Asianet Suvarna News Asianet Suvarna News

ಬೆಂಗಳೂರು ಐಟಿ ಕಂಪನಿ ಮಾಲೀಕನಿಂದ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ!

ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ಬೆಂಗಳೂರು ಐಟಿ ಕಂಪನಿ ಮಾಲೀಕ| 1 ಕೋಟಿ ರೂ. ದೇಣಿಗೆ ನೀಡಿದ ಬೆಂಗಳೂರಿನ ಅಮರನಾಥ್ ಚೌಧರಿ| ಹರಕೆ ತೀರಿಸಿದ ಅಮರನಾಥ್ ಚೌಧರಿ| ಶ್ರೀ ವೆಂಕಟೇಶ್ವರ್ ಗೋಸಂರಕ್ಷಣೆ ಸಮಿತಿಗೆ 1 ಕೋಟಿ ರೂ. ದೇಣಿಗೆ|

Bengaluru IT company Owner Donates 1 crore Rs To Tirupati  Temple
Author
Bengaluru, First Published Jan 7, 2020, 2:20 PM IST

ಬೆಂಗಳೂರು(ಜ.07): ತಿರುಪತಿ ತಿಮ್ಮಪನಿಗೆ ವಿಶ್ವದಾದ್ಯಂತ ಭಕ್ತರಿದ್ದಾರೆ. ಎಲ್ಲ ವರ್ಗಗಳ ಜನರ ಭಕ್ತಿಯನ್ನು ತನ್ನತ್ತ ಸೆಳೆದಿರುವ ತಿಮ್ಮಪ್ಪ, ತಿರುಮಲ ಬೆಟ್ಟದಲ್ಲಿ ರಾರಾಜಿಸುತ್ತಿದ್ದಾನೆ.

ಅದರಂತೆ ಬೆಂಗಳೂರು ಮೂಲದ ಐಟಿ ಕಂಪನಿಯೊಂದರ ಮಾಲೀಕ ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಮೂಲಕ ತಿಮ್ಮಪ್ಪನ ಮೇಲಿನ ತಮ್ಮ ಭಕ್ತಿಯನ್ನು ನಮ್ರತೆಯಿಂದ ತೋರಿಸಿದ್ದಾರೆ.

ತಿಮ್ಮಪ್ಪನ ಮೇಲಿನ ಭಕ್ತಿ ಖಚಿತ: ತಿರುಪತಿ ಲಡ್ಡು ಇನ್ಮುಂದೆ ಉಚಿತ!

ಹೌದು, ಬೆಂಗಳೂರು ಮೂಲದ ಐಟಿ ಕಂಪನಿ ಮಾಲೀಕರಾದ ಅಮರನಾಥ್ ಚೌಧರಿ, ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದು, ಇದನ್ನು ಟಿಟಿಡಿ ಯ ಅಧೀನದಲ್ಲಿರುವ ಶ್ರೀ ವೆಂಕಟೇಶ್ವರ್ ಗೋಸಂರಕ್ಷಣೆ ಸಮಿತಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ಕಳೆದ 9 ವರ್ಷಗಳಿಂದ ಅಮರನಾಥ್ ಅವರ ಐಟಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇದಕ್ಕಾಗಿ ಹರಕೆ ಹೊತ್ತಿದ್ದ ಅಮರನಾಥ್ ಟಿಟಿಡಿ ಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಕಾಶ್ಮೀರ, ಮೋದಿ ಕ್ಷೇತ್ರ ವಾರಾಣಸಿಯಲ್ಲೂ ತಿಮ್ಮಪ್ಪನ ದೇಗುಲ!

Follow Us:
Download App:
  • android
  • ios