ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಬಳಿಕ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಎಲ್ಲಿ ಮಂದಿರ ಕಟ್ಟಬೇಕು ಎಂದು ದೇಶದ ಸಕಲ ಹಿಂದುಗಳು ಸಂಕಲ್ಪ ಮಾಡಿದ್ದರೋ, ಅಲ್ಲಿಯೇ ಇಂದು ಮಂದಿರ ಎದ್ದು ನಿಂತಿದೆ ಎಂದು ಹೇಳಿದ್ದಾರೆ. 

ಅಯೋಧ್ಯೆ (ಜ.22): ದೇಶದ ಸಕಲ ಹಿಂದುಗಳು ಎಲ್ಲಿ ಮಂದಿರ ಕಟ್ಟಬೇಕು ಎಂದು ಸಂಕಲ್ಪ ಮಾಡಿದ್ದೆವೋ, ಅಲ್ಲಿಯೇ ಇಂದು ಮಂದಿರ ಕಟ್ಟಿದ್ದೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಐತಿಹಾಸಿಕ ರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಬಳಿಕ ಮಾತನಾಡಿದ ಅವರು, ರಾಮ ಮಂದಿರಕ್ಕಾಗಿ ಇಡೀ ದೇಶದ ಜನರು ಒಗ್ಗಟ್ಟಾಗಿದ್ದರು. ರಾಮ ಜನ್ಮಭೂಮಿ ಸನಾತನ ಧರ್ಮದ ವಿಶ್ವಾಸದ ಪರೀಕ್ಷೆಯಾಗಿತ್ತು. ರಾಮನ ದರ್ಶನ ಮಾಡಿದ ನಮ್ಮ ಪೀಳಿಗೆಯೇ ಅದೃಷ್ಟವಂತರು. ನಮ್ಮೆಲ್ಲರ ಹೃದಯದಲ್ಲಿದ್ದ ಶ್ರೀರಾಮನನ್ನು ಶಿಲ್ಪಿ ಅರುಣ್‌ ಯೋಗಿರಾಜ್‌ ಬಹಳ ಸುಂದರವಾಗಿ ಕೆತ್ತಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ಇನ್ನು ಗುಂಡುಗಳು, ಕರ್ಫ್ಯೂಗಳು ಇರೋದಿಲ್ಲ. ಇನ್ನು ಅಯೋಧ್ಯೆಯಲ್ಲಿ ದೀಪೋತ್ಸವಗಳಿರುತ್ತದೆ. ಹೊಸ ಅಯೋಧ್ಯೆಯಲ್ಲಿ ನಮ್ಮ ಸಂಸ್ಕೃತಿಯ ಅನಾವರಣವಾಗಲಿದೆ. ಅಯೋಧ್ಯೆಯಲ್ಲಿ ಗತ ವೈಭವ ಮರುಕಳಿಸಲಿದೆ. ಇಂದು ಅಯೋಧ್ಯೆ ವಿಶ್ವದ ಸಾಂಸ್ಕೃತಿಕ ನಗರಿಯಾಗಿ ಕಂಗೊಳಿಸಿದೆ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮೂಲಕ ಭಾರತದ ಜನರ 500 ವರ್ಷಗಳ ಹಿಂದಿನ ಕನಸು ನನಸಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ದೇಶದ ಒಂದು ಪ್ರಮುಖ ಧರ್ಮಲು ತಮ್ಮ ದೇವರಿಗೆ ಸರಿಯಾದ ಸ್ಥಾನವನ್ನು ಪಡೆಯಲು ಇಷ್ಟು ದಿನ ಹೋರಾಡಬೇಕಾಯಿತು ಎನ್ನುವುದು ಇತಿಹಾಸದಲ್ಲಿ ದಾಖಲಾಗಲಿದೆ. 1990 ರಲ್ಲಿ 'ಕರ ಸೇವಕರ' ಮೇಲೆ ನಡೆದ ಗುಂಡಿನ ದಾಳಿಯನ್ನು ಉಲ್ಲೇಖಿಸಿದ ಅವರು, ಈಗ ಅಯೋಧ್ಯೆಯಲ್ಲಿ ಯಾವುದೇ ಕರ್ಫ್ಯೂ ಅಥವಾ ಫೈರಿಂಗ್‌ಗಳು ನಡೆಯುವುದಿಲ್ಲ ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೆರವೇರಿಸಿದ ರಾಮಮಂದಿರದ ಕಾರ್ಯಕ್ರಮದಲ್ಲಿ ಗರ್ಭಗುಡಿಯೊಳಗೆ ಇದ್ದ ಯೋಗಿ ಆದಿತ್ಯನಾಥ್ ಅವರು, ಇಡೀ ಭಾರತವು "ಅಯೋಧ್ಯಾ ಧಾಮ" ಆಗಿದೆ ಎಂದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದ ಜನಪ್ರಿಯ ನಾಯಕ ಎಂದು ಬಣ್ಣಿಸಿದರು.

ಅಕ್ಟೋಬರ್ 1990 ರಲ್ಲಿ ಅಯೋಧ್ಯೆಯಲ್ಲಿ ಎರಡು ಪ್ರತ್ಯೇಕ ಗುಂಡಿನ ದಾಳಿಯಲ್ಲಿ 17 ಜನರು ಸಾವನ್ನಪ್ಪಿದರು. ಈ ಘಟನೆಯನ್ನು ನೆನಪಿಸಿಕೊಂಡ ಅವರು, ದೇವಸ್ಥಾನಕ್ಕಾಗಿ ಅನೇಕ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. "ಬಹುಶಃ ಬಹುಸಂಖ್ಯಾತರು ತಮ್ಮ ಜನ್ಮಸ್ಥಳದಲ್ಲಿ ತಮ್ಮ ಭಗವಂತನಿಗೆ ಸರಿಯಾದ ಸ್ಥಾನವನ್ನು ಪಡೆಯಲು ಇಷ್ಟು ದಿನ ಹೋರಾಡಬೇಕಾದ ಇತಿಹಾಸದ ಮೊದಲ ಸಂದರ್ಭ ಇದು" ಎಂದು ಅವರು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂದಿರ್ ವಹೀ ಬನಾಯೇಂಗೆ, 33 ವರ್ಷಗಳ ಬಿಜೆಪಿ ಭರವಸೆ ಈಡೇರಿಸಿದ ಪ್ರಧಾನಿ ಮೋದಿ!

"ನನ್ನ ಹೃದಯದಲ್ಲಿ ವ್ಯಕ್ತಪಡಿಸಲು ಪದಗಳಿಲ್ಲದ ಕೆಲವು ಭಾವನೆಗಳಿವೆ. ಪ್ರತಿಯೊಬ್ಬರೂ ಭಾವನಾತ್ಮಕವಾಗಿದ್ದಾರೆ ಮತ್ತು ಸಂತೋಷದಿಂದಿದ್ದಾರೆ. ಈ ಐತಿಹಾಸಿಕ ಕ್ಷಣದಲ್ಲಿ, ದೇಶದ ಪ್ರತಿಯೊಂದು ನಗರ ಮತ್ತು ಹಳ್ಳಿಗಳು ಅಯೋಧ್ಯೆಯಾಗಿ ಮಾರ್ಪಟ್ಟಿವೆ ಮತ್ತು ಪ್ರತಿ ಹಾದಿಯು ರಾಮ ಜನ್ಮಭೂಮಿಯತ್ತ ಸಾಗುತ್ತಿದೆ. ," ಎಂದು ಹೇಳಿದ್ದಾರೆ.

ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ, ಅಯೋಧ್ಯೆ ಶ್ರೀರಾಮನ ಮೊದಲ ಚಿತ್ರ!