ಬಿಜೆಪಿ ನಾಯಕನ ಹತ್ಯೆ: ಪಾಟ್ನಾದಲ್ಲಿ ಭಾಜಪ ನಾಯಕ ಸುರೇಂದ್ರ ಕೇವಟ್ರನ್ನ ಗುಂಡಿಕ್ಕಿ ಕೊಲ್ಲಲಾಗಿದೆ. ಶೇಖ್ಪುರ ಗ್ರಾಮದಲ್ಲಿ ಹೊಲದಿಂದ ವಾಪಸ್ ಬರುವಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಪಾಟ್ನಾ ಏಮ್ಸ್ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Patna BJP leader murdered:: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಕ್ರಿಮಿನಲ್ಗಳ ಉಪಟಳ ಹೆಚ್ಚಾಗಿದೆ. ಒಂದರ ನಂತರ ಒಂದರಂತೆ ನಡೆಯುತ್ತಿರುವ ಕೊಲೆಗಳು ಪೊಲೀಸ್ ಆಡಳಿತ ವೈಫಲನ್ಯವನ್ನು ಬಯಲು ಮಾಡುತ್ತಿವೆ. ಈ ಬಾರಿ ದುಷ್ಕರ್ಮಿಗಳು ಸ್ಥಳೀಯ ಬಿಜೆಪಿ ನಾಯಕನನ್ನು ಹಾಡಹಗಲೇ ಗುಂಡಿಕ್ಕಿ ಕೊಂದಿದ್ದಾರೆ. ಮಾಹಿತಿಯ ಪ್ರಕಾರ, ಶನಿವಾರ (ಜುಲೈ 12) ರಾತ್ರಿ, ಪುನ್ಪುನ್ ಬ್ಲಾಕ್ನ ಪಿಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಶೇಖ್ಪುರ ಗ್ರಾಮದಲ್ಲಿ ದುಷ್ಕರ್ಮಿಗಳು ಬಿಜೆಪಿ ನಾಯಕ ಸುರೇಂದ್ರ ಕೆವಾತ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಬೈಕ್ನಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರು ದುಷ್ಕರ್ಮಿಗಳು ಬಿಜೆಪಿ ನಾಯಕನ ಮೇಲೆ 4 ಗುಂಡುಗಳನ್ನು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಕುಟುಂಬ ಸದಸ್ಯರು ತಕ್ಷಣವೇ ಪಾಟ್ನಾ ಏಮ್ಸ್ಗೆ ದಾಖಲಿಸಿದರು, ಆದರೆ ಅವರು ಅಲ್ಲಿಯೇ ಸಾವನ್ನಪ್ಪಿದ್ದಾರೆ.
ತೋಟದಿಂದ ಮನೆಗೆ ಹಿಂದಿರುಗುವಾಗ ಹತ್ಯೆ:
ಮೃತ ಸುರೇಂದ್ರ ಕೆವಾತ್ ತಮ್ಮ ಕುಟುಂಬದೊಂದಿಗೆ ಶೇಖ್ಪುರ ಗ್ರಾಮದಲ್ಲಿ ವಾಸಿಸುತ್ತಿದ್ದರು. ಅವರು ಪುನ್ಪುನ್ನ ಬಿಜೆಪಿ ಕಿಸಾನ್ ಮೋರ್ಚಾದ ಅಧ್ಯಕ್ಷರಾಗಿದ್ದರು. ಬಿಜೆಪಿ ನಾಯಕರಾಗಿರುವುದರ ಜೊತೆಗೆ, ಅವರು ಗ್ರಾಮೀಣ ಪಶುವೈದ್ಯರಾಗಿದ್ದರು ಮತ್ತು ಕೃಷಿಯನ್ನೂ ಸಹ ಮಾಡುತ್ತಿದ್ದರು. ಹುದ್ದೆಯನ್ನು ಹೊಂದಿರದಿದ್ದರೂ, ಅವರು ಆ ಪ್ರದೇಶದಲ್ಲಿ ರಾಜಕೀಯವಾಗಿ ಬಹಳ ಸಕ್ರಿಯರಾಗಿದ್ದರು. ಶನಿವಾರ ರಾತ್ರಿ ಊಟ ಮಾಡಿದ ನಂತರ, ಅವರು ಗ್ರಾಮದ ಹೊರಗೆ ರಾಜ್ಯ ಹೆದ್ದಾರಿ -78 ರ ಬದಿಯಲ್ಲಿರುವ ತಮ್ಮ ಜಮೀನಿಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಮನೆಗೆ ಮರಳಲು ಅವರು ರಸ್ತೆಗೆ ಬಂದ ತಕ್ಷಣ ಕಿಡಿಗೇಡಿಗಳು ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದರು.
ಬಳಿಕ ಪಾಟ್ನಾದ ಏಮ್ಸ್ ಗೆ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು. ಕೃತ್ಯ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಡುಗಳ ಶಬ್ದ ಕೇಳಿ ಸ್ಥಳೀಯ ಜನರು ಅಲ್ಲಿಗೆ ತಲುಪಿದಾಗ, ಬಿಜೆಪಿ ನಾಯಕ ಗಾಯಗೊಂಡು ನೆಲದ ಮೇಲೆ ಬಿದ್ದಿರುವುದನ್ನು ನೋಡಿ ತಕ್ಷಣ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಕುಟುಂಬ ಸದಸ್ಯರು ಅಲ್ಲಿಗೆ ತಲುಪಿದರು ಮತ್ತು ಅವರನ್ನು ತಕ್ಷಣವೇ ಪಾಟ್ನಾ ಏಮ್ಸ್ಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಈ ಘಟನೆಯ ಕುರಿತು, ಕುಟುಂಬ ಸದಸ್ಯರ ಲಿಖಿತ ದೂರಿನ ನಂತರ ಪ್ರಕರಣ ದಾಖಲಿಸಲಾಗುವುದು ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಎಚ್ಒ ಆರ್ಕೆ ಪಾಲ್ ತಿಳಿಸಿದ್ದಾರೆ.
