ಕರ್ನಾಟಕದ ಇಂದಿರಾ, ತಮಿಳುನಾಡಿನ ಅಮ್ಮಾ ಕ್ಯಾಂಟೀನ್‌ ರೀತಿ ಬಡವರಿಗೆ 5 ರು.ಗೆ ಊಟ| ಬಡವರ ಕ್ಯಾಂಟೀನ್‌ಗೆ ಮಮತಾ ಬ್ಯಾನರ್ಜಿ ಚಾಲನೆ| ಪ.ಬಂಗಾಳದಲ್ಲಿ 5 ರು.ಗೆ ‘ಮಾ’ ಕ್ಯಾಂಟೀನ್‌ ಊಟ

ಕೋಲ್ಕತಾ(ಫೆ.16): ಕರ್ನಾಟಕದ ಇಂದಿರಾ, ತಮಿಳುನಾಡಿನ ಅಮ್ಮಾ ಕ್ಯಾಂಟೀನ್‌ ರೀತಿ ಬಡವರಿಗೆ 5 ರು.ಗೆ ಊಟ ನೀಡುವ ‘ಮಾ’ ಕ್ಯಾಂಟೀನ್‌ ಯೋಜನೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಚಾಲನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಸರ್ಕಾರ ಯೋಜನೆಗೆ ಚಾಲನೆ ನೀಡಿದೆ. ಮಾ ಕ್ಯಾಂಟೀನ್‌ನಲ್ಲಿ 5 ರು.ಗೆ ಒಂದು ಪ್ಲೇಟ್‌ ಅನ್ನ, ದಾಲ್‌, ತರಕಾರಿ ಅಥವಾ ಎಗ್‌ಕರಿ ದೊರೆಯಲಿದೆ. ಪ್ರತಿ ಊಟಕ್ಕೆ ಸರ್ಕಾರ 15 ರು.ಸಬ್ಸಿಡಿ ನೀಡಲಿದ್ದು, ಗ್ರಾಹಕರಿಂದ ಕೇವಲ 5 ರು. ಶುಲ್ಕ ಪಡೆಯಲಾಗುವುದು.

ಸ್ವಯಂಸೇವಾ ಸಂಸ್ಥೆಗಳು ಪ್ರತಿನಿತ್ಯ ಮಧ್ಯಾಹ್ನ 1ಗಂಟೆಯಿಂದ 3 ಗಂಟೆಯವರೆಗೆ ಕ್ಯಾಂಟೀನ್‌ ಅನ್ನು ನಡೆಸಲಿವೆ. ಹಂತ ಹಂತವಾಗಿ ರಾಜ್ಯದೆಲ್ಲೆಡೆ ‘ಮಾ’ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.