ಕರ್ನಾಟಕ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾಗೆ ಹೋಲಿಸಲಾಗಿದೆ ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ 100 ಕೋಟಿ ರು. ಮಾನಹಾನಿ ದಾವೆಯೊಂದನ್ನು ಹೂಡಲಾಗಿದೆ. ಈ ಹಿನ್ನೆಲೆಯಲ್ಲಿ ಖರ್ಗೆ ಅವರಿಗೆ ಸಂಗ್ರೂರ್‌ ಜಿಲ್ಲಾ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದ್ದು, ಜುಲೈ 10ರೊಳಗೆ ಉತ್ತರಿಸುವಂತೆ ನೋಟಿಸ್‌ ನೀಡಿದೆ.

ಸಂಗ್ರೂರ್‌ (ಪಂಜಾಬ್‌) (ಮೇ.16) : ಕರ್ನಾಟಕ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾಗೆ ಹೋಲಿಸಲಾಗಿದೆ ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ 100 ಕೋಟಿ ರು. ಮಾನಹಾನಿ ದಾವೆಯೊಂದನ್ನು ಹೂಡಲಾಗಿದೆ. ಈ ಹಿನ್ನೆಲೆಯಲ್ಲಿ ಖರ್ಗೆ ಅವರಿಗೆ ಸಂಗ್ರೂರ್‌ ಜಿಲ್ಲಾ ನ್ಯಾಯಾಲಯ(Sangrur District Court) ನೋಟಿಸ್‌ ಜಾರಿ ಮಾಡಿದ್ದು, ಜುಲೈ 10ರೊಳಗೆ ಉತ್ತರಿಸುವಂತೆ ನೋಟಿಸ್‌ ನೀಡಿದೆ.

Add Asianetnews Kannada as a Preferred SourcegooglePreferred

ಹಿಂದೂ ಸುರಕ್ಷಾ ಪರಿಷದ್‌(Hindu Suraksha Parishad) ಎಂಬ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಹಿತೇಶ್‌ ಭಾರದ್ವಾಜ್‌(Hitesh bharadhwaj) ಎಂಬುವವರು ಈ ದಾವೆ ಹೂಡಿದ್ದಾರೆ. ಮೇ 12ರಂದೇ ಖರ್ಗೆಗೆ ಈ ಬಗ್ಗೆ ಕೋರ್ಟು, ನೋಟಿಸ್‌ ಜಾರಿ ಮಾಡಿದೆ.

ಬಜರಂಗದಳಕ್ಕೂ ಆಂಜನೇಯನಿಗೂ ಸಂಬಂಧವಿಲ್ಲ: ಎಚ್ ವಿಶ್ವನಾಥ್‌

‘ಬಜರಂಗದಳವು(Bajrangadala) ಹಿಂದೂ ಸುರಕ್ಷಾ ಪರಿಷದ್‌ನ ಒಂದು ಘಟಕವಾಗಿದೆ. ಈ ಸಂಘಟನೆಯ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ಪ್ರಣಾಳಿಕೆಯ 10ನೇ ಪ್ಯಾರಾದಲ್ಲಿ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗಿದೆ. ಬಜರಂಗದಳವನ್ನು ನಿಷೇಧಿಸುವ ಘೋಷಣೆ ಮಾಡಿದ್ದಲ್ಲದೆ, ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಜತೆ ಹೋಲಿಸಲಾಗಿದೆ. ಇದರಿಂದ ಸಂಘಟನೆಯ ಗೌರವಕ್ಕೆ ಹಾಗೂ ಕೋಟ್ಯಂತರ ಜನರಿಂದ ಪೂಜಿಸಲ್ಪಡುವ ಹನುಮಂತನ ಭಕ್ತರ ಭಾವನೆಗೆ ಧಕ್ಕೆಯಾಗಿದೆ. ಇದಕ್ಕೆ ಪರಿಹಾರವಾಗಿ 100 ಕೋಟಿ ರು. ನೀಡಬೇಕು’ ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

‘ಬಜರಂಗದಳವು ಒಂದು ಸಮಾಜಸೇವಿ ಸಂಘಟನೆಯಾಗಿದ್ದು, ಸಮಾಜಕ್ಕೆ ಸಾಕಷ್ಟುಕೊಡುಗೆ ನೀಡಿದೆ’ ಎಂದು ಅರ್ಜಿದಾರರು ವಾದಿಸಿದ್ದಾರೆ.

ಬಜರಂಗದಳ ಬ್ಯಾನ್‌ ಮಾಡ್ತೇವೆ ಎಂದು ಕುಣಿತ್ತಿದ್ದ ಕಾಂಗ್ರೆಸ್ ವರಸೆ ಬದಲಿಸಿದೆ: ಓವೈಸಿ ಗರಂ