ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಆತ್ಮ*ತ್ಯೆ ಮಾಡಿಕೊಂಡ ಕಾನ್ಫಿಡೆಂಟ್‌ ಗ್ರೂಫ್‌ ಮುಖ್ಯಸ್ಥ ಸಿ.ಜೆ.ರಾಯ್‌ ಸಾವಿನ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಆಗ್ರಹಿಸಿದ್ದಾರೆ.

ತಿರುವನಂತಪುರಂ: ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಆತ್ಮ*ತ್ಯೆ ಮಾಡಿಕೊಂಡ ಕಾನ್ಫಿಡೆಂಟ್‌ ಗ್ರೂಫ್‌ ಮುಖ್ಯಸ್ಥ ಸಿ.ಜೆ.ರಾಯ್‌ ಸಾವಿನ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಆಗ್ರಹಿಸಿದ್ದಾರೆ. ಈ ಕುರಿತು ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ವಿಜಯನ್‌ ಪತ್ರ ಬರೆದಿದ್ದಾರೆ.

Add Asianetnews Kannada as a Preferred SourcegooglePreferred

ಕೇರಳ ಮೂಲದವರಾದ ರಾಯ್‌

ಕೇರಳ ಮೂಲದವರಾದ ರಾಯ್‌ ಸಾವಿನ ಬಗ್ಗೆ ಕರ್ನಾಟಕ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಪತ್ರ ಬರೆದಿರುವ ಪಿಣರಾಯಿ, ‘ರಾಯ್‌ ಸಾವು, ಕೇರಳದಲ್ಲಿ ಉದ್ಯಮಿಗಳು, ನಾಗರಿಕರಲ್ಲಿ ಆಘಾತ ಸೃಷ್ಟಿಸಿದೆ. ಈ ದುರದೃಷ್ಟಕರ ಘಟನೆಯು ದೇಶದ ತೆರಿಗೆ ಆಡಳಿತ ಮೇಲೆ ಕಪ್ಪು ಚುಕ್ಕೆ ಬೀರಿದೆ. ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾಗ, ಅವರು ಅದೇ ಸ್ಥಳದಲ್ಲಿದ್ದಾಗ ಲೋಡ್‌ ಮಾಡಿದ ಗುಂಡಿನಿಂದ ಶೂಟೌಟ್‌ ಮಾಡಿಕೊಳ್ಳುವುದು ಅಚ್ಚರಿ ಸಂಗತಿ’ ಎಂದಿದ್ದಾರೆ.

ಶಿಷ್ಟಾಚಾರವನ್ನೂ ಪಾಲಿಸದಿರುವುದು ಜೀವದ ನಷ್ಟಕ್ಕೆ ಕಾರಣ

ಜೊತೆಗೆ, ‘ದಾಳಿ ವೇಳೆ ಆ ಪ್ರದೇಶ ಅಧಿಕಾರಿಗಳ ನಿಯಂತ್ರಣದಲ್ಲಿರಬೇಕು. ಅದು ಅವರ ಕನಿಷ್ಠ ಜವಾಬ್ದಾರಿ. ಆದರೆ ಶೋಧದ ವೇಳೆ ಕನಿಷ್ಠ ಶಿಷ್ಟಾಚಾರವನ್ನೂ ಪಾಲಿಸದಿರುವುದು ಜೀವದ ನಷ್ಟಕ್ಕೆ ಕಾರಣ. ಹೀಗಾಗಿ ಕೇಂದ್ರ ಸರ್ಕಾರ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಅಗ್ರಹಿಸಬೇಕು. ಸಾಂವಿಧಾನಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಅನುಭವ ಹೊಂದಿರುವರು ತನಿಖಾ ಆಯೋಗದ ನೇತೃತ್ವ ವಹಿಸುವುದು ಸೂಕ್ತ’ ಎಂದಿದ್ದಾರೆ.