Asianet Suvarna News Asianet Suvarna News

ಕೊರೋನಾ ಬಿಕ್ಕಟ್ಟು ಸ್ವಾವಲಂಬನೆಗೆ ಸದಾವಕಾಶ: ಮೋದಿ

ಪ್ರವಾಹಗಳು, ಮಿಡತೆ ದಾಳಿಗಳು, ಭೂಕಂಪ, ಕೊರೋನಾ ಸೇರಿದಂತೆ ಇನ್ನಿತರ ಸವಾಲುಗಳು ಒಮ್ಮೆಲೆ ಭಾರತದ ಮೇಲೆ ದಾಳಿ ನಡೆಸುತ್ತಿವೆ. ಇವು ಸೃಷ್ಟಿಸುವ ಬಿಕ್ಕಟ್ಟನ್ನು ಅವಕಾಶವಾಗಿ ಸದುಪಯೋಗ ಪಡಿಸಿಕೊಂಡು ಸ್ವಾವಲಂಬನೆ ಭಾರತ ನಿರ್ಮಾಣಕ್ಕೆ ಪಣತೊಡಬೇಕಿದೆ ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಕರೆಕೊಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Coronavirus Crisis  We have to turn these crises into an opportunity Says PM Modi
Author
Kolkata, First Published Jun 12, 2020, 12:13 PM IST

ಕೋಲ್ಕತಾ(ಜೂ.12): ‘ಆತ್ಮ ನಿರ್ಭರ ಭಾರತ’(ಸ್ವಾವಲಂಬಿತ ಭಾರತ) ನಿರ್ಮಾಣ ಮಾಡುವ ಕೆಲಸಕ್ಕೆ ಕೊರೋನಾ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. 

ಅಲ್ಲದೆ, ಇದು ಉದ್ಯಮಿಗಳು ಹಾಗೂ ಹೂಡಿಕೆದಾರರು ದಿಟ್ಟನಿರ್ಧಾರಗಳನ್ನು ಕೈಗೊಳ್ಳಲು ಪೂರಕ ಸಮಯವಾಗಿದೆ ಎಂದು ಇದೇ ವೇಳೆ ಮೋದಿ ತಿಳಿಸಿದ್ದಾರೆ. ಈ ಮೂಲಕ ಕೊರೋನಾ ಹೊಡೆತಕ್ಕೆ ಪಾತಾಳಕ್ಕೆ ಕುಸಿದ ದೇಶದ ಆರ್ಥಿಕತೆ, ಸಂಕಷ್ಟಕ್ಕೀಡಾದ ವ್ಯಾಪಾರ-ಉದ್ಯಮಿಗಳು, ಕೈಗಾರಿಕಾ ಮಾಲಿಕರು ಮತ್ತು ಹೂಡಿಕೆದಾರರಿಗೆ ಆತ್ಮವಿಶ್ವಾಸ ತುಂಬುವ ಯತ್ನ ಮಾಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ಕಾಮರ್ಸ್‌ ಚೇಂಬರ್ಸ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ‘ಪ್ರವಾಹಗಳು, ಮಿಡತೆ ದಾಳಿಗಳು, ಭೂಕಂಪ, ಕೊರೋನಾ ಸೇರಿದಂತೆ ಇನ್ನಿತರ ಸವಾಲುಗಳು ಒಮ್ಮೆಲೆ ಭಾರತದ ಮೇಲೆ ದಾಳಿ ನಡೆಸುತ್ತಿವೆ. ಇವು ಸೃಷ್ಟಿಸುವ ಬಿಕ್ಕಟ್ಟನ್ನು ಅವಕಾಶವಾಗಿ ಸದುಪಯೋಗ ಪಡಿಸಿಕೊಂಡು ಸ್ವಾವಲಂಬನೆ ಭಾರತ ನಿರ್ಮಾಣಕ್ಕೆ ಪಣತೊಡಬೇಕಿದೆ. ಈ ಮೂಲಕ ವಿದೇಶಗಳಿಂದ
ಆಮದು ಮಾಡಿಕೊಳ್ಳುತ್ತಿರುವ ಬಹುತೇಕ ವಸ್ತುಗಳನ್ನು ನಾವೇ ತಯಾರಿಸಿಕೊಳ್ಳಬೇಕಿದೆ. ಇದರೊಂದಿಗೆ ಪ್ರಾಬಲ್ಯ ಮತ್ತು ನಿಯಂತ್ರಿತ ಆರ್ಥಿಕತೆಯ ಸಂಕೋಲೆಯಿಂದ ಬಿಡಿಸಿಕೊಂಡು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಬೇಕು’ ಎಂದು ಹೇಳಿದರು.

ಹಣೆಯಲ್ಲಿ ಗೆರೆಗಳಿದ್ದರೆ ಸಾಲದು, ಸೀಟಿನಲ್ಲೂ ಗೆರೆಗಳು ಇರಬೇಕು; ಈರಣ್ಣನ ನಸೀಬು ನೋಡಿ!

ಇದಕ್ಕೆ ಅಗತ್ಯವಿರುವ ಜನರಿಂದ, ಜನರಿಗಾಗಿ ಮತ್ತು ಜನ ಸ್ನೇಹಿ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಧ್ಯೇಯವಾಗಿದೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವ್ಯಾಖ್ಯೆ ಬದಲಾವಣೆ, ಕಂಪನಿ ಕಾಯ್ದೆಯಲ್ಲಿ ಕೆಲ ಮಹತ್ವದ ಬದಲಾವಣೆ, ದಿವಾಳಿ ಕೋಡ್‌, ಕಲ್ಲಿದ್ದಲು ಗಣಿಯಲ್ಲಿ ಸ್ಪರ್ಧಾತ್ಮಕತೆ, ಎಪಿಎಂಸಿಯಲ್ಲಿ ಬದಲಾವಣೆ ಸೇರಿದಂತೆ ಇನ್ನಿತರ ಸುಧಾರಣೆ ಕ್ರಮಗಳನ್ನು ಸರ್ಕಾರ ಈಗಾಗಲೇ ಕೈಗೊಂಡಿದೆ
ಎಂದಿದ್ದಾರೆ ಮೋದಿ.

Follow Us:
Download App:
  • android
  • ios