ರಾಮನಿಲ್ಲದೆ ಅಯೋಧ್ಯೆ ಇಲ್ಲ: ದೇಗುಲ ನಗರಿ ಅಯೋಧ್ಯೆಗೆ ರಾಷ್ಟ್ರಪತಿ ಭೇಟಿ!
* ದೇಗುಲ ನಗರಿ ಅಯೋಧ್ಯೆಗೆ ರಾಷ್ಟ್ರಪತಿ ಭೇಟಿ
* ರಾಮನಿಲ್ಲದೆ ಅಯೋಧ್ಯೆ ಇಲ್ಲ
* ರಾಮಲಲ್ಲಾಗೆ ನಮನ
ಲಖನೌ(ಆ.30): ರಾಮನಿಲ್ಲದೆ ಅಯೋಧ್ಯೆಯೇ ಇಲ್ಲ. ರಾಮನಿದ್ದಲ್ಲಿಯೇ ಅಯೋಧ್ಯೆ ಎಂದು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಬಣ್ಣಿಸಿದ್ದಾರೆ.
ಉತ್ತರಪ್ರದೇಶ ಪ್ರವಾಸದ ಭಾಗವಾಗಿ ಭಾನುವಾರ ಅಯೋಧ್ಯೆಗೆ ಭೇಟಿ ನೀಡಿದ್ದ ಅವರು ರಾಮಾಯಣ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ‘ರಾಮ ಈ ನಗರದಲ್ಲಿ ಖಾಯಂ ಆಗಿ ನೆಲೆಸಿದ್ದಾನೆ. ಹೀಗಾಗಿ ನಿಜ ಅರ್ಥದಲ್ಲಿ ಇದು ಅಯೋಧ್ಯೆ ಎಂದರು. ಜೊತೆಗೆ ಶ್ರೀರಾಮ ಮತ್ತು ರಾಮ ಕಥಾ ಕುರಿತಾಗಿ ಸಾಮಾನ್ಯ ಜನರಲ್ಲಿ ಇರುವ ಗೌರವ ಮತ್ತು ಪ್ರೀತಿ ನಮ್ಮ ಕುಟುಂಬದವರಿಗೂ ಇತ್ತು. ಇದೇ ಕಾರಣಕ್ಕೆ ನನಗೆ ಈ ಹೆಸರು ಇಟ್ಟಿದ್ದಾರೆ ಎಂದೆನಿಸುತ್ತದೆ’ ಎಂದರು.
ಬಳಿಕ ಅವರು ಭವ್ಯ ದೇಗುಲ ನಿರ್ಮಾಣವಾಗುತ್ತಿರುವ ಸ್ಥಳದ ಸಮೀಪದಲ್ಲೇ ಇರುವ ಮೂಲವಿಗ್ರಹ ರಾಮ್ಲಲ್ಲಾ ಇಟ್ಟಿರುವ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.