ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟವನು, ಅಷ್ಟು ಸುಲಭವಾಗಿ ಎಲ್ಲರ ಕಣ್ಣು ತಪ್ಪಿಸಿದ್ದು ಹೇಗೆ? ಅವನ ಪ್ಲಾನ್ ಹೇಗಿತ್ತು..? ಯಾಕಾಗಿ ಅವನ ಬಂಧನಕ್ಕೆ ತಡವಾಗ್ತಾ ಇದೆ? ಈ ಎಲ್ಲಾ ಮಾಹಿತಿ ಈ ವೀಡಿಯೋದಲ್ಲಿದೆ ವೀಕ್ಷಿಸಿ.

ರಾಜ್ಯವನ್ನೇ ಬೆಚ್ಚಿಬೀಳಿಸಿದ ರಾಮೇಶ್ವರ ಕೆಫೆ ಸ್ಫೋಟದ ರಹಸ್ಯ ಬೇಧಿಸೋಕೆ ಅವಿರತ ಸಾಹಸ ಶುರುವಾಗಿದೆ.. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನ ಪತ್ತೆಗೆ ರಣಬೇಟೆ ನಡೀತಿದೆ.. ಬೆಂಗಳೂರು.. ಬಳ್ಳಾರಿ.. ಭಟ್ಕಳ.. ಬೀದರ್‌ ಹೀಗೆ ಎಲ್ಲೆಡೆ ಶಂಕಿತ ಉಗ್ರನ ಜಾಡು ಹಿಡಿದು ಐಎನ್‌ಎ ಶೋಧ ನಡೆಸುತ್ತಿದ್ದು, 48 ಗಂಟೆಗಳಲ್ಲಿ ಹಲವು ರೋಚಕ ಮಾಹಿತಿಗಳು ಎನ್‌ಐಎಗೆ ಸಿಕ್ಕಿವೆ. ಆತನ ಮುಖ ಕ್ಯಾಮರಾಗೆ ಕಾಣಲ್ಲ, ತೊಟ್ಟ ಬಟ್ಟೆ ಮತ್ತೆ ತೊಟ್ಟಿಲ್ಲ.. ಫೋನ್ ಬಳಸೇ ಇಲ್ಲ..ಈ ರೀತಿ ಮೀನಿನ ಹೆಜ್ಜೆ ಇಟ್ಟ ಉಗ್ರನ ಪತ್ತೆಗೆ ಹೇಗಿದೆ ತಲಾಷ್..? ಅದೆಲ್ಲದರ ಪೂರ್ತಿ ಮಾಹಿತಿ ನಿಮ್ಮ ಮುಂದಿಡೋದೇ ಇವತ್ತಿನ ಸುವರ್ಣ ಫೋಕಸ್, ಶಂಕಿತನ ಶಿಕಾರಿ..

Add Asianetnews Kannada as a Preferred SourcegooglePreferred