Asianet Suvarna News Asianet Suvarna News

'ನಾರಿಶಕ್ತಿ ಅಂತೀರಲ್ಲ, ಅದನ್ನ ಇಲ್ಲಿ ತೋರಿಸಿ..' ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ ಸಿಜೆಐ ಡಿವೈ ಚಂದ್ರಚೂಡ್‌

ಕೋಸ್ಟ್‌ ಗಾರ್ಡ್‌ ಮಹಿಳಾ ಅಧಿಕಾರಿಯ ಪರ್ಮನೆಂಟ್‌ ಕಮೀಷನ್‌ಅನ್ನು ನಿರಾಕರಿಸಿದ ಅರ್ಜಿಯನ್ನು ವಿಚಾರಣೆ ಮಾಡುವ ವೇಳೆ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
 

Chief Justice of India DY Chandrachud To Centre You Speak Of Nari Shakti Show It Here san
Author
First Published Feb 20, 2024, 10:53 AM IST


ನವದೆಹಲಿ (ಫೆ.20): ಕೋಸ್ಟ್‌ ಗಾರ್ಡ್‌ನಲ್ಲಿ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್‌ ಕಮೀಷನ್‌ ಕುರಿತು 'ಪಿತೃಪ್ರಭುತ್ವ' ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌, ಈಗಾಗಲೇ ಭಾರತೀಯ ಸೇನೆ ಹಾಗೂ ನೌಕಾಪಡೆಯಲ್ಲಿ ಮಹಿಳೆಯರಿಗೆ ಪರ್ಮನೆಂಟ್‌ ಕಮೀಷನ್‌ ಜಾರಿಗೆ ತಂದಿರುವಾಗಿ ಕೋಸ್ಟ್‌ ಗಾರ್ಡ್‌ ಮಾತ್ರವೇ ಯಾಕೆ ವಿಭಿನ್ನವಾಗಿರಬೇಕು ಎಂದು ಪ್ರಶ್ನೆ ಮಾಡಿದೆ. ದೇಶದ ಮಹಿಳೆಯರು ಗಡಿಯನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದಾದರೆ, ಅವರು ನಮ್ಮ ಕರಾವಳಿಯನ್ನೂ ಕೂಡ ಸಮರ್ಥವಾಗಿ ರಕ್ಷಿಸಬಹುದು ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನೇತೃತ್ವದ ಪೀಠವು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರ ನಾರಿ ಶಕ್ತಿ ಎಂದು ಹೇಳುತ್ತದೆ. ಆದರೆ, ನಾರಿ ಶಕ್ತಿಯ ವಿಚಾರದಲ್ಲಿ ತನ್ನ ಬದ್ಧತೆಯನ್ನು ತೋರಿಸಲು ಸಮಯ ಇದಾಗಿದೆ ಎಂದು ಟೀಕಿಸಿದ್ದಾರೆ. ಕೋಸ್ಟ್‌ ಗಾರ್ಡ್‌ನ ಶಾರ್ಟ್‌ ಸರ್ವೀಸ್‌ ನೇಮಕಾರಿ ಅಧಿಕಾರಿ ಪ್ರಿಯಾಂಕಾ ತ್ಯಾಗಿ ಸೋಮವಾರ ಸಲ್ಲಿಸಿದ್ದ ವಿಚಾರಣೆ ಮಾಡಿದ ಮುಖ್ಯ ನ್ಯಾಯಮೂರ್ತಿ ಇದ್ದ ಪೀಠ, 'ನೀವು (ಕೇಂದ್ರ ಸರ್ಕಾರ) ನಾರಿ ಶಕ್ತಿ, ನಾರಿ ಶಕ್ತಿ ಎಂದು ಎಂದು ಹೇಳುತ್ತೀರಿ. ಅದನ್ನು ಇಲ್ಲಿ ತೋರಿಸಿ ಎಂದು ನಾನು ಭಾವಿಸುತ್ತೇನೆ. ಸೇನೆ,  ನೌಕಾಪಡೆಯಲ್ಲಿ ಇದನ್ನು ಮಾಡಿರುವಾಗ ಕೋಸ್ಟ್ ಗಾರ್ಡ್‌ನಲ್ಲಿ ಕೂಡ ಪರ್ಮನೆಂಟ್‌ ಕಮೀಷನ್‌ ಸಾಧ್ಯವಿದೆ. ಕೋಸ್ಟ್ ಗಾರ್ಡ್ ವಲಯದಲ್ಲಿ ಮಹಿಳೆಯರನ್ನು ನೋಡದ ನೀವು ಯಾಕೆ ಪುರುಷಪ್ರಧಾನ ಎನಿಸಿಕೊಂಡಿದ್ದೀರಿ. ಕೋಸ್ಟ್ ಗಾರ್ಡ್ ವಿಚಾರದಲ್ಲಿ ಅಸಡ್ಡೆ ಧೋರಣೆ ಬೇಡ' ಎಂದಿದ್ದಾರೆ.

ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ, ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ಅವರ ವಾದಕ್ಕೆ ಈ ಪ್ರತಿಕ್ರಿಯೆ ನೀಡಿದೆ. ಕೋಸ್ಟ್ ಗಾರ್ಡ್ ಸೇನೆ ಮತ್ತು ನೌಕಾಪಡೆಗಿಂತ ವಿಭಿನ್ನ ಡೊಮೇನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಸಾಲಿಸಿಟರ್‌ ಜನರಲ್‌ ಹೇಳಿದ್ದರು. ನಾವು ಇಡೀ ಕ್ಯಾನ್ವಾಸ್‌ಅನ್ನೇ ತೆರೆಯುತ್ತಿದ್ದೇವೆ. ಮಹಿಳೆಯರು ಕೋಸ್ಟ್‌ ಗಾರ್ಡ್‌ನಲ್ಲಿ ಇರಲು ಸಾಧ್ಯವಿಲ್ಲ ಎನ್ನುವ ದಿನಗಳು ಈಗ ಇಲ್ಲ. ಮಹಿಳೆಯರು ದೇಶದ ಗಡಿಯನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದಾದರೆ, ಅವರು ದೇಶದ ಕರಾವಳಿಯನ್ನೂ ರಕ್ಷಿಸಲು ಸಮರ್ಥರಾಗಿದ್ದಾರೆ ಎಂದು ಹೇಳಿದೆ. ಈ ವಿಚಾರದಲ್ಲಿ ಸರ್ಕಾರ ಸುಪ್ರೀಂ ಕೋರ್ಟ್‌ನ ಅತ್ಯಂತ ಮಹತ್ವದ ಬಬಿತಾ ಪೂನಿಯಾ ತೀರ್ಪನ್ನು ಓದಿಲ್ಲ ಎಂದು ಕಾಣುತ್ತದೆ ಎಂದಿದೆ.

2020ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಲ್ಲಿ ಸೇನೆಯಲ್ಲಿನ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.  "ಶಾರೀರಿಕ ಮಿತಿಗಳು ಮತ್ತು ಸಾಮಾಜಿಕ ನಿಯಮಗಳು" ಎಂಬ ಸರ್ಕಾರದ ವಾದವನ್ನು ಅದು ತಿರಸ್ಕರಿಸಿತು, ಇದು ಸಮಾನತೆಯ ಪರಿಕಲ್ಪನೆಗೆ ವಿರುದ್ಧವಾಗಿದೆ ಮತ್ತು ಲಿಂಗ ಪಕ್ಷಪಾತಕ್ಕೆ ಕಾರಣವಾಗಿದೆ ಎಂದು ಹೇಳಿತ್ತು.

ಪ್ರಿಯಾಂಕಾ ತ್ಯಾಗಿ ಅವರು ಕೋಸ್ಟ್ ಗಾರ್ಡ್‌ನ ಮೊದಲ ಸಂಪೂರ್ಣ ಮಹಿಳಾ ಸಿಬ್ಬಂದಿಯ ಭಾಗವಾಗಿದ್ದರು, ಇದನ್ನು ಫೋರ್ಸ್ ಫ್ಲೀಟ್‌ನಲ್ಲಿ ಡೋರ್ನಿಯರ್ ವಿಮಾನವನ್ನು ನಿರ್ವಹಿಸಲು ನಿಯೋಜಿಸಲಾಗಿತ್ತು. ತನ್ನ ಅರ್ಜಿಯಲ್ಲಿ, ಅವರು ಕೋಸ್ಟ್‌ ಗಾರ್ಡ್‌ನಲ್ಲಿ ಪುರುಷ ಅಧಿಕಾರಿಗಳಂತೆ ಮಹಿಳಾ ಅಧಿಕಾರಿಗಳಿಗೂ ಶಾಶ್ವತ ಆಯೋಗ ನೀಡಬೇಕು ಎಂದು ಕೋರಿದ್ದರು. ಸರ್ಕಾರ ಶಾಶ್ವತ ಆಯೋಗದ ಪರಿಗಣನೆಯನ್ನು ನಿರಾಕರಿಸಿದ ನಂತರ ಮತ್ತು ದೆಹಲಿ ಹೈಕೋರ್ಟ್ ಮಧ್ಯಂತರ ಪರಿಹಾರವನ್ನು ನಿರಾಕರಿಸಿದ ನಂತರ ಕಳೆದ ಡಿಸೆಂಬರ್‌ನಲ್ಲಿ ಪ್ರಿಯಾಂಕಾ ತ್ಯಾಗಿ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಯಿತು.

39 ಮಹಿಳಾ ಅಧಿಕಾರಿಗಳಿಗೆ ಸೇನೆಯಲ್ಲಿ ಕಾಯಂ ಹುದ್ದೆ!

ತ್ಯಾಗಿ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅರ್ಚನಾ ಪಾಠಕ್ ದವೆ ಅವರು ಸಮಾನತೆಯ ಮೂಲಭೂತ ಹಕ್ಕನ್ನು ಪ್ರತಿಪಾದಿಸಿದರು ಮತ್ತು ಸೇನೆಯಲ್ಲಿರುವಂತೆ ಮಹಿಳಾ ಸಿಬ್ಬಂದಿಗೆ ಬಡ್ತಿ ನೀಡಬೇಕು ಮತ್ತು ಕೋಸ್ಟ್ ಗಾರ್ಡ್‌ನಲ್ಲಿ ನಿಯೋಜಿತ ಅಧಿಕಾರಿಗಳಾಗಲು ಅವಕಾಶ ನೀಡಬೇಕು ಎಂದು ಹೇಳಿದರು.

ಸಶಸ್ತ್ರ ಪಡೆಗಳಲ್ಲಿ ಸ್ತ್ರೀಯರಿಗೆ ಕಾಯಂ ಹುದ್ದೆ: ಕೇಂದ್ರ ಐತಿಹಾಸಿಕ ನಿರ್ಧಾರ!

Follow Us:
Download App:
  • android
  • ios