Asianet Suvarna News Asianet Suvarna News

ಹಿಟ್‌ & ರನ್ ಕೇಸ್‌ನಲ್ಲಿ ಶಿಕ್ಷೆ ಪ್ರಮಾಣ ಏರಿಕೆ, ದೇಶಾದ್ಯಂತ ಮುಷ್ಕರ ಘೋಷಿಸಿದ ಟ್ರಕ್‌ ಡ್ರೈವರ್ಸ್‌!


ಪರಿಷ್ಕೃತ ಭಾರತೀಯ ನ್ಯಾಯ ಸಂಹಿತೆಯಲ್ಲಿ ಹಿಟ್‌ & ರನ್‌ ಕೇಸ್‌ಗಳ ಪ್ರಕರಣದಲ್ಲಿ ವಿಧಿಸುವ ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ಏರಿಸಿದೆ. ಇದಕ್ಕೆ ದೇಶಾದ್ಯಂತ ಟ್ರಕ್‌ ಡ್ರೈವರ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bharatiya Nyay Sanhita Truck drivers protest against new provisition under hit and run strike likely to affect supply chain san
Author
First Published Jan 1, 2024, 7:24 PM IST

ನವದೆಹಲಿ (ಜ.1): ಹೊಸ ವರ್ಷದ ಆರಂಭದಲ್ಲಿಯೇ ದೇಶದ ಮಾರುಕಟ್ಟೆಗೆ ಪ್ರತಿಭಟನೆಯ ಬಿಸಿ ಆರಂಭವಾಗುವ ಲಕ್ಷಣ ಕಂಡಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ದೇಶದ ಕಾನೂನು ವ್ಯವಸ್ಥೆಯನ್ನು ಬದಲಾಯಿಸುವ ವಿಧೇಯಕವನ್ನು ಮಂಡಿಸಿತ್ತು. ಭಾರತೀಯ ನ್ಯಾಯ ಸಂಹಿತೆ ಎಂದು ಕರೆಸಿಕೊಳ್ಳುವ ಈ ನ್ಯಾಯ ದಂಡನೆಯಲ್ಲಿ ಈಗಿರುವ ಅಪರಾಧಗಳೊಂದಿಗೆ ಹೊಸ ರೀತಯ ಅಪರಾಧಗಳಿಗೂ ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಲಾಗಿದೆ. ಇದರ ನಡುವೆ ಹಿಟ್‌ & ರನ್‌ ಕೇಸ್‌ಗಳಲ್ಲಿ ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಇದಕ್ಕೂ ಮುನ್ನ ಐಪಿಸಿಯ ವಿವಿಧ ಸೆಕ್ಷನ್‌ಗಳಲ್ಲಿದ್ದ ಹಿಟ್‌ & ರನ್‌ ಕೇಸ್‌ಗಳಿಗೆ 2 ವರ್ಷದವರೆಗೆ ಶಿಕ್ಷೆ ವಿಧಿಸುವ ಅವಕಾಶವಿತ್ತು. ಆದರೆ, ಪರಿಷ್ಕೃತ ಭಾರತೀಯ ನ್ಯಾಯ ಸಂಹಿತೆಯಲ್ಲಿ ಈ ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಟ್ರಕ್ ಚಾಲಕರು ಈ ಬದಲಾವಣೆಯ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಈ ನಿಬಂಧನೆಯು ಟ್ರಕ್ ಡ್ರೈವರ್‌ಗಳಿಗೆ ಕಠಿಣವಾಗಿದೆ ಎಂದು ತಿಳಿಸಿದ್ದಾರೆ. ಅದಲ್ಲದೆ, ಹೆಚ್ಚಿನ ಜನರು ತಮ್ಮ ಜೀವನೋಪಾಯವನ್ನು ಗಳಿಸುವ ಮಾರ್ಗವಾಗಿ ಟ್ರಕ್ ಚಾಲನೆಯನ್ನು ಆರಿಸಿಕೊಳ್ಳುವುದರಿಂದ ಹಿಂದೆ ಸರಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

ಮುಷ್ಕರವು ಪೂರೈಕೆ ಸರಪಳಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ, ವಿಶೇಷವಾಗಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮೇಲೆ ಪರಿಣಾಮ ಬೀರಬಹುದು. ಬಾಂಬೆ ಪೆಟ್ರೋಲ್ ಡೀಲರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಚೇತನ್ ಮೋದಿ ಈ ಬಗ್ಗೆ ಮಾತನಾಡಿದ್ದು, "ದೊಡ್ಡ ವಿತರಕರು ಮತ್ತು ಪೆಟ್ರೋಲ್ ಪಂಪ್ ಮಾಲೀಕರು 3-4 ದಿನಗಳ ಹೆಚ್ಚುವರಿ ಸ್ಟಾಕ್ ಅನ್ನು ಖರೀದಿಸಿದ್ದಾರೆ. ಆದರೆ ಸಾಲದ ಮಿತಿಗಳನ್ನು ಹೊಂದಿರುವ ಮತ್ತು ಶೇಖರಣಾ ಸೌಲಭ್ಯಗಳಿಲ್ಲದ ಸಣ್ಣ ವಿತರಕರಿಗೆ ಇದು ಸಾಧ್ಯವಾಗಿಲ್ಲ. ಏಕೆಂದರೆ ಜನವರಿ 1 ರಂದು, ಇದು ನಿಧಾನವಾದ ಮಾರಾಟದ ದಿನವಾಗಿದೆ. ಆದರೆ ಮುಷ್ಕರ ಮುಂದುವರಿದರೆ, ಮುಂಬೈನ ಅನೇಕ ಪೆಟ್ರೋಲ್ ಪಂಪ್‌ಗಳು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಖಾಲಿ ಬೋರ್ಡ್‌ಗಳನ್ನು ನೇತು ಹಾಕಬಹುದು' ಎಂದಿದ್ದಾರೆ. ಟ್ರಕ್‌ ಮುಷ್ಕರ ಮುಂಬೈನ ಪೆಟ್ರೋಲ್/ಡೀಸೆಲ್ ಪೂರೈಕೆಯ ಮೇಲೆ 50% ರಷ್ಟು ಪರಿಣಾಮ ಬೀರಬಹುದು ಎಂದು ಮುಂಬೈ ಪೆಟ್ರೋಲ್ ಅಸೋಸಿಯೇಷನ್ ತಿಳಿಸಿದೆ.

ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ನ ಕೋರ್ ಕಮಿಟಿಯ ಅಧ್ಯಕ್ಷ ಬಾಲ್ ಮಲ್ಖಿತ್ ಸಿಂಗ್, "ಭಾರತದಲ್ಲಿ, ಏನಿಲ್ಲವೆಂದರೂ. ಶೇ.27ರಷ್ಟು ಟ್ರಕ್ ಡ್ರೈವರ್‌ಗಳ ಕೊರತೆಯಿದೆ. ಈ ರೀತಿಯ ನಿಯಮಗಳು ಈ ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಬಹುದು. ತಾಳ್ಮೆಯನ್ನು ಕಾಪಾಡಿಕೊಳ್ಳಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಟ್ರಕ್‌ ಚಾಲಕರಿಗೆ ಮನವಿ ಮಾಡುತ್ತೇವೆ. ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ತಕ್ಷಣದ ಉಪಕ್ರಮವನ್ನು ತೆಗೆದುಕೊಳ್ಳುವಂತೆ ನಾವು ವಿನಂತಿಸುತ್ತೇವೆ' ಎಂದು ಹೇಳಿದ್ದಾರೆ.

ಗುಂಪು ಹತ್ಯೆಗೆ ಗಲ್ಲು ಶಿಕ್ಷೆ, ಮಹತ್ತರ ಬದಲಾವಣೆಯ ಭಾರತೀಯ ನ್ಯಾಯ ಸಂಹಿತೆ ಬಿಲ್ ಪಾಸ್!

ಮುಷ್ಕರಕ್ಕೆ ಸಂಘ ಕರೆ ನೀಡಿಲ್ಲ ಎಂದು ಲಾರಿ ಚಾಲಕರ ಸಂಘ ಹೇಳಿಕೊಂಡಿದೆ. ಟ್ರಕ್ ಚಾಲಕರು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ತಮ್ಮ ಮಟ್ಟದಲ್ಲಿ ಮುಷ್ಕರವನ್ನು ಆಯೋಜಿಸಿದರು. ಈಗಿನಂತೆ, ಜನವರಿ 3 ರವರೆಗೆ (ದಿನಾಂತ್ಯ) ಮುಷ್ಕರ ನಡೆಯಲಿದೆ ಎಂದು ಪ್ರತಿಭಟನಾನಿರತ ಚಾಲಕರು ಹೇಳಿದ್ದಾರೆ.

ಇನ್ಮೇಲೆ 420 ಅಂತ ಸುಮ್ನೆ ಯಾರನ್ನೂ ಅಪಹಾಸ್ಯ ಮಾಡ್ಬೇಡಿ: ಬದಲಾಗ್ತಿದೆ ಐಪಿಸಿ ಸೆಕ್ಷನ್ 420 ಕಾನೂನು!

Follow Us:
Download App:
  • android
  • ios