ಆಸ್ಪತ್ರೆಯಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅನಾಹುತದ ಮುನ್ಸೂಚನೆ ನೀಡಿದೆ. ಬಳಿಕ ತಕ್ಷಣ ಎಚ್ಚೆತ್ತ ಸಿಬ್ಬಂದಿ ಈ ಘಟನೆಯನ್ನು ದೊಡ್ಡದಾಗದಂತೆ ನೋಡಿಕೊಂಡಿದ್ದಾರೆ.

ರಾಜ್‌ಕೋಟ್‌ (ಗುಜರಾತ್‌) ಡಿಸೆಂಬರ್ 22, 2023): ಆಸ್ಪತ್ರೆಯೊಂದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಅದೂ ಈ ಅಗ್ನಿ ಅವಘಡಕ್ಕೆ ಕಾರಣ ಬೀಡಿ!

Add Asianetnews Kannada as a Preferred SourcegooglePreferred

ಅಸ್ಪತ್ರೆಯ ಉಸಿರಾಟದ ಮಧ್ಯಂತರ ಆರೈಕೆ ಘಟಕದಲ್ಲಿ (RICU) ಆಮ್ಲಜನಕ-ಬೆಂಬಲ ಪಡೆಯುತ್ತಿದ್ದ ರೋಗಿಗೆ ಬೀಡಿ ಹೊಡೆಯುವ ಚಟ ಬಂದು ಹಚ್ಚಿಕೊಂಡು ಬಿಟ್ಟಿದ್ದಾರೆ. ಮೂಲಗಳು ಹೇಳುವಂತೆ ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಗೆ ದಾಖಲಾಗಿದ್ದ ವ್ಯಕ್ತಿಗೆ ತನ್ನ ಕಡುಬಯಕೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

ಇದನ್ನು ಓದಿ: ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟ; ಇಬ್ಬರ ಸ್ಥಿತಿ ಗಂಭೀರ!

ಬಳಿಕ ಆಸ್ಪತ್ರೆಯಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅನಾಹುತದ ಮುನ್ಸೂಚನೆ ನೀಡಿದೆ. ಬಳಿಕ ತಕ್ಷಣ ಎಚ್ಚೆತ್ತ ಸಿಬ್ಬಂದಿ ಈ ಘಟನೆಯನ್ನು ದೊಡ್ಡದಾಗದಂತೆ ನೋಡಿಕೊಂಡಿದ್ದಾರೆ. ಬೇಗನೇ ನಂದಿಸುವ ಮೂಲಕ ಯಾವುದೇ ಅನಾಹುತವನ್ನು ತಪ್ಪಿಸಿದ್ದಾರೆ.

ಮಧ್ಯವಯಸ್ಕ ರೋಗಿಯು ಬೀಡಿಗಾಗಿ ಪ್ರಲೋಭನೆಗೆ ಒಳಗಾಗಿದ್ದು, ಬಳಿಕ ಬೀಡಿ ಸೇದಿದ್ದಾರೆ. ಆದರೆ, ಬೆಂಕಿ ಕಾಣಿಸಿಕೊಂಡ ಬಳಿಕ ಕುಟುಂಬ ಸದಸ್ಯರು ಮನವಿ ಮಾಡಿದ ನಂತರ, ಆಸ್ಪತ್ರೆ ಸಿಬ್ಬಂದಿ ಬೇಗನೇ ಬೆಂಕಿ ನಂದಿಸಿದ್ದಾರೆ. ಅಪಘಾತದಿಂದ ಉಂಟಾದ ಸಣ್ಣ ಬೆಂಕಿಯನ್ನು ನಿಮಿಷಗಳಲ್ಲಿ ನಂದಿಸಲಾಗಿದೆ ಎಂದು ಆಸ್ಪತ್ರೆಯ ಪ್ರಾಧಿಕಾರವು ಈ ಸಂಬಂಧ ತನ್ನ ಅಧಿಕೃತ ಹೇಳಿಕೆ ನೀಡಿದೆ. 

