Madhya Pradesh: ಹಾಲು ಕೊಡದ ಎಮ್ಮೆ ವಿರುದ್ಧ ದೂರು ಕೂಟ್ಟ ರೈತ
- Madhya Pradesh: ಎಮ್ಮೆ ಹಾಲು ಕರಿಯೋಕೆ ಬಿಡ್ತಿಲ್ಲ ಎಂದು ದೂರು ಕೊಟ್ಟ ರೈತ
- ನಾವೇನಪ್ಪಾ ಮಾಡೋದು ಅಂತಿದ್ದಾರಾ ಪೊಲೀಸರು ?
ಭೋಪಾಲ್(ನ.15): ದೂರು ಕೊಡುವುದಕ್ಕೆ ಇದೇ ಕಾರಣ, ಇದೇ ಘಟನೆ ಅಂತೇನಿಲ್ಲ. ಇತ್ತೀಚಿನ ದಿನಗಳಲ್ಲಂತೂ ಪ್ರತಿ ವಿಚಾರವೂ ಪೊಲೀಸ್ ಠಾಣೆ ಮೆಟ್ಟಲು ಹತ್ತುತ್ತೆ. ಎಲ್ಲ ವಿಚಾರಗಳೂ ಹೈಲೈಟ್ ಆಗುತ್ತವೆ. ಅಂತಹದ್ದೇ ಒಂದು ಘಟನೆ ಈಗ ನಡೆದಿರುವುದು ಮಧ್ಯಪ್ರದೇಶದಲ್ಲಿ.
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ರೈತನೊಬ್ಬ ತನ್ನ ಎಮ್ಮೆ(Buffalo)ಯನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾನೆ. ತನ್ನ ಎಮ್ಮೆ ಹಾಲು ಕರೆಯಲು ಬಿಡುತ್ತಿಲ್ಲ ಎಂದು ಆರೋಪಿಸಿದ ರೈತ ತನ್ನ ಎಮ್ಮೆ ವಾಮಾಚಾರದ ಪ್ರಭಾವಕ್ಕೆ ಸಿಲುಕಿದೆ ಎಂದು ಪೊಲೀಸರಿಗೆ ಹೇಳಿದ್ದಾನೆ.
ತನ್ನ ಎಮ್ಮೆ ವಾಮಾಚಾರದ ಪ್ರಭಾವದಲ್ಲಿದೆ, ಹಾಲು ಕೊಡುತ್ತಿಲ್ಲ ಎಂದು ಎಮ್ಮೆ ಸಮೇತ ಪೊಲೀಸ್ ಠಾಣೆಗೆ ಬಂದು ನಯಾಗಾನ್ ಗ್ರಾಮದ ಪೊಲೀಸರಲ್ಲಿ ದೂರು ಹೇಳುತ್ತಿರುವ ವಿಡಿಯೋ ತುಣುಕೊಂಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಬುಲಾಲ್ ಜಾತವ್(45) ನಯಾಗಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಎಮ್ಮೆ ಹಾಲು ಕರೆಯಲು ಬಿಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ಡಿಎಸ್ಪಿ ಅರವಿಂದ್ ಶಾ ಹೇಳಿದ್ದಾರೆ.
ಧಾರವಾಡ ಎಮ್ಮೆಗೆ ದೇಸಿ ತಳಿಯ ಮಾನ್ಯತೆ..!
ಎಮ್ಮೆ ವಾಮಾಚಾರದ ಪ್ರಭಾವಕ್ಕೊಳಗಾಗಿದೆ ಎಂದು ಹಲವು ಗ್ರಾಮಸ್ಥರು ಹೇಳಿದ್ದಾಗಿ ಆತ ದೂರಿನಲ್ಲಿ ತಿಳಿಸಿದ್ದಾನೆ. ದೂರು ಕೊಟ್ಟು 4 ಗಂಟೆಗಳ ಬಳಿಕೆ ಮತ್ತೊಮ್ಮೆ ರೈತ ಹಸು ಸಮೇತ ಪೊಲೀಸ್ ಠಾಣೆಗೆ ಬಂದಿದ್ದಾನೆ.
ಪಶುಸಂಗೋಪನೆಗೆ ಸಂಬಂಧಿಸಿದ ಅಗತ್ಯ ಸಲಹೆಗಳನ್ನು ನೀಡಿ ರೈತನಿಗೆ ಸಹಕಾರ ನೀಡುವಂತೆ ಠಾಣೆ ಸಿಬ್ಬಂದಿಗೆ ಸೂಚಿಸಿದ್ದೇನೆ. ಇಂದು ಮತ್ತೆ ರೈತ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ಈಗ ಎಮ್ಮೆ ಹಾಲು ಕರೆಯಲು ಬಿಡುತ್ತಿದೆ ಎಂದು ರೈತ ಧನ್ಯವಾದ ತಿಳಿಸಿ ಹೋಗಿದ್ದಾನೆ ಎಂದು ಅವರು ಹೇಳಿದ್ದಾರೆ.
ಎಮ್ಮೆಗಳಿಗೆ ಹಾಲಿನ ದೀರ್ಘಾವಧಿಗೆ ಹಲವು ಕಾರಣಗಳಿರುತ್ತವೆ. ಡೈರಿ ಹಸುವಿಗೆ ಹೋಲಿಸಿದರೆ ಕೆಚ್ಚಲಿನ ವಿಭಿನ್ನ ಅಂಗರಚನೆ ಇದಕ್ಕೆ ಕಾರಣ. ಎಮ್ಮೆಯಲ್ಲಿ ಕೆಚ್ಚಲು ತೊಟ್ಟಿಯು ಇರುವುದಿಲ್ಲ. ಅಥವಾ ಬಹಳ ಕಡಿಮೆ ಪ್ರಮಾಣವನ್ನು ಹೊಂದಿರುತ್ತದೆ. ಆದ್ದರಿಂದ ಸ್ವಲ್ಪ ಅಥವಾ ಯಾವುದೇ ತೊಟ್ಟಿಯ ಹಾಲು ಲಭ್ಯವಿಲ್ಲದಿರುವ ಸಾಧ್ಯತೆಗಳೂ ಇರುತ್ತವೆ.
ಪರಿಸರ ಬದಲಾವಣೆಗೆ ಸೂಕ್ಷ್ಮ ಪ್ರತಿಕ್ರಿಯೆ
ಎಮ್ಮೆಗಳು ಪರಿಸರದಲ್ಲಿ ಆಗುವ ಬದಲಾವಣೆಗಳಿಗೆ ಸೂಕ್ಷ್ಮವಾಗಿರುತ್ತವೆ. ಅವರು ಪರಿಸ್ಥಿತಿಯಲ್ಲಿ ಅನಾನುಕೂಲವಾಗಿದ್ದರೆ ಹಾಲನ್ನು ತಡೆಹಿಡಿಯಬಹುದು. ಪ್ರಾಣಿಗಳು ಒತ್ತಡಕ್ಕೊಳಗಾದರೆ, ಹೆದರಿದರೆ ಅಥವಾ ನೋವು ಅನುಭವಿಸಿದರೆ, ಅಡ್ರಿನಾಲಿನ್ ಎಂಬ ಹಾರ್ಮೋನ್ ಸ್ರವಿಸುತ್ತದೆ. ಈ ಹಾರ್ಮೋನ್ ರಕ್ತನಾಳಗಳ ಸಂಕೋಚನವನ್ನು ಉಂಟುಮಾಡುತ್ತದೆ, ಇದರಿಂದಾಗಿ ಕೆಚ್ಚಲು ಸಾಕಷ್ಟು ಪ್ರಮಾಣದ ಆಕ್ಸಿಟೋಸಿನ್ ಪೂರೈಕೆಯನ್ನು ತಡೆಯುತ್ತದೆ. ಹಾಲನ್ನು ಕಡಿಮೆ ಮಾಡಿದರೆ ಪ್ರತಿಬಂಧವು ಕೆಚ್ಚಲಿನ ಸ್ರವಿಸುವ ಭಾಗಗಳಲ್ಲಿ ಹಾಲು ಬಿಡಲು ಕಾರಣವಾಗುತ್ತದೆ.
ಎಮ್ಮೆಗಳಿಗೆ ನಿರಂತರವಾಗಿ ಒತ್ತಡವನ್ನು ಒಡ್ಡುವುದು ಹಾಲಿನ ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಲುಕರೆಯುವ ಅಥವಾ ಹಾಲುಕರೆಯುವ ದಿನಚರಿಯ ಬದಲಾವಣೆ, ತಪ್ಪಾಗಿ ಹಾಲುಕರೆಯುವ ವಿಧಾನ ಅಥವಾ ಕೆಟ್ಟ ಸ್ಥಿತಿಯಲ್ಲಿ ಹಾಲುಕರೆಯುವ ಯಂತ್ರಗಳು ಎಮ್ಮೆಗಳು ಹಾಲನ್ನು ಹಿಡಿದಿಡಲು ಕೆಲವು ಕಾರಣಗಳಾಗಿವೆ.