Asianet Suvarna News Asianet Suvarna News

Kerala Viral Fever: ವೈರಲ್ ಜ್ವರದಿಂದ ನರಳುತ್ತಿದೆ ಕೇರಳ, ಸಾವಿನ ಸಂಖ್ಯೆ 23ಕ್ಕೆ ಏರಿಕೆ!

ಕೇರಳ ರಾಜ್ಯವು ವೈರಲ್ ಜ್ವರದಿಂದ ಬಳಲುತ್ತಿದೆ. ಸೋಮವಾರ ಮಲಪ್ಪುರಂನಲ್ಲಿ ಡೆಂಗ್ಯೂನಿಂದ ಎರಡು  ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. 

Dengue flu rat fever grips death toll increasing in kerala kannada news gow
Author
First Published Jun 20, 2023, 4:14 PM IST

ಬೆಂಗಳೂರು (ಜೂ.20): ಕೇರಳ ರಾಜ್ಯವು ವೈರಲ್ ಜ್ವರದಿಂದ ಬಳಲುತ್ತಿದೆ. 10 ದಿನಗಳಲ್ಲಿ 13,000 ಕ್ಕೂ ಹೆಚ್ಚು ಸೋಂಕಿತರು ಬೆಳಕಿಗೆ ಬಂದಿದ್ದಾರೆ. ಡೆಂಗ್ಯೂ, ಇಲಿ ಜ್ವರ ಮತ್ತು ಲೆಪ್ಟೊಸ್ಪೈರೋಸಿಸ್ನೊಂದಿಗೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಸಾಂಕ್ರಾಮಿಕ ಜ್ವರದ ಜೊತೆಗೆ ಈ ಎರಡು ಬಗೆಯ ಜ್ವರಗಳ ಹಾವಳಿಯೂ ಹೆಚ್ಚಿದೆ. ಸೋಮವಾರ ಮಲಪ್ಪುರಂನಲ್ಲಿ ಡೆಂಗ್ಯೂನಿಂದ ಎರಡು  ಸಾವು ಸಂಭವಿಸಿರುವುದನ್ನು ಆರೋಗ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಮೂಲಕ ಶಂಕಿತ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿರುವವರ ಸಂಖ್ಯೆ ಕನಿಷ್ಠ 23ಕ್ಕೆ ಏರಿಕೆಯಾಗಿದೆ.  ಕೇರಳದಲ್ಲಿ ಈವರೆಗೆ 1,48,362  ಸಾಂಕ್ರಾಮಿಕ ರೋಗ ಪ್ರಕರಣಗಳು ವರದಿಯಾಗಿವೆ.  ಪ್ರತಿದಿನ ಸರಾಸರಿ 8,200 ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿದೆ. 

218 ಮಂದಿ ಡೆಂಗ್ಯೂ ಶಂಕಿತರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗರಿಷ್ಠ ಸಂಖ್ಯೆಯ ಡೆಂಗ್ಯೂ ರೋಗಿಗಳು ಎರ್ನಾಕುಲಂ ಜಿಲ್ಲೆಯವರು, ಅಲ್ಲಿ 43 ಜನರಿಗೆ ರೋಗಲಕ್ಷಣ ಕಾಣಿಸಿಕೊಂಡಿದೆ ಮತ್ತು 55 ಜನರಿಗೆ ಡೆಂಗ್ಯೂ ಬಂದಿದೆ ಎಂದು ಶಂಕಿಸಲಾಗಿದೆ. ಜೂನ್ ತಿಂಗಳಿನಲ್ಲಿ ಈವರೆಗೆ 1,011 ಮಂದಿಗೆ ಡೆಂಗ್ಯೂ ಪತ್ತೆಯಾಗಿದೆ. ಲೆಪ್ಟೊಸ್ಪೈರೋಸಿಸ್ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜೂನ್​ 19ರ ಒಂದೇ ದಿನ 8 ಮಂದಿಗೆ ಲೆಪ್ಟೊಸ್ಪಿರೋಸಿಸ್ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೆ 14 ಮಂದಿಗೆ ಲೆಪ್ಟೊಸ್ಪಿರೋಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂನ್​ ಆರಂಭದಿಂದ ಒಟ್ಟು 76 ಮಂದಿಯಲ್ಲಿ ಲೆಪ್ಟೊಸ್ಪಿರೋಸಿಸ್ ಸೋಂಕು ಪತ್ತೆಯಾಗಿದ್ದು, 116 ಮಂದಿ ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಡಿನಾಡು ಸರ್ಕಾರಿ ಶಾಲೆಗೆ ಮತ್ತೆ ಆಪತ್ತು; ಕನ್ನಡದ ಗಂಧಗಾಳಿ ಗೊತ್ತಿಲ್ಲದ ಮಲಯಾಳಂ ಶಿಕ್ಷಕಿ ನೇಮಿಸಿದ ಕೇರಳ!

ಡೆಂಗ್ಯೂ ಹರಡುವುದನ್ನು ತಡೆಯಲು ಸರ್ಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ತೀವ್ರಗೊಳಿಸಿದೆ ಮತ್ತು ರೋಗಕಾರಕ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಸೊಳ್ಳೆ ಸಂತಾನೋತ್ಪತ್ತಿ ಮೂಲಗಳು ಮತ್ತು ಸೋಂಕಿತ ಸೊಳ್ಳೆಗಳನ್ನು ನಿರ್ಮೂಲನೆ ಮಾಡುವತ್ತ ಗಮನ ಹರಿಸಲಾಗಿದೆ. ಸ್ಥಳೀಯ ಸಂಸ್ಥೆಗಳು ಡೆಂಗ್ಯೂ ಹರಡುವುದನ್ನು ತಡೆಗಟ್ಟಲು  ಶ್ರಮವಹಿಸುತ್ತಿವೆ. ಇದಲ್ಲದೆ, ಸೊಳ್ಳೆಗಳನ್ನು ನಿರ್ಮೂಲನೆ ಮಾಡಲು ಡೆಂಗ್ಯೂ ಪ್ರಕರಣಗಳು ವರದಿಯಾದ ಮನೆಗಳನ್ನು ಪತ್ತೆ ಹಚ್ಚಿ ಅದರ ಶಮನಕ್ಕೆ ಮುಂದಾಗಬೇಕೆಂದು ಆರೋಗ್ಯ ಇಲಾಖೆಯು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ.

Milma VS Nandini: ರಾಜ್ಯಗಳ ನಡುವೆ 'ಹಾಲಾಹಲ', ಪರಿಹಾರ ಕೋರಿ ರಾಜ್ಯಕ್ಕೆ ಕೇರಳ ಸರ್ಕಾರ ಪತ್ರ!

ನಿರಂತರ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ಜ್ವರ ಚಿಕಿತ್ಸಾಲಯಗಳನ್ನು ಸ್ಥಾಪಿಸಲು ತಜ್ಞರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕೇರಳದ ಮಾಜಿ ಅಧ್ಯಕ್ಷ ಡಾ ಅಬ್ರಹಾಂ ವರ್ಗೀಸ್ ಮಾತನಾಡಿ, ಜ್ವರ ರೋಗಿಗಳನ್ನು ಇತರ ರೋಗಿಗಳೊಂದಿಗೆ ಬೆರೆಸುವುದು ಅಪಾಯವನ್ನುಂಟು ಮಾಡುತ್ತದೆ ಮತ್ತು ಜ್ವರ ರೋಗಿಗಳನ್ನು ಪರೀಕ್ಷಿಸಲು ಮತ್ತು ಚಿಕಿತ್ಸೆ ನೀಡಲು ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕ್ಲಿನಿಕ್ ಅನ್ನು ಸ್ಥಾಪಿಸಬೇಕು. ಈ ರೋಗಗಳು ಆಸ್ಪತ್ರೆಗಳಿಂದಲೇ ಹರಡುತ್ತವೆ. ಅನೇಕ ರೋಗಿಗಳು ಯಕೃತ್ತು ಅಥವಾ ಹೃದಯ ಕಾಯಿಲೆಗಳೊಂದಿಗೆ ಬರುತ್ತಾರೆ. ಜ್ವರ ಇರುವವರೊಂದಿಗೆ ಇತರ ರೋಗಿಗಳನ್ನು ಬೆರೆಸಬಾರದು. ಜ್ವರ ಪೀಡಿತರಿಗೆ ಪ್ರತ್ಯೇಕ ಚಿಕಿತ್ಸಾಲಯವಿದ್ದರೆ ಅನುಕೂಲವಾಗುತ್ತದೆ. ಅನೇಕ ಆಸ್ಪತ್ರೆಗಳು ಈಗಾಗಲೇ ಇದನ್ನು ಸ್ಥಾಪಿಸಿವೆ ಎಂದು ಡಾ.ಅಬ್ರಹಾಂ ಹೇಳಿದ್ದಾರೆ.

ಪರಿಸರವನ್ನು ಸ್ವಚ್ಛವಾಗಿಡಲು ಸರ್ಕಾರ ಮತ್ತು ನಾಗರಿಕರು ಒಟ್ಟಾಗಿ ಕೆಲಸ ಮಾಡಬೇಕು. ಮುಂಗಾರು ಪೂರ್ವದಲ್ಲಿ ಕ್ರಮಕೈಗೊಳ್ಳಬೇಕು ಎಂದು ಡಾ.ರಾಜಲಕ್ಷ್ಮಿ ಹೇಳಿದರು. ''ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಬಲಪಡಿಸಬೇಕು. ಅಲ್ಲದೆ, ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯಗಳ ವ್ಯವಸ್ಥೆ ಮಾಡಬೇಕು’ ಎಂದು ಡಾ.ರಾಜಲಕ್ಷ್ಮಿ ಹೇಳಿದರು. ವ್ಯಾಕ್ಸಿನೇಷನ್ ಈ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. 

Follow Us:
Download App:
  • android
  • ios