ಪಾತಕಿ ದಾವೂದ್‌ ಇಬ್ರಾಹಿಂಗೆ ವಿಷಪ್ರಾಶನ, ಮೋಸ್ಟ್‌ ವಾಂಟೆಡ್‌ ಉಗ್ರ ಸಾವು ಎಂಬ ಗುಸುಗುಸು: ಛೋಟಾ ಶಕೀಲ್‌ ಹೇಳಿದ್ದೇನು?

ಇನ್ನು, ಮೂಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದ ಕಾರಣ ರೋಗಿಯು ಹೀಗೆ ಮಾಡಿದ್ದಾರೆ ಎಂದೂ ಹೇಳಲಾಗಿದೆ. ಜಾಮ್‌ನಗರದ ಜಿಜಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಮಧ್ಯವಯಸ್ಕ ವ್ಯಕ್ತಿಯನ್ನು ಉಸಿರಾಟದ ತೊಂದರೆಯ ದೂರಿನಿಂದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಪರೀಕ್ಷೆಗಳ ನಂತರ, ಕರ್ತವ್ಯದಲ್ಲಿದ್ದ ವೈದ್ಯರು ಅವರನ್ನು RICU ಗೆ ಸ್ಥಳಾಂತರಿಸಲು ಸಲಹೆ ನೀಡಿದರು. ಅವರು ಕ್ರಾನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ) ರೋಗಿಯಾಗಿದ್ದು, ಅವರ ಹೃದಯವೂ ದುರ್ಬಲವಾಗಿದೆ ಎಂದು ವೈದ್ಯರು ಹೇಳಿದ್ದಾರೆಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿದೆ. 

ವ್ಯಕ್ತಿ ವೆಂಟಿಲೇಟರ್‌ನಲ್ಲಿದ್ದರು ಮತ್ತು ವ್ಯಸನದಿಂದ ಅವರು ಬೀಡಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ. ಆದರೆ, ನಿರುಪದ್ರವವೆಂದು ತೋರುವಷ್ಟು, ಅವರ ಕೈಯಲ್ಲಿ ಬೆಂಕಿ ಕಾಣಿಸಿಕೊಂಡಿತು, ಅದು ಅವರ ಮಾಸ್ಕ್‌ಗೆ ಹರಡಿತು ಮತ್ತು ಆ ವ್ಯಕ್ತಿಯ ಬೆರಳುಗಳು ಮತ್ತು ಹಣೆಯ ಮೇಲೆ ಸುಟ್ಟ ಗಾಯಗಳಾಗಿವೆ. ಬೆಡ್‌ನ ಬಳಿ ಬೆಂಕಿಪೊಟ್ಟಣ ಪತ್ತೆಯಾಗಿದೆ. ಭಯದಿಂದ ಬೀಡಿ ವಿಲೇವಾರಿ ಮಾಡಿರಬಹುದು ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಡಿಯಲ್ಲಿ ಘಟನೆಯ ಸಮಯದಲ್ಲಿ 15 ರೋಗಿಗಳು ಇದ್ದರು ಎಂದು ತಿಳಿದುಬಂದಿದೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಜಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ದೀಪಕ್ ತಿವಾರಿ, ಈ ಘಟನೆ ಆಕಸ್ಮಿಕವಾಗಿದೆ, ಸಿಬ್ಬಂದಿ ತಕ್ಷಣ ಧಾವಿಸಿ ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿದರು, ಒಬ್ಬ ರೋಗಿಗೆ ಸಣ್ಣ ಗಾಯವಾಗಿದ್ದು, ಇತರ ಎಲ್ಲಾ ರೋಗಿಗಳು ಸುರಕ್ಷಿತವಾಗಿದ್ದಾರೆ, ಸ್ಥಳಾಂತರಿಸುವಿಕೆಯ ಅಗತ್ಯವಿಲ್ಲ ಎಂದಿದ್ದಾರೆ.