ದೆಹಲಿ ಹಜ್ ಸಮಿತಿಯ ಅಧ್ಯಕ್ಷೆ ಕೌಸರ್ ಜಹಾನ್ ಹೋಳಿ ಹಬ್ಬದ ಮರುದಿನ ತಮ್ಮ ನಿವಾಸದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದರು. ರೇಖಾ ಗುಪ್ತಾ, ಪ್ರವೇಶ್ ವರ್ಮಾ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳು ಭಾಗವಹಿಸಿದ್ದರು.

ದೆಹಲಿ (ಮಾ.15): ದೆಹಲಿ ಹಜ್ ಸಮಿತಿಯ ಅಧ್ಯಕ್ಷೆ ಹಾಗೂ ಬಿಜೆಪಿ ನಾಯಕಿ ಕೌಸರ್ ಜಹಾನ್ ಅವರು ಹೋಳಿ ಹಬ್ಬದ ಮರುದಿನ ಅಂದರೆ ಮಾರ್ಚ್ 15 ರಂದು ತಮ್ಮ ನಿವಾಸದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು.

Add Asianetnews Kannada as a Preferred SourcegooglePreferred

 ಮುಖ್ಯಮಂತ್ರಿ ರೇಖಾ ಗುಪ್ತಾ, ಸಂಪುಟ ಸಚಿವ ಪ್ರವೇಶ್ ವರ್ಮಾ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳು ಮತ್ತು ಸಾಮಾನ್ಯ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೌಸರ್ ಜಹಾನ್ ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ಕೌಸರ್ ಜಹಾನ್ ಹೇಳಿದ್ದೇನು?

ಇಂದು ನಾನು ದಾವತ್-ಎ-ಇಫ್ತಾರ್ ಆಯೋಜಿಸಿದ್ದೇನೆ. ಹೋಳಿ ಹಬ್ಬದ ಒಂದು ದಿನದ ನಂತರ ಇಫ್ತಾರ್ ನಡೆಯುತ್ತಿದೆ. ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಭಾಗವಹಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯ ಜನರು ಬರುತ್ತಿದ್ದಾರೆ. ನಮ್ಮ ದೇಶವು ಪ್ರೀತಿ ಮತ್ತು ಸಾಮರಸ್ಯದ ಸುಂದರ ದಾರದಿಂದ ಕಟ್ಟಲ್ಪಟ್ಟಿದೆ ಎಂಬುದರ ಸಂಕೇತವೇ ಇದು' ಎಂದು ಕೌಸರ್ ಜಹಾನ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಗೆಲ್ಲೋ ತನಕ ಅವನು 'ಜನ ಸೇನಾನಿ' ಗೆದ್ದ ಬಳಿಕ 'ಭಜನ್ ಸೇನಾನಿ' ಪವನ್ ವಿರುದ್ಧ ಪ್ರಕಾಶ್ ರಾಜ್ ಪೋಸ್ಟ್ ವೈರಲ್!

ನಿನ್ನೆಯಷ್ಟೇ (ಶುಕ್ರವಾರ ಮಾರ್ಚ್ 14) ಹೋಳಿ ಹಬ್ಬ ಮತ್ತು ರಂಜಾನ್‌ನ ಮೂರನೇ ಶುಕ್ರವಾರ ಒಟ್ಟಿಗೆ ಬಂದ ಹೋಳಿ-ಜುಮಾ ವಿವಾದದ ಬಗ್ಗೆಯೂ ಮಾತನಾಡಿದ ಕೌಸರ್, ಈ ಸಮಯದಲ್ಲಿ, ಹೋಳಿ ಹಬ್ಬವು ಶುಕ್ರವಾರದ ಪ್ರಾರ್ಥನೆಯೊಂದಿಗೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.ನಮ್ಮ ದೇಶದಲ್ಲಿ ಸಹೋದರತ್ವ, ಪ್ರೀತಿ ಮತ್ತು ಸದ್ಭಾವನೆ ಎಂದರೆ ಇದೇ. ಜನರು ಸಹ ಅದನ್ನೇ ಬಯಸುತ್ತಾರೆ. ಅಂತಹ ಸಂತೋಷದ ವಾತಾವರಣ ಯಾವಾಗಲೂ ಉಳಿಯಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದರು.

ತುಂಬಾ ಸಂತೋಷವಾಗಿದೆ: ದೆಹಲಿ ಸಿಎಂ

ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮಾತನಾಡಿ,'ನಾವು ನಮ್ಮ ಸ್ನೇಹಿತರ ಸ್ಥಳಕ್ಕೆ ಬಂದಿರುವುದು ತುಂಬಾ ಸಂತೋಷ ತಂದಿದೆ. ದೇಶವು ಸಾಮಾಜಿಕ ಸಾಮರಸ್ಯದೊಂದಿಗೆ ಮುಂದುವರಿಯುತ್ತಿರುವುದನ್ನು ಮತ್ತು ಪ್ರಗತಿ ಸಾಧಿಸುತ್ತಿರುವುದನ್ನು ನೋಡಲು ಸಂತೋಷವಾಗುತ್ತಿದೆ. ಈ ದೇಶದಲ್ಲಿ ಎಲ್ಲರಿಗೂ ಒಂದು ಸ್ಥಾನವಿದೆ, ಪ್ರತಿಯೊಬ್ಬರ ಹೃದಯದಲ್ಲಿ ಒಂದು ಸ್ಥಾನವಿದೆ. ಭಾರತವು ಬಹಳ ದೊಡ್ಡ ಪ್ರಜಾಪ್ರಭುತ್ವವಾಗಿದ್ದು, ಇದರಲ್ಲಿ ನಾವು ಶಾಂತಿ, ಸಾಮರಸ್ಯ ಮತ್ತು ಪ್ರೀತಿಯಿಂದ ಮುಂದುವರಿಯಬೇಕು ಎಂದು ಹೇಳಿದರು.

ಯಾರೆಲ್ಲಾ ಭಾಗವಹಿಸಿದ್ದರು?
 ದೆಹಲಿ ಹಜ್ ಸಮಿತಿ ಅಧ್ಯಕ್ಷೆ ಕೌಸರ್ ಜಹಾನ್ ಅವರ ಇಫ್ತಾರ್ ಕೂಟದಲ್ಲಿ ಬಿಜೆಪಿ ನಾಯಕ ಶಹನವಾಜ್ ಹುಸೇನ್, ಮುಸ್ತಾಬಾದ್ ಶಾಸಕ ಮೋಹನ್ ಸಿಂಗ್ ಬಿಶ್ತ್, ಸಂಸದ ಕಮಲ್ಜಿತ್ ಸೆಹ್ರಾವತ್ ಮತ್ತು ಜಾಫರ್ ಇಸ್ಲಾಂ ಕೂಡ ಭಾಗವಹಿಸಿದ್ದರು. 

ಇದನ್ನೂ ಓದಿ: ಇಸ್ಲಾಂಗಿಂತಲೂ ಸಂಭಲ್‌ ಇತಿಹಾಸ ಹಿಂದಿನದ್ದು : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

ಎಲ್ಲರೂ ಖರ್ಜೂರ ತಿಂದು ಉಪವಾಸ ಮುರಿದು ಇಫ್ತಾರ್ ಸೇವಿಸಿದರು. ಏತನ್ಮಧ್ಯೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ಸಚಿವ ಪ್ರವೇಶ್ ವರ್ಮಾ ಕೂಡ ಇಫ್ತಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಲ್ಲದೆ, ಕಿರಣ್ ರಿಜಿಜು ಮತ್ತು ವಿಧಾನಸಭಾ ಸ್ಪೀಕರ್ ವಿಜೇಂದ್ರ ಗುಪ್ತಾ ಕೂಡ ಕೌಸರ್ ಜಹಾನ್ ಅವರ ಇಫ್ತಾರ್ ಕೂಟಕ್ಕೆ ಆಗಮಿಸಿದರು.