ಅಕ್ರಮ ಗಣಿಗಾರಿಕೆ ಆರೋಪದ ಪ್ರಕರಣದಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್ಎಲ್ಡಿ) ಮಾಜಿ ಶಾಸಕ ದಿಲ್ಬಾಗ್ ಸಿಂಗ್, ಕಾಂಗ್ರೆಸ್ ಮಾಜಿ ಶಾಸಕ ಸುರೇಂದರ್ ಪನ್ವಾರ್ ಮತ್ತು ಅವರ ಸಹಚರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ತನಿಖಾ ಸಂಸ್ಥೆ ಇಡಿ ರೇಡ್ ಮಾಡಿದೆ.
ನವದೆಹಲಿ (ಜನವರಿ 5, 2024): ಹರಿಯಾಣ ಮತ್ತು ಪಂಜಾಬ್ನಲ್ಲಿರುವ ಇಬ್ಬರು ಮಾಜಿ ಶಾಸಕರ ನಿವಾಸದಲ್ಲಿ ಇಡಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಈ ಶೋಧ ಕಾರ್ಯಾಚರಣೆ ವೇಳೆ ಜಾರಿ ನಿರ್ದೇಶನಾಲಯವು 100 ಮದ್ಯದ ಬಾಟಲಿ, 5 ಕೋಟಿ ರೂ. ನಗದು, ಅಕ್ರಮ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಮತ್ತು ಸುಮಾರು 300 ಕಾಟ್ರಿಡ್ಜ್ಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಆರೋಪದ ಪ್ರಕರಣದಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್ಎಲ್ಡಿ) ಮಾಜಿ ಶಾಸಕ ದಿಲ್ಬಾಗ್ ಸಿಂಗ್, ಕಾಂಗ್ರೆಸ್ ಮಾಜಿ ಶಾಸಕ ಸುರೇಂದರ್ ಪನ್ವಾರ್ ಮತ್ತು ಅವರ ಸಹಚರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ತನಿಖಾ ಸಂಸ್ಥೆ ರೇಡ್ ಮಾಡಿದೆ.
ಇದನ್ನು ಓದಿ: ಸತತ 3ನೇ ಬಾರಿ ಇಡಿ ಸಮನ್ಸ್ ತಪ್ಪಿಸಿಕೊಂಡ ಅರವಿಂದ್ ಕೇಜ್ರಿವಾಲ್: ದೆಹಲಿ ಸಿಎಂಗೆ ಬಂಧನ ಭೀತಿ?
ದಿಲ್ಬಾಗ್ ಸಿಂಗ್ ಯಮುನಾನಗರದ ಮಾಜಿ INLD ಶಾಸಕರಾಗಿದ್ದರೆ, ಸುರೇಂದರ್ ಪನ್ವಾರ್ ಸೋನಿಪತ್ನಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು. ಯಮುನಾನಗರ, ಸೋನಿಪತ್, ಮೊಹಾಲಿ, ಫರಿದಾಬಾದ್, ಚಂಡೀಗಢ ಮತ್ತು ಕರ್ನಾಲ್ನ 20 ಸ್ಥಳಗಳಲ್ಲಿ ಗುರುವಾರ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಇನ್ನೊಂದೆಡೆ, ಮದ್ಯ ಹಾಗೂ ನಗದನ್ನು ಹೊರತುಪಡಿಸಿ 4 ರಿಂದ 5 ಕೆಜಿ ತೂಕದ 3 ಚಿನ್ನದ ಬಿಸ್ಕತ್ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಗಣಿಗಾರಿಕೆಯನ್ನು ನಿಷೇಧಿಸಿದ ನಂತರ ಯಮುನಾನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬಂಡೆ, ಜಲ್ಲಿ ಮತ್ತು ಮರಳು ಅಕ್ರಮ ಗಣಿಗಾರಿಕೆಯ ಕುರಿತು ತನಿಖೆ ನಡೆಸಲು ಹರಿಯಾಣ ಪೊಲೀಸರು ಅನೇಕ ಪ್ರಕರಣಗಳನ್ನು ದಾಖಲಿಸಿದ ನಂತರ ತನಿಖಾ ಸಂಸ್ಥೆಯು ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣವನ್ನು ದಾಖಲಿಸಿದೆ.
ನಮ್ಮ ಸಂಸ್ಥೆಗಳನ್ನು ಟಾರ್ಗೆಟ್ ಮಾಡ್ಬೇಡಿ: ಭಾರತಕ್ಕೆ ಎಚ್ಚರಿಕೆ ನೀಡಿದ ಚೀನಾ
ಗಣಿ ಉದ್ಯಮಿ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಸುರೇಂದ್ರ ಪನ್ವಾರ್ ಮತ್ತು ಅವರ ಸಹಚರರ ನಿವಾಸದ ಮೇಲೆ ನಿನ್ನೆ ರೇಡ್ ಆರಂಭವಾಗಿದೆ. ಗುರುವಾರ 15 ರಿಂದ 20 ತನಿಖಾ ಸಂಸ್ಥೆಯ ಅಧಿಕಾರಿಗಳು ಆರು ವಾಹನಗಳಲ್ಲಿ ಶಾಸಕರ ನಿವಾಸ, ಕಚೇರಿ ಮತ್ತಿತರ ಸ್ಥಳಗಳಿಗೆ ಆಗಮಿಸಿದ್ದು, ದಾಳಿ ಇಂದೂ ಮುಂದುವರಿದಿದೆ. ಇಡಿ ತಂಡ ಮನೆಯಲ್ಲಿದ್ದ ಕುಟುಂಬ ಮತ್ತು ಸಿಬ್ಬಂದಿಯ ಫೋನ್ಗಳನ್ನು ವಶಪಡಿಸಿಕೊಂಡಿದೆ
ಗಣಿಗಾರಿಕೆಗಾಗಿ ಬಿಲ್ಗಳು ಮತ್ತು ಸ್ಲಿಪ್ಗಳನ್ನು ಉತ್ಪಾದಿಸಲು ಮಾಜಿ ಶಾಸಕರು ನಕಲಿ 'ಇ-ರಾವಣ' ಯೋಜನೆಯನ್ನು ನಡೆಸುತ್ತಿದ್ದಾರೆ ಎಂದು ಕೇಂದ್ರ ಏಜೆನ್ಸಿ ಆರೋಪಿಸಿದೆ. ಈ ಆನ್ಲೈನ್ ಪೋರ್ಟಲ್ ಅನ್ನು 2020 ರಲ್ಲಿ ಹರ್ಯಾಣ ಸರ್ಕಾರವು ರಾಯಧನ ಸಂಗ್ರಹವನ್ನು ಸರಳೀಕರಿಸಲು ಮತ್ತು ಗಣಿಗಾರಿಕೆ ಪ್ರದೇಶಗಳಲ್ಲಿ ತೆರಿಗೆ ವಂಚನೆ ತಡೆಯಲು ಪರಿಚಯಿಸಿತು.
