಯ ವಿರುದ್ಧ ಘೋಷಣೆ ಕೂಗಿದ. ಇದರಿಂದ ಸಿಟ್ಟಾದ ಅಲ್ಕಾ ಲಾಂಬಾ ಆತನ ಕೆನ್ನೆಗೆ ಬಾರಿಸಲು ಯತ್ನಿಸಿದ್ದಾರೆ. ಈ ವೇಳೆ ಅಲ್ಕಾ ಹೊಡೆತದಿಂಧ ತಪ್ಪಿಸಿಕೊಂಡ ಆಪ್ ಕಾರ್ಯಕರ್ತನೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಜಗಳಕ್ಕಿಳಿದಿದ್ದಾರೆ.

Scroll to load tweet…

ಮತಗಟ್ಟೆ ಬಳಿ ಆಪ್ ಕಾರ್ಯಕರ್ತನಿಗೆ ಅಲ್ಕಾ ಲಾಂಬಾ ಹೊಡೆಯಲೆತ್ನಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎರಡೂ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತರಾಗಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ, ಆಪ್ ಕಾರ್ಯಕರ್ತ ಹರ್ಮೇಶ್ ತಮ್ಮ ಕುರಿತು ಅವಹೇಳನಕಾರಿ ಪದಗಳನ್ನು ಬಳಸಿ ಮಾತನಾಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂದು ಹೇಳಿದ್ದಾರೆ.

ಫೆಬ್ರವರಿ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