Asianet Suvarna News Asianet Suvarna News

'ಕಾಂಗ್ರೆಸ್‌ ಗೆದ್ದರೆ ಕೃಷಿ ಕಾಯ್ದೆ ರದ್ದು, ಕಸದ ಬುಟ್ಟಿ​ಗೆ ಎಸೆ​ಯು​ವೆ'

ಕಾಂಗ್ರೆಸ್‌ ಗೆದ್ದರೆ ಕೃಷಿ ಕಾಯ್ದೆ ರದ್ದು| ಕಸದ ಬುಟ್ಟಿ​ಗೆ ಎಸೆ​ಯು​ವೆ: ರಾಹುಲ್‌| ಸರಿ ಇದ್ದರೆ ರೈತರೇಕೆ ಪ್ರತಿಭಟಿಸುತ್ತಿದ್ದರು?

Farm Bill If farmers are happy why are they protesting, says Rahul Gandhi
Author
Bangalore, First Published Oct 5, 2020, 7:41 AM IST

ಮೋಗಾ(ಅ.05‌​): ಕೇಂದ್ರ​ದಲ್ಲಿ ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬಂದರೆ ಇತ್ತೀ​ಚೆಗೆ ಸಂಸ​ತ್ತಿನ ಅನು​ಮೋ​ದನೆ ಪಡೆ​ದಿ​ರುವ ಮೂರೂ ವಿವಾ​ದಿತ ಕೃಷಿ ಕಾಯ್ದೆ​ಗ​ಳನ್ನು ರದ್ದು​ಗೊ​ಳಿ​ಸು​ವು​ದಾಗಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಘೋಷಿ​ಸಿ​ದ್ದಾ​ರೆ.

ಭಾನು​ವಾರ ಅವರು ಇಲ್ಲಿ ನಡೆದ ‘ಖೇತಿ ಬಚಾವೋ ಯಾತ್ರಾ’ ವೇಳೆ ಟ್ರ್ಯಾಕ್ಟರ್‌ ರಾರ‍ಯಲಿ ನಡೆಸಿ ಬಳಿಕ ಸಮಾವೇಶದಲ್ಲಿ ಅವರು ಮಾತ​ನಾ​ಡಿ​ದ​ರು. ‘ಒಂದು ಮಾತ​ನ್ನು ನಿಮಗೆ ಖಚಿ​ತ​ವಾಗಿ ಹೇಳು​ತ್ತೇನೆ. ಕಾಂಗ್ರೆಸ್‌ ಪಕ್ಷ ಅಧಿ​ಕಾ​ರಕ್ಕೆ ಬಂದರೆ ಈ ಮೂರೂ ಕರಾಳ ಕೃಷಿ ಕಾಯ್ದೆ​ಗ​ಳನ್ನು ರದ್ದು​ಗೊ​ಳಿ​ಸು​ತ್ತೇವೆ ಹಾಗೂ ಅವ​ನ್ನು ಕಸದ ಬುಟ್ಟಿಗೆ ಎಸೆಯುತ್ತೇ​ವೆ’ ಎಂದು ಗುಡು​ಗಿ​ದ​ರು.

‘ಒಂದು ವೇಳೆ ರೈತರು ಈ ಕಾಯ್ದೆ​ಗ​ಳಿಂದ ಖುಷಿ​ಯಾ​ಗಿ​ದ್ದರೆ, ಅವ​ರೇಕೆ ದೇಶಾ​ದ್ಯಂತ ಪ್ರತಿ​ಭ​ಟನೆ ನಡೆ​ಸು​ತ್ತಿ​ದ್ದರು? ಪ್ರಧಾ​ನಿ​ಯ​ವರು ಇವು ರೈತಪರ ಕಾಯ್ದೆ​ಗಳು ಎನ್ನು​ತ್ತಾರೆ. ಹಾಗಿ​ದ್ದರೆ ಸಂಸ​ತ್ತಿ​ನಲ್ಲಿ ಏಕೆ ಮುಕ್ತ​ವಾಗಿ ಅವರು ಚರ್ಚಿ​ಸ​ಲಿ​ಲ್ಲ? ಕೊರೋನಾ ತಾಂಡವ ಆಡು​ತ್ತಿ​ರುವ ಈ ಸಂದ​ರ್ಭ​ದಲ್ಲಿ ಅಷ್ಟೊಂದು ಗಡಿ​ಬಿ​ಡಿ​ಯಿಂದ ಏಕೆ ಇವು​ಗ​ಳನ್ನು ಜಾರಿ ಮಾಡಿ​ದ​ರು?’ ಎಂ​ದು ರಾಹುಲ್‌ ಪ್ರಶ್ನಿ​ಸಿ​ದ​ರು.

ಮಸೂದೆ ವಿರೋಧಿಗಳು ದಲ್ಲಾಳಿಗಳ ದಲ್ಲಾಳಿಗಳು

'ಕೃಷಿ ಕಾಯ್ದೆ​ಗಳ ವಿರುದ್ಧ ದೇಶ​ದೆ​ಲ್ಲೆಡೆ ಪ್ರತಿ​ಭ​ಟನೆ ನಡೆ​ಯು​ತ್ತಿ​ವೆ’ ಎಂಬ ರಾಹುಲ್‌ ಗಾಂಧಿ ಹೇಳಿ​ಕೆಗೆ ಕೇಂದ್ರ ಸಚಿವ ಪ್ರಕಾಶ ಜಾವ​ಡೇ​ಕರ್‌ ತಿರು​ಗೇಟು ನೀಡಿ​ದ್ದಾರೆ. ‘ಪ್ರ​ತಿ​ಭ​ಟ​ನೆ​ಗಳು ಪಂಜಾ​ಬ್‌​ನಲ್ಲಿ ಮಾತ್ರ ನಡೆ​ಯು​ತ್ತಿವೆ. ಏಕೆಂದರೆ ಅಲ್ಲಿ ಕಾಂಗ್ರೆಸ್‌ ಸರ್ಕಾ​ರ​ವಿ​ದೆ’ ಎಂದಿ​ದ್ದಾ​ರೆ. ‘ರೈತ ಸಮು​ದಾಯ ಅಸಂತು​ಷ್ಟ​ವಾ​ಗಿ​ದ್ದರೆ ಇಡೀ ದೇಶ​ದಲ್ಲಿ ಪ್ರತಿ​ಭ​ಟ​ನೆ​ಗಳು ನಡೆ​ಯು​ತ್ತಿ​ದ್ದ​ವು. ಇಡೀ ದೇಶದ ರೈತರು ಕೃಷಿ ಕಾಯ್ದೆ ಸ್ವಾಗ​ತಿ​ಸಿ​ದ್ದಾರೆ ಎಂಬುದು ಇದ​ರ​ರ್ಥ’ ಎಂದು ಚಾಟಿ ಬೀಸಿದ್ದಾರೆ.

ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳು ದಲ್ಲಾಳಿಗಳ ದಲ್ಲಾಳಿಗಳು. ಸದ್ಯ ಕೃಷಿಕರಿಗೆ ತಾವು ಬೆಳೆದ ಬೆಳೆಗೆ ಕಡಿಮೆ ಬೆಲೆ ದೊರಕುತ್ತಿದೆ ಮತ್ತು ಗ್ರಾಹಕರು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುತ್ತಿದ್ದಾರೆ. ದಲ್ಲಾಳಿಗಳು ಇಲ್ಲಿ ಬೆಲೆ ಏರಿಸುತ್ತಿದ್ದಾರೆ. ಆದರೆ ನೂತನ ಕೃಷಿ ಮಸೂದೆ ಈ ಸಮಸ್ಯೆ ಪರಿಹಾರ ಸೂಚಿಸುತ್ತದೆ. ಆದರೆ ಇದಕ್ಕೆ ವಿರೋಧಿಸುವ ಮೂಲಕ ವಿರೋಧ ಪಕ್ಷಗಳು ದಲ್ಲಾಳಿಗಳ ದಲ್ಲಾಳಿಗಳಾಗಿ ವರ್ತಿಸುತ್ತಿವೆ. ಆದರೆ ಸುಳ್ಳಿಗೆ ಹೆಚ್ಚು ಕಾಲವಿಲ್ಲ, ಸತ್ಯಕ್ಕೆ ಎಂದೂ ಸಾವಿಲ್ಲ ಎಂದು ತೀವ್ರವಾಗಿ ಕಿಡಿಕಾರಿದ್ದಾರೆ.

Follow Us:
Download App:
  • android
  • ios