Asianet Suvarna News Asianet Suvarna News

ಐಷಾರಾಮಿ ವಕೀಲರ ಕೊಠಡಿ ನಿರೀಕ್ಷಿಸಬೇಡಿ, ಮರದ ಕೆಳಗೆ ನಿಂತು ಕಾನೂನು ಅಭ್ಯಾಸ ಮಾಡಿದ್ದೆವು: ಸಿಜೆಐ

ಹೆಚ್ಚುವರಿ ಸಂಕೀರ್ಣ ಕಟ್ಟಡದಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಚೇಂಬರ್ ಹಂಚಿಕೆಗೆ ಸಂಬಂಧಿಸಿದಂತೆ ವಕೀಲರೊಬ್ಬರು ತಕರಾರು ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
 

CJI NV Ramana says we used to practice law standing under trees Dont expect palatial lawyer chambers san
Author
Bengaluru, First Published Jul 22, 2022, 12:02 PM IST

ನವದೆಹಲಿ (ಜುಲೈ 22): ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಎನ್‌ವಿ ರಮಣ ಗುರುವಾರ  ಪ್ರಕರಣವೊಂದರ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ನಲ್ಲಿ ತಮ್ಮ ಕಾನೂನು ಅಭ್ಯಾಸದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದು ವಕೀಲರಿಗೆ ಕಾನೂನು ಅಭ್ಯಾಸ ಮಾಡಲು ಚೇಬರ್‌ ಹೋಗಲಿ, ಕೋರ್ಟ್‌ ಆವರಣದಲ್ಲಿಯೇ ಸ್ಥಳವಿರಲಿಲ್ಲ. ಮರದ ಅಡಿಯಲ್ಲಿ ನಿಂತು ಕಾನೂನು ಅಭ್ಯಾಸ ಮಾಡಿದ್ದೆವು ಎಂದು ಹೇಳಿದ್ದಾರೆ. ಇಂದು ದೇಶದ ಬಹುತೇಕ ಕೋರ್ಟ್‌ಗಳಲ್ಲಿ ವಕೀಲರಿಗೆ ಅವರದೇ ಆದ ಚೇಂಬರ್‌ಗಳಿಲ್ಲ, ಆದರೆ ಸುಪ್ರೀಂ ಕೋರ್ಟ್‌ ಹಾಗಲ್ಲ. ಇಲ್ಲಿ ಕಾನೂನು ಅಭ್ಯಾಸ ಮಾಡಲು ವಕೀಲರಿಗೆ ಚೇಂಬರ್‌ ಸಿಗುತ್ತದೆ ಎಂದು ಹೇಳಿದ್ದಾರೆ. "ಬೇಕಾದರೆ ನೀವೇ ಪರೀಕ್ಷೆ ಮಾಡಿ, ಸುಪ್ರೀಂ ಕೋರ್ಟ್‌ ಹೊರತಾಗಿ ಬೇರೆ ಯಾವ ಕೋರ್ಟ್‌ನಲ್ಲೂ ನಿಮಗೆ ಚೇಂಬರ್‌ಗಳು ಸಿಗೋದಿಲ್ಲ. ನಾವೆಲ್ಲ ಮರದ ಕೆಳಗೆ ನಿಂತು ಕಾನೂನು ಅಭ್ಯಾಸ ಮಾಡಿದ್ದೆವು' ಎಂದು ಸಿಜೆಐ ತಮ್ಮ ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಹೆಚ್ಚುವರಿ ಸಂಕೀರ್ಣ ಕಟ್ಟಡದಲ್ಲಿ ಚೇಂಬರ್ ಹಂಚಿಕೆಗೆ ಸಂಬಂಧಿಸಿದಂತೆ ವಕೀಲರೊಬ್ಬರು ತಕರಾರು ಎತ್ತಲು ಯತ್ನಿಸಿದ ಉಲ್ಲೇಖವನ್ನು ವಿಚಾರಣೆ ನಡೆಸುತ್ತಿದೆ.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನ ಹೊಸ ಕಟ್ಟಡದಲ್ಲಿ 400ಕ್ಕೂ ಹೆಚ್ಚು ವಕೀಲರ ಚೇಂಬರ್‌ಗಳ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು. ಈ ಕುರಿತಾಗಿ ವಕೀಲರು ಪ್ರಕರಣದ ತುರ್ತು ವಿಚಾರಣೆಯನ್ನು ಕೋರಿದರು, ಅವರು ನಮ್ಮೊಳಗೆ "ಮುಕ್ತ ಸಂವಾದ"ಕ್ಕಾಗಿ ಮಾತ್ರ ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೀತಿಯಲ್ಲಿ ಕಂಡ ಸಿಜೆಐ ರಮಣ ಅವರು, ಬಹುಕಾಲದ ಬೇಡಿಕೆಯಾಗಿದ್ದ ಹೆಚ್ಚುವರಿ ಕೊಠಡಿಗಳ ಹಂಚಿಕೆ ಕೊನೆಗೂ ಆಗಿರುವಾಗ ಇಂತಹ ಪ್ರಕರಣ ಏಕೆ ದಾಖಲಿಸಲಾಗುತ್ತಿದೆ ಎಂದು (Chief Justice of India NV Ramana) ಕೇಳಿದರು.

ಸೋಮವಾರ ಮುಂದಿನ ವಿಚಾರಣೆ: "ನಿಮಗೆ ಕೋಣೆಗಳ ಹಂಚಿಕೆ ಬೇಡ ಎಂದಾದಲ್ಲಿ ಇಲ್ಲಿನ ಆಸ್ತಿಯನ್ನು ಆನಂದಿಸಿ. ನಾನು ಸಿಜೆಐ ಆಗಿ ಮಾತನಾಡುತ್ತಿಲ್ಲ, ನಾವೆಲ್ಲರೂ ಇದರಿಂದ ಬಳಲಿದ್ದೇವೆ ಮತ್ತು ಬಹಳ ಕಷ್ಟದಿಂದ ಇದರ ಹಂಚಿಕೆಯೂ ಆಗಿದೆ. ವಕೀಲರು ಚೇಂಬರ್‌ಗಳ ರೂಪದಲ್ಲಿ ಅರಮನೆಗಳನ್ನು ನಿರೀಕ್ಷೆ ಮಾಡಬೇಡಿ' ಎಂದು ಹೇಳಿದರು. ಸಿಜೆಐ ರಮಣ ಅವರು ತಮ್ಮ ಅಭ್ಯಾಸದ ಆರಂಭಿಕ ವರ್ಷಗಳಲ್ಲಿ, ವಕೀಲರು ತಮ್ಮ ವ್ಯವಹಾರಗಳನ್ನು ನಡೆಸಲು ಮರಗಳ ನೆರಳನ್ನು ಆಶ್ರಯಿಸಬೇಕಾಗಿತ್ತು.  ಮರದ ಕೆಳಗೆ ನಿಂತು ನಮ್ಮ ಕೆಲಸ ಮಾಡುತ್ತಿದ್ದೆವು. "ಈಗ ಇಲ್ಲಿ ಸುಮಾರು 400 ರಿಂದ 500 ಜನರಾದರೂ ಸ್ವಲ್ಪ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗ (ಅದರ ವಿರುದ್ಧ) ಏನನ್ನಾದರೂ ಏಕೆ ಮಾಡಬೇಕು" ಎಂದು ಸಿಜೆಐ ಟೀಕಿಸಿದರು. ಸಂಕ್ಷಿಪ್ತ ವಿಚಾರಣೆಯ ನಂತರ, ಸಿಜೆಐ ರಮಣ ಭಾಗವಾಗದ ಪೀಠದ ಮುಂದೆ ಈ ವಿಷಯವನ್ನು ಮುಂದಿನ ಸೋಮವಾರ ವಿಚಾರಣೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿತು.

Follow Us:
Download App:
  • android
  • ios