ಉಗ್ರ ಕಾರ್ಯಾಚರಣೆಯ ಸಮಯದಲ್ಲಿ ಉಗ್ರರಿಂದ ಮುಖಕ್ಕೆ ಗುಂಡೇಟು ತಿಂದು 8 ವರ್ಷಗಳ ಕಾಲ ಕೋಮಾದಲ್ಲಿದ್ದ ಸೇನಾಧಾರಿಕಾರಿ ಲೆ.ಕರ್ನಲ್‌ ಕರಣ್‌ಬೀರ್‌ ಸಿಂಗ್‌ ನಾಥ್‌ ಮಂಗಳವಾರ ನಿಧನರಾಗಿದ್ದಾರೆ.

ನವದೆಹಲಿ: ಉಗ್ರ ಕಾರ್ಯಾಚರಣೆಯ ಸಮಯದಲ್ಲಿ ಉಗ್ರರಿಂದ ಮುಖಕ್ಕೆ ಗುಂಡೇಟು ತಿಂದು 8 ವರ್ಷಗಳ ಕಾಲ ಕೋಮಾದಲ್ಲಿದ್ದ ಸೇನಾಧಾರಿಕಾರಿ ಲೆ.ಕರ್ನಲ್‌ ಕರಣ್‌ಬೀರ್‌ ಸಿಂಗ್‌ ನಾಥ್‌ ಮಂಗಳವಾರ ನಿಧನರಾಗಿದ್ದಾರೆ.

Add Asianetnews Kannada as a Preferred SourcegooglePreferred

ಇವರು ಸೇನಾ ಪದಕ ವಿಜೇತರಾಗಿದ್ದು, 2015ರಲ್ಲಿ ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಮುಖಕ್ಕೆ ಗುಂಡುಗಳ ತಗುಲಿ ಗಾಯಗೊಂಡಿದ್ದರು. ತಕ್ಷಣವೇ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಗಾಯದಿಂದಾಗಿ ಕೋಮಾಗೆ ಜಾರಿ ಸುಮಾರು 8 ವರ್ಷಗಳ ಆಸ್ಪತ್ರೆಯಲ್ಲೇ ಇದ್ದರು. ಸುಮಾರು 20 ವರ್ಷಗಳ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿದ್ದ ಇವರ ಸಾವಿಗೆ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಜಮ್ಮು - ಕಾಶ್ಮೀರದಲ್ಲಿ ಸೇನೆ ಮೇಲೆ ದಾಳಿ: ಚೀನಾ ನಿರ್ಮಿತ ಶಸ್ತ್ರಾಸ್ತ್ರ ಬಳಸ್ತಿರೋ ಭಯೋತ್ಪಾದಕರು

ಆಗಿದ್ದೇನು?:

ಲೆ।ಕ। ನಾಥ್‌ ಅವರು ರಾಷ್ಟ್ರೀಯ ರೈಫಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಸೈನಿಕ ಕಾರ್ಯಾಚರಣೆಗೆ ಕುಪ್ವಾರಗೆ ತೆರಳಿದ್ದರು. ಕಾರ್ಯಾಚರಣೆಯ ಸಮಯದಲ್ಲಿ ಇವರ ಮುಖ್ಯಸ ಕರ್ನಲ್ ಸಂತೋಷ್‌ ಅವರು ಉಗ್ರರ ಗುಂಡಿಗೆ ಬಲಿಯಾದರೂ ಸಹ ಎದೆಗುಂದರೆ ತಮ್ಮ ತಂಡದೊಂದಿಗೆ ಕಾರ್ಯಾಚರಣೆ ಮುಂದುವರೆಸಿದ್ದರು. ಆದರೆ ಈ ಸಮಯದಲ್ಲಿ ಕಲಾಶ್ಮಿಕೋವ್‌ ರೈಫಲ್ಸ್‌ನಿಂದ ಸಿಡಿದ ಗುಂಡುಗಳು ನಾಥ್‌ ಅವರ ಮುಖವನ್ನು ಹೊಕ್ಕಿದ್ದವು. ತೀವ್ರವಾಗಿ ಗಾಯಗೊಂಡಿದ್ದ ನಾಥ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಗಾಯಗಳಿಂದಾಗಿ ಅವರು ಕೋಮಾಗೆ ಜಾರಿದ್ದರು.

ಪೂಂಚ್ ಸೆಕ್ಟರ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ, ಭಾರತೀಯ ಸೇನಾ ಮೇಲೆ ಗುಂಡಿನ ಸುರಿಮಳೆ!