ಬೆಳೆ ಹಾನಿಗೆ ಪರಿಹಾರಕೇಳಲು ವಿಧಾನಸಭೆಗೆ ಮಿಡತೆ ತಂದ ಶಾಸಕ!| ಮಿಡತೆಗಳ ದಾಳಿಯಿಂದಾದ ಅಪಾರ ಕೃಷಿ ನಷ್ಟ

ಜೈಪುರ[ಜ.25]: ಮಿಡತೆಗಳ ದಾಳಿಯಿಂದಾದ ಅಪಾರ ಕೃಷಿ ನಷ್ಟದಿಂದ ತತ್ತರಿಸಿರುವ ರಾಜಸ್ಥಾನದಲ್ಲಿ, ಬಿಜೆಪಿ ಶಾಸಕರೊಬ್ಬರು ವಿಧಾನಸಭೆಗೆ ಮಿಡತೆ ತುಂಬಿದ ಡಬ್ಬ ತಂದು ಪ್ರತಿಭಟಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಲ್ಲದೇ ಆದಷ್ಟು ಬೇಗ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಬಿಕಾನೇರ್‌ನ ನೋಖಾ ಕ್ಷೇತ್ರದ ಶಾಸಕ ಬಿಹಾರಿ ಲಾಲ್‌ ಈ ರೀತಿಯಾಗಿ ಪ್ರತಿಭಟಿಸಿದ್ದು, ಮಿಡತೆ ಹಾವಳಿ ತಡೆಯಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪೌರತ್ವ ಕಾಯ್ದೆ ತಿದ್ದುಪಡಿಯ ಬಗ್ಗೆ ಹೆಚ್ಚು ಚಿಂತಾಕ್ರಾಂತವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Scroll to load tweet…

26 ವರ್ಷಗಳಲ್ಲೇ ಅತೀ ಹೆಚ್ಚು ಮಿಡತೆ ಹಾವಳಿಗೆ ಸಾವಿರಾರು ಎಕರೆ ಕೃಷಿ ನಾಶವಾಗಿದೆ.