Asianet Suvarna News Asianet Suvarna News

ಬೆಳೆ ಹಾನಿಗೆ ಪರಿಹಾರ ಕೇಳಲು ವಿಧಾನಸಭೆಗೆ ಮಿಡತೆ ತಂದ ಶಾಸಕ!

ಬೆಳೆ ಹಾನಿಗೆ ಪರಿಹಾರಕೇಳಲು ವಿಧಾನಸಭೆಗೆ ಮಿಡತೆ ತಂದ ಶಾಸಕ!| ಮಿಡತೆಗಳ ದಾಳಿಯಿಂದಾದ ಅಪಾರ ಕೃಷಿ ನಷ್ಟ

BJP MLA Enters Rajasthan Assembly With Basket Full Of Locusts
Author
Bangalore, First Published Jan 25, 2020, 11:39 AM IST

ಜೈಪುರ[ಜ.25]: ಮಿಡತೆಗಳ ದಾಳಿಯಿಂದಾದ ಅಪಾರ ಕೃಷಿ ನಷ್ಟದಿಂದ ತತ್ತರಿಸಿರುವ ರಾಜಸ್ಥಾನದಲ್ಲಿ, ಬಿಜೆಪಿ ಶಾಸಕರೊಬ್ಬರು ವಿಧಾನಸಭೆಗೆ ಮಿಡತೆ ತುಂಬಿದ ಡಬ್ಬ ತಂದು ಪ್ರತಿಭಟಿಸಿದ್ದಾರೆ.

ಅಲ್ಲದೇ ಆದಷ್ಟು ಬೇಗ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಬಿಕಾನೇರ್‌ನ ನೋಖಾ ಕ್ಷೇತ್ರದ ಶಾಸಕ ಬಿಹಾರಿ ಲಾಲ್‌ ಈ ರೀತಿಯಾಗಿ ಪ್ರತಿಭಟಿಸಿದ್ದು, ಮಿಡತೆ ಹಾವಳಿ ತಡೆಯಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪೌರತ್ವ ಕಾಯ್ದೆ ತಿದ್ದುಪಡಿಯ ಬಗ್ಗೆ ಹೆಚ್ಚು ಚಿಂತಾಕ್ರಾಂತವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

26 ವರ್ಷಗಳಲ್ಲೇ ಅತೀ ಹೆಚ್ಚು ಮಿಡತೆ ಹಾವಳಿಗೆ ಸಾವಿರಾರು ಎಕರೆ ಕೃಷಿ ನಾಶವಾಗಿದೆ.

Follow Us:
Download App:
  • android
  • ios